ವಿಡಿಯೊ | ದಾಂಡೇಲಿಯ ರೆಸಾರ್ಟ್‌ನಲ್ಲಿ ಜಿಪ್‌ಲೈನ್ ದುರಂತ: 40 ಅಡಿ ಎತ್ತರದಿಂದ ಬಿದ್ದು ಯುವಕನಿಗೆ ಗಂಭೀರ ಗಾಯ

ಕಾರವಾರ : ಮನರಂಜನೆ ಮತ್ತು ಸಾಹಸ ಅನುಭವಕ್ಕಾಗಿ ತೆರಳಿದ್ದ ವ್ಯಕ್ತಿಯೊಬ್ಬರಿಗೆ ಜಿಪ್‌ಲೈನ್ ಸವಾರಿ ದುಸ್ವಪ್ನವಾಗಿ ಪರಿಣಮಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ರೆಸಾರ್ಟ್‌ ಒಂದರಲ್ಲಿ ನಡೆದಿದೆ. ಜಿಪ್‌ಲೈನ್ ಸವಾರಿಯ ವೇಳೆ ಸುರಕ್ಷತಾ ವ್ಯವಸ್ಥೆ (ಸೇಫ್ಟಿ ಲಾಕ್) ಕೈಕೊಟ್ಟ ಪರಿಣಾಮ ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದು ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. … Continued

ಶಿರಸಿ : ವಾಹನ ಡಿಕ್ಕಿ ; ಕಾನಕುರಿ ಸಾವು

ಶಿರಸಿ: ಶಿರಸಿ-ಕುಮಟಾ ರಸ್ತೆಯ ಸಿರ್ಸಿಮಕ್ಕಿ ಸಮೀಪ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಕಾನಕುರಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಭಾನುವಾರ ನಡೆದಿದೆ. ಸಿರಸಿಮಕ್ಕಿಯ ಸಮೀಪದ ರಾಷ್ಟ್ರೀಯ ಹೆದ್ದಾರಿ ಭಾಗದಲ್ಲಿ ಈ ಸಂಭವಿಸಿದ್ದು, ಕಾಡಿನಿಂದ ಬಂದ ಕಾನಕುರಿ ರಸ್ತೆ ದಾಟುವ ವೇಳೆ ಅಪರಿಚಿತ ವಾಹನ ವೇಗವಾಗಿ ಡಿಕ್ಕಿ ಹೊಡೆದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. … Continued

ವಿಡಿಯೊ | ಮೆರ್ಸಿಡಿಸ್ ಕಾರಿನಡಿಗೆ ಸಂಪೂರ್ಣವಾಗಿ ಸಿಲುಕಿದ ಕೆಲ ಕ್ಷಣಗಳಲ್ಲೇ ಎದ್ದು ನಡೆದು ಅಚ್ಚರಿ ಮೂಡಿಸಿದ ವ್ಯಕ್ತಿ…!

ಚಂಡೀಗಢ: ನಗರದ ಸೆಕ್ಟರ್–26 ಪ್ರದೇಶದಲ್ಲಿ ಮೆರ್ಸಿಡಿಸ್ ಕಾರೊಂದು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಿಸಿ ಇಬ್ಬರಿಗೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಶನಿವಾರ ಸಂಜೆ ನಡೆದಿದೆ. ಈ ಹಿಟ್-ಅಂಡ್-ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಬೈಲ್‌ನಲ್ಲಿ ಸೆರೆಹಿಡಿದ ದೃಶ್ಯಗಳು ಇದೀಗ ಹೊರಬಿದ್ದಿದ್ದು, ಕಾರು ವ್ಯಕ್ತಿಯ ಮೇಲೆ ಚಲಿಸಿದರೂ ಕೆಲವೇ ಕ್ಷಣಗಳಲ್ಲಿ ವ್ಯಕ್ತಿ ಏನೂ ಆಗದವನಂತೆ ಎದ್ದು ನಡೆಯುತ್ತಿರುವ ದೃಶ್ಯವೂ ಕಂಡುಬಂದಿದೆ. … Continued

ಯಲ್ಲಾಪುರ : ಕ್ರೂಸರ್-ಲಾರಿ ಮುಖಾಮುಖಿ ಡಿಕ್ಕಿ, 6 ಮಂದಿ ಸಾವು

ಕಾರವಾರ : ಭೀಕರ ರಸ್ತೆ ಅಪಘಾತ ಸ್ಥಳದಲ್ಲೇ ಆರು ಮಂದಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ಬಳಗಾರ ಸಮೀಪ ಅಂಕೋಲಾ–ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಗುರುವಾರ ಬೆಳಗಿನ ಜಾವ ಸಂಭವಿಸಿದೆ ಎಂದು ವರದಿಯಾಗಿದೆ. ಪ್ರವಾಸಿಗರಿದ್ದ ತೂಫಾನ್ ಕ್ರೂಸರ್ ಮತ್ತು ಲಾರಿಯ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಆರು ಮಂದಿ … Continued

ಮೈ ಜುಂ ಎನ್ನುವ ವಿಡಿಯೋ | ಆಕಾಶದಲ್ಲಿ ಪ್ಯಾರಾಗ್ಲೈಡರ್‌ಗೆ ಡಿಕ್ಕಿ ಹೊಡೆದ ವಿಮಾನ ; ಪವಾಡಸದೃಶವಾಗಿ ಪಾರಾದ ಮಹಿಳೆ !

ವಿಯೆನ್ನಾ: ಆಸ್ಟ್ರಿಯಾದ ಆಲ್ಪ್ಸ್ ಪರ್ವತ ಶ್ರೇಣಿಯಲ್ಲಿ ಹಾರಾಟ ನಡೆಸುತ್ತಿದ್ದ ಪ್ಯಾರಾಗ್ಲೈಡರ್‌ಗೆ ಸಣ್ಣ ಪ್ರವಾಸಿ ವಿಮಾನವೊಂದು ನೇರವಾಗಿ ಢಿಕ್ಕಿ ಹೊಡೆದ ಅತ್ಯಂತ ಭಯಾನಕ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ವಿಮಾನದ ರೆಕ್ಕೆ ಬಡಿದ ರಭಸಕ್ಕೆ ಪ್ಯಾರಾಗ್ಲೈಡರ್‌ನ ಕ್ಯಾನೋಪಿ (ಮೇಲ್ಛಾವಣಿ) ಎರಡು ಭಾಗಗಳಾಗಿ ಸೀಳಿದ್ದು, ಪ್ಯಾರಾಗ್ಲೈಡರ್ ಸವಾರಿ ಮಾಡುತ್ತಿದ್ದ ಮಹಿಳೆ ಕಿರುಚುತ್ತಾ ಆಕಾಶದಿಂದ ಕೆಳಗೆ ಬಂದು ಭೂಮಿ ಮೇಲೆ … Continued

ಅಮೆರಿಕ ವಿಮಾನ ದುರಂತ: ಟೇಕ್‌ಆಫ್ ವೇಳೆ ಯುಪಿಎಸ್ ವಿಮಾನದ ಇಂಜಿನ್ ಕಳಚಿ ಬಿದ್ದ ವಿಡಿಯೋ ಬಿಡುಗಡೆ ಮಾಡಿದ ಎನ್‌ಟಿಎಸ್‌ಬಿ

ಲೂಯಿಸ್‌ವಿಲ್ಲೆ (ಕೆಂಟಕಿ): ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಯುಪಿಎಸ್ (UPS) ಸರಕು ಸಾಗಣೆ ವಿಮಾನವೊಂದು ಭೀಕರ ಅಪಘಾತಕ್ಕೀಡಾದ ಬೆಚ್ಚಿಬೀಳಿಸುವ ಸಿಸಿಟಿವಿ ದೃಶ್ಯಾವಳಿಗಳನ್ನು ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ಬಿಡುಗಡೆ ಮಾಡಿದೆ. ವಿಮಾನದ ರೆಕ್ಕೆಯಿಂದ ಎಡ ಇಂಜಿನ್ ಕಳಚಿಕೊಂಡು ಬಿದ್ದ ಭೀಕರ ಕ್ಷಣಗಳು ಈ ವಿಡಿಯೋದಲ್ಲಿ ಸೆರೆಯಾಗಿವೆ. ನವೆಂಬರ್ 4, 2025 ರಂದು  ನಡೆದ … Continued

ಸಿದ್ದಾಪುರ : ಸ್ಕೂಟಿಗೆ ಟ್ರ್ಯಾಕ್ಟರ್ ಡಿಕ್ಕಿ ; ಶಿಕ್ಷಕಿ ಸಾವು

ಕಾರವಾರ: ಸ್ಕೂಟಿ ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿ ಸಂಭವಿಸಿ ಶಿಕ್ಷಕಿಯೊಬ್ಬರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಸಿದ್ದಾಪುರ(siddapur) ಮುಖ್ಯರಸ್ತೆಯ ಕನ್ನಳ್ಳಿ (ಮಳವತ್ತಿ) ಚೆಕ್‌ಪೋಸ್ಟ್ ಬಳಿ ಸಂಭವಿಸಿದೆ ಎಂದು ವರದಿಯಾಗಿದೆ. ಮೃತ ಶಿಕ್ಷಕಿಯನ್ನು ಕೊಲಸಿರ್ಸಿ ಕ್ರಾಸ್ ನಿವಾಸಿ ಪೂರ್ಣಿಮಾ ಗಣಪತಿ ಭಟ್ (47) ಎಂದು ಗುರುತಿಸಲಾಗಿದೆ. ಇವರು ಸಿದ್ದಾಪುರ ಪಟ್ಟಣದ ಹೊಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ … Continued

ಯಲ್ಲಾಪುರ : ಮದುವೆಯಿಂದ ವಾಪಸ್‌ ಬರುವಾಗ ಮಿನಿ ಬಸ್‌ ಅಪಘಾತ ; ಹಲವರಿಗೆ ಗಾಯ

ಕಾರವಾರ: ಮದುವೆ ಮುಗಿಸಿ ವಾಪಸ್ಸಾಗುತ್ತಿದ್ದಾಗ ಮಿನಿ ಬಸ್‌ ಅಪಘಾತಕ್ಕೀಡಾಗಿ 10ಕ್ಕೂ ಹೆಚ್ಚು ಜನ ಪ್ರಯಾಣಿಕರು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬೆಳಗಾವಿಯಲ್ಲಿ ನಡೆದ ತಮ್ಮ ಸಂಬಂಧಿಕರ ಮದುವೆ ಮುಗಿಸಿ ವಾಪಸ್‌ ಆಗುವಾಗ ರಾಷ್ಟ್ರೀಯ ಹೆದ್ದಾರಿ 52ರ ಅರಬೈಲ್ ಘಟ್ಟದ ತಿರುವುಗಳಲ್ಲಿ ಅವರಿದ್ದ … Continued

ಬೈಂದೂರು : ಟ್ಯಾಂಕರ್‌ಗೆ ಪ್ರವಾಸಿ ಬಸ್ ಡಿಕ್ಕಿ ; ಇಬ್ಬರು ಸಾವು, ಹಲವರಿಗೆ ಗಾಯ

ಉಡುಪಿ:  ಟ್ಯಾಂಕರ್‌ ಹಾಗೂ ಪ್ರವಾಸಿ ಬಸ್‌ ನಡುವೆ ನಡೆದ ಡಿಕ್ಕಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ (Udupi Bus Accident) ಬೈಂದೂರು ತಾಲೂಕಿನ ತ್ರಾಸಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ. ರಸ್ತೆ ಬದಿ ನಿಂತಿದ್ದ ಟ್ಯಾಂಕರ್‌ಗೆ ಅತಿ ವೇಗದಲ್ಲಿ ಬಂದ ಬಸ್ ಡಿಕ್ಕಿ ಹೊಡೆದಿದ್ದು, … Continued

ಯಲ್ಲಾಪುರ : ಅರೆಬೈಲ್‌ ಘಟ್ಟದಲ್ಲಿ ಕಾರಿನಲ್ಲಿ ಸಜೀವ ದಹನವಾದ ಚಾಲಕ

ಕಾರವಾರ: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕಾರಿನೊಳಗಿದ್ದ ಚಾಲಕ ಸುಟ್ಟು ಕರಕಲಾದ ದುರ್ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರೆಬೈಲ್ ಘಟ್ಟದ ರಾಷ್ಟ್ರೀ ಹೆದ್ದಾರಿಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ ಎಂದು ವರದಿಯಾಗಿದೆ. ಹುಬ್ಬಳ್ಳಿ ಕಡೆಯಿಂದ ಅಂಕೋಲಾಕ್ಕೆ ಬರುತ್ತಿದ್ದ ವೋಕ್ಸ್‌ ವ್ಯಾಗನ್‌ (Volkswagen) ಕಾರಿನಲ್ಲಿ ಈ ಅವಘಡ ಸಂಭವಿಸಿದೆ. ಬೆಂಕಿ ತೀವ್ರವಾಗಿದ್ದರಿಂದ ಕಾರಿನಲ್ಲಿದ್ದ ಚಾಲಕನಿಗೆ … Continued