ಥಾಣೆ ಆಸ್ಪತ್ರೆಯಲ್ಲಿ ಶಿವಸೇನೆ ಕಾರ್ಪೊರೇಟರ್‌ನಿಂದ ವೈದ್ಯರ ಮೇಲೆ ಹಲ್ಲೆ : ‘ಭಯದಿಂದ ರಾಜೀನಾಮೆ ನೀಡಿದ್ದೇನೆ’ ಎಂದ ವೈದ್ಯ

ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುನ್ಸಿಪಲ್ ಆಸ್ಪತ್ರೆಯಲ್ಲಿ ಶಿವಸೇನೆ (ಏಕನಾಥ ಶಿಂಧೆ ಬಣ) ಕಾರ್ಪೊರೇಟರ್ ರಮೇಶ ಮ್ಹಾತ್ರೆ ನಡೆಸಿದ್ದಾರೆ ಎನ್ನಲಾದ ಹಲ್ಲೆ ಪ್ರಕರಣದ ಬಳಿಕ, ಹಲ್ಲೆಗೊಳಗಾದ ವೈದ್ಯರಲ್ಲಿ ಒಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ಭಯದಿಂದ ಶಾಶ್ವತವಾಗಿ ನಗರವನ್ನೇ ತೊರೆದಿರುವುದಾಗಿ ತಿಳಿಸಿದ್ದಾರೆ. ಎನ್‌ಡಿಟಿವಿ ಜೊತೆ ಮಾತನಾಡಿದ ವೈದ್ಯರು, ಈ ಘಟನೆ ತಮ್ಮನ್ನು ತೀವ್ರವಾಗಿ ಬೆಚ್ಚಿಬೀಳುವಂತೆ … Continued

ವಿಡಿಯೋ | ಆಸ್ಪತ್ರೆ ತಲುಪುವ ಮೊದಲೇ ಪ್ರಸವ ವೇದನೆ ; ರಸ್ತೆಯೇ ಹೆರಿಗೆ ಕೋಣೆ : ಮರದ ಕೆಳಗೆ ಹೆರಿಗೆ ಮಾಡಿಸಿದ ವೈದ್ಯೆ !

ಪುಣೆ : ಪುಣೆಯ ಶಿರೂರು ತಾಲ್ಲೂಕಿನ ಜೋಶಿವಾಡಿಯಲ್ಲಿ ನಡೆದ ಘಟನೆಯೊಂದು ಮನುಷ್ಯನ ಅಸಹಾಯಕತೆ ಮತ್ತು ಅಷ್ಟೇ ವೇಗವಾಗಿ ಸ್ಪಂದಿಸುವ ಮಾನವೀಯತೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರ ನೆರವಿಗೆ ಧಾವಿಸಿದ ವೈದ್ಯೆ ಹಾಗೂ ಸಾರ್ವಜನಿಕರು ಈ ಮಹಿಳೆಗೆ ನಡುರಸ್ತೆಯಲ್ಲಿಯೇ ಹೆರಿಗೆ ಮಾಡಿಸಿದ್ದಾರೆ. ಬೆಳ್ಳಂಬೆಳಗ್ಗೆ ಗರ್ಭಿಣಿಯೊಬ್ಬರಿಗೆ ತೀವ್ರವಾದ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಶಿರೂರು … Continued

11 ದಿನದಲ್ಲಿ ಹಣ ದುಪ್ಪಟ್ಟು ಮಾಡುವ ಆಸೆಗೆ ಬಿದ್ದು ₹12.31 ಕೋಟಿ ಕಳೆದುಕೊಂಡ ವೈದ್ಯ…!

ಪುಣೆ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಕೇವಲ 11 ದಿನಗಳಲ್ಲಿ ಹಣವನ್ನು ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ, 75 ವರ್ಷದ ಹಿರಿಯ ವೈದ್ಯರೊಬ್ಬರಿಗೆ ಸೈಬರ್ ವಂಚಕರು ಬರೋಬ್ಬರಿ 12.31 ಕೋಟಿ ರೂಪಾಯಿ ವಂಚಿಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಬೆಳಕಿಗೆ ಬಂದಿದೆ. ಈ ವರ್ಷದ ಜನವರಿಯಲ್ಲಿ ಈ ವೈದ್ಯರ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ಸಂದೇಶವೊಂದು ಬಂದಿತ್ತು. ಅದರಲ್ಲಿ ಷೇರು … Continued

ಬೆಕ್ಕು ಸಾಕುವುದು ಬೇಡ ಎಂದ ಮನೆಯವರು ; 23 ವರ್ಷದ ವೈದ್ಯೆ ಆತ್ಮಹತ್ಯೆ

ಹೈದರಾಬಾದ್: ಹೈದರಾಬಾದಿನ ಅಲ್ವಾಲ್‌ನಲ್ಲಿ ಬೆಕ್ಕನ್ನು ದತ್ತು ತೆಗೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬದವರ ಜೊತೆ ಪದೇ ಪದೇ ಜಗಳ ನಡೆದ ಹಿನ್ನೆಲೆಯಲ್ಲಿ, 23 ವರ್ಷದ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯು ಶುಕ್ರವಾರ ಸಂಜೆ ನಡೆದಿದ್ದು, ಮೃತ ವೈದ್ಯೆಯನ್ನು ಟಿ. ಪ್ರಿನ್ಸಿ (ಅಲಿಯಾಸ್ ಶ್ರೇಷ್ಠಾ) ಎಂದು ಗುರುತಿಸಲಾಗಿದೆ. ಘಟನೆಯ ಸಮಯದಲ್ಲಿ ಆಕೆ ಮನೆಯಲ್ಲಿ ಒಬ್ಬರೇ … Continued

ವೀಡಿಯೊ…| ಭೀಕರ ಕೃತ್ಯ : ಸ್ವಿಗ್ಗಿ ಡೆಲಿವರಿ ಬಾಯ್ ಮೇಲೆ ಪದೇ ಪದೇ ವಾಹನ ಹರಿಸಿದ ವೈದ್ಯ…!

ಗುರುಗ್ರಾಮ: ಕ್ಷುಲ್ಲಕ ಕಾರಣಕ್ಕೆ ಸರ್ಕಾರಿ ವೈದ್ಯರೊಬ್ಬರು ಅಮಲೇರಿದ ಸ್ಥಿತಿಯಲ್ಲಿ ಸ್ವಿಗ್ಗಿ ಡೆಲಿವರಿ ಏಜೆಂಟ್ ಅವರಿಗೆ ತನ್ನ ಎಸ್‌ಯುವಿ ಕಾರನ್ನು ಪದೇ ಪದೇ ಡಿಕ್ಕಿ ಹೊಡೆಸಿದ ಭೀಕರ ಘಟನೆ ಹರ್ಯಾಣದ ಗುರುಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಟಿಂಕು ಪನ್ವಾರ್ ಎಂಬ ಯುವಕ ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಯಾತಪುರದ ಸೆಕ್ಟರ್ 93ರಲ್ಲಿರುವ ಸ್ವಿಗ್ಗಿ ವೇರ್‌ಹೌಸ್ … Continued

ವೀಡಿಯೊ | ಸುದೀರ್ಘ ಕಾನೂನು ಹೋರಾಟದ ನಂತ್ರ 3 ಅಡಿ ಎತ್ತರದ ಯುವಕನ ವೈದ್ಯನಾಗುವ ಕನಸು ನನಸು

ಗುಜರಾತಿನ ಭಾವನಗರ ಜಿಲ್ಲೆಯ ಗಣೇಶ ಬರೈಯಾ ಎಂಬ 25 ವರ್ಷದ ಯುವಕ, ತನ್ನ 3 ಅಡಿ ಎತ್ತರ ಮತ್ತು 72 ಪ್ರತಿಶತದಷ್ಟು ಅಂಗವೈಕಲ್ಯದ (ಕುಬ್ಜತ್ವದಿಂದ ಉಂಟಾದ ಚಲನೆಯಲ್ಲಿನ ಅಸಾಮರ್ಥ್ಯ) ಕಾರಣಕ್ಕೆ ವೈದ್ಯಕೀಯ ಶಿಕ್ಷಣವನ್ನು ನಿರಾಕರಿಸಿದ ಭಾರತೀಯ ವೈದ್ಯಕೀಯ ಮಂಡಳಿ (MCI) ವಿರುದ್ಧ ಏಳು ವರ್ಷಗಳ ಕಾನೂನು ಹೋರಾಟ ಮಾಡಿದ ನಂತರ ಕೊನೆಗೂ ವೈದ್ಯಕೀಯ ಪದವಿ ಪೂರ್ಣಗೊಳಿಸಿ … Continued

ವೈದ್ಯ ಸೇರಿ ಮೂವರು ಐಸಿಸ್ ಉಗ್ರರ ಬಂಧನ: ರಿಸಿನ್’ ವಿಷ ತಯಾರಿಕೆ ಸಿದ್ಧತೆ ಸಂಚು ಬಯಲು

 ಅಹಮದಾಬಾದ್: ಗುಜರಾತ್ ಭಯೋತ್ಪಾದನಾ ನಿಗ್ರಹ ದಳ(ATS)ವು ಮೂವರು ಐಸಿಸ್ (ISIS) ಉಗ್ರರನ್ನು ಬಂಧಿಸಿದ್ದು, ಅವರಲ್ಲಿ ಓರ್ವ ವೈದ್ಯ ಅತಿ ಹೆಚ್ಚು ವಿಷಕಾರಿಯಾದ ‘ರಿಸಿನ್’ (Ricin) ರಾಸಾಯನಿಕ ತಯಾರಿಕೆಗೆ ಸಿದ್ಧತೆ ನಡೆಸಿದ್ದ ಎಂಬ ಸಂಗತಿ ಸೋಮವಾರ ಬಹಿರಂಗವಾಗಿದೆ. ಈ ವೈದ್ಯ ದೇಶದ ಮೂರು ಪ್ರಮುಖ ನಗರಗಳಲ್ಲಿ ಹೆಚ್ಚು ಜನಸಂದಣಿಯಿರುವ ಆಹಾರ ಮಾರುಕಟ್ಟೆಗಳು ಸೇರಿದಂತೆ ಹಲವು ಸ್ಥಳಗಳ ಮೇಲೆ … Continued

ಪೊಲೀಸ್‌ ಅಧಿಕಾರಿ ವಿರುದ್ಧ ಅತ್ಯಾಚಾರ ಆರೋಪ; ಅಂಗೈನಲ್ಲಿ ಡೆತ್‌ ನೋಟ್‌ ಬರೆದಿಟ್ಟು ವೈದ್ಯೆ ಆತ್ಮಹತ್ಯೆ

ಮುಂಬೈ: ಪೊಲೀಸ್‌ ಅಧಿಕಾರಿಗಳ ಮೇಲೆ ಅತ್ಯಾಚಾರ ಮತ್ತು ಕಿರುಕುಳದ ಆರೋಪ ಹೊರಿಸಿ ಮಹಿಳಾ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಮಹಾರಾಷ್ಟ್ರದ (Maharashtra) ಸತಾರಾದ ಹೋಟೇಲ್‌ನಲ್ಲಿ ನಡೆದಿದೆ. ಅವರು ತಮ್ಮ ಕೈಯಲ್ಲಿ ಆತ್ಮಹತ್ಯಾ ಪತ್ರ ಬರೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೀಡ್ ಜಿಲ್ಲೆಯ ಮೂಲದ ಮತ್ತು ಫಲ್ಟನ್ ಉಪ-ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ನಿಯೋಜಿತರಾಗಿದ್ದ … Continued

ಅರಿವಳಿಕೆ ಔಷಧಿ ನೀಡಿ ವೈದ್ಯೆ ಪತ್ನಿಯ ಕೊಲೆ ಆರೋಪ ; 6 ತಿಂಗಳ ಬಳಿಕ ವೈದ್ಯ ಪತಿಯ ಬಂಧನ

ಬೆಂಗಳೂರು: ಆರು ತಿಂಗಳ ಹಿಂದೆ ತಮ್ಮ ವೈದ್ಯೆ ನಿಗೂಢವಾಗಿ ಸಾವಿಗೀಡಾದ ಪ್ರಕರಣದ ರಹಸ್ಯ ಬಯಲಾಗಿದ್ದು, ಕೊಲೆ ಆರೋಪದ ಮೇಲೆ ಪೊಲೀಸರು ಆಕೆಯ ವೈದ್ಯ ಪತಿಯನ್ನು ಬಂಧಿಸಿದ್ದಾರೆ. ಪೂರ್ವ ಬೆಂಗಳೂರಿನ ಮುನ್ನೇಕೊಳಲು ಪ್ರದೇಶದಲ್ಲಿ ವಾಸವಾಗಿದ್ದ ಜನರಲ್‌ ಶಸ್ತ್ರಚಿಕಿತ್ಸಕ ಡಾ. ಮಹೇಂದ್ರ ರೆಡ್ಡಿ ಅವರು, ಏಪ್ರಿಲ್ 21 ರಂದು ತಮ್ಮ ಮನೆಯಲ್ಲಿಯೇ ಪತ್ನಿ ಡಾ. ಕೃತಿಕಾ ರೆಡ್ಡಿ ಅವರಿಗೆ … Continued

₹5.4 ಕೋಟಿ ವಿಮೆ ಪಡೆಯಲು ತನ್ನ ಕಾಲುಗಳನ್ನು ತಾನೇ ಕತ್ತರಿಸಿಕೊಂಡ ವೈದ್ಯ…!

ಬ್ರಿಟನ್‌ನ ನಾಳೀಯ ಶಸ್ತ್ರಚಿಕಿತ್ಸಕ(vascular surgeon)ರೊಬ್ಬರು 500,000 ಪೌಂಡ್‌ಗಳ ( ₹5.4 ಕೋಟಿ) ವಿಮಾ ಪರಿಹಾರ ಪಡೆಯಲು ತನ್ನ ಎರಡೂ ಕಾಲುಗಳನ್ನು ಕತ್ತರಿಸಿಕೊಂಡ ಆರೋಪ ಎದುರಿಸುತ್ತಿದ್ದಾರೆ. ಕಾರ್ನ್‌ವಾಲ್‌ನ 49 ವರ್ಷದ ನೀಲ್ ಹಾಪರ್, ಸೆಪ್ಸಿಸ್‌ನಿಂದಾಗಿ ತನ್ನ ಕಾಲುಗಳನ್ನು ಕಳೆದುಕೊಂಡಿದ್ದೇನೆಯೇ ಹೊರತು ತಾನೇ ಸ್ವಯಂ ಮಾಡಿಕೊಂಡಿದ್ದಲ್ಲ ಎಂದು ಹೇಳಿಕೊಂಡಿದ್ದಾರೆ. ನ್ಯಾಯಾಲಯದ ಸಾಕ್ಷ್ಯದ ಪ್ರಕಾರ, ಅವರು ಒಂದು ವಿಮಾದಾರ – … Continued