ವಿದೇಶಿ ಉದ್ಯೋಗದ ಆಮಿಷ ; ಪೋರ್ಚುಗಲ್‌ಗೆ ಹೋದ ಭಾರತದ ಯುವತಿ ಬಿಯರ್ ಶಾಪ್‌ ಮಾಲೀಕನಿಗೆ ಮಾರಾಟ….?!

ನವದೆಹಲಿ: ವಿದೇಶದಲ್ಲಿ ಕೈತುಂಬ ಸಂಬಳದ ಉದ್ಯೋಗ ಕೊಡಿಸುವುದಾಗಿ ನಂಬಿಸಿ 28 ವರ್ಷದ ನಾಗ್ಪುರ ಮೂಲದ ಯುವತಿಯನ್ನು ಪೋರ್ಚುಗಲ್‌ಗೆ ಕರೆದೊಯ್ದು, ಅಲ್ಲಿ ಬಿಯರ್ ಅಂಗಡಿ ಮಾಲೀಕನಿಗೆ ಮಾರಾಟ ಮಾಡಿ, ಹಿಂಸೆ ನೀಡಿರುವ ಆರೋಪ ಕೇಳಿಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ‘ಏಜೆನ್ಸಿ ಸಂಸ್ಥೆಯ ನಿರ್ವಾಹಕರು ಸೇರಿದಂತೆ ಎಂಟು ಮಂದಿ ವಿರುದ್ಧ ಪುಣೆ ಪೊಲೀಸರು ಮಾನವ ಕಳ್ಳಸಾಗಣೆ, ವಂಚನೆ … Continued

ವಿಡಿಯೋ | ವಿಚಿತ್ರ ಕಳ್ಳತನ : ದೇವರ ಕ್ಷಮೆ ಕೋರಿ ದೇವಾಲಯದ ಹುಂಡಿ ದೋಚಿದ ಕಳ್ಳರು…!

ವಿಚಿತ್ರ ಕಳ್ಳತನದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಳ್ಳತನಕ್ಕೂ ಮುನ್ನ ದೇವರ ಮುಂದೆ ಕ್ಷಮೆ ಕೋರಿ ಇಬ್ಬರು ಅಪರಿಚಿತರು ಬಳಿಕ ದೇವಾಲಯಗಳ ಹುಂಡಿಗಳನ್ನು ಒಡೆದು ಹಣ ದೋಚಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯು ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ. ಈ ಕಳ್ಳತನವು ನಾಗಪುರದ ಮಾಲ್ಧಕ್ಕಾ ಪ್ರದೇಶದಲ್ಲಿರುವ ಶೀತ್ಲಾ ಮಾತಾ ದೇವಾಲಯ ಹಾಗೂ ಶಿವ ದೇವಾಲಯಗಳಲ್ಲಿ … Continued

ವಾಯುಪಡೆ ಸಿಬ್ಬಂದಿ ಪತ್ನಿಗೆ ಮತ್ತು ಬರಿಸುವ ಪಾನೀಯ ನೀಡಿ ಅತ್ಯಾಚಾರ, ಬ್ಲ್ಯಾಕ್‌ಮೇಲ್, ಬಲವಂತದ ಮತಾಂತರಕ್ಕೆ ಯತ್ನ; ಇಬ್ಬರ ಬಂಧನ

ನಾಗಪುರ: ವಾಯುಪಡೆ (ಏರ್‌ಫೋರ್ಸ್) ಸಿಬ್ಬಂದಿಯೊಬ್ಬರ ಪತ್ನಿಗೆ ಆಕೆಯ ಹಳೆಯ ಸಹಪಾಠಿ ಮತ್ತು ಆತನ ಕಡೆಯವರು ಸೇರಿ ಮಾದಕ ದ್ರವ್ಯ ನೀಡಿ ಅತ್ಯಾಚಾರ ಎಸಗಿದ್ದಲ್ಲದೆ, ಬ್ಲ್ಯಾಕ್‌ಮೇಲ್, ಮಾಟಮಂತ್ರ ಹಾಗೂ ಬಲವಂತದ ಧಾರ್ಮಿಕ ಮತಾಂತರಕ್ಕೆ ಯತ್ನಿಸಿರುವ ಅತ್ಯಂತ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದ ನಾಗಪುರದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಪುರ ಪೊಲೀಸರು ಪ್ರಮುಖ ಆರೋಪಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. … Continued

ನಾಗ್ಪುರ : ಆರ್‌ಎಸ್‌ಎಸ್ ಸ್ಥಾಪಕ ಹೆಡ್ಗೇವಾರ ಸ್ಮೃತಿ ಮಂದಿರಕ್ಕೆ ಭೇಟಿ ನೀಡಿದ ಬಾಲಿವುಡ್‌ ನಟ ರಣವೀರ ಸಿಂಗ್

ನಾಗ್ಪುರ: ಬಾಲಿವುಡ್‌ನ ಖ್ಯಾತ ನಟ ರಣವೀರ ಸಿಂಗ್ ಅವರು ಶುಕ್ರವಾರ ನಾಗ್ಪುರದ ರೇಶಿಂಬಾಗ್‌ನಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಪ್ರಮುಖ ಸ್ಥಳವಾದ ಹೆಡ್ಗೆವಾರ್ ಸ್ಮೃತಿ ಮಂದಿರಕ್ಕೆ ಭೇಟಿ ನೀಡಿದ್ದಾರೆ. ತಮ್ಮ ಇತ್ತೀಚಿನ ಚಿತ್ರ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಭರ್ಜರಿ ಯಶಸ್ಸು ಕಂಡ ಬೆನ್ನಲ್ಲೇ ರಣವೀರ್ ಅವರ ಈ ಭೇಟಿ ಕುತೂಹಲ … Continued

ನಾಗ್ಪುರ : ಸ್ಫೋಟಕ ತಯಾರಿಕಾ ಕಾರ್ಖಾನೆಯಲ್ಲಿ ಭೀಕರ ಸ್ಫೋಟ ; 15 ಸಾವು, 18 ಮಂದಿಗೆ ಗಾಯ

ಮುಂಬೈ: ನಾಗ್ಪುರ ನಗರದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಕಲ್ಮೇಶ್ವರ ತಹಸಿಲ್‌ನ ರಾವುಲ್‌ಗಾಂವ್ ಗ್ರಾಮದ ಮದ್ದುಗುಂಡು ತಯಾರಿಕಾ ಕಂಪನಿಯಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 15 ಜನರು ಸಾವಿಗೀಡಾಗಿದ್ದಾರೆ ಮತ್ತು 18 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದುವರದಿಯಾಗಿದೆ. ಸ್ಥಳೀಯ ನಿವಾಸಿಗಳ ಪ್ರಕಾರ, ಭಾನುವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಪ್ರಬಲ ಸ್ಫೋಟ ಸಂಭವಿಸಿದೆ. … Continued

ಹೆತ್ತ ತಾಯಿಯ ಹುಡುಕಾಟಕ್ಕಾಗಿ 40 ವರ್ಷಗಳ ನಂತರ ಭಾರತಕ್ಕೆ ಬಂದ ನೆದರ್ಲ್ಯಾಂಡ್ಸ್ ನಗರದ ಮೇಯರ್…!

ನಾಗಪುರ: ಅದು 1985ರ ಫೆಬ್ರವರಿ ತಿಂಗಳು. ಮಹಾರಾಷ್ಟ್ರದ ನಾಗಪುರದ ಅಂಬಾಜರಿ ರಸ್ತೆಯಲ್ಲಿರುವ ‘ಮಾತೃ ಸೇವಾ ಸಂಘ’ದ ಮುಂದೆ 21 ವರ್ಷದ ಯುವತಿಯೊಬ್ಬಳು ತನ್ನ ಮೂರೇ ದಿನದ ಕಂದಮ್ಮನನ್ನು ಬಿಟ್ಟು ನಾಪತ್ತೆಯಾಗಿದ್ದರು. ಅವಿವಾಹಿತೆಯಾಗಿದ್ದ ಆಕೆಗೆ ಅಂದು ಅಸಹಾಯಕತೆ ಮತ್ತು ಸಾಮಾಜಿಕ ಒತ್ತಡಗಳೇ ದೊಡ್ಡದಾಗಿದ್ದರಿಂದ ಆಕೆ ಹೀಗೆ ಮಾಡಿದ್ದಿರಬಹುದು. ಇಂದು ಅದೇ ಮಗು 40 ವರ್ಷಗಳ ನಂತರ ದೂರದ … Continued

ಅಂತ್ಯಸಂಸ್ಕಾರಕ್ಕೆ ತೆರಳಿದ್ದಾಗ 103ರ ಅಜ್ಜಿ ಎದ್ದು ಕುಳಿತರು…! ಕೇಕ್ ತಿಂದು ಜನ್ಮದಿನ ಆಚರಿಸಿಕೊಂಡರು…!!

ನಾಗ್ಪುರ: ಸಾವು ಎಂಬುದು ಅನಿವಾರ್ಯ, ಆದರೆ ಅನಿರೀಕ್ಷಿತವಾಗಿ ಸಾವು ಬಂದು ಮತ್ತೆ ಮರಳಿ ಹೋದರೆ? ಇಂತಹದ್ದೊಂದು ನಂಬಲಾಗದ ಪವಾಡ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ರಾಮ್ಟೆಕ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮನೆಯವರೆಲ್ಲ ಸೇರಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ, ಸತ್ತಿದ್ದಾರೆಂದು ಭಾವಿಸಲಾಗಿದ್ದ 103 ವರ್ಷದ ಮುತ್ತಜ್ಜಿ ದಿಢೀರನೆ ಉಸಿರಾಡಲು ಆರಂಭಿಸಿ ಎದ್ದು ಕುಳಿತು ಎಲ್ಲರನ್ನೂ ಅಚ್ಚರಿಯಲ್ಲಿ ಮುಳುಗಿಸಿದ್ದಾರೆ. ರಾಮ್ಟೆಕ್ … Continued

ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳೆ ; ಪರಾರಿಯಾಗಿದ್ದ ಚಾಲಕ, ಲಾರಿ ಪತ್ತೆ ಹಚ್ಚಿದ ಎಐ….!

ನಾಗ್ಪುರ : ತನ್ನ ಪತ್ನಿಗೆ ಡಿಕ್ಕಿ ಹೊಡೆದ ಟ್ರಕ್ ಯಾವುದೆಂದು ಆ ವ್ಯಕ್ತಿಗೆ ನಿರ್ದಿಷ್ಟವಾಗಿ ಮಾಹಿತಿ ಇರಲಿಲ್ಲ. ಆದರೆ ಅದರ ಮೇಲೆ ಕೆಂಪು ಗುರುತುಗಳಿದ್ದವು ಎಂಬುದು ಮಾತ್ರ ಆತನಿಗೆ ತಿಳಿದಿತ್ತು. ಟ್ರಕ್‌ ಹೇಗಿತ್ತು, ಅದರ ನಂಬರ್‌ ಪ್ಲೇಟ್‌ ಅಥವಾ ಯಾವ ಕಂಪನಿಯ ಟ್ರಕ್‌ ಎಂಬುದೂ ಆ ವ್ಯಕ್ತಿಗೆ ಗೊತ್ತಿರಲಿಲ್ಲ. ಹೆಚ್ಚಿನ ಯಾವ ಮಾಹಿತಿಯೂ ಇರಲಿಲ್ಲ. ಆದರೂ … Continued

ಆಘಾತಕಾರಿ ವೀಡಿಯೊ…| ಟ್ರಕ್ ಡಿಕ್ಕಿ ಹೊಡೆದು ಮೃತಪಟ್ಟ ಪತ್ನಿ ಶವವನ್ನು ಬೈಕಿಗೆ ಕಟ್ಟಿಕೊಂಡು ಒಯ್ದ ಪತಿ….!

ನಾಗ್ಪುರ: ದಾರಿಹೋಕರು ಯಾರೂ ಸಹಾಯಕ್ಕೆ ಬಾರದ ಕಾರಣ ವ್ಯಕ್ತಿಯೊಬ್ಬ ತನ್ನ ಮೃತ ಪತ್ನಿಯ ಶವವನ್ನು ಮೋಟಾರ್ ಸೈಕಲ್‌ಗೆ ಕಟ್ಟಿ ಒಯ್ಯುತ್ತಿದ್ದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿರುವುದು ವರದಿಯಾಗಿದೆ. ಭಾನುವಾರ ಮಧ್ಯಾಹ್ನದ ಸುಮಾರಿಗೆ ದಿಯೋಲಾಪರ್ ಪೊಲೀಸ್ ವ್ಯಾಪ್ತಿಯ ಮೊರ್ಫಾಟಾ ಬಳಿಯ ನಾಗ್ಪುರ-ಜಬಲ್‌ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಗಯಾರ್ಸಿ ಅಮಿತ ಯಾದವ್ ಎಂದು ಗುರುತಿಸಲಾದ ಮಹಿಳೆಗೆ … Continued

8 ಜನರ ಜೊತೆ ಮದುವೆ…ಲಕ್ಷ ಲಕ್ಷ ಹಣ ಸುಲಿಗೆ…9ನೇ ಮದುವೆ ಪ್ರಯತ್ನದಲ್ಲಿದ್ದಾಗ ಪೊಲೀಸರ ಬಲೆಗೆ ಬಿದ್ದ ಮಹಿಳೆ…!

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ಎಂಟು ಜನರನ್ನು ಮದುವೆಯಾಗಿ ಒಂಬತ್ತನೇ ವ್ಯಕ್ತಿಯನ್ನು ಮದುವೆಯಾಗುವ ಸಿದ್ಧತೆಯಲ್ಲಿದ್ದಾಗ ಮದುವೆಯಾದವರಿಂದ ಲಕ್ಷ ಲಕ್ಷ ಹಣ ಸುಲಿಗೆ ಮಾಡಿದ ಆರೋಪದ ಮೇಲೆ 35 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಸಮೀರಾ ಫಾತಿಮಾ ಎಂದು ಗುರುತಿಸಲ್ಪಟ್ಟವಳನ್ನು ಜುಲೈ 29 ರಂದು ಬಂಧಿಸಲಾಯಿತು. ಪೊಲೀಸರ ಪ್ರಕಾರ, ಫಾತಿಮಾ ವೃತ್ತಿಯಲ್ಲಿ ಶಾಲಾ ಶಿಕ್ಷಕಿಯಾಗಿದ್ದು, … Continued