ವೀಡಿಯೊ : ಕೋಲು ಹಿಡಿದು ರೈಲು ಹಳಿ ಮೇಲಿಂದ ಸಿಂಹವನ್ನು ಓಡಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ…!

ಗುಜರಾತಿನ ಭಾವನಗರದಲ್ಲಿ ರೈಲ್ವೆ ಹಳಿ ಮೇಲೆ ಬರುತ್ತಿದ್ದ ಸಿಂಹವನ್ನು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಯಾವುದೇ ಭಯ ಅಥವಾ ಅಂಜಿಕೆ ಇಲ್ಲದೆ ಒಬ್ಬಂಟಿಯಾಗಿ ಓಡಿಸಿದ್ದಾರೆ. ಘಟನೆಯ ವೀಡಿಯೊ ಆಗಿದ್ದು, ಲಿಲಿಯಾ ನಿಲ್ದಾಣದ ಬಳಿ ಇದನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. ಸಿಂಹವು ರೈಲ್ವೆ ಟ್ರ್ಯಾಕ್ ದಾಟುತ್ತಿರುವಾಗ ಮತ್ತು ನಂತರ ಮುಂದೆ ನಡೆದುಕೊಂಡು ಹೋಗುತ್ತಿರುವಾಗ ಸಿಬ್ಬಂದಿಯನ್ನು ನೋಡುತ್ತ ಹೋಗುವುದನ್ನು ವೀಡಿಯೊ … Continued

ವೀಡಿಯೊ.. | ಖ್ಯಾತ ನಟ ಅಜಿತ್ 180 ಕಿಮೀ ವೇಗದಲ್ಲಿ ಚಲಾಯಿಸುತ್ತಿದ್ದ ರೇಸ್‌ ಕಾರು ಅಪಘಾತ…ಕೂದಲೆಳೆ ಅಂತರದಲ್ಲಿ ಪಾರು…

ಮುಂಬರುವ 24H ದುಬೈ 2025 ಕಾರ್‌ ಗ್ರ್ಯಾಂಡ್‌ ಪ್ರಿಕ್ಸ್‌ ರೇಸ್‌ನ ಅಭ್ಯಾಸದ ವೇಳೆ ದಕ್ಷಿಣ ಭಾರತದ ಖ್ಯಾತ ನಟ (ಬಹುತೇಕ ತಮಿಳು) ಅಜಿತ ಅವರ ಕಾರು ಅಪಘಾತಕ್ಕೀಡಾಗಿದೆ. ವೀಡಿಯೊದಲ್ಲಿ ವೇಗವಾಗಿ ಬರುತ್ತಿದ್ದ ಅಜಿತ ಅವರ ಕಾರು ನಿಲುಗಡೆಗೆ ಮೊದಲು ನಿಯಂತ್ರಣ ಕಳೆದುಕೊಂಡು ಗೋಡೆಗೆ ಡಿಕ್ಕಿ ಹೊಡೆದಿದೆ. ನಟ ಅಜಿತ ಅವರು ಅಪಾಯದಿಂದ ಪಾರಾಗಿದ್ದಾರೆ. 180 ಕಿಮೀ … Continued

ವೀಡಿಯೊ…| ಮನೆಯ ಟೆರೇಸ್ ಮೇಲೆ ಗಾಳಿಪಟ ಹಾರಿಸಿದ ಮಂಗ…! ಬೆರಗಾದ ಇಂಟರ್ನೆಟ್‌….

ಭಾರತದಲ್ಲಿ ಗಾಳಿಪಟ ಹಾರಿಸುವ ಹಬ್ಬವನ್ನು ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ಆಚರಿಸಲಾಗುತ್ತದೆ ಮತ್ತು ಗುಜರಾತ್ ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸುತ್ತದೆ. ಉತ್ತರಾಯಣ ಎಂದು ಕರೆಯಲ್ಪಡುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಾರೆ ಮತ್ತು ಗಾಳಿಪಟಗಳನ್ನು ಹಾರಿಸುತ್ತಾರೆ. ಆದರೆ, ಕೋತಿಯೊಂದು ಕಟ್ಟಡದ ಟೆರೇಸ್ ಮೇಲೆ ಗಾಳಿಪಟ ಹಾರಿಸುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ … Continued

ವೀಡಿಯೊ..| ಈ ಮಂಗ ಚಪಾತಿ ಮಾಡುತ್ತದೆ…ಪಾತ್ರೆ ತೊಳೆಯುತ್ತದೆ…ಮಸಾಲೆ ರುಬ್ಬುತ್ತದೆ…!

ರಾಯ್ಬರೇಲಿ : ಉತ್ತರ ಪ್ರದೇಶದ ರಾಯ್ಬರೇಲಿ ಜಿಲ್ಲೆಯಲ್ಲಿ ರಾಣಿ ಎಂಬ ಮಂಗನ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಕೋತಿ ರೊಟ್ಟಿ ಮಾಡುವುದರಿಂದ ಹಿಡಿದು ಪಾತ್ರೆ ತೊಳೆಯುವವರೆಗೆ ಮನೆಕೆಲಸಗಳನ್ನು ಮಾಡುತ್ತದೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಮನೆಯ ಕೆಲಸಗಳನ್ನು ಮಾಡುತ್ತಿರುವ ಕೋತಿಯನ್ನು ನೋಡಿ ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ. ರಾಣಿ ಸಾಮಾಜಿಕ ಜಾಲತಾಣಗಳಲ್ಲಿ … Continued

ವೀಡಿಯೊ..| ಭಾರಿ ಹಿಮ ಬಿದ್ದ ರಸ್ತೆಯಲ್ಲಿ ಟ್ರಕ್ ಸ್ಕಿಡ್ ಆಗಿ ಆಳದ ಪ್ರಪಾತಕ್ಕೆ ಬೀಳುವ ಮೊದಲು ಹಾರಿ ತಪ್ಪಿಸಿಕೊಂಡ ಚಾಲಕ…!

ನವದೆಹಲಿ: ಹಿಮಾಚಲ ಪ್ರದೇಶವು ಈ ತಿಂಗಳು ಭಾರೀ ಹಿಮಪಾತಕ್ಕೆ ಸಾಕ್ಷಿಯಾಗಿದೆ. ಅದು ಈ ರಾಜ್ಯವನ್ನು ಚಳಿಗಾಲದ ಅದ್ಭುತ ಭೂಮಿಯಾಗಿ ಪರಿವರ್ತಿಸಿದೆ. ಆದರೆ ಸ್ಥಳೀಯರು ಮತ್ತು ಪ್ರವಾಸಿಗರಿಗೆ ಅನೇಕ ತೊಂದರೆಗಳನ್ನು ತಂದೊಡ್ಡಿದೆ. ಅವರ ವಾಹನಗಳು ನಿಯಂತ್ರಣ ತಪ್ಪಿ ಸ್ಕಿಡ್ ಆಗುತ್ತಿದ್ದು, ಹಿಮಾವೃತ ಪರ್ವತ ರಸ್ತೆಗಳಲ್ಲಿ ಸಿಲುಕಿ ಕಂದಕಕ್ಕೆ ಬೀಳುತ್ತಿವೆ. ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಹಿಮಭರಿತ ರಸ್ತೆಯಲ್ಲಿ ಸಣ್ಣ … Continued

ವೀಡಿಯೊ..| ಮುಂಬೈ ಬಳಿ 6 ವರ್ಷದ ಮಗುವಿನ ಮೇಲೆ ಚಲಿಸಿದ ಕಾರು ; ಪವಾಡಸದೃಶ ರೀತಿಯಲ್ಲಿ ಪಾರಾದ ಮಗು..!

ಮುಂಬೈ: ಮುಂಬೈ ಸಮೀಪದ ವಸಾಯಿ ಎಂಬಲ್ಲಿ ಕಾರೊಂದು ಢಿಕ್ಕಿ ಹೊಡೆದು 6 ವರ್ಷದ ಬಾಲಕ ಗಾಯಗೊಂಡಿದ್ದರೂ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವೀಡಿಯೊ ಕ್ಲಿಪ್‌ ಒಂದರಲ್ಲಿ ಕಾರು ಆಟವಾಡುತ್ತಿದ್ದ ಮಗುವಿಗೆ ಡಿಕ್ಕಿ ಹೊಡೆಯುವುದನ್ನು ತೋರಿಸುತ್ತದೆ. ಆತನನ್ನು ಸ್ವಲ್ಪದೂರ ಎಳೆದೊಯ್ದ ನಂತರ ಆತ ಕಾರಿನಿಂದ ಅಡಿಯಿಂದ ಹೊರಬೀಳುವುದು ಕಾಣುತ್ತದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ವಸಾಯಿ … Continued

ಅದ್ಭುತ ವೀಡಿಯೊ..| ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತು ಕಾರನ್ನು ನಿಲ್ಲಿಸಿದ ಹಸುಗಳ ಗುಂಪು…!

ರಾಯಗಢ: ಛತ್ತೀಸ್‌ಗಢ ರಾಜ್ಯದ ರಾಯಗಢದ ಜನನಿಬಿಡ ರಸ್ತೆಯ ಮಧ್ಯೆ ಕಾರಿನಡಿ ಸಿಲುಕಿದ್ದ ಕರುವನ್ನು ರಕ್ಷಿಸಲು ಗೋವುಗಳ ಹಿಂಡು ಕಾರಿಗೆ ಅಡ್ಡಲಾಗಿ ನಿಂತು ಅದನ್ನು ತಡೆದು ನಿಲ್ಲಿಸಿದ ಅಸಮಾನ್ಯ ಘಟನೆ ನಡೆದಿದೆ. ಸಾಮಾನ್ಯವಾಗಿ ಸೌಮ್ಯವಾಗಿರುವ ಗೋವುಗಳ ಹಿಂಡು ಕಾರನ್ನು ಹಿಂಬಾಲಿಸಿಕೊಂಡು ಬಂದು ಕಾರಿಗೆ ಅಡ್ಡಲಾಗಿ ನಿಂತಿವೆ. ಕಾರು ಆಕಳು ಕರುವನ್ನು ಸುಮಾರು 200 ಮೀಟರ್ ಎಳೆದುಕೊಂಡು ಬಂದಿದೆ. … Continued

ರೈಲಿನ ಮಹಿಳಾ ಬೋಗಿಗೆ ಬೆತ್ತಲೆಯಾಗಿ ನುಗ್ಗಿದ ವ್ಯಕ್ತಿ ; ಕಿರುಚಾಡಿದ ಮಹಿಳಾ ಪ್ರಯಾಣಿಕರು

ಮುಂಬೈ: ಮುಂಬೈ ಲೋಕಲ್ ರೈಲಿನಲ್ಲಿ ಮಹಿಳೆಯರಿಗಾಗಿ ಮೀಸಲಿಟ್ಟಿದ್ದ ಬೋಗಿಗೆ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ನುಗ್ಗಿದ ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ಆ ವ್ಯಕ್ತಿ ಸ್ವಲ್ಪ ಹೊತ್ತು ರೈಲಿನ ಬೋಗಿಯ ಕೈಕಂಬ ಹಿಡಿದುಕೊಂಡು ನಿಂತಿದ್ದ ಹಾಗೂ ಮಹಿಳೆಯರು ಚೀರಾಡಿದರೂ ಆತ ಅಲ್ಲಿಂದ ಹೊರಡಲು ಒಪ್ಪಲಿಲ್ಲ. ನಂತರ ಅವರನ್ನು ರೈಲ್ವೇ ಅಧಿಕಾರಿಯೊಬ್ಬರು ರೈಲಿನಿಂದ ಹೊರಗೆ ಹಾಕಿದ್ದಾರೆ ಎಂದು ಹೇಳಲಾಗಿದೆ. … Continued

ವೀಡಿಯೊ..| ಪರೀಕ್ಷಾ ಕೇಂದ್ರದಲ್ಲಿ ಗದ್ದಲ ; ಪರೀಕ್ಷೆ ಬರೆಯುತ್ತಿದ್ದವರಿಂದ ಪ್ರಶ್ನೆ ಪತ್ರಿಕೆಗಳನ್ನು ಕಸಿದುಕೊಂಡು ಹರಿದು ಹಾಕಿದ ಗುಂಪು..!!

ಶುಕ್ರವಾರ ಪಾಟ್ನಾದಲ್ಲಿರುವ ಬಿಹಾರ ಸಾರ್ವಜನಿಕ ಸೇವಾ ಆಯೋಗದ (ಬಿಪಿಎಸ್‌ಸಿ) ಪರೀಕ್ಷಾ ಹಾಲ್‌ಗೆ ಕೆಲವು ಆಕಾಂಕ್ಷಿಗಳು ಸೇರಿದಂತೆ ದೊಡ್ಡ ಗುಂಪು ನುಗ್ಗಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಮತ್ತು ಹಾಜರಿದ್ದ ಇನ್ವಿಜಿಲೇಟರ್‌ಗಳ ಬಳಿಯಿದ್ದ ಪೇಪರ್‌ಗಳನ್ನು ಕಸಿದುಕೊಂಡ ಹಾಗೂ ಪ್ರಶ್ನೆ ಪತ್ರಿಕೆಗಳನ್ನು ಹರಿದು ಹಾಕಿದ ಘಟನೆಯ ವೀಡಿಯೊ ಹೊರಹೊಮ್ಮಿವೆ. ಬಿಹಾರ ಸಾರ್ವಜನಿಕ ಸೇವಾ ಆಯೋಗದ (BPSC) ಪ್ರಶ್ನೆ ಪತ್ರಿಕೆಗಳು ಮತ್ತು … Continued

ವೀಡಿಯೊ..| ವಿದ್ಯಾರ್ಥಿಗೆ ಮನಸೋ ಇಚ್ಛೆ ಥಳಿಸಿದ ಕೋಚಿಂಗ್ ಸೆಂಟರ್ ಸಂಸ್ಥಾಪಕ ; ವ್ಯಾಪಕ ಆಕ್ರೋಶ

ಆಂಧ್ರಪ್ರದೇಶದಲ್ಲಿ ಖಾಸಗಿ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರೊಬ್ಬರು ವಿದ್ಯಾರ್ಥಿಯೊಬ್ಬನಿಗೆ ಥಳಿಸಿದ ಕೆಲ ತಿಂಗಳ ಹಿಂದಿನ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಕೋಚಿಂಗ್ ಇನ್‌ಸ್ಟಿಟ್ಯೂಟ್ ‘ಇಂಡಿಯನ್ ಆರ್ಮಿ ಕಾಲಿಂಗ್’ ಸಂಸ್ಥಾಪಕ ಬಸವ ವೆಂಕಟ ರಮಣ ಎಂದು ಗುರುತಿಸಲಾದ ವ್ಯಕ್ತಿಯೊಬ್ಬ ವಿದ್ಯಾರ್ಥಿಗೆ ಬೆಲ್ಟ್‌ನಿಂದ ಥಳಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ವಿದ್ಯಾರ್ಥಿಯು ಅಳುವುದು ಮತ್ತು ತನ್ನನ್ನು ತಾನು ರಕ್ಷಿಸಿಕೊಳ್ಳಲು ಒದ್ದಾಡುತ್ತಿರುವುದನ್ನು … Continued