ವೀಡಿಯೊಗಳು | ಮದುವೆಯಲ್ಲಿ ಶಾಕಿಂಗ್‌ ಘಟನೆ : ವೇದಿಕೆಯಲ್ಲೇ ವರನಿಗೆ ಇರಿತ ; ದಾಳಿಕೋರನನ್ನು 2 ಕಿಮೀ ಬೆನ್ನತ್ತಿದ ಡ್ರೋನ್..!

ಅಮರಾವತಿ: ಮಹಾರಾಷ್ಟ್ರದ ಅಮರಾವತಿಯಲ್ಲಿ ಸೋಮವಾರ ನಡೆದ ಒಂದು ವಿವಾಹ ಸಮಾರಂಭವು ಕ್ಷಣಾರ್ಧದಲ್ಲಿ ಹಿಂಸಾತ್ಮಕ ಸ್ಥಳವಾಗಿ ಮಾರ್ಪಟ್ಟಿತು. ವೇದಿಕೆಯ ಮೇಲೆ ನಿಂತಿದ್ದ ವರನಿಗೆ ಚಾಕುವಿನಿಂದ ಇರಿಯಲಾಗಿದ್ದು, ಈ ಇಡೀ ದಾಳಿಯ ದೃಶ್ಯವನ್ನು ವೀಡಿಯೊ ಚಿತ್ರೀಕರಣಕ್ಕಾಗಿ ಬಳಸಲಾಗಿದ್ದ ಡ್ರೋನ್ ಕ್ಯಾಮೆರಾ ಸೆರೆ ಹಿಡಿದಿದೆ. ಅಷ್ಟೇ ಅಲ್ಲದೆ, ಡ್ರೋನ್ ಅಪರಾಧಿ ಮತ್ತು ಆತನ ಸಹಚರನನ್ನು ಸುಮಾರು ಎರಡು ಕಿಲೋಮೀಟರ್ ದೂರದವರೆಗೆ … Continued

ಪತ್ನಿ ಜೊತೆ ಜಗಳದ ನಂತರ ಅವಳಿ ಮಕ್ಕಳನ್ನು ಬರ್ಬರವಾಗಿ ಕೊಲೆಗೈದ ತಂದೆ…!

ವಾಶಿಮ್: ದಂಪತಿಯ ಕಲಹಕ್ಕೆ ಪುಟ್ಟ ಕಂದಮ್ಮಗಳಿಬ್ಬರು ಸಾವಿಗೀಡಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಪತ್ನಿಯೊಂದಿಗೆ ಜಗಳವಾಡಿದ ಬಳಿಕ ತನ್ನ ಅವಳಿ ಹೆಣ್ಣು ಮಕ್ಕಳನ್ನು ಕೊಂದ ವ್ಯಕ್ತಿ ಬಳಿಕ ಪೊಲೀಸ್ ಠಾಣೆಗೆ ಹೋಗಿ ಶರಣಾಗತನಾಗಿದ್ದಾನೆ. ಮಕ್ಕಳಿಬ್ಬರನ್ನು ಕೊಂದ ಬಳಿಕ ಆರೋಪಿ ಕಾರು ಚಲಾಯಿಸಿಕೊಂಡು ಪೊಲೀಸ್ ಠಾಣೆಗೆ ಕಾರು ಹೋಗಿದ್ದು, ಅಲ್ಲಿ ತಾನು ತನ್ನ ಹೆಣ್ಣು ಮಕ್ಕಳಿಬ್ಬರನ್ನು ಕೊಲೆ ಮಾಡಿರುವುದಾಗಿ … Continued

ಪೊಲೀಸ್‌ ಅಧಿಕಾರಿ ವಿರುದ್ಧ ಅತ್ಯಾಚಾರ ಆರೋಪ; ಅಂಗೈನಲ್ಲಿ ಡೆತ್‌ ನೋಟ್‌ ಬರೆದಿಟ್ಟು ವೈದ್ಯೆ ಆತ್ಮಹತ್ಯೆ

ಮುಂಬೈ: ಪೊಲೀಸ್‌ ಅಧಿಕಾರಿಗಳ ಮೇಲೆ ಅತ್ಯಾಚಾರ ಮತ್ತು ಕಿರುಕುಳದ ಆರೋಪ ಹೊರಿಸಿ ಮಹಿಳಾ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಮಹಾರಾಷ್ಟ್ರದ (Maharashtra) ಸತಾರಾದ ಹೋಟೇಲ್‌ನಲ್ಲಿ ನಡೆದಿದೆ. ಅವರು ತಮ್ಮ ಕೈಯಲ್ಲಿ ಆತ್ಮಹತ್ಯಾ ಪತ್ರ ಬರೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೀಡ್ ಜಿಲ್ಲೆಯ ಮೂಲದ ಮತ್ತು ಫಲ್ಟನ್ ಉಪ-ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ನಿಯೋಜಿತರಾಗಿದ್ದ … Continued

1977ರಲ್ಲಿ ಗೆಳತಿಗೆ ಇರಿದ ವ್ಯಕ್ತಿಯನ್ನು 48 ವರ್ಷಗಳ ನಂತರ ಬಂಧಿಸಿದ ಪೊಲೀಸರು-ಜಾಮೀನು ; 81ನೇ ವಯಸ್ಸಿಗೆ ವಿಚಾರಣೆ…

ಮುಂಬೈ: ತನ್ನ ಗೆಳತಿಗೆ ಚಾಕುವಿನಿಂದ ಇರಿದ ಆರೋಪಿಗೆ ಘಟನೆ ನಡೆದ 48 ವರ್ಷಗಳ ನಂತರ ವಿಚಾರಣೆ ಎದುರಿಸಲಿದ್ದಾರೆ. ದಕ್ಷಿಣ ಮುಂಬೈನ ಕೊಲಾಬಾದಲ್ಲಿ ತನ್ನ ಗೆಳತಿಯನ್ನು ಕೊಲೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ 1977 ರಿಂದ “ತಲೆಮರೆಸಿಕೊಂಡಿದ್ದ” 81 ವರ್ಷದ ಚಂದ್ರಶೇಖರ ಮಧುಕರ ಕಾಳೇಕರ ಅವರಿಗೆ ಮುಂಬೈ ಸೆಷನ್ಸ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಪ್ರಾಸಿಕ್ಯೂಷನ್‌ನ ಪ್ರಕಾರ, ಕಾಳೇಕರ … Continued

ಕೇವಲ 9 ತಿಂಗಳಲ್ಲಿ 42 ಜೋಡಿ ಅವಳಿ ಮಕ್ಕಳ ಜನನ : ದಾಖಲೆ ಬರೆದ ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆ …!

ಬೀಡ್: ಒಂದು ಕಾಲದಲ್ಲಿ ಅಪರೂಪವೆಂದು ಪರಿಗಣಿಸಲಾಗಿದ್ದ ಅವಳಿ ಮಕ್ಕಳ ಜನನವು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಸಿವಿಲ್ ಆಸ್ಪತ್ರೆಯಲ್ಲಿ ಹೆಚ್ಚು ಸರ್ವೆ ಸಾಮಾನ್ಯ ಎಂಬಂತಾಗಿದೆ. ಯಾಕೆಂದರೆ ಕಳೆದ ಒಂಬತ್ತು ತಿಂಗಳಲ್ಲಿ ಈ ಆಸ್ಪತ್ರೆಯಲ್ಲಿ 42 ಜೊತೆ ಅವಳಿ ಮಕ್ಕಳು ಜನಿಸಿದ್ದಾರೆ…! ಈ ಅಸಾಧಾರಣ ಸಂಖ್ಯೆಯ ಹೆರಿಗೆಯು ಸಿಸೇರಿಯನ್ ಮತ್ತು ನೈಸರ್ಗಿಕ ಹೆರಿಗೆಗಳ ಮಿಶ್ರಣವಾಗಿದ್ದು, ಮಾತೃತ್ವ ವಾರ್ಡ್‌ನ ಸಿಬ್ಬಂದಿ … Continued

ಸಿಂಧುದುರ್ಗದಲ್ಲಿ ದುರಂತ: ಪಿಕ್ನಿಕ್ ಗೆ ತೆರಳಿದ್ದ ಬೆಳಗಾವಿ ಜಿಲ್ಲೆ ಮೂವರ ದುರ್ಮರಣ, ನಾಲ್ವರು ನಾಪತ್ತೆ

 ಬೆಳಗಾವಿ : ಮಹಾರಾಷ್ಟ್ರದ ಸಿಂಧುದುರ್ಗಕ್ಕೆ ತೆರಳಿದ್ದ ಖಾನಾಪುರದ ಎಂಟು ಜನರ ತಂಡದಲ್ಲಿ ಮೂವರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ಮಹಾರಾಷ್ಟ್ರದ ಶಿರೋಡಾ-ವೇಲಗರ್ ಬೀಚ್‌ನಲ್ಲಿ ಶುಕ್ರವಾರ ಘೋರ ದುರಂತ ಸಂಭವಿಸಿದೆ. ಎಂಟು ಜನರಿದ್ದ ಕುಟುಂಬ ಸದಸ್ಯರು ಅರಬ್ಬೀ ಸಮುದ್ರಕ್ಕೆ ಹೋದಾಗ ಪಿಕ್ನಿಕ್ ಮಾರಕವಾಗಿ ಪರಿಣಮಿಸಿದೆ. ಈ ಕುಟುಂಬದ ಮೂವರು ಸದಸ್ಯರು ನೀರಿನಲ್ಲಿ ಮುಳುಗಿ … Continued

ವೀಡಿಯೊ…| ಅಶ್ಲೀಲ ವೀಡಿಯೊ ಕಳುಹಿಸಿದ ಬಸ್ ಚಾಲಕನ ಪತ್ತೆಹಚ್ಚಿ ಕಪಾಳಕ್ಕೆ ಬಾರಿಸಿದ ಮಹಿಳೆ

ಮುಂಬೈ: ಮಹಿಳೆಯೊಬ್ಬರು ತನ್ನ ಮೊಬೈಲಿಗೆ ಅಶ್ಲೀಲ ವೀಡಿಯೊಗಳನ್ನು ಕಳುಹಿಸಿದ ಬಸ್ ಚಾಲಕನನ್ನು ಪತ್ತೆಹಚ್ಚಿ, ಆತನಿಗೆ ನಡುರಸ್ತೆಯಲ್ಲೇ ಕಪಾಳಮೋಕ್ಷ ಮಾಡಿದ ಘಟನೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾಗಿದ್ದು ಅದರ ವೀಡಿಯೊ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಟಿಕೆಟ್ ಬುಕಿಂಗ್ ದಾಖಲೆಯಿಂದ ಮೊಬೈಲ್‌ ನಂಬರ್‌ ತೆಗೆದುಕೊಂಡು ಸಂಪರ್ಕ ವಿವರಗಳನ್ನು ಬಳಸಿಕೊಂಡು ತನ್ನ ಫೋನ್‌ಗೆ ಅಶ್ಲೀಲ ವೀಡಿಯೊಗಳನ್ನು ಕಳುಹಿಸಿದ್ದಾನೆ ಎಂದು … Continued

ಅಕ್ರಮ ಮಣ್ಣು ಅಗೆತ ಪ್ರಕರಣ ; ಮಹಾರಾಷ್ಟ್ರ ಡಿಸಿಎಂ ಅಜಿತ ಪವಾರ್ ಮಹಿಳಾ ಐಪಿಎಸ್ ಅಧಿಕಾರಿಗೆ ಗದರಿಸುತ್ತಿರುವ ವೀಡಿಯೊ ವೈರಲ್

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಅಜಿತ ಪವಾರ್ ಅವರು ಸೋಲಾಪುರದ ಹಳ್ಳಿಯೊಂದರಲ್ಲಿ ಅಕ್ರಮವಾಗಿ ಮಣ್ಣು ಅಗೆಯುವುದರ ವಿರುದ್ಧ ಕ್ರಮ ಕೈಗೊಳ್ಳದಂತೆ ಮಹಿಳಾ ಐಪಿಎಸ್ ಅಧಿಕಾರಿಯ ಮೇಲೆ ಒತ್ತಡ ಹೇರುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವಿವಾದಕ್ಕೆ ಸಿಲುಕಿದ್ದಾರೆ. ಎರಡು ದಿನಗಳ ಹಿಂದೆ ಸೋಲಾಪುರದ ಕರ್ಮಲಾ ತಾಲೂಕಿನ … Continued

ಪತಿಗೆ ಯಕೃತ್ತು ದಾನ ಮಾಡಿದ ಮಹಿಳೆ, ಶಸ್ತ್ರಚಿಕಿತ್ಸೆಯ ನಂತರ ಇಬ್ಬರೂ ಸಾವು…!

ಪುಣೆ : ಪತಿ ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆಯ ನಂತರ ಸಾವಿಗೀಡಾದ ಕೆಲವು ದಿನಗಳ ನಂತರ ಆತನಿಗೆ ತನ್ನ ಯಕೃತ್ತಿ(liver)ನ ಒಂದು ಭಾಗವನ್ನು ದಾನ ಮಾಡಿದ ಪತ್ನಿಯೂ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರಿಂದಾಗಿ ಮಹಾರಾಷ್ಟ್ರ ಆರೋಗ್ಯ ಇಲಾಖೆ ಪುಣೆಯ ಖಾಸಗಿ ಆಸ್ಪತ್ರೆಗೆ ನೋಟಿಸ್ ನೀಡಿದೆ. ಆಸ್ಪತ್ರೆಗೆ ಸೋಮವಾರದೊಳಗೆ ಕಸಿ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಸಲ್ಲಿಸುವಂತೆ … Continued

ವೀಡಿಯೊ…| ವಂಡರ್‌ ನಾಯಿ : ಚಿರತೆ ಜೊತೆಗಿನ ಬೀದಿ ಹೋರಾಟದಲ್ಲಿ ಚಿರತೆಯನ್ನೇ 300 ಮೀಟರ್ ಎಳೆದೊಯ್ದ ಈ ಬೀದಿ ನಾಯಿ…!

ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಬೀದಿ ನಾಯಿ ಮತ್ತು ಚಿರತೆ ಮುಖಾಮುಖಿ ಹೋರಾಟದಲ್ಲಿ ಬೀದಿ ನಾಯಿಯು ಚಿರತೆಯನ್ನು ‘ಸೋಲಿಸಿ’ 300 ಮೀಟರ್‌ಗಳಷ್ಟು ದೂರು ಎಳೆದುಕೊಂಡು ಹೋಗಿದ್ದು, ಈ ವೀಡಿಯೊ ಈಗ ಭಾರಿ ವೈರಲ್‌ ಆಗಿದೆ. ಈ ಪ್ರಸಂಗವು ನಾಸಿಕದ ನಿಫಾಡ್‌ನಲ್ಲಿ ನಡೆದಿದ್ದು, ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ವಾರದ ಆರಂಭದಲ್ಲಿ ಚಿರತೆ ಆ ಪ್ರದೇಶಕ್ಕೆ ದಾರಿ ತಪ್ಪಿ ಬಂದಿದ್ದಾಗ … Continued