ವಿಡಿಯೋ | ನೇಪಾಳ ಪ್ರವಾಹ : ಬೆಕ್ಕು ಎಂದುಕೊಂಡು ಮಣ್ಣು ತೆಗೆದಾಗ ಅವಶೇಷಗಳಡಿ ಜೀವಂತವಾಗಿ ಸಿಕ್ಕಳು 5 ವರ್ಷದ ಬಾಲಕಿ !

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್‌ ಪ್ರವಾಹದಿಂದ ಉಂಟಾದ ದುರಂತದ ನಡುವೆ ಆಶಾಕಿರಣವಾಗಿ ಮೂಡಿಬಂದ ಘಟನೆಯಲ್ಲಿ, ಮೂರು ದಿನಗಳ ಕಾಲ ಮಣ್ಣು ಮತ್ತು ಅವಶೇಷಗಳಡಿ ಸಿಲುಕಿದ್ದರೂ ಐದು ವರ್ಷದ ಬಾಲಕಿ ಜೀವಂತವಾಗಿ ಪತ್ತೆಯಾಗಿದ್ದಾಳೆ. ಶುಕ್ರವಾರ ರಸುವಾ ಜಿಲ್ಲೆಯ ಸ್ಯಾಬ್ರುಬೆಸಿ ಸಮೀಪದಲ್ಲಿ ರಕ್ಷಣಾ ಸಿಬ್ಬಂದಿ ಆಕೆಯನ್ನು ರಕ್ಷಿಸಿದ್ದು, ಬಳಿಕ ಕಠ್ಮಂಡುವಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆಕೆ ಆರೋಗ್ಯ … Continued

ನೇಪಾಳದ ಭೀಕರ ಪ್ರವಾಹ : ಆ ಒಂದು ಕರೆ….1643 ಮಕ್ಕಳ ಜೀವ ಉಳಿಸಿದ ಶಿಕ್ಷಕನ ಆ ಕ್ಷಣದ ನಿರ್ಧಾರ….

ಕಠ್ಮಂಡು: “ಗ್ರಾಮವೇ ಕೊಚ್ಚಿಹೋಗಿದೆ… ನದಿಯು ಎಲ್ಲವನ್ನೂ ನುಂಗಿದೆ… ಮಕ್ಕಳನ್ನು ಕರೆದುಕೊಂಡು ಓಡಿ ಹೋಗಿ!” ಬುಧವಾರ ಬೆಳಿಗ್ಗೆ 9:20ಕ್ಕೆ ಬಂದ ಈ ದೂರವಾಣಿ ಕರೆ ನೇಪಾಳದ ತ್ರಿಶೂಲಿ ಕಣಿವೆಯಲ್ಲಿರುವ ತ್ರಿಭುವನ್ ತ್ರಿಶೂಲಿ ಪ್ರೌಢಶಾಲೆಯ ಮುಖ್ಯಶಿಕ್ಷಕ ರಾಜೇಂದ್ರ ದವಾಡಿ ಅವರ ಬದುಕಿನ ಅತ್ಯಂತ ನಿರ್ಣಾಯಕ ಕ್ಷಣವಾಗಿ ಪರಿಣಮಿಸಿತು. ಆ ಕ್ಷಣದಲ್ಲಿ ಅವರು ತೆಗೆದುಕೊಂಡ ಒಂದು ತ್ವರಿತ ನಿರ್ಧಾರ 1,643 … Continued

23ನೇ ವಯಸ್ಸಿನಲ್ಲಿ ಕೊಲೆ ಮಾಡಿ ಪರಾರಿ : 42 ವರ್ಷಗಳ ಬಳಿಕ 65ನೇ ವಯಸ್ಸಿನಲ್ಲಿ ಈತ ಪೊಲೀಸರ ಬಲೆಗೆ ಬಿದ್ದಿದ್ದೇ ರೋಚಕ !

ನವದೆಹಲಿ : ಕೊಲೆ ಪ್ರಕರಣವೊಂದರಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ 65 ವರ್ಷದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 1984ರಲ್ಲಿ ಪಶ್ಚಿಮ ದೆಹಲಿಯ ಜನಕಪುರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದ ಆರೋಪಿ ನತ್ತು ಅಲಿಯಾಸ್ ನತ್ತೂಲಾಲ ಎಂಬ ಆರೋಪಿಯನ್ನು ಸೆಂಟ್ರಲ್ ರೇಂಜ್ ಕ್ರೈಂ ಬ್ರಾಂಚ್ ಹಲವು ತಿಂಗಳ ಸತತ … Continued

ಎರಡು ಬಾರಿ ಕಚ್ಚಿದ ವಿಷಪೂರಿತ ಹಾವು ; ತೀವ್ರ ಅಸ್ವಸ್ಥಗೊಂಡ ಪೊಲೀಸ್ ಕಾನ್‌ಸ್ಟೆಬಲ್‌ ಜೀವ ಉಳಿಸಲು ನೆರವಾದ ಎಐ(AI)

ಗ್ವಾಲಿಯರ್ : ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ವಿಷಕಾರಿ ಹಾವು ಎರಡು ಬಾರಿ ಕಚ್ಚಿದ ಪೊಲೀಸ್ ಹೆಡ್ ಕಾನ್‌ಸ್ಟೆಬಲ್‌ ಒಬ್ಬರಿಗೆ ತುರ್ತು ಸಂದರ್ಭದಲ್ಲಿ ಎಐ (AI) ಉಪಕರಣದಿಂದ ಪಡೆದ ಮಾಹಿತಿಯು ಚಿಕಿತ್ಸೆಗೆ ನೆರವಾದ ಘಟನೆ ವರದಿಯಾಗಿದೆ. ಹಾವಿನ ಚಿತ್ರವನ್ನು ಎಐ (AI) ಟೂಲ್‌ ಮೂಲಕ ವಿಶ್ಲೇಷಿಸಿ, ಅದರ ಜಾತಿ ಹಾಗೂ ವಿಷದ ಪರಿಣಾಮಗಳ ಕುರಿತು ಮಾಹಿತಿ ಪಡೆಯಲಾಗಿತ್ತು. ಈ … Continued

ಒಳಚರಂಡಿ ಕಾಮಗಾರಿ ವೇಳೆ 18 ವರ್ಷದ ಕಾರ್ಮಿಕನಿಗೆ ಸಿಕ್ಕಿತು 98 ಕೋಟಿ ರೂ. ಮೌಲ್ಯದ ನಿಧಿ….!

ಬ್ರಸೆಲ್ಸ್: ಒಳಚರಂಡಿ ಮಾರ್ಗದ ಕಾಮಗಾರಿ ನಡೆಸುತ್ತಿದ್ದ ನಿರ್ಮಾಣ ಕಾರ್ಮಿಕರಿಗೆ ಬರೋಬ್ಬರಿ 9 ಮಿಲಿಯನ್ ಯುರೋ (ಸುಮಾರು ₹98 ಕೋಟಿ) ಮೌಲ್ಯದ ಚಿನ್ನದ ಗಟ್ಟಿ, ಅಪರೂಪದ ನಾಣ್ಯಗಳು ಹಾಗೂ ಚಿನ್ನದ ತುಂಡುಗಳ ಭಾರೀ ನಿಧಿಯೊಂದು ಪತ್ತೆಯಾದವಿದ್ಯಮಾನ ಬೆಲ್ಜಿಯಂನಲ್ಲಿ ನಡೆದಿದೆ. ಇದೀಗ ಅದರ ಮಾಲೀಕರು ಯಾರು ಎಂಬುದರ ಕುರಿತು ತನಿಖೆ ಆರಂಭವಾಗಿದೆ. ಬ್ರಸೆಲ್ಸ್‌ನಿಂದ ಸುಮಾರು 30 ಕಿ.ಮೀ. ವಾಯವ್ಯಕ್ಕೆ … Continued

4 ಮಕ್ಕಳನ್ನು ಏಕಾಂಗಿಯಾಗಿ ಬೆಳೆಸಿದ ತಂದೆ ವೃದ್ಧಾಶ್ರಮದಲ್ಲಿ ಸತ್ತಾಗ ಒಬ್ರೂ ಬರಲಿಲ್ಲ : ಮಕ್ಕಳಿಗೆ ಅಪ್ಪನ “ಡೆತ್‌ ಸರ್ಟಿಫಿಕೆಟ್‌ʼ ಮಾತ್ರ ಬೇಕಂತೆ…!

ಭೋಪಾಲ್ : ಪತ್ನಿಯನ್ನು ಕಳೆದುಕೊಂಡ ಬಳಿಕ ನಾಲ್ವರು ಮಕ್ಕಳನ್ನು ಏಕಾಂಗಿಯಾಗಿ ಸಾಕಿ-ಸಲಹಿ ಬೆಳೆಸಿದ ತಂದೆ. ಮಕ್ಕಳ ಬದುಕು ಕಟ್ಟಿಕೊಡಲು ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ ಅವರು, ವಯಸ್ಸಾದ ಬಳಿಕ ಕುಟುಂಬದವರ ಸಹಾಯ-ಸಹಕಾರ ದೊರೆಯದೆ ವೃದ್ಧಾಶ್ರಮದ ಆಶ್ರಯ ಪಡೆಯಬೇಕಾಯಿತು. ಕೊನೆಗೆ 70ನೇ ವಯಸ್ಸಿನಲ್ಲಿ ಅವರು ಕೊನೆಯುಸಿರೆಳೆದಾಗ, ಅವರ ಪಕ್ಕದಲ್ಲಿ ಒಬ್ಬ ಮಗನಾಗಲಿ, ಮಗಳಾಗಲಿ ಇರಲಿಲ್ಲ. ಸಾವಿನ ಬಳಿಕವೂ ಮೃತದೇಹ … Continued

ಜೈಲಿನಲ್ಲಿದ್ದ ಪ್ರಿಯಕರನ ಭೇಟಿಗೆ ಬಂದ ಅಪ್ರಾಪ್ತ ಬಾಲಕಿಯ ಜೇಬಿನಲ್ಲಿ ಸಿಕ್ಕಿತು 10 ಜೀವಂತ ಗುಂಡುಗಳು….!

ಗೋಂಡಾ: ಜೈಲಿನಲ್ಲಿರುವ ಪ್ರಿಯಕರನನ್ನು ಭೇಟಿಯಾಗಲು ಮತ್ತೊಬ್ಬ ವ್ಯಕ್ತಿಯೊಂದಿಗೆ ಬಂದಿದ್ದ ಅಪ್ರಾಪ್ತ ಬಾಲಕಿಯೊಬ್ಬಳು 10 ಜೀವಂತ ಗುಂಡುಗಳನ್ನು ತನ್ನ ಜೇಬಿನಲ್ಲಿ ಇಟ್ಟುಕೊಂಡು ಬಂದಿರುವುದು ಗೋಂಡಾ ವಿಭಾಗೀಯ ಕಾರಾಗೃಹದ ಭದ್ರತಾ ತಪಾಸಣೆ ವೇಳೆ ಪತ್ತೆಯಾಗಿದೆ. ಗುರುವಾರ ಬಾಲಕಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಗೋಂಡಾ ವಿಭಾಗೀಯ ಜೈಲಿಗೆ ಆಗಮಿಸಿ, ಅಲ್ಲಿ ಬಂಧಿಯಾಗಿರುವ ಹರ್ಷು ಕಶ್ಯಪ ಎಂಬಾತನನ್ನು ಭೇಟಿಯಾಗಲು ಮುಂದಾಗಿದ್ದಳು. ಜೈಲರ್ ಆಫ್ತಾಬ್ … Continued

ಒಬ್ಬನನ್ನೇ ಮದುವೆಯಾದ ಮೂವರು ಸಹೋದರಿಯರು…! ವಿಡಿಯೊ ವೈರಲ್‌ ; ತೀವ್ರ ಚರ್ಚೆಗೆ ಗ್ರಾಸ

ನವದೆಹಲಿ: ಉತ್ತರ ಪ್ರದೇಶದ ಮೂವರು ಸಹೋದರಿಯರು ಒಬ್ಬ ವ್ಯಕ್ತಿಯನ್ನೇ ವಿವಾಹವಾಗಿರುವುದಾಗಿ ಹೇಳಲಾಗುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಈ ಮದುವೆ ನಿಜವೇ ಅಥವಾ ಕೇವಲ ವೈರಲ್ ಆಗಲು ರೂಪಿಸಿದ ದೃಶ್ಯವೇ ಎಂಬ ಪ್ರಶ್ನೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಆರಂಭದಲ್ಲಿ ಸಾಮಾನ್ಯ ವೈರಲ್ ರೀಲ್ಸ್ ಎಂದು ಪರಿಗಣಿಸಲ್ಪಟ್ಟಿದ್ದ ಈ ವಿಡಿಯೊಗಳು ಇದೀಗ ಸಾಮಾಜಿಕ, ಧಾರ್ಮಿಕ … Continued

ತಂದೆ-ತಾಯಿ ಕೊಂದಿದ್ದ ಆನೆಯಿಂದ ಪಾರಾಗಲು 2 ನದಿ ದಾಟಿ ಬಂದಿದ್ದ ಕುಟುಂಬ; 14 ವರ್ಷದ ಬಳಿಕ ಅಲ್ಲಿಗೂ ಬಂದು ಮತ್ತಿಬ್ಬರನ್ನು ಸಾಯಿಸಿದ ಅದೇ ಆನೆ !

ಕಠ್ಮಂಡು: ತಂದೆ-ತಾಯಿಯನ್ನು ಬಲಿ ಪಡೆದಿದ್ದ ಕಾಡಾನೆಯಿಂದ ತಪ್ಪಿಸಿಕೊಳ್ಳಲು ಮನೆ ಮಾರಾಟ ಮಾಡಿ, ಅದು ಜಾಡು ಹಿಡಿದು ಬರಬಾರದೆಂದು ಎರಡು ದೊಡ್ಡ ನದಿಗಳನ್ನು ದಾಟಿ ಕುಟುಂಬ ಸಮೇತ ವಲಸೆ ಹೋಗಿ ಬೇರೆ ಪ್ರದೇಶದಲ್ಲಿ ಹೊಸ ಜೀವನ ಆರಂಭಿಸಿದ್ದ ವ್ಯಕ್ತಿಗೆ ವಿಧಿ ಮತ್ತೊಮ್ಮೆ ಕ್ರೂರ ಮುಖ ತೋರಿಸಿದೆ. ಬರೋಬ್ಬರಿ 14 ವರ್ಷಗಳ ಬಳಿಕ ಅದೇ ಆನೆ ಇವರ ಹೊಸ … Continued

ವಿಡಿಯೊಗಳು…: ಭೀಕರ ಬಿಸಿಗಾಳಿಗೆ ಕರಗಿದ ರಸ್ತೆಗಳು, ಬಾಗಿದ ರೈಲು ಹಳಿಗಳು ; ನೂರಾರು ಸಾವು : ತತ್ತರಿಸಿದ ಯುರೋಪ್

ಲಂಡನ್: ಯುರೋಪ್ ಖಂಡವು ತನ್ನ ಇತಿಹಾಸದಲ್ಲೇ ಅತ್ಯಂತ ಕಠಿಣ ಮತ್ತು ಭೀಕರವಾದ ಬಿಸಿಗಾಳಿಗೆ (Heatwave ತತ್ತರಿಸಿದೆ. ಸೂರ್ಯನ ಪ್ರಖರ ಶಾಖಕ್ಕೆ ರಸ್ತೆಗಳು ಕರಗುತ್ತಿದ್ದು, ಟ್ರ್ಯಾಮ್ ರೈಲುಗಳ ಹಳಿಗಳು ಬಾಗುತ್ತಿವೆ. ವಿಪರೀತ ಶಾಖದ ಹಿನ್ನೆಲೆಯಲ್ಲಿ ಸಾವಿರಾರು ಜನ ಆಸ್ಪತ್ರೆ ಸೇರುತ್ತಿದ್ದಾರೆ. ಇತಿಹಾಸದ ಎಲ್ಲಾ ದಾಖಲೆಗಳನ್ನು ಮುರಿಯುತ್ತಿರುವ ತಾಪಮಾನವು ಹಲವು ಯುರೋಪಿಯನ್ ರಾಷ್ಟ್ರಗಳಲ್ಲಿ ಈಗಾಗಲೇ 40°C ಗಡಿಯನ್ನು ದಾಟಿದೆ. … Continued