ಸಾವೂ ಬೇರ್ಪಡಿಸಲಿಲ್ಲ ಇವರಿಬ್ಬರ ಬಂಧವನ್ನು…; ಯಜಮಾನನ ಶವಯಾತ್ರೆಯಲ್ಲೇ ಪ್ರಾಣ ಬಿಟ್ಟ ನಿಷ್ಠಾವಂತ ನಾಯಿ ʼದುಗ್ಗುʼ

ಭೋಪಾಲ್:  ಪ್ರೀತಿಗೆ ಮಾತುಗಳ ಅಗತ್ಯವಿಲ್ಲ… ನಿಷ್ಠೆಗೆ ಭಾಷೆಯ ಅಗತ್ಯವಿಲ್ಲ… ಕೆಲವೊಮ್ಮೆ ಮನುಷ್ಯರಿಗಿಂತಲೂ ಪ್ರಾಣಿಗಳೇ ಸಂಬಂಧಗಳ ನಿಜವಾದ ಅರ್ಥವನ್ನು ಬದುಕಿನ ಕೊನೆಯ ಕ್ಷಣದವರೆಗೂ ತೋರಿಸಿಬಿಡುತ್ತವೆ. ಅಂತಹ ಮನಮಿಡಿಯುವ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ. 15 ವರ್ಷಗಳ ಕಾಲ ತನ್ನ ಯಜಮಾನನೇ ತನ್ನ ಪ್ರಪಂಚ ಎಂದು ಬದುಕಿದ ‘ದುಗ್ಗು’ ಎಂಬ ಸಾಕು ನಾಯಿ, ಮೃತಪಟ್ಟ ಯಜಮಾನನ ಅಂತಿಮ … Continued

ವಿಡಿಯೋ ವೈರಲ್‌ | ದಿಢೀರನೆ ಬಂದು ನಾಯಿ ಮರಿ ಹೊತ್ತೊಯ್ದು ಮರ ಏರಿ ಕುಳಿತ ದೈತ್ಯ ಮಂಗ…! ಮುಂದೇನಾಯ್ತು ಗೊತ್ತೆ…?

ಪ್ರಕೃತಿಯಲ್ಲಿ ಪ್ರಾಣಿಗಳ ನಡುವಿನ ಪ್ರೀತಿ ಮತ್ತು ವಾತ್ಸಲ್ಯಕ್ಕೆ ಕೊನೆಯಿಲ್ಲ ಎಂಬುದಕ್ಕೆ ಸಾಕ್ಷಿಯಾದ ಅಪರೂಪದ ಘಟನೆಯೊಂದು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಇಲ್ಲಿನ ರೇವಾಲ್ಸರ್ ಪ್ರದೇಶದಲ್ಲಿ ಕೋತಿಯೊಂದು ನಾಯಿ ಮರಿಯನ್ನು ಹೊತ್ತೊಯ್ದು ಮರದ ಮೇಲೆ ಕುಳಿತು ಪ್ರೀತಿಯಿಂದ ನೋಡಿಕೊಂಡ ದೃಶ್ಯ ಸ್ಥಳೀಯರ ಮನಗೆದ್ದಿದೆ. ಸ್ಥಳೀಯರು ನೀಡಿದ … Continued

ವಿಡಿಯೋ: ಶಾಲಾ ಪ್ರಾರ್ಥನೆಯಲ್ಲಿ ಮಕ್ಕಳ ಜೊತೆ ಶಿಸ್ತಿನಿಂದ ನಿಂತು ಪ್ರಾರ್ಥನೆ ಮಾಡಿದ ನಾಯಿ…!

ಸಿಕ್ಕಿಂನ ಶಾಲೆಯೊಂದರಲ್ಲಿ ನಡೆದ ಹೃದಯಸ್ಪರ್ಶಿ ಘಟನೆಯೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಶಾಲೆಯ ಬೆಳಗಿನ ಪ್ರಾರ್ಥನೆಯಲ್ಲಿ ಅನಿರೀಕ್ಷಿತವಾಗಿ ಭಾಗಿಯಾದ ಬೀದಿ ನಾಯಿಯೊಂದು, ವಿದ್ಯಾರ್ಥಿಗಳ ನಡುವೆ ಯಾವುದೇ ಭಯವಿಲ್ಲದೆ ಪ್ರಾರ್ಥನೆಗೆ ನಿಂತು ಎಲ್ಲರ ಗಮನ ಸೆಳೆದಿದೆ. ಪ್ರಸನ್ನ ಪಖ್ರಿನ್ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ … Continued

ಮದುವೆ ಮಂಟಪಕ್ಕೆ ನುಗ್ಗಿ 60ಕ್ಕೂ ಹೆಚ್ಚು ಜನರಿಗೆ ಕಚ್ಚಿದ ಬೀದಿ ನಾಯಿ…!

ಬುದೌನ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬುದೌನ್ ಜಿಲ್ಲೆಯ ಮದುವೆ ಸಮಾರಂಭವೊಂದರಲ್ಲಿ ಬೀದಿ ನಾಯಿಗಳು ಅಟ್ಟಹಾಸ ಮೆರೆದಿದ್ದು, ಮದುವೆ ಸಮಾರಂಭಕ್ಕೆ ನುಗ್ಗಿದ ನಾಯಿ 60ಕ್ಕೂ ಹೆಚ್ಚು ಜನರನ್ನು ಕಚ್ಚಿ ಗಾಯಗೊಳಿಸಿದೆ. ವಧುವಿನ ಬೀಳ್ಕೊಡುಗೆಯ (Farewell) ಸಂಭ್ರಮದಲ್ಲಿದ್ದ ಜನರು ನಾಯಿ ದಾಳಿಯಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಸೋಮವಾರ ಬಿಸೌಲಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಲ್ಸಿ ರಸ್ತೆಯಲ್ಲಿರುವ ‘ಅಭಿನಂದನ್ ಬ್ಯಾಂಕ್ವೆಟ್ … Continued

30 ಪುಟ್ಟ ಮಕ್ಕಳ ಪ್ರಾಣ ಉಳಿಸಲು ವಿಷಪೂರಿತ ಹಾವಿನೊಂದಿಗೆ ಹೋರಾಡಿ ಪ್ರಾಣ ತ್ಯಾಗ ಮಾಡಿದ ಬೀದಿ ನಾಯಿ…!

ಮಯೂರ್‌ಭಂಜ್ (ಒಡಿಶಾ) : ಅಪ್ರತಿಮ ನಿಷ್ಠೆ ಮತ್ತು ತ್ಯಾಗದ ಅಪರೂಪದ ನಿದರ್ಶನದಲ್ಲಿ ಬೀದಿ ನಾಯಿಯೊಂದು, ಶಾಲಾ ಮಕ್ಕಳನ್ನು ವಿಷಪೂರಿತ ಹಾವಿನಿಂದ ರಕ್ಷಿಸಲು ತನ್ನ ಪ್ರಾಣವನ್ನೇ ಬಲಿಕೊಟ್ಟ ಹೃದಯ ಹಿಂಡುವ ಘಟನೆ ಒಡಿಶಾದ ಮಯೂರಭಂಜ್ ಜಿಲ್ಲೆಯ ಉದಲಾ ಬ್ಲಾಕ್‌ನ ಧೀರಕುಲ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬೆಳಿಗ್ಗೆ ಸುಮಾರು 8:30ರ ಸಮಯದಲ್ಲಿ ಜಗನ್ನಾಥ ಶಿಶು ವಿದ್ಯಾ ಮಂದಿರದ … Continued

ಆಸ್ಟ್ರೇಲಿಯಾಕ್ಕೆ ತಮ್ಮ ಸಾಕು ನಾಯಿ ಕರೆದೊಯ್ಯಲು 190 ದಿನ ಕಾಯ್ದು, 15 ಲಕ್ಷ ರೂ. ಖರ್ಚು ಮಾಡಿದ ಭಾರತೀಯ ದಂಪತಿ….!

ಹೈದರಾಬಾದ್: ಅನೇಕ ಸಾಕುಪ್ರಾಣಿ ಪ್ರೇಮಿಗಳಿಗೆ ತಮ್ಮ ಪ್ರಾಣಿಗಳು ಕೇವಲ ಪ್ರಾಣಿಗಳಲ್ಲ, ಮನೆಯ ಸದಸ್ಯರು. ಇದಕ್ಕೆ ಸಾಕ್ಷಿಯೆಂಬಂತೆ ಭಾರತೀಯ ದಂಪತಿಯೊಬ್ಬರು ತಮ್ಮ ನೆಚ್ಚಿನ ನಾಯಿಯನ್ನು ವಿದೇಶಕ್ಕೆ ಕರೆದೊಯ್ಯಲು ಬರೋಬ್ಬರಿ 15 ಲಕ್ಷ ರೂಪಾಯಿ ಖರ್ಚು ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ‘ಕಹಾನಿ ಆಫ್ ಟೇಲ್ಸ್’ (Kahaani of Tales) ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊ ಈಗ … Continued

ವೀಡಿಯೊ | ಹಿಮಪಾತದಲ್ಲಿ ಮಾಲೀಕ ಸಾವು ; ಮಾರಣಾಂತಿಕ ಹಿಮದ ಮಧ್ಯೆ 4 ದಿನ ಕಾವಲು ಕಾಯ್ದ ಪಿಟ್‌ಬುಲ್ ನಾಯಿ..!

ಚಂಬಾ : ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಭರ್ಮೋರ್‌ನಲ್ಲಿ ನಡೆದ ಘಟನೆಯೊಂದು ಪ್ರಾಣಿಗಳ ನಿಷ್ಠೆ ಸಾವನ್ನೂ ಮೀರಿ ನಿಲ್ಲಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿದೆ. ತನ್ನ ಯಜಮಾನ ಹಿಮದ ಅಡಿಯಲ್ಲಿ ಹೆಪ್ಪುಗಟ್ಟಿ ಹೋಗಿದ್ದರೂ, ನಾಲ್ಕು ದಿನಗಳ ಕಾಲ ಮೈಕೊರೆಯುವ ಚಳಿಯಲ್ಲಿ ಆ ದೇಹಕ್ಕೆ ಕಾವಲು ನಿಂತಿದ್ದ ಶ್ವಾನವೊಂದರ ಕಥೆ ಈಗ ಇಡೀ ದೇಶದ ಜನರ ಮನ ಕಲಕುತ್ತಿದೆ. ಯುವಕರಾದ … Continued

77ನೇ ಗಣರಾಜ್ಯೋತ್ಸವದ ಸಂಭ್ರಮದ ನಡುವೆ ಮನಗೆದ್ದ ಶ್ವಾನದ ದೇಶಪ್ರೇಮ : ವೀಡಿಯೊ ವೈರಲ್

ನವದೆಹಲಿ: ಭಾರತವು ಸೋಮವಾರ ತನ್ನ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಡಗರದಿಂದ ಆಚರಿಸಿದೆ. ಈ ಸಂಭ್ರಮದ ನಡುವೆಯೇ, ಶ್ವಾನವೊಂದರ ಅಪೂರ್ವ ದೇಶಭಕ್ತಿಯ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಕೋಟ್ಯಂತರ ಭಾರತೀಯರ ಮನಗೆದ್ದಿದೆ. ಸುಮಾರು 25 ಸೆಕೆಂಡುಗಳ ಈ ವೀಡಿಯೊದಲ್ಲಿ, ನಿಷ್ಠಾವಂತ ಲ್ಯಾಬ್ರಡಾರ್ ಶ್ವಾನವೊಂದು ಸಾಲಾಗಿ ಇಟ್ಟಿರುವ ವಿವಿಧ ದೇಶಗಳ ನಕ್ಷೆಗಳ ಮಧ್ಯೆ ನಡೆದುಕೊಂಡು ಹೋಗುತ್ತದೆ. … Continued

ಅಪ್ರತಿಮ ನಿಷ್ಠೆ | ಆಹಾರ-ನೀರು ತ್ಯಜಿಸಿ ಕೊನೆಯವರೆಗೂ ಮಾಲೀಕನ ಶವ ಬಿಟ್ಟು ಕದಲದ ನಾಯಿ : ದೇಹ ಹಿಂಬಾಲಿಸಿ 4 ಕಿಮೀ ಓಟ !

ಶಿವಪುರಿ (ಮಧ್ಯಪ್ರದೇಶ): ಪ್ರಾಣಿಗಳು ಮನುಷ್ಯರಿಗಿಂತ ಹೆಚ್ಚು ನಿಷ್ಠಾವಂತ ಎಂಬ ಮಾತಿಗೆ ಸಾಕ್ಷಿಯಾದ ಮನಕಲಕುವ ಘಟನೆಯೊಂದು ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ನಡೆದಿದೆ. ತನ್ನ ಯಜಮಾನ ಮೃತಪಟ್ಟಿದ್ದರೂ, ಆತನನ್ನು ಬಿಟ್ಟಿರಲಾರದೆ ಶ್ವಾನವೊಂದು ತೋರಿದ ಪ್ರೀತಿ ಮತ್ತು ನಿಷ್ಠೆ ಈಗ ಸಾವಿರಾರು ಜನರ ಕಣ್ಣಿನಲ್ಲಿ ನೀರು ತರಿಸಿದೆ. ಶಿವಪುರಿ ಜಿಲ್ಲೆಯ ಬಡೋರಾ ಗ್ರಾಮದ ನಿವಾಸಿ ಜಗದೀಶ ಪ್ರಜಾಪತಿ (40) ಎಂಬುವವರು … Continued

ಕೊರೆಯುವ ಚಳಿಯಲ್ಲಿ ರಸ್ತೆಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ ; ಸುತ್ತ ಕುಳಿತು ರಾತ್ರಿಯಿಡೀ ಕಾವಲು ಕಾಯ್ದ ಬೀದಿ ನಾಯಿಗಳು…!

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಈ ನಬದ್ವೀಪ ಎಂಬ ನದಿದಂಡೆಯ ಪಟ್ಟಣವು ಚಳಿಗಾಲದ ಚಳಿಯಲ್ಲಿ ಮುಳುಗಿದ್ದಾಗ, ರೈಲ್ವೆ ನೌಕರರ ವಸತಿ ಸಮುಚ್ಚಯದ ಶೌಚಾಲಯದ ಹೊರಗೆ ನವಜಾತ ಶಿಶುವನ್ನು ಯಾರೋ ನಿರ್ದಯವಾಗಿ ಬಿಟ್ಟು ಹೋಗಿದ್ದರು. ಕೇವಲ ಕೆಲವೇ ಗಂಟೆಗಳ ಜನಿಸಿದ್ದ ಈ ಮಗುವಿನ ದೇಹದ ಮೇಲೆ ಹೆರಿಗೆಯ ರಕ್ತದ ಗುರುತುಗಳಿದ್ದವು. ಹೊದಿಕೆ ಇಲ್ಲ, ಯಾವುದೇ ಪತ್ರ ಇಲ್ಲ, … Continued