ವೀಡಿಯೊ…| ವಡೋದರಾ ಬಳಿ ಗಂಭೀರಾ ಸೇತುವೆ ಕುಸಿತ : ನದಿಗೆ ಬಿದ್ದ ಹಲವು ವಾಹನಗಳು, 9 ಜನರು ಸಾವು

ವಡೋದರಾ : ಗುಜರಾತಿನ ವಡೋದರಾದ ಪದ್ರಾ ತಾಲೂಕಿನ ಗಂಭೀರಾ-ಮುಜಪುರ ಸೇತುವೆಯ ಒಂದು ಭಾಗ ಬುಧವಾರ ಕುಸಿದುಬಿದ್ದು ಹಲವಾರು ವಾಹನಗಳು ಮಹಿಸಾಗರ (ಮಹಿ) ನದಿಗೆ ಬಿದ್ದಿವೆ ಹಾಗೂ ಒಂಬತ್ತು ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಆನಂದ ಮತ್ತು ವಡೋದರಾ ಜಿಲ್ಲೆಗಳನ್ನು ಸಂಪರ್ಕಿಸುವ ಈ ಸೇತುವೆಯು ಬೆಳಗಿನ ಸಂಚಾರದ ಸಮಯದಲ್ಲಿ ವಾಹನಗಳು ಸಂಚರಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಆರಂಭಿಕ … Continued

ವೀಡಿಯೊ..| ಗಿರ್‌ ಸೋಮನಾಥದ ಹೆದ್ದಾರಿಯಲ್ಲಿ ವಾಹನಗಳನ್ನು ನಿಲ್ಲಿಸಿದ 2 ಸಿಂಹಿಣಿಗಳು, 8 ಸಿಂಹದ ಮರಿಗಳ ಗುಂಪು-ವೀಕ್ಷಿಸಿ

ಗುಜರಾತ್‌ನ ಗಿರ್ ಪ್ರದೇಶದ ಗಿರ್‌ ಸೋಮನಾಥ ಜಿಲ್ಲೆಯ ಹೆದ್ದಾರಿಯ ಮೇಲೆ ಸಿಂಹಗಳ ಗುಂಪೊಂದು ಓಡಾಡುತ್ತಿದ್ದುದರಿಂದ ಕೆಲಕಾಲ ವಾಹನಗಳು  ನಿಲ್ಲಬೇಕಾಯಿತು. ಕೋಡಿನಾರ್ ಬಳಿಯ ರೋಂಜ್ ರಾಜ್ಯ ಹೆದ್ದಾರಿಯಲ್ಲಿ ಎರಡು ಸಿಂಹಗಳು ಮತ್ತು ಎಂಟು ಮರಿಗಳನ್ನು ಒಳಗೊಂಡ ಸಿಂಹಗಳ ಕುಟುಂಬ ಕಾಣಿಸಿಕೊಂಡಿತು. ಇವು ಕಾಡುಗಳಿಂದ ಹೊರಬಂದು ರಸ್ತೆ ಮೇಲೆ ಓಡಾಡುತ್ತಿದ್ದವು. ಇದು ವಿಶ್ವದ ಏಕೈಕ ಏಷ್ಯನ್ ಸಿಂಹಗಳ ಆವಾಸಸ್ಥಾನವಾದ … Continued

ತನ್ನ ಬಿಟ್ಟು ಬೇರೊಬ್ಬಳನ್ನು ಮದುವೆಯಾದ ವ್ಯಕ್ತಿ ಸಿಲುಕಿಸಲು 21 ಸಲ ಬಾಂಬ್ ಬೆದರಿಕೆ ಹಾಕಿದ್ದ ಮಹಿಳಾ ರೊಬೊಟಿಕ್ಸ್ ಎಂಜಿನಿಯರ್ ಬಂಧನ…!

ಅಹಮದಾಬಾದ್ : 30 ವರ್ಷದ ರೊಬೊಟಿಕ್ಸ್ ಎಂಜಿನಿಯರ್ ಒಬ್ಬಳ ಏಕಪಕ್ಷೀಯ ಪ್ರೀತಿ ಅಪಾಯಕಾರಿ ತಿರುವು ಪಡೆದುಕೊಂಡಿದೆ, ಏಕೆಂದರೆ ಅವಳು ಪ್ರೀತಿಸಿದ ವ್ಯಕ್ತಿಯ ಮೇಲೆ ಸುಳ್ಳು ಪ್ರಕರಣ ದಾಖಲಾಗುವಂತೆ ಮಾಡಲು ಆಕೆ ದೇಶಾದ್ಯಂತ ಹಲವಾರು ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ ಹಾಕಿದ್ದಾಳೆ…! ಚೆನ್ನೈನ ಉನ್ನತ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಹಿರಿಯ ಸಲಹೆಗಾರ್ತಿಯಾಗಿರುವ ರೆನೆ ಜೋಶಿಲ್ಡಾ ಎಂಬ ಮಹಿಳೆಯನ್ನು ಅಹಮದಾಬಾದ್ … Continued

ಅಹಮದಾಬಾದ್ ವಿಮಾನ ದರಂತ | ವಿಮಾನ ಬಿದ್ದು ಹೊತ್ತಿ ಉರಿಯುತ್ತಿದ್ದ ಸ್ಥಳದಿಂದ ಬದುಕುಳಿದ ಏಕೈಕ ವ್ಯಕ್ತಿ ನಡೆದು ಬರುವ ಹೊಸ ವೀಡಿಯೊ ವೈರಲ್‌

ಗಾಂಧಿನಗರ: ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ-171 ವಿಮಾನ (Air India) ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವಿಶ್ವಾಸಕುಮಾರ ರಮೇಶ ಅವರು, ವಿಮಾನ ಅಪಘಾತವಾದ ಸ್ಥಳದಿಂದ ಹೊರಬರುತ್ತಿರುವುದನ್ನು ತೋರಿಸುವ ಹೊಸ ವೀಡಿಯೊವೊಂದು ಹೊರಬಿದ್ದಿದೆ. ಹೊತ್ತಿ ಉರಿಯುತ್ತಿರುವ ವಿಮಾನದಿಂದ ವ್ಯಕ್ತಿ ಪಾರಾಗಿ ಬಂದಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಬೆಂಕಿ ಹೊತ್ತಿ ಉರಿಯುತ್ತಿರುವ ಸ್ಥಳದ ಕ್ಯಾಂಪಸ್‌ನಿಂದ ಅವರು ಹೊರಗೆ ಹೋಗುತ್ತಿದ್ದಾಗ, ಬೆಂಕಿ … Continued

ಪೈಲಟ್‌ ಗೆ ಸೆಲ್ಯೂಟ್….ಇಲ್ದಿದ್ರೆ ಸುಮಾರು 1500 ಜನರು ಸಾಯುತ್ತಿದ್ದರೇನೋ..? ಅಹಮದಾಬಾದ್‌ ವಿಮಾನ ಅಪಘಾತದ ಬಗ್ಗೆ ಪ್ರತ್ಯಕ್ಷದರ್ಶಿ ಹೇಳಿಕೆ

ಅಹಮದಾಬಾದ್‌ : ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಏರ್ ಇಂಡಿಯಾ ವಿಮಾನ AI 171 ಅಪಘಾತಕ್ಕೀಡಾದ ದೃಶ್ಯವನ್ನು ವೀಕ್ಷಿಸಿದ ಸ್ಥಳೀಯ ನಿವಾಸಿಯೊಬ್ಬರು, ವಿಮಾನವೇನಾದರೂ ವಸತಿ ಪ್ರದೇಶಕ್ಕೆ ಡಿಕ್ಕಿ ಹೊಡೆದಿದ್ದರೆ 1,500 ರಿಂದ 2,000 ಜನರು ಸಾಯಬಹದಿತ್ತು ಎಂದು ಹೇಳಿದ್ದಾರೆ. ದೊಡ್ಡ ದುರಂತವನ್ನು ಸ್ವಲ್ಪದರಲ್ಲೇ ತಪ್ಪಿಸಲಾಯಿತು … Continued

ಅಪಘಾತಕ್ಕೀಡಾದ ವಿಮಾನದ ಸೀಟ್ 11A ನಿಗೂಢತೆ : ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಸಾವನ್ನೇ ಗೆದ್ದಿದ್ದು ಹೇಗೆ..?

ಅಹಮದಾಬಾದ್‌ : ಅಪಘಾತಕ್ಕೀಡಾದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನದಲ್ಲಿದ್ದ ಕೇವಲ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದ್ದಾರೆ. ಅಹಮದಾಬಾದ್‌ನ ಸರ್ದಾರ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನ AI-171 ರಲ್ಲಿ 11A ಸೀಟಿನಲ್ಲಿ ಕುಳಿತಿದ್ದ ಭಾರತೀಯ ಮೂಲದ ಬ್ರಿಟೀಷ್‌ ಪ್ರಜೆ ವಿಶ್ವಾಸಕುಮಾರ ರಮೇಶ ಎಂಬವರು … Continued

ಅಹಮದಾಬಾದ್‌ ವಿಮಾನ ಅಪಘಾತ : ಪತನಗೊಂಡ ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಪತ್ತೆ

ಅಹಮದಾಬಾದ್‌: ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಪತನಗೊಂಡ ವಿಮಾನದ ಬ್ಲ್ಯಾಕ್‌ ಬಾಕ್ಸ್‌ (Black Box) ಮತ್ತು ಡಿವಿಆರ್​ ಪತ್ತೆಯಾಗಿವೆ. ಗುಜರಾತ್ ಸರ್ಕಾರದ 40 ಸಿಬ್ಬಂದಿಯ ಸಹಾಯದಿಂದ ವಿಮಾನ ಅಪಘಾತ ತನಿಖಾ ಬ್ಯೂರೋ(AAIB)ದ ದೊಡ್ಡ ತಂಡವು ಬ್ಲ್ಯಾಕ್‌ ಬಾಕ್ಸ್‌ ಎಂದು ಕರೆಯಲಾಗುವ ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ (DFDR)ಪತ್ತೆ ಮಾಡಿದೆ. ಈ ಬ್ಲ್ಯಾಕ್‌ಬಾಕ್ಸ್‌ನಲ್ಲಿನ ಡಾಟಾದ ಸಹಾಯದಿಂದ ವಿಮಾನ ಅಪಘಾತಕ್ಕೆ ನಿಖರ … Continued

ವೀಡಿಯೊ…| ಮಾಲೀಕನ ಮೇಲೆ ಹಲ್ಲೆ ಮಾಡಿದ ಮೂವರು ದರೋಡೆಕೋರರ ಮೇಲೆ ಪ್ರತಿದಾಳಿ ನಡೆಸಿ ಓಡಿಸಿದ ನಾಯಿ…!

ಮೋರ್ಬಿ (ಗುಜರಾತ್) : ನಿಷ್ಠೆ ಮತ್ತು ಅಸಾಧಾರಣ ಧೈರ್ಯ ತೋರಿದ ಘಟನೆಯೊಂದರಲ್ಲಿ , ಗುಜರಾತ್‌ನ ಮೋರ್ಬಿ ಜಿಲ್ಲೆಯಲ್ಲಿ ಜರ್ಮನ್ ಶೆಫರ್ಡ್ ನಾಯಿ ತನ್ನ ಮಾಲೀಕನನ್ನು ಮೂವರು ಆಕ್ರಮಣಕಾರರು ನಡೆಸಿದ ಹಿಂಸಾತ್ಮಕ ದರೋಡೆ ಪ್ರಯತ್ನದಿಂದ ರಕ್ಷಿಸಿದೆ. ಬೆಳಗಿನ ಜಾವ ನಡೆದ ಇಡೀ ಘಟನೆಯು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ ಮತ್ತು ನಾಯಿ ದಾಳಿಕೋರರ ಮೇಲೆ ದಾಳಿ ಮಾಡಿದ ನಂತರ … Continued

ಒಂದೇ ಸಮನೆ ಅಳುತ್ತಿದೆ ಎಂದು ಕೋಪಗೊಂಡು ಮೂರು ತಿಂಗಳ ಮಗುವನ್ನು ಕೊಂದು ನೀರಿನ ಟ್ಯಾಂಕಿಗೆ ಎಸೆದ ತಾಯಿ…!

ಅಹಮದಾಬಾದ್: ಮೂರು ತಿಂಗಳ ಮಗು ಒಂದೇ ಸಮನೆ ನಿರಂತರವಾಗಿ ಅಳುತ್ತಿದ್ದ ಕಾರಣಕ್ಕೆ ಬೇಸತ್ತ 22 ವರ್ಷದ ಮಹಿಳೆಯೊಬ್ಬರು ಆತನನ್ನು ಭೂಗತ ನೀರಿನ ಟ್ಯಾಂಕ್‌ಗೆ ಎಸೆದು ಕೊಲೆ ಮಾಡಿದ ಆರೋಪದ ಮೇಲೆ ಇಲ್ಲಿ ಬಂಧಿತಳಾಗಿದ್ದಾಳೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಕರಿಷ್ಮಾ ಬಾಘೇಲ್ ಎಂಬ 22 ವರ್ಷದ ಮಹಿಳೆ ಕಳೆದ ಶನಿವಾರ ತನ್ನ ಮೂರು ತಿಂಗಳ ಮಗ … Continued

ವೀಡಿಯೊ…| ಅಹಮದಾಬಾದಿನಲ್ಲಿ ಬಿಸಿಲಿನ ತಾಪಕ್ಕೆ ಎಚ್ಚರತಪ್ಪಿ ಬಿದ್ದ ಕಾಂಗ್ರೆಸ್ ನಾಯಕ ಪಿ ಚಿದಂಬರಂ ; ಆಸ್ಪತ್ರೆಗೆ ದಾಖಲು

ಅಹಮದಾಬಾದ್‌ : ಮಂಗಳವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಭಾಗವಹಿಸಿದ್ದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಬಿಸಿಲಿನ ತಾಪದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಐತಿಹಾಸಿಕ ಸಬರಮತಿ ಆಶ್ರಮದಲ್ಲಿ ಈ ಘಟನೆ ನಡೆದಿದ್ದು, ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆ ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ … Continued