ವಿಡಿಯೊಗಳು | ಬಿಕಾನೇರ್‌ನಲ್ಲಿ ಪ್ರಳಯಸದೃಶ ಧೂಳಿನ ಬಿರುಗಾಳಿ ; ನೋಡನೋಡುತ್ತಿದ್ದಂತೆ ಹಗಲು ಕತ್ತಲಾಗಿ ಪರಿವರ್ತನೆ…!

ಬಿಕಾನೇರ್: ರಾಜಸ್ಥಾನದ ಬಿಕಾನೇರ್ ನಗರದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ ಭೀಕರ ಧೂಳಿನ ಬಿರುಗಾಳಿಯು ಇಡೀ ನಗರವನ್ನೇ ನಡುಗಿಸಿದೆ. ದಟ್ಟವಾದ ಧೂಳಿನ ಮೋಡಗಳು ಇಡೀ ಆಕಾಶವನ್ನು ಆವರಿಸಿದ್ದರಿಂದ, ನೋಡನೋಡುತ್ತಿದ್ದಂತೆಯೇ ಹಗಲು ರಾತ್ರಿಯಂತೆ ಕಂಡುಬಂದಿದೆ. ಬೃಹತ್ ಗಾತ್ರದ ಹಳದಿ ಬಣ್ಣದ ಧೂಳಿನ ಗೋಡೆಯೊಂದು ನಗರದತ್ತ ನುಗ್ಗಿ ಬರುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಳಯಸದೃಶ ವಾತಾವರಣವನ್ನು ನೆನಪಿಸುವಂತಿದ್ದವು. … Continued

5 ತಿಂಗಳ ಸ್ಕೆಚ್‌, ಚಾಕು ಇರಿತ, ಸುಟ್ಟ ಕಾರಿನಲ್ಲಿ ಶವಗಳು : ಕುಟುಂಸ್ಥರ ಭೀಕರ ಹತ್ಯಾಕಾಂಡಕ್ಕೆ ಅಪ್ರಾಪ್ತನೇ ಮಾಸ್ಟರ್ ಮೈಂಡ್ !

ಜೈಪುರ: ಕೌಟುಂಬಿಕ ಕಲಹ, ಆಸ್ತಿ ವಿವಾದದ ಆರೋಪ, ತಿಂಗಳುಗಟ್ಟಲೆ ನಡೆಸಿದ ಮಾಸ್ಟರ್ ಪ್ಲಾನ್ ಮತ್ತು ಅಪರಾಧ ಜಗತ್ತಿನ ವೆಬ್ ಸೀರೀಸ್‌ಗಳ ಮೇಲಿದ್ದ ಅತಿಯಾದ ವ್ಯಾಮೋಹದಿಂದ ಅಪರಾಧದ ಗೀಳು ! ಅಜ್ಮೀರ್‌ನ ಮಾಜಿ ಸರಪಂಚ ರಾಮ ಸಿಂಗ್ ಚೌಧರಿ, ಅವರ ಎರಡನೇ ಪತ್ನಿ, ತಾಯಿ ಮತ್ತು ಸೋದರ ಸೊಸೆಯ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೊರಹಾಕಿರುವ … Continued

ವಿಡಿಯೊ | ಸುಡುವ ಬಿಸಿಲಿನಿಂದ ಬಚಾವಾಗಲು ಹಾಲಿನ ಕ್ಯಾನ್ ತಲೆಗೆ ಹಾಕಿಕೊಂಡ ವ್ಯಕ್ತಿ; ಕ್ಯಾನ್‌ ಒಳಗೆ ಸಿಲುಕಿಕೊಂಡ ತಲೆ…!

ಉತ್ತರ ಭಾರತದಲ್ಲಿ ಬಿಸಿ ಗಾಳಿ ಜೋರಾಗಿದ್ದು, ಜನ ಬಿಸಿಲಿನಿಂದ ಬಚಾವಾಗಲು ವಿಚಿತ್ರ ಸಾಹಸಗಳಿಗೆ ಕೈಹಾಕುತ್ತಿದ್ದಾರೆ. ಇಂತಹದ್ದೇ ಒಂದು ಘಟನೆ ರಾಜಸ್ಥಾನದ ಗ್ರಾಮೀಣ ಭಾಗದಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಹಾಲಿನ ಪಾತ್ರೆಯನ್ನೇ (Milk Can) ತಲೆಗೆ ಹೆಲ್ಮೆಟ್‌ನಂತೆ ಧರಿಸಲು ಹೋಗಿ ವಿಚಿತ್ರ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ … Continued

ತಮ್ಮ ಮದುವೆಯ ದಿನವೇ ಆತ್ಮಹತ್ಯೆ ಮಾಡಿಕೊಂಡ ಅಕ್ಕ ತಂಗಿ…!

ಜೋಧಪುರ: ರಾಜಸ್ಥಾನದ ಜೋಧಪುರ ಜಿಲ್ಲೆಯ ಮನೈ ಗ್ರಾಮದಲ್ಲಿ ವಿವಾಹವಾಗಬೇಕಿದ್ದ ಇಬ್ಬರು ಸಹೋದರಿಯರು ಮದುವೆಯಾಗುವ ಕೆಲವೇ ಗಂಟೆಗಳ ಮೊದಲು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮೃತ ದುರ್ದೈವಿಗಳನ್ನು ಶೋಭಾ (25) ಮತ್ತು ವಿಮಲಾ (23) ಎಂದು ಗುರುತಿಸಲಾಗಿದೆ. ಈ ಇಬ್ಬರು ಸಹೋದರಿಯರ ವಿವಾಹವು ಶನಿವಾರ (ಫೆ.21) ನಿಗದಿಯಾಗಿತ್ತು. ಶುಕ್ರವಾರ ರಾತ್ರಿಯವರೆಗೂ … Continued

ಆಭರಣ ಅಂಗಡಿಗೆ ಬಂದು ಚಿನ್ನದ ಸರ ಕಚ್ಚಿಕೊಂಡು ಹೋದ ಪಾರಿವಾಳ…!

ನಾಗೌರ್ (ರಾಜಸ್ಥಾನ): ಇಲ್ಲಿನ ದೇಗಾನಾ ಪಟ್ಟಣದ ಚಿನಿವಾರ ಪೇಟೆಯಲ್ಲಿ ಗುರುವಾರ ಅತ್ಯಂತ ವಿಲಕ್ಷಣ ಘಟನೆಯೊಂದು ನಡೆದಿದೆ. ಸುಮಾರು 1 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಪಾರಿವಾಳವೊಂದು ತನ್ನ ಕೊಕ್ಕಿನಲ್ಲಿ ಕಚ್ಚಿಕೊಂಡು ಹಾರಿಹೋದ ಘಟನೆ ನಡೆದಿದೆ. ದೇಗಾನಾ ಬುಲಿಯನ್ ಮಾರ್ಕೆಟ್‌ನಲ್ಲಿರುವ ಚಿನ್ನಾಭರಣ ಮಳಿಗೆಯೊಂದರ ಮೇಲಿನ ಮಹಡಿಯಲ್ಲಿ ಕುಶಲಕರ್ಮಿಗಳು ಚಿನ್ನದ ಆಭರಣಗಳನ್ನು ತಯಾರಿಸುವ ಕೆಲಸದಲ್ಲಿ ನಿರತರಾಗಿದ್ದರು. ಈ … Continued

ಜೀವಾವಧಿ ಶಿಕ್ಷೆಗೊಳಗಾದ ಇಬ್ಬರಿಗೆ ಜೈಲಿನಲ್ಲಿ ಪ್ರೇಮಾಂಕುರ ; ಹಳೆಯ ಪ್ರೇಮಿಗಳಿಗೆ ಗುಡ್‌ ಬೈ : ಇಬ್ಬರು ಕೈದಿಗಳ ಮದುವೆ..!

ಜೈಪುರ: ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಇಬ್ಬರು ಕೈದಿಗಳು ಜೈಲಿನಲ್ಲೇ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದು, ಇದೀಗ ವಿವಾಹವಾಗಲು ಪೆರೋಲ್ ಪಡೆದಿರುವ ಅಪರೂಪದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಇಂದು (ಶುಕ್ರವಾರ, ಜನವರಿ 23) ಅಲ್ವಾರ್‌ನ ಬರೋಡಮೇವ್‌ನಲ್ಲಿ ಈ ವಿಶಿಷ್ಟ ವಿವಾಹ ನಡೆಯಲಿದ್ದು, ಮದುವೆಯ ಆಮಂತ್ರಣ ಪತ್ರಿಕೆಯೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಧು ಪ್ರಿಯಾ ಸೇಠ್ … Continued

ಕ್ಯಾನ್ಸರಿನಿಂದ ಉದುರಿದ ವಿದ್ಯಾರ್ಥಿನಿ ಕೂದಲು ; ಸ್ನೇಹಿತೆಗಾಗಿ ತಲೆ ಬೋಳಿಸಿಕೊಂಡ ಶಾಲಾ ವಿದ್ಯಾರ್ಥಿಗಳು-ಶಿಕ್ಷಕರು ; ಹೃದಯಸ್ಪರ್ಶಿ ವೀಡಿಯೊ ವೈರಲ್

ರಾಜಸ್ಥಾನದ ವೀಡಿಯೊವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಪ್ರತಿಯೊಬ್ಬರ ಕಣ್ಣಂಚನ್ನು ತೇವಗೊಳಿಸುವಂತಿದೆ. ಕ್ಯಾನ್ಸರ್‌ನಿಂದಾಗಿ ಕೂದಲು ಕಳೆದುಕೊಂಡು ಮನನೊಂದಿದ್ದ ವಿದ್ಯಾರ್ಥಿನಿಯ ಬೆಂಬಲಕ್ಕೆ ಇಡೀ ಶಾಲೆಯೇ ನಿಂತಿರುವ ಅಪರೂಪದ ಘಟನೆ ವರದಿಯಾಗಿದೆ. ವರದಿಗಳ ಪ್ರಕಾರ, ಈ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಕ್ಯಾನ್ಸರ್ ಚಿಕಿತ್ಸೆಯಿಂದಾಗಿ ತನ್ನ ತಲೆಯ ಕೂದಲನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಳು. ಇದರಿಂದ ತೀವ್ರವಾಗಿ ನೊಂದಿದ್ದ ಆಕೆ, ಖಿನ್ನತೆಗೆ … Continued

ವೀಡಿಯೊ…| ನೀರಿನ ಪೈಪ್ ದುರಸ್ತಿಗೆ ಬಂದ ಕಾರ್ಮಿಕನ ಮೇಲೆ ಹೆಬ್ಬಾವು ದಾಳಿ: 10 ನಿಮಿಷ ಬಿಗಿಯಾಗಿ ಸುತ್ತಿಕೊಂಡ ಹೆಬ್ಬಾವು

ಕೋಟಾ: ರಾಜಸ್ಥಾನದ ಕೋಟಾದ ಉಷ್ಣ ವಿದ್ಯುತ್ ಸ್ಥಾವರದಲ್ಲಿ (Kota Thermal Plant) ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಸುಮಾರು 12 ಅಡಿ ಉದ್ದದ ಹೆಬ್ಬಾವಿನ (Python) ಬಿಗಿ ಹಿಡಿತಕ್ಕೆ ಸಿಲುಕಿ ಒದ್ದಾಡಿದ ಆತಂಕಕಾರಿ ಘಟನೆ ಸೋಮವಾರ ನಡೆದಿದೆ. ಕೃಷ್ಣ ಇಂಜಿನಿಯರಿಂಗ್ ಗುತ್ತಿಗೆ ಕಂಪನಿಯಲ್ಲಿ ಕೆಲಸ ಮಾಡುವ ನಂದ್‌ ಸಿಂಗ್ (53) ಎಂಬ ಕಾರ್ಮಿಕ ಸೋಮವಾರ ಬೆಳಿಗ್ಗೆ ಸುಮಾರು … Continued

ಸಚಿವರ ಬಂಗಲೆ ಪ್ರವೇಶಿಸಿದ ಚಿರತೆ ; ವೀಡಿಯೊ ವೈರಲ್‌

ಜೈಪುರ: ಅತಿ ಹೆಚ್ಚು ಭದ್ರತೆಯಿರುವ ಜೈಪುರದ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಚಿರತೆಯೊಂದು ಕಾಣಿಸಿಕೊಂಡು ಭಾರಿ ಆತಂಕ ಸೃಷ್ಟಿಸಿತ್ತು. ಶಾಲೆಯ ಆವರಣ, ಹಾಗೂ ರಾಜಸ್ಥಾನ ಸಚಿವರ ಅಧಿಕೃತ ನಿವಾಸ ಸೇರಿದಂತೆ ಹಲವು ವಸತಿ ಪ್ರದೇಶಗಳಲ್ಲಿ ಈ ಚಿರತೆ ಸಂಚರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿಯ ಪ್ರಕಾರ, ಗುರುವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಸಚಿವರ ಬಂಗಲೆಯಲ್ಲಿ ಚಿರತೆ … Continued

ಈ ನಗರದಲ್ಲಿ ಟ್ರಾಫಿಕ್ ಸಿಗ್ನಲ್‌ಗಳಿಲ್ಲ, ವಾಹನಗಳು ಜಂಕ್ಷನ್‌ಗಳಲ್ಲಿ ನಿಲ್ಲುವುದೂ ಇಲ್ಲ…! ಇದು ಭಾರತದ ಯಾವ ನಗರ ಗೊತ್ತೆ..?

ಕೋಟಾ: ದೇಶದ ನಗರ ಮೂಲಸೌಕರ್ಯ ಕ್ಷೇತ್ರದಲ್ಲಿ ಇದೊಂದು ಅಪೂರ್ವ ಮೈಲಿಗಲ್ಲು. ಭಾರತದ ಪ್ರಸಿದ್ಧ ನಗರವೊಂದು ಸಂಪೂರ್ಣವಾಗಿ ಸಂಚಾರ ದೀಪ (traffic signals)ಗಳಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಮೊದಲ ಮಹಾನಗರವಾಗಿ ಹೊರಹೊಮ್ಮಿದೆ. ಇದು ಅತ್ಯಾಧುನಿಕ ಸುರಂಗಮಾರ್ಗಗಳು (Underpasses), ಹೊರವರ್ತುಲ ರಸ್ತೆಗಳು (Ring Roads), ಮತ್ತು ಮೇಲ್ಸೇತುವೆಗಳ (Flyovers) ಸುಗಮ ಸಂಪರ್ಕದೊಂದಿಗೆ ಅಭಿವೃದ್ಧಿಗೊಂಡಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ದೇಶದ ಪ್ರಮುಖ ವಿದ್ಯಾರ್ಥಿ ಕೇಂದ್ರವಾಗಿರುವ … Continued