2012ರ ಪುಣೆ ಸ್ಫೋಟ ಪ್ರಕರಣದ ಆರೋಪಿ ಗುಂಡಿಕ್ಕಿ ಹತ್ಯೆ

2012ರ ಪುಣೆ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಅಸ್ಲಂ ಶಬ್ಬೀರ್ ಶೇಖ್ ಅಲಿಯಾಸ್ ಬಂಟಿ ಜಹಾಗೀರ್‌ದಾರ್‌ ಎಂಬಾತನನ್ನು ಬುಧವಾರ ಮಹಾರಾಷ್ಟ್ರದ ಶ್ರೀರಾಂಪುರದಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಬಂಟಿ ಜಹಾಗೀರ್‌ದಾರ್ ಅಂತ್ಯಕ್ರಿಯೆಯೊಂದರಲ್ಲಿ ಪಾಲ್ಗೊಳ್ಳಲು ಶ್ರೀರಾಂಪುರಕ್ಕೆ ಆಗಮಿಸಿದ್ದ. ಸ್ಮಶಾನದಿಂದ ವಾಪಸ್ ಬರುತ್ತಿದ್ದಾಗ, ಜರ್ಮನ್ ಆಸ್ಪತ್ರೆಯ ಮುಖ್ಯ ದ್ವಾರದ ಬಳಿ ಹೊಂಚು ಹಾಕಿದ್ದ ಇಬ್ಬರು … Continued

2 ವರ್ಷಗಳಿಂದ ಪ್ರೀತಿಸಿ ವಿವಾಹವಾದರು… ಆದ್ರೆ ಮದುವೆಯಾದ 24 ಗಂಟೆಗಳಲ್ಲೇ ಡೈವೋರ್ಸ್…!

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಅತ್ಯಂತ ವಿಚಿತ್ರ ಹಾಗೂ ಅಚ್ಚರಿಯ ಪ್ರಕರಣವೊಂದು ವರದಿಯಾಗಿದೆ. ಎರಡು-ಮೂರು ವರ್ಷಗಳಿಂದ ಪ್ರೀತಿಸಿ, ಸಂಭ್ರಮದಿಂದ ಮದುವೆಯಾಗಿದ್ದ ಜೋಡಿಯೊಂದು ಹಸೆಮಣೆ ಏರಿದ ಕೇವಲ 24 ಗಂಟೆಗಳಲ್ಲಿ ವಿಚ್ಛೇದನ ಪಡೆದು ಕಾನೂನುಬದ್ಧವಾಗಿ ಬೇರ್ಪಟ್ಟಿದ್ದಾರೆ….! ವೃತ್ತಿಯಲ್ಲಿ ವೈದ್ಯೆಯಾಗಿರುವ ಯುವತಿ ಹಾಗೂ ಇಂಜಿನಿಯರ್ ಆಗಿರುವ ಯುವಕ ಕಳೆದ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಇತ್ತೀಚೆಗೆ … Continued

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಬಿಜೆಪಿ ಅತಿದೊಡ್ಡ ಪಕ್ಷ, ಮೈತ್ರಿಕೂಟಕ್ಕೆ ಭರ್ಜರಿ ಗೆಲುವು

ಮುಂಬೈ: ಮಹಾರಾಷ್ಟ್ರದ ಒಟ್ಟು 246 ನಗರ ಪಾಲಿಕೆಗಳು ಹಾಗೂ 42 ನಗರ ಪಂಚಾಯತಗಳಿಗೆ ನಡೆದ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ.  246 ನಗರ ಪಾಲಿಕೆಗಳಲ್ಲಿ ಮಹಾಯುತಿ ಮೈತ್ರಿಕೂಟವು  207 ನಗರ ಪಾಲಿಕೆಗಳಲ್ಲಿ ಅಧ್ಯಕ್ಷ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.  ಮಹಾ ವಿಕಾಸ ಅಘಾಡಿಯನ್ನು ಒಟ್ಟು 44 ಕ್ಕೆ ಸೀಮಿತಗೊಳಿಸಿದೆ. ರಾಜ್ಯ ಚುನಾವಣಾ ಆಯೋಗದ  ಪ್ರಕಾರ, … Continued

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ : ಅಭೂತಪೂರ್ವ ಗೆಲುವಿನತ್ತ ಬಿಜೆಪಿ ನೇತೃತ್ವದ ಮಹಾಯುತಿ…

ಮುಂಬೈ: ಮಹಾರಾಷ್ಟ್ರದಾದ್ಯಂತ ನಡೆದ ನಗರಸಭೆ ಮತ್ತು ನಗರ ಪಂಚಾಯತ ಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿಯ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟವು ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ತನ್ನ ಪಾರುಪತ್ಯ ಮೆರೆದಿದೆ. ಒಟ್ಟು 288 ಸ್ಥಳೀಯ ಸಂಸ್ಥೆಗಳ ಪೈಕಿ ಸಿಂಹಪಾಲು ಸ್ಥಾನಗಳನ್ನು ಗೆಲ್ಲುವ ಮೂಲಕ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾಯುತಿ ಮೈತ್ರಿಕೂಟವು ರಾಜ್ಯದ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ … Continued

ಸೊಲ್ಲಾಪುರದಲ್ಲಿ ಪತ್ತೆಯಾಯ್ತು 2,000 ವರ್ಷಗಳಷ್ಟು ಹಿಂದಿನ ಭಾರತದಲ್ಲೇ ಬೃಹತ್ ಆದ ವೃತ್ತಾಕಾರದ ಕಲ್ಲಿನ ‘ಚಕ್ರವ್ಯೂಹ’…!

ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಬೋರಮಣಿ ಹುಲ್ಲುಗಾವಲು ಪ್ರದೇಶದಲ್ಲಿ ಅಪರೂಪದ ಮತ್ತು ಬೃಹತ್ ಗಾತ್ರದ ಪ್ರಾಚೀನ ಕಲ್ಲಿನ ಚಕ್ರವ್ಯೂಹದ (Labyrinth) ಮಾದರಿಯ ಸುರುಳಿಯಾಕಾರದ ವಿಶಿಷ್ಟ ರಚನೆಯೊಂದು ಪತ್ತೆಯಾಗಿದೆ. ಇದು ಭಾರತದಲ್ಲಿ ಇದುವರೆಗೆ ದಾಖಲಾದ ಅತಿದೊಡ್ಡ ವೃತ್ತಾಕಾರದ ಕಲ್ಲಿನ ಚಕ್ರವ್ಯೂಹ ಎಂದು ವಿಜ್ಞಾನಿಗಳು ಬಣ್ಣಿಸಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಬೋರಮಣಿ ಹುಲ್ಲುಗಾವಲು ಸಫಾರಿ ಅಭಯಾರಣ್ಯದಲ್ಲಿ ಈ ರಚನೆ ಪತ್ತೆಯಾಗಿದೆ. … Continued

ಕಾಂಗ್ರೆಸ್ಸಿಗೆ ಆಘಾತ ; ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ರಾಹುಲ್‌ ಗಾಂಧಿ ಆಪ್ತನ ಪತ್ನಿ…!

ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್ಸಿಗೆ ಮತ್ತೊಂದು ದೊಡ್ಡ ಆಘಾತ ಎದುರಾಗಿದ್ದು, ದಿವಂಗತ ಸಂಸದ ರಾಜೀವ ಸಾತವ್ ಅವರ ಪತ್ನಿ ಹಾಗೂ ವಿಧಾನ ಪರಿಷತ್ ಸದಸ್ಯೆ (MLC) ಪ್ರಜ್ಞಾ ಸಾತವ್ ಅವರು ಗುರುವಾರ ವಿಧಾನ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮುಂಬೈನ ನಾರಿಮನ್ ಪಾಯಿಂಟ್‌ನಲ್ಲಿರುವ ಪಕ್ಷದ ಕಚೇರಿಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದರು. … Continued

ವಿಮೆ ಹಣಕ್ಕಾಗಿ ಹಿಚ್‌ಹೈಕರನ ಹತ್ಯೆ ಮಾಡಿ ತಾನೇ ಸತ್ತಿದ್ದಾಗಿ ಬಿಂಬಿಸಿದ ವ್ಯಕ್ತಿ ; ಗೆಳತಿಗೆ ಕಳುಹಿಸಿದ ಮೆಸೇಜಿನಿಂದ ಹೊರಬಿತ್ತು ಸತ್ಯ…!

ಮುಂಬೈ: ತನ್ನದೇ ಸಾವು ಸಂಭವಿಸಿದೆ ಎಂದು ನಂಬಿಸಲು, ಹಿಚ್‌ಹೈಕರ್‌ನನ್ನು (ದಾರಿಯಲ್ಲಿ ಹೋಗುವ ವಾಹನಗಳಲ್ಲಿ ಉಚಿತ ಪ್ರಯಾಣಕೇಳಿ ಪ್ರಯಾಣ ಮಾಡುವ ವ್ಯಕ್ತಿ) ಬರ್ಬರವಾಗಿ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಆದರೆ, ಆತ ತನ್ನ ಗೆಳತಿಗೆ ಕಳುಹಿಸಿದ ಸರಣಿ ಸಂದೇಶಗಳಿಂದ ಈ ಇಡೀ ನಾಟಕ ಬಯಲಿಗೆ ಬಂದಿದೆ. ಎನ್‌ಡಿಟಿವಿ  ವರದಿ ಪ್ರಕಾರ,  ಕಳೆದ ಭಾನುವಾರ ಮುಂಜಾನೆ, ಮಹಾರಾಷ್ಟ್ರದ … Continued

ಜನವರಿ 15ಕ್ಕೆ ಬೃಹನ್‌ ಮುಂಬೈ ಮಹಾನಗರ ಪಾಲಿಕೆ ಚುನಾವಣೆ

ಮುಂಬೈ: 2022ರಿಂದ ಬಾಕಿ ಉಳಿದಿದ್ದ ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಅಂತಿಮವಾಗಿ ಜನವರಿ 15 ರಂದು ನಡೆಯಲಿವೆ. ಒಟ್ಟು 29 ಮಹಾನಗರ ಪಾಲಿಕೆಗಳು, 32 ಜಿಲ್ಲಾ ಪರಿಷತ್ತುಗಳು ಮತ್ತು 336 ಪಂಚಾಯತ ಸಮಿತಿಗಳಿಗೆ ಮತದಾನ ನಡೆಯಲಿದೆ. ಮರುದಿನ ಜನವರಿ 16 ರಂದು ಮತ ಎಣಿಕೆ ನಡೆಯಲಿದೆ. ಬೃಹನ್‌ಮುಂಬೈ ಮಹಾನಗರ ಪಾಲಿಕೆ (BMC), ಪುಣೆ ಮತ್ತು ಥಾಣೆಯಂತಹ … Continued

ಜಾತಿ ಕಾರಣಕ್ಕೆ ಯುವಕನ ಕೊಲೆ ; ಪ್ರಿಯಕರನ ಮೃತದೇಹವನ್ನೇ ಮದುವೆಯಾದ ಯುವತಿ

ನಾಂದೇಡ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಭೀಕರ ಘಟನೆಯಲ್ಲಿ 20 ವರ್ಷದ ಯುವಕನೊಬ್ಬನನ್ನು ಆಕೆಯ ಪ್ರೇಯಸಿಯ ಸಹೋದರರು ಮತ್ತು ತಂದೆ ಸೇರಿ ಥಳಿಸಿ, ಗುಂಡಿಕ್ಕಿ, ಕಲ್ಲಿನಿಂದ ಜಜ್ಜಿ ಕೊಂದಿದ್ದಾರೆ. ಈ ಯುವಕನ ಅಂತ್ಯ ಸಂಸ್ಕಾರದ ವೇಳೆ, ಆತನ ಪ್ರೇಯಸಿ ತನ್ನ ಹಣೆಗೆ ಸಿಂಧೂರ ಇಟ್ಟುಕೊಂಡು, ಆತನ ಮನೆಯಲ್ಲಿಯೇ ಸೊಸೆಯಾಗಿ ಜೀವಿಸುವುದಾಗಿ ಪ್ರತಿಜ್ಞೆ ಮಾಡಿರುವ ಘಟನೆ ನಡೆದಿದೆ. ಆಂಚಲ್ … Continued

ಶಾಲೆಯಲ್ಲಿ 100 ಸಿಟ್-ಅಪ್‌ಗಳನ್ನು ಮಾಡಿಸಿದ ನಂತರ 6ನೇ ತರಗತಿ ವಿದ್ಯಾರ್ಥಿನಿ ಸಾವು ; ಕುಟುಂಬದ ಆರೋಪ

ಪಾಲ್ಘರ್ (ಮಹಾರಾಷ್ಟ್ರ) : ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ 6ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಶಾಲೆಗೆ ತಡವಾಗಿ ಬಂದಿದ್ದಕ್ಕಾಗಿ ಶಿಕ್ಷಕರು ನೀಡಿದ ದಂಡನೆಯ ಭಾಗವಾಗಿ 100 ಸಿಟ್-ಅಪ್‌ಗಳನ್ನು ಮಾಡಿದ ನಂತರ ಮೃತಪಟ್ಟಿದ್ದಾಳೆ ಎಂದು ಆರೋಪಿಸಲಾಗಿದೆ.  ಈ ವಿದ್ಯಾರ್ಥಿನಿ, ಶುಕ್ರವಾರ ರಾತ್ರಿ ಮುಂಬೈನ ಆಸ್ಪತ್ರೆಯಲ್ಲಿ ನಿಧನಳಾಗಿದ್ದಾಳೆ. ರಾಜ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್‌ಎಸ್) ಸದಸ್ಯರು … Continued