ವೀಡಿಯೊ…| ಬೈಕ್​ಗೆ ಡಿಕ್ಕಿ ಹೊಡೆದ ನಂತ್ರ ದೂರ ಎಳೆದೊಯ್ದ ಲಾರಿ..: ಟ್ರಕ್‌ ಹಿಡಿದುಕೊಂಡು ನೇತಾಡುತ್ತಿದ್ದ ಸವಾರ

ಇತ್ತೀಚೆಗೆ ಹಿಟ್​ ಆ್ಯಂಡ್​ ರನ್ ಪ್ರಕರಣಗಳು ಹೆಚ್ಚಾಗುತ್ತಿವೆ. ಟ್ರಕ್​ವೊಂದು ಬೈಕ್​ಗೆ ಡಿಕ್ಕಿ ಹೊಡೆದು ಚಾಲಕನ ಸಮೇತ ಎಳೆದೊಯ್ದಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದ್ದು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಿಟ್​ ಆ್ಯಂಡ್ ರನ್ ಪ್ರಕರಣದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೇಗವಾಗಿ ಚಲಿಸುತ್ತಿದ್ದ ಲಾರಿಯೊಂದು ಬೈಕ್​ಗೆ ಡಿಕ್ಕಿ ಹೊಡೆದ ನಂತರ ಮುಂಭಾಗದ ಟೈರ್ ಅಡಿಯಲ್ಲಿ … Continued

ವೀಡಿಯೊ…| ಮನೆಗೆ ನುಗ್ಗಿದ ಶಸ್ತ್ರಸಜ್ಜಿತ ದರೋಡೆಕೋರರ ವಿರುದ್ಧ ಹೋರಾಡಿದ ತಾಯಿ-ಮಗಳು ; ಇಬ್ಬರು ದರೋಡೆಕೋರರ ಬಂಧನ : ವೀಕ್ಷಿಸಿ

ಹೈದರಾಬಾದ್ : ಮಾರ್ಷಲ್ ಆರ್ಟ್ಸ್‌ನಲ್ಲಿ ತರಬೇತಿ ಪಡೆದ ಮಹಿಳೆ ಮತ್ತು ಆಕೆಯ ಅಪ್ರಾಪ್ತ ಮಗಳು ಬೇಗಂಪೇಟೆಯಲ್ಲಿರುವ ತಮ್ಮ ಮನೆಯಲ್ಲಿ ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳ ದರೋಡೆ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರ ಮೂಲದ ಇಬ್ಬರು ಆರೋಪಿಗಳು ಮನೆಯನ್ನು ದರೋಡೆ ಮಾಡಲು ಯೋಜನೆ ರೂಪಿಸಿದ್ದರು ಮತ್ತು ದರೋಡೆ ಮಾಡಲು ಮೊದಲೇ ಮನೆಯನ್ನು … Continued

ಮನೆಯಲ್ಲಿ ಮಗಳು-ಆಕೆಯ ಪ್ರಿಯಕರನನ್ನು ಒಟ್ಟಿಗೆ ನೋಡಿದ ನಂತರ ಮಗಳನ್ನೇ ಕೊಂದ ತಾಯಿ…!

ಹೈದರಾಬಾದ್‌ : ಆಘಾತಕಾರಿ ಘಟನೆಯೊಂದರಲ್ಲಿ, ಮಹಿಳೆಯೊಬ್ಬರು ತನ್ನ 19 ವರ್ಷದ ಮಗಳನ್ನು ಆಕೆಯ ಪ್ರಿಯಕರನೊಂದಿಗೆ ತಮ್ಮ ಮನೆಯಲ್ಲಿ ಒಟ್ಟಾಗಿ ಇರುವುದನ್ನು ಕಂಡ ನಂತರ ಮಗಳನ್ನೇ ಹತ್ಯೆಗೈದ ಾರೋಪಿತ ಘಟನೆ ಹೈದರಾಬಾದ್‌ ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಆರೋಪಿಯನ್ನು ಜಂಗಮ್ಮ ಎಂದು ಗುರುತಿಸಲಾಗಿದ್ದು, ಬುಧವಾರ ಮಧ್ಯಾಹ್ನ ಕೆಲಸ ಮುಗಿಸಿ ಊಟಕ್ಕೆ ಮನೆಗೆ ಬಂದಿದ್ದಾಗ ಮಗಳು ಭಾರ್ಗವಿ ತನ್ನ … Continued

ತೆಲಂಗಾಣ ಚುನಾವಣೆಗೆ ಮುನ್ನ ಬಿಆರ್‌ಎಸ್ ಗೆ ಸಂಸದ ಡಾ.ರಂಜಿತ್ ರೆಡ್ಡಿ ರಾಜೀನಾಮೆ: ಕಾಂಗ್ರೆಸ್ಸಿಗೆ ಸೇರ್ಪಡೆ

ಹೈದರಾಬಾದ್‌ : ಭಾರತ್ ರಾಷ್ಟ್ರ ಸಮಿತಿಗೆ (ಬಿಆರ್‌ಎಸ್) ಮತ್ತೊಂದು ಹಿನ್ನಡೆಯಾಗಿದ್ದು, ಸಂಸದ (ಎಂಪಿ) ರಂಜಿತ್ ರೆಡ್ಡಿ ಅವರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಹಾಗೂ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆಗೊಂಡರು. ಬಿಆರ್‌ಎಸ್‌ಗೆ ರಾಜೀನಾಮೆ ನೀಡಲು ರಾಜಕೀಯ ಸನ್ನಿವೇಶಗಳು ಕಾರಣ ಎಂದು ಹೇಳಿದ್ದಾರೆ. X ನಲ್ಲಿ ಅವರು, “ವಿಕಸನಗೊಳ್ಳುತ್ತಿರುವ ರಾಜಕೀಯ ಪರಿಸ್ಥಿತಿಗಳಿಂದಾಗಿ, … Continued

ಒಲ್ಲೆ ಎಂದಿದ್ದಕ್ಕೆ ಸೇಡು : ತನ್ನ ಮದುವೆ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಟಿವಿ ನಿರೂಪಕನನ್ನು ಅಪಹರಿಸಿದ ಮಹಿಳಾ ಉದ್ಯಮಿ…!

ಹೈದರಾಬಾದ್‌ ; ಹೈದರಾಬಾದ್‌ನಲ್ಲಿ ಬೆಳಕಿಗೆ ಬಂದ ವಿಸ್ಮಯಕಾರಿ ಘಟನೆಯೊಂದರಲ್ಲಿ, ಮಹಿಳಾ ಉದ್ಯಮಿಯೊಬ್ಬರು ತನ್ನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ ನಂತರ ಟಿವಿ ನಿರೂಪಕನನ್ನು ಅಪಹರಿಸಿದ ಆರೋಪ ಎದುರಿಸುತ್ತಿದ್ದಾರೆ…! ಪೊಲೀಸ್ ವರದಿಗಳ ಪ್ರಕಾರ, ಭೋಗಿರೆಡ್ಡಿ ತ್ರಿಶಾ ಎಂದು ಗುರುತಿಸಲ್ಪಟ್ಟ ಉದ್ಯಮಿ ಮಹಿಳೆಯನ್ನು ಟಿವಿ ನಿರೂಪಕನನ್ನು ಹಿಂಬಾಲಿಸಿದ ಆರೋಪದ ಮೇಲೆ ಮತ್ತು ಆತನ ಅಪಹರಣವನ್ನು ಆಯೋಜಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. … Continued

ಬಿಆರ್‌ಎಸ್‌ ಯುವ ಶಾಸಕಿ ಲಾಸ್ಯ ನಂದಿತಾ ರಸ್ತೆ ಅಪಘಾತದಲ್ಲಿ ಸಾವು

ಹೈದರಾಬಾದ್‌: ತೆಲಂಗಾಣದ ಬಿಆರ್‌ಎಸ್ ಪಕ್ಷದ ಶಾಸಕಿ ಲಾಸ್ಯ ನಂದಿತಾ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರಿಗೆ ಕೇವಲ 37 ವರ್ಷ ವಯಸ್ಸಾಗಿತ್ತು. ಹೈದರಾಬಾದ್‌ನ ಔಟರ್‌ ರಿಂಗ್‌ ರೋಡ್‌ನಲ್ಲಿ ನಂದಿತಾ ಅವರು ಪ್ರಯಾಣಿಸುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ … Continued

ಕ್ಲಿನಿಕ್ ನಲ್ಲಿ ‘ಸ್ಮೈಲ್ ಡಿಸೈನಿಂಗ್’ ಸರ್ಜರಿ ವೇಳೆ 28 ವರ್ಷದ ಮದುವೆ ಗಂಡು ಸಾವು

ಹೈದರಾಬಾದ್‌ : ತನ್ನ ಮದುವೆಗೆ ತಯಾರಿ ನಡೆಸುತ್ತಿದ್ದ ಹೈದರಾಬಾದಿನ 28 ವರ್ಷದ ಯುವಕನೊಬ್ಬ ದಂತ ಚಿಕಿತ್ಸಾಲಯದಲ್ಲಿ ಮಿತಿಮೀರಿದ ಅನಸ್ತೇಷಿಯಾ ಡೋಸ್‌ ನೀಡಿದ್ದರಿಂದ ಮೃತಪಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ಫೆಬ್ರವರಿ 16 ರಂದು ಈ ಘಟನೆ ಸಂಭವಿಸಿದ್ದು, ಆ ವ್ಯಕ್ತಿ ತನ್ನ ಮದುವೆಗೆ ಮುಂಚಿತವಾಗಿ ತನ್ನ ಮುಖದ ನಗುವನ್ನು ಹೆಚ್ಚಿಸುವ ಶಸ್ತ್ರ ಚಿಕಿತ್ಸೆಗೆ ದಂತ ಚಿಕಿತ್ಸಾಲಯಕ್ಕೆ ದಾಖಲಾದ ನಂತರ … Continued

ಕೋಚಿಂಗ್ ಸೆಂಟರಿನಿಂದ ನಾಪತ್ತೆಯಾಗಿದ್ದ ಬೆಂಗಳೂರು ಬಾಲಕ 3 ದಿನಗಳ ನಂತರ ಹೈದರಾಬಾದಿನಲ್ಲಿ ಪತ್ತೆ

ಬೆಂಗಳೂರು/ಹೈದರಾಬಾದ್: ಭಾನುವಾರ (ಜನವರಿ 21) ಬೆಂಗಳೂರಿನಿಂದ ನಾಪತ್ತೆಯಾಗಿದ್ದ 12 ವರ್ಷದ ಬಾಲಕ ಇಂದು, ಬುಧವಾರ ಬೆಳಗ್ಗೆ ಹೈದರಾಬಾದ್‌ನ ಮೆಟ್ರೋ ನಿಲ್ದಾಣದಲ್ಲಿ ಪತ್ತೆಯಾಗಿದ್ದಾನೆ. ಸಾಮಾಜಿಕ ಮಾಧ್ಯಮದಲ್ಲಿ ಬಾಲಕ ನಾಪತ್ತೆಯಾದ ಬಗ್ಗೆ ಮನವಿ ಮಾಡಿದ ನಂತರ ಆತನಿಗಾಗಿ ತೀವ್ರ ಹುಡುಕಾಟ ನಡೆಸಲಾಯಿತು. ಬೆಂಗಳೂರು ಹಾಗೂ ಹೈದರಾಬಾದ್‌ ಮೆಟ್ರೋ ನಗರಗಳು ಸುಮಾರು ಪರಸ್ಪರ 570 ಕಿ.ಮೀ ದೂರದಲ್ಲಿವೆ. ಡೀನ್ಸ್ ಅಕಾಡೆಮಿಯ … Continued

ಭಗವಾನ್‌ ರಾಮನಿಗೆ ಅರ್ಪಿಸಲು ಚಿನ್ನದ ಪಾದುಕೆಗಳ ಜೊತೆ ಅಯೋಧ್ಯೆಗೆ 8,000 ಕಿಮೀ ಪಾದಯಾತ್ರೆ ಹೊರಟಿರುವ ಹೈದರಾಬಾದಿನ 64 ವರ್ಷದ ವ್ಯಕ್ತಿ…!

ಹೈದರಾಬಾದಿನ 64 ವರ್ಷದ ಚಲ್ಲಾ ಶ್ರೀನಿವಾಸ ಶಾಸ್ತ್ರಿ ಎಂಬವರು ಅಯೋಧ್ಯೆಗೆ 8,000 ಕಿಲೋಮೀಟರ್ ಪಾದಯಾತ್ರೆ ಕೈಗೊಂಡಿದ್ದು, ಭಗವಾನ್ ರಾಮನಿಗೆ ಸಮರ್ಪಿಸಲು ಉದ್ದೇಶಿಸಲಾದ 65 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಲೇಪಿತ ಪಾದರಕ್ಷೆಗಳನ್ನು ತಮ್ಮೊಂದಿಗೆ ಒಯ್ಯುತ್ತಿದ್ದಾರೆ. ಜನವರಿ 22 ರಂದು ರಾಮಮಂದಿರ ಉದ್ಘಾಟನೆಯೊಂದಿಗೆ ಹೊಂದಿಕೊಂಡ ಅವರ ಪ್ರಯಾಣವು ಭಗವಾನ್ ರಾಮ ‘ವನವಾಸ’ದ (ವನವಾಸ) ವೇಳೆ ಸಾಗಿ ಬಂದ … Continued

ರಾಸಾಯನಿಕ ಗೋದಾಮಿನಲ್ಲಿ ಬೆಂಕಿ: ಬಹುಮಹಡಿ ಕಟ್ಟಡಕ್ಕೆ ವ್ಯಾಪಿಸಿ 9 ಸಾವು

ಹೈದರಾಬಾದ್‌ : ಹೈದರಾಬಾದ್ ನಾಂಪಲ್ಲಿ ವಸತಿ ಕಟ್ಟಡದಲ್ಲಿ ಸೋಮವಾರ ಸಂಭವಿಸಿದ ಭಾರೀ ಬೆಂಕಿಯಲ್ಲಿ ಕನಿಷ್ಠ ಒಂಬತ್ತು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ದುರಂತದ ನಂತರ ಒಟ್ಟು 16 ಜನರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ರಕ್ಷಣಾ ಮತ್ತು ತಂಪಾಗಿಸುವ ಕಾರ್ಯಾಚರಣೆ ನಡೆಯುತ್ತಿದೆ. ಮೇಲಿನ ಮಹಡಿಗಳಲ್ಲಿ ವಾಸಿಸುವ … Continued