200 ವರ್ಷಗಳ ಬಳಿಕ ಕುಟುಂಬದಲ್ಲಿ ಹೆಣ್ಣು ಮಗುವಿನ ಜನನ : ರಥದಲ್ಲಿ ಕುಳ್ಳಿರಿಸಿ ಮೆರವಣಿಗೆ ಮೂಲಕ ಮನೆಗೆ ಕರೆತಂದ ಕುಟುಂಬ !

ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಒಂದು ಹೆಣ್ಣು ಮಗುವಿನ ಜನನವು ಇಡೀ ಕುಟುಂಬಕ್ಕೆ ಐತಿಹಾಸಿಕ ಸಂಭ್ರಮದ ಕ್ಷಣವಾಗಿ ಪರಿಣಮಿಸಿದೆ. ಸುಮಾರು 200 ವರ್ಷಗಳ ಬಳಿಕ ಹಾಗೂ ನಾಲ್ಕು ತಲೆಮಾರುಗಳ ನಂತರ ದಹಿಫಾಲೆ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿರುವ ಹಿನ್ನೆಲೆಯಲ್ಲಿ, ನವಜಾತ ಶಿಶುವನ್ನು ರಥದಲ್ಲಿ ಕೂಡ್ರಿಸಿಕೊಂಡುಅದ್ಧೂರಿ ಮೆರವಣಿ ಮೂಲಕ ಮನೆಗೆ ಸ್ವಾಗತಿಸಲಾಯಿತು. ಆಸ್ಪತ್ರೆಯಿಂದ ಬಿಡುಗಡೆಯಾದ ತಾಯಿ ಮತ್ತು ಮಗು … Continued

ಆಕೆ ಪಾಸ್‌, ಈತ ಫೇಲ್‌; ಪ್ರೇಮ ಸಂಬಂಧ ಮುರಿದುಬಿದ್ದ ಬೆನ್ನಲ್ಲೇ ಪ್ರಶ್ನೆಪತ್ರಿಕೆ ಲೀಕ್‌ ಆಗಿದ್ದನ್ನು ಬಯಲಿಗೆಳೆದ ಪ್ರಿಯಕರ…!

ಮುಂಬೈ : ಮಹಾರಾಷ್ಟ್ರ ಲೋಕಸೇವಾ ಆಯೋಗದ (MPSC) ಡ್ರಗ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಗರಣವು ಪ್ರೇಮ ವೈಫಲ್ಯದ ಕಾರಣಕ್ಕೆ ಬೆಳಕಿಗೆ ಬಂದಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಲ್ಲೊಬ್ಬನೇ ಪೊಲೀಸರಿಗೆ ಮಾಹಿತಿ ನೀಡಿ, ನಂತರ ಆತನೇ ಬಂಧನಕ್ಕೊಳಗಾಗಿದ್ದಾನೆ. ಪೊಲೀಸರ ತನಿಖೆಯ ಪ್ರಕಾರ, ಅಭ್ಯರ್ಥಿ ರಿತುಜಾ ಪಾಟೀಲ ಅವರ ತಂದೆ ಅಮೃತ್‌ ಪಾಟೀಲ ಅವರು ನಂದುರ್ಬಾರ್‌ನ ಕೋಚಿಂಗ್‌ … Continued

ಐಫೋನ್‌ ಸಾಲದ ಕಂತಿನ ವಿಚಾರದ ಜಗಳ ದುರಂತದಲ್ಲಿ ಅಂತ್ಯ : ಬೆಟ್ಟದ ಪ್ರಪಾತಕ್ಕೆ ಬಿದ್ದು ಮಗ, ತಂದೆ-ತಾಯಿ ಸಾವು

ಛತ್ರಪತಿ ಸಂಭಾಜಿನಗರ: ಐಫೋನ್‌ ಖರೀದಿಯ ಕಂತು (EMI) ಪಾವತಿಸುವ ವಿಚಾರವಾಗಿ ತಂದೆ-ಮಗನ ನಡುವೆ ನಡೆದ ವಾಗ್ವಾದವು ಇಡೀ ಕುಟುಂಬದ ದುರಂತ ಅಂತ್ಯಕ್ಕೆ ಕಾರಣವಾದ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ. 18 ವರ್ಷದ ಕುನಾಲ್‌ ಚಾಂದ್‌ಗುಡೆ, ಆತನ ತಂದೆ ಮುರಳೀಧರ ಚಾಂದ್‌ಗುಡೆ ಹಾಗೂ ತಾಯಿ ಸಂಗೀತಾ ಚಾಂದ್‌ಗುಡೆ ಬೆಟ್ಟದಿಂದ ಆಳವಾದ ಕಂದಕಕ್ಕೆ ಬಿದ್ದು … Continued

ಸಿಸೇರಿಯನ್ ಹೆರಿಗೆ ಶಸ್ತ್ರಚಿಕಿತ್ಸೆ ಬಳಿಕ ಹೊಟ್ಟೆಯಲ್ಲೇ ಉಳಿದ ಗ್ಲೌಸ್‌, ನ್ಯಾಪ್ಕಿನ್‌ : ಯುವತಿ ಸ್ಥಿತಿ ಗಂಭೀರ

ಬೀಡ್ : ಮಹಾರಾಷ್ಟ್ರದ ಬೀಡ್ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸಿಸೇರಿಯನ್ ಹೆರಿಗೆ ಶಸ್ತ್ರಚಿಕಿತ್ಸೆಯ ಬಳಿಕ ಶಸ್ತ್ರಚಿಕಿತ್ಸೆಗೆ ಬಳಸುವ ಕೈಗವಸುಗಳು (ಸರ್ಜಿಕಲ್ ಗ್ಲೌಸ್) ಹಾಗೂ ಪೇಪರ್‌ ನ್ಯಾಪ್ಕಿನ್‌ಗಳು ಹೊಟ್ಟೆಯೊಳಗೆ ಉಳಿದುಕೊಂಡಿದ್ದರಿಂದ 19 ವರ್ಷದ ಮಹಿಳೆಯೊಬ್ಬರು ಜೀವನ್ಮರಣದ ಹೋರಾಟ ನಡೆಸುತ್ತಿದ್ದಾಳೆ ಎಂದು ವರದಿಯಾಗಿದೆ. ಮಹಾರಾಷ್ಟ್ರದ ಬೀಡ್ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಸಿಸೇರಿಯನ್ … Continued

ವಿಮಲ್ ಎಲೈಚಿ ಜಾಹೀರಾತು : ಅಜಯ ದೇವಗನ್, ಶಾರುಖ್ ಖಾನ್, ಟೈಗರ್ ಶ್ರಾಫ್‌ಗೆ ಎಫ್‌ಡಿಎ ನೋಟಿಸ್

ಮುಂಬೈ: ವಿಮಲ್ ಎಲೈಚಿ ಜಾಹೀರಾತಿನಲ್ಲಿ ಬ್ರ್ಯಾಂಡ್ ಅನುಮೋದಕರಾಗಿ ಕಾಣಿಸಿಕೊಂಡಿರುವ ಬಾಲಿವುಡ್ ನಟರಾದ ಅಜಯ ದೇವಗನ್, ಶಾರುಖ್ ಖಾನ್ ಮತ್ತು ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆಯು ಶೋಕಾಸ್ ನೋಟಿಸ್ ಜಾರಿ ಮಾಡಿದೆ. ‘ವಿಮಲ್ ಎಲೈಚಿ’ ಹೆಸರಿನಲ್ಲಿ ಪ್ರಸಾರವಾಗಿರುವ ಈ ಜಾಹೀರಾತು ನಿಷೇಧಿತ ಅಥವಾ ನಿರ್ಬಂಧಿತ ಉತ್ಪನ್ನದ ಪರೋಕ್ಷ, ಪರ್ಯಾಯ … Continued

ನಾಂದೇಡ್‌ನಲ್ಲಿ ಅಕಾಲಿ ದಳ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಮೇಲೆ ಕಿರ್ಪಾನ್‌ನಿಂದ ದಾಳಿ : ಆಸ್ಪತ್ರೆಗೆ ದಾಖಲು

ನಾಂದೇಡ್: ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಅಧ್ಯಕ್ಷ ಹಾಗೂ ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ ಅವರ ಮೇಲೆ ಮಹಾರಾಷ್ಟ್ರದ ನಾಂದೇಡ್‌ನ ಗುರುದ್ವಾರದಲ್ಲಿ ಗುರುವಾರ ದಾಳಿ ನಡೆದಿದೆ. ತೀಕ್ಷ್ಣವಾದ ಆಯುಧದಿಂದ ನಡೆದ ದಾಳಿಯಲ್ಲಿ ಬಾದಲ್ ಅವರ ಕೈಗೆ ಗಾಯವಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಂದೇಡ್ … Continued

ವಸತಿ ಶಾಲಾ ಹಾಸ್ಟೆಲ್‌ನಲ್ಲಿ ಮಲಗಿದ್ದ ವಿದ್ಯಾರ್ಥಿನಿಯರಿಗೆ ಹಾವು ಕಡಿತ; ಮೂವರು ಸಾವು, ಮೂವರು ಗಂಭೀರ

ಗಡ್ಚಿರೋಲಿ: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಧನೋರಾ ತಾಲೂಕಿನ ಜಪತಲಾಯಿ ಗ್ರಾಮದಲ್ಲಿರುವ ವಸತಿ ಶಾಲೆಯಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಶಂಕಿತ ಹಾವು ಕಡಿತದ ಘಟನೆಯಲ್ಲಿ ಮೂವರು ವಿದ್ಯಾರ್ಥಿನಿಯರು ಮೃತಪಟ್ಟಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ 14 ವಿದ್ಯಾರ್ಥಿನಿಯರನ್ನು ವೈದ್ಯಕೀಯ ನಿಗಾದಲ್ಲಿರಿಸಲಾಗಿದೆ ಎಂದು ಹೇಳಲಾಗಿದೆ. ಜಪತಲಾಯಿ ಗ್ರಾಮದ ಕುಪರ್ಲಿಂಗೋ ಎಜುಕೇಷನಲ್ ಆ್ಯಂಡ್ ಕಲ್ಚರಲ್ ಡೆವಲಪ್‌ಮೆಂಟ್ … Continued

ಅಪ್ರಾಪ್ತರ ಲೈಂಗಿಕ ಶೋಷಣೆ ಆರೋಪ : ಬಂಧಿತನ ಮೊಬೈಲ್‌ನಲ್ಲಿ 600ಕ್ಕೂ ಹೆಚ್ಚು ಅಶ್ಲೀಲ ವಿಡಿಯೊಗಳು ಪತ್ತೆ…!

ನಂದೂರ್ಬಾರ್: ಅಪ್ರಾಪ್ತರಿಗೆ ಹಣದ ಆಮಿಷವೊಡ್ಡಿ ಲೈಂಗಿಕವಾಗಿ ಶೋಷಿಸಿ, ಆ ಕೃತ್ಯಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಪೊಲೀಸರು 22 ವರ್ಷದ ಯುವಕನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತನನ್ನು ರೈಸಿಂಗಪುರ ನಿವಾಸಿ ಚೇತನಪ್ರಕಾಶ ಕೋಳಿ ಎಂದು ಗುರುತಿಸಲಾಗಿದೆ. ಆರೋಪಿ ಅಪ್ರಾಪ್ತರನ್ನು ಹಣದ ಆಮಿಷವೊಡ್ಡಿ ತನ್ನ … Continued

₹32 ಕೋಟಿ ಸಾಲ…ಕಂಪನಿ ಸ್ವಾಧೀನಕ್ಕೆ ಸಂಚು…ಎಂ.ಡಿ. ಹತ್ಯೆಗೆ ಸುಪಾರಿ…ಗುಂಡಿನ ದಾಳಿ ; ಕೋ-ಚೇರ್ಮನ್ ಸೇರಿ 7 ಜನರ ಬಂಧನ

ವಸಾಯಿ (ಮಹಾರಾಷ್ಟ್ರ) : ಮಹಾರಾಷ್ಟ್ರದ ಕೈಗಾರಿಕೋದ್ಯಮಿ ಹಾಗೂ ಜಿಎಸ್‌ಎಂ ಫಾಯಿಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮೋಹನ ಸಿಂಗ್ ಪರಮಾರ್ ಅವರ ಮೇಲಿನ ಗುಂಡಿನ ದಾಳಿಯ ಹಿಂದಿನ ಸಂಚಿನ ಬೆಚ್ಚಿಬೀಳಿಸುವ ಸಂಗತಿಗಳು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ತನ್ನ ಸುಮಾರು ₹32 ಕೋಟಿ ಹಣಕಾಸಿನ ಬಾಧ್ಯತೆಯಿಂದ ತಪ್ಪಿಸಿಕೊಳ್ಳಲು ಹಾಗೂ ಕಂಪನಿಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವ ಉದ್ದೇಶದಿಂದ … Continued

ವಿಡಿಯೋ | ಜಿಪ್‌ಲೈನ್ ಸಾಹಸ ಸವಾರಿಯಲ್ಲಿ ತಾಂತ್ರಿಕ ದೋಷ : 3500 ಅಡಿ ಆಳದ ಕಂದಕದ ಮೇಲೆ ನೇತಾಡಿದ ಪ್ರವಾಸಿಗ

ಮಹಾರಾಷ್ಟ್ರ: ಜಿಪ್‌ಲೈನ್ ಸಾಹಸ ಸವಾರಿಯಲ್ಲಿ ಗುರುವಾರ ತಾಂತ್ರಿಕ ದೋಷ ಉಂಟಾಗಿ ಪ್ರವಾಸಿಗರೊಬ್ಬರು ಸುಮಾರು 3,500 ಅಡಿ ಆಳದ ಕಂದಕದ ಮೇಲೆಯೇ ನೇತಾಡಿದ ಘಟನೆ ನಡೆದಿದೆ. ಈ ಘಟನೆ ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ತೋರಣಮಲ್‌ನಲ್ಲಿ ಇರುವ ಪ್ರಸಿದ್ಧ ಸೀತಾಖೈ ಪಾಯಿಂಟ್‌ನಲ್ಲಿ ಪ್ರವಾಸಿಗರಿಗಾಗಿ ಹೊಸದಾಗಿ ಆರಂಭಿಸಲಾಗಿರುವ ಜಿಪ್‌ಲೈನ್ ಸಾಹಸ ಸವಾರಿ ವೇಳೆ ಈ ಘಟನೆ ಸಂಭವಿಸಿದೆ. ಈ ಸಾಹಸಮಯ … Continued