ವಿಡಿಯೋ | ಅಹಮದಾಬಾದ್ : ವಿಮಾನದ ಸ್ಪೀಕರ್ ಬಾಕ್ಸ್‌ನಲ್ಲಿ ಬಚ್ಚಿಟ್ಟಿದ್ದ ₹4.26 ಕೋಟಿ ಮೌಲ್ಯದ ಚಿನ್ನದ ಬಿಸ್ಕತ್‌ ಪತ್ತೆ

ಅಹಮದಾಬಾದ್: ಇಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ದುಬೈನಿಂದ ಬಂದ ಇಂಡಿಗೋ ವಿಮಾನದಲ್ಲಿ ಸ್ಪೀಕರ್ ಬಾಕ್ಸ್‌ನಲ್ಲಿ ಅಡಗಿಸಿಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 4.26 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ದುಬೈನಿಂದ ಆಗಮಿಸಿದ ಇಂಡಿಗೋ ಸಂಸ್ಥೆಯ ‘6E-1478’ ವಿಮಾನದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮತ್ತು ವಿಮಾನದ … Continued

ವಿಡಿಯೋ..| ಭಾರತದ ಮೊದಲ ಬುಲೆಟ್ ರೈಲು ಹೇಗೆ ಕಾಣುತ್ತದೆ ಗೊತ್ತಾ? ಬುಲೆಟ್‌ ರೈಲಿನ ಫಸ್ಟ್‌ ಲುಕ್ ಅನಾವರಣ…!

ನವದೆಹಲಿ: ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಮುಂಬೈ-ಅಹಮದಾಬಾದ್ ಬುಲೆಟ್ ರೈಲು’ ಯೋಜನೆಯ ಮೊದಲ ಲುಕ್ (First Look) ಅನಾವರಣಗೊಂಡಿದೆ. ನವದೆಹಲಿಯಲ್ಲಿರುವ ರೈಲ್ವೆ ಸಚಿವಾಲಯದ ಕಟ್ಟಡದಲ್ಲಿ ದೇಶದ ಈ ಮೊದಲ ಹೈಸ್ಪೀಡ್ ರೈಲಿನ ಮಾದರಿ ಚಿತ್ರವನ್ನು ಪ್ರದರ್ಶಿಸಲಾಗಿದೆ. ರೈಲ್ವೆ ಸಚಿವಾಲಯದ ಕಟ್ಟಡದ ‘ಗೇಟ್ ಸಂಖ್ಯೆ 4’ ರಲ್ಲಿ ಈ ಹೈಸ್ಪೀಡ್ ರೈಲಿನ ಆಕರ್ಷಕ ಚಿತ್ರವನ್ನು ಅಳವಡಿಸಲಾಗಿದೆ. ಈ … Continued

ಅಪರಾಧ ಪ್ರಜ್ಞೆ….ಡಿಎನ್‌ಎ….ʼಪ್ರೇತ’ದ ಭೀತಿ : 34 ವರ್ಷಗಳ ನಂತರ ಬಯಲಾಯ್ತು ಭೀಕರ ಕೊಲೆ ರಹಸ್ಯ !

ಅಹಮದಾಬಾದ್ : ಅಹಮದಾಬಾದ್ ಸಿಟಿ ಕ್ರೈಮ್ ಬ್ರಾಂಚ್ ಪೊಲೀಸರು ಬರೋಬ್ಬರಿ ಮೂರು ದಶಕಗಳ ಕಾಲ ರಹಸ್ಯವಾಗಿದ್ದ ಭೀಕರ ಕೊಲೆ ಪ್ರಕರಣವೊಂದನ್ನು ಭೇದಿಸಿದ್ದಾರೆ. 18 ಅಡಿ ಆಳದ ಗುಂಡಿಯಲ್ಲಿ ಹೂತುಹಾಕಲಾಗಿದ್ದ ಮಹಿಳೆಯ ಅಸ್ಥಿಪಂಜರವನ್ನು ಡಿಎನ್‌ಎ (DNA) ಪರೀಕ್ಷೆಯ ನೆರವಿನಿಂದ ಗುರುತಿಸುವ ಮೂಲಕ, 34 ವರ್ಷಗಳ ಹಿಂದೆ ನಡೆದಿದ್ದ ಅಪರಾಧಕ್ಕೆ ತಾರ್ಕಿಕ ಅಂತ್ಯ ಹಾಡಿದ್ದಾರೆ. ಹೂತುಹೋಗಿದ್ದ ರಹಸ್ಯ ಹೊರಬಂದಿದ್ದು … Continued

2030ರ ಕಾಮನ್‌ವೆಲ್ತ್ ಕ್ರೀಡಾಕೂಟ ಅಹಮದಾಬಾದಿನಲ್ಲಿ ಆಯೋಜನೆ ಈಗ ಅಧಿಕೃತ

ನವದೆಹಲಿ : 2030 ರಲ್ಲಿ ನಡೆಯಲಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು (CWG) ಆಯೋಜಿಸಲು ಗುಜರಾತ್‌ನ ಅಹಮದಾಬಾದ್ ನಗರವು ಅಧಿಕೃತವಾಗಿ ಅಂತಿಮಗೊಂಡಿದೆ. ಕಾಮನ್‌ವೆಲ್ತ್ ಸದಸ್ಯ ರಾಷ್ಟ್ರಗಳು ಮತ್ತು ಪ್ರಾಂತ್ಯಗಳ 74 ಪ್ರತಿನಿಧಿಗಳ ನಿಯೋಗವು ಕಾಮನ್‌ವೆಲ್ತ್ ಸ್ಪೋರ್ಟ್ಸ್ ಸಾಮಾನ್ಯ ಸಭೆಯಲ್ಲಿ ಭಾರತದ ಈ ಬಿಡ್‌ಗೆ ಅಂಗೀಕಾರ ಮುದ್ರೆ ಒತ್ತಿದೆ. ಕಾಮನ್‌ವೆಲ್ತ್ ಸ್ಪೋರ್ಟ್ಸ್‌ನ ಕಾರ್ಯಕಾರಿ ಮಂಡಳಿಯು ಈ ವರ್ಷ ಅಕ್ಟೋಬರ್‌ನಲ್ಲಿಯೇ … Continued

ವೀಡಿಯೊ : ಮುಖಕ್ಕೆ ಖಾರದ ಪುಡಿ ಎರಚಿ ಚಿನ್ನದ ಅಂಗಡಿ ದರೋಡೆಗೆ ಯತ್ನಿಸಿದ ಮಹಿಳೆ ; ತಿರುಗಿಬಿದ್ದ ಮಾಲೀಕ ಏನು ಮಾಡಿದ ಗೊತ್ತೆ ?

ಅಹಮದಾಬಾದ್: ಗುಜರಾತಿನ ಅಹಮದಾಬಾದಿನಲ್ಲಿರುವ ಸ್ಥಳೀಯ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ದರೋಡೆಗೆ ಯತ್ನಿಸಿದ ಮಹಿಳೆಯೊಬ್ಬಳಿಗೆ ಅಂಗಡಿ ಮಾಲೀಕರು ಅನಿರೀಕ್ಷಿತವಾಗಿ ತಿರುಗಿಬಿದ್ದು ಪ್ರತೀಕಾರ ತೀರಿಸಿದ ಘಟನೆಯೊಂದು ವರದಿಯಾಗಿದೆ. ಈ ಘಟನೆ ಅಹಮದಾಬಾದಿನ ರಾಣಿಪ್ (Ranip) ಪ್ರದೇಶದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಸಂಪೂರ್ಣ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜ್ಯುವೆಲ್ಲರಿ ಮಾಲೀಕರು ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆದಿದೆ. … Continued

ಪ್ರತಿದಿನವೂ ಆ ದಿನದ ನೆನಪುಗಳು ಕಾಡುತ್ತಿವೆ..: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕನಿಗೆ ಕಾಡುವ ನೋವು

ಅನೇಕರಿಗೆ, ಅವರು ‘ಜೀವಂತವಾಗಿ ಉಳಿದ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ’. ಆದರೆ, ಅಹಮದಾಬಾದ್‌ ಏರ್ ಇಂಡಿಯಾ ವಿಮಾನ (AI-171) ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯಾದ 40 ವರ್ಷದ ವಿಶ್ವಾಸಕುಮಾರ ರಮೇಶ ಅವರಿಗೆ, ಈ ಬದುಕುಳಿಯುವಿಕೆ ಒಂದು ಪವಾಡವೂ ಹೌದು, ಶಾಪವೂ ಹೌದು. ಈ ದುರಂತದಲ್ಲಿ ವಿಮಾನದಲ್ಲಿದ್ದ 241 ಜನ ಮತ್ತು ನೆಲದ ಮೇಲಿದ್ದ 19 ಜನ ಸಾವಿಗೀಡಾಗಿದ್ದಾರೆ. … Continued

ಅಹಮದಾಬಾದಿಗೆ 2030ರ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯಕ್ಕೆ ಶಿಫಾರಸು ; ಅಂತಿಮ ನಿರ್ಧಾರ ನವೆಂಬರ್ 26ಕ್ಕೆ

ಅಹಮದಾಬಾದ್: 2030 ರ ಕಾಮನ್‌ವೆಲ್ತ್ ಗೇಮ್ಸ್ (CWG) ಆಯೋಜಿಸಲು ಗುಜರಾತಿನ ಅಹಮದಾಬಾದ್‌ ನಗರವನ್ನು ಪ್ರಸ್ತಾವಿತ ಆತಿಥೇಯ ನಗರವನ್ನಾಗಿ ಕಾಮನ್‌ವೆಲ್ತ್ ಸ್ಪೋರ್ಟ್‌ನ ಕಾರ್ಯಕಾರಿ ಮಂಡಳಿ ಶಿಫಾರಸು ಮಾಡಿದೆ. ಕಾಮನ್‌ವೆಲ್ತ್ ಸ್ಪೋರ್ಟ್‌ನ ಸಂಪೂರ್ಣ ಸದಸ್ಯ ಮಂಡಳಿಗೆ ಈ ಶಿಫಾರಸು ಈಗ ಹೋಗಲಿದ್ದು, ನವೆಂಬರ್ 26ರಂದು ಗ್ಲಾಸ್ಗೋದಲ್ಲಿ ನಡೆಯುವ ಮಹಾಸಭೆಯಲ್ಲಿ (General Assembly) ಅಂತಿಮ ನಿರ್ಧಾರವನ್ನು ಪ್ರಕಟಿಸಲಾಗುತ್ತದೆ. ಪರಿಷ್ಕೃತ ನಿಯಮಗಳ … Continued

‘ನಾನು ಇಂಧನ ಕಡಿತಗೊಳಿಸಲಿಲ್ಲ’ : ಅಹಮದಾಬಾದ್‌ ವಿಮಾನ ಅಪಘಾತದ ಪ್ರಾಥಮಿಕ ವರದಿ ಬಿಡುಗಡೆ ; ಪೈಲಟ್‌ಗಳ ಸಂಭಾಷಣೆ ಬಹಿರಂಗ

ನವದೆಹಲಿ : ಏರ್ ಇಂಡಿಯಾ-171 ಅಪಘಾತದ ತನಿಖೆಯ ಪ್ರಾಥಮಿಕ ವರದಿಯನ್ನು ಸರ್ಕಾರ ಶನಿವಾರ ಬಹಿರಂಗಪಡಿಸಿದೆ. ಜೂನ್ 12 ರಂದು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಪತನಗೊಂಡು ವಿಮಾನದಲ್ಲಿದ್ದ 241 ಜನರ ಸಾವಿಗೆ ಕಾರಣವಾದ ದುರದೃಷ್ಟಕರ ಬೋಯಿಂಗ್ 787 ಡ್ರೀಮ್‌ಲೈನರ್ ಒಳಗೆ ನಡೆದ ಘಟನೆಗಳ ಅನುಕ್ರಮವನ್ನು ಇದು ಬಹಿರಂಗಪಡಿಸಿದೆ. ವಿಮಾನ ಅಪಘಾತ … Continued

ವೀಡಿಯೊ | ಅಹಮದಾಬಾದ್ ವಿಮಾನ ದುರಂತದ ಕೆಲದಿನಗಳ ನಂತರ ಕಚೇರಿಯಲ್ಲಿ ಪಾರ್ಟಿ ; ಏರ್ ಇಂಡಿಯಾ ವೆಂಚರಿನ 4 ಹಿರಿಯ ಸಿಬ್ಬಂದಿ ವಜಾ

ನವದೆಹಲಿ: ಏರ್ ಇಂಡಿಯಾದ ವಿಮಾನ ನಿಲ್ದಾಣದ ಗೇಟ್‌ವೇ ಸೇವೆಗಳನ್ನು ಒದಗಿಸುವ ಎಐಎಸ್‌ಎಟಿಎಸ್‌ (AISATS)ನ ನಾಲ್ವರು ಹಿರಿಯ ಉದ್ಯೋಗಿಗಳಿಗೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ. ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ದುರಂತದ ಕೆಲವೇ ದಿನಗಳ ನಂತರ ನೌಕರರು ಕಚೇರಿ ಸ್ಥಳದಲ್ಲಿ ಪಾರ್ಟಿ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ. ಅಹಮದಾಬಾದ್‌ನಲ್ಲಿ 275ಕ್ಕೂ … Continued

ವೀಡಿಯೊ..| ಜಗನ್ನಾಥ ರಥಯಾತ್ರೆಯ ವೇಳೆ ಹುಚ್ಚೆದ್ದು ಓಡಿದ ಆನೆಗಳು ; ಭಯಭೀತರಾಗಿ ಓಡಿದ ಭಕ್ತರು

ಅಹಮದಾಬಾದ್‌ನಲ್ಲಿ ನಡೆದ ಜಗನ್ನಾಥ ರಥಯಾತ್ರೆ ಮೆರವಣಿಗೆಗೆ ಕರೆತರಲಾದ ಆನೆಗಳ ಗುಂಪು ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿದ್ದರಿಂದ ಕೆಲಕಾಲ ಆತಂಕ ನಿರ್ಮಾಣವಾಗಿತ್ತು. ಅನಿರೀಕ್ಷಿತ ಘಟನೆಯಿಂದಾಗಿ ಹಲವಾರು ಭಕ್ತರು ಮತ್ತು ಪಕ್ಕದಲ್ಲಿದ್ದವರು ಹೆದರಿಕೊಂಡು ಅಲ್ಲಿಂದ ಓಡಿಹೋದರು. ಆನೆಗಳು ಜನರಿಂದ ತುಂಬಿಹೋಗಿದ್ದ ರಸ್ತೆಗಳಿಗೆ ನುಗ್ಗಿತ್ತು. ಜನರು ಸುರಕ್ಷತೆಗಾಗಿ ಅಲ್ಲಿಂದ ಓಡುತ್ತಿದ್ದರು. ಸುದ್ದಿ ಸಂಸ್ಥೆ ಪಿಟಿಐ ಹಂಚಿಕೊಂಡಿರುವ ಭಯಾನಕ ಕ್ಷಣದ ವೀಡಿಯೊ ಅವ್ಯವಸ್ಥೆ … Continued