ಕೇರಳ : ದೇವಾಲಯಗಳ ಆವರಣದಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿಷೇಧಿಸಿದ ಸುಮಾರು 1200 ದೇವಾಲಯ ನಿರ್ವಹಿಸುವ ತಿರುವಾಂಕೂರು ದೇವಸ್ವಂ ಮಂಡಳಿ

ತಿರುವನಂತಪುರಂ : ದೇವಾಲಯದ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಆಯೋಜಿಸುವ ಸಾಮೂಹಿಕ ಕಸರತ್ತು ಮತ್ತು ಇತರ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ತಿರುವಾಂಕೂರು ದೇವಸ್ವಂ ಮಂಡಳಿ (TDB) ತನ್ನ ಅಧೀನದಲ್ಲಿರುವ ಎಲ್ಲಾ ದೇವಾಲಯಗಳಿಗೆ ಹೊಸ ಸುತ್ತೋಲೆ ಹೊರಡಿಸಿದೆ. ತಿರುವಾಂಕೂರು ದೇವಸ್ವಂ ಮಂಡಳಿ ದಕ್ಷಿಣ ಭಾರತದಲ್ಲಿ ಸುಮಾರು 1,200 ದೇವಾಲಯಗಳನ್ನು ನಿರ್ವಹಿಸುವ ಸಂಸ್ಥೆಯಾಗಿದೆ. ದೇವಾಲಯದ ಆವರಣದಲ್ಲಿ ಆರ್‌ಎಸ್‌ಎಸ್ … Continued

ಕೇರಳ: ತನೂರ್ ಒಟ್ಟುಪುರಂ ತೂವಲ್ ಕಡಲತೀರದಲ್ಲಿ ಪ್ರವಾಸಿಗರ ದೋಣಿ ನದಿಯಲ್ಲಿ ಮುಳುಗಿ 18 ಮಂದಿ ಸಾವು

ಮಲಪ್ಪುರಂ: ಮಲಪ್ಪುರಂ ಜಿಲ್ಲೆಯ ತನೂರ್‌ನಲ್ಲಿ ಒಟ್ಟುಪುರಂ ತೂವಲ್ ಬೀಚ್‌ನ ನದಿಯಲ್ಲಿ ಪ್ರವಾಸಿಗರ ದೋಣಿ ಮುಳುಗಿ 18 ಮಂದಿ ಸಾವಿಗೀಡಾದ ಘಟನೆ ಭಾನುವಾರ ಸಂಜೆ ನಡೆದಿದೆ. ಮೂಲಗಳ ಪ್ರಕಾರ, ಸುಮಾರು 40 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಸಂಜೆ 7:30 ರ ಸುಮಾರಿಗೆ ಜಾಯ್‌ರೈಡ್‌ನಲ್ಲಿ ಪಲ್ಟಿಯಾಗಿದೆ. ಸುಮಾರು 20 ಜನರನ್ನು ರಕ್ಷಿಸಲಾಗಿದ್ದು, 15 ಜನರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೃತಪಟ್ಟವರಲ್ಲಿ … Continued

ಸಂಸದರಾಗಿ ಅನರ್ಹಗೊಂಡ ನಂತರ ಮೊದಲ ಬಾರಿಗೆ ಕೇರಳದ ವಯನಾಡಿಗೆ ರಾಹುಲ್‌ ಗಾಂಧಿ ನಾಳೆ ಭೇಟಿ ಸಾಧ್ಯತೆ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂಸತ್ ಸದಸ್ಯರಾಗಿ ಅನರ್ಹಗೊಂಡ ನಂತರ ಮೊದಲ ಬಾರಿಗೆ ಏಪ್ರಿಲ್ 11 ರಂದು ತಮ್ಮ ಹಿಂದಿನ ಕ್ಷೇತ್ರ ಕೇರಳದ ವಯನಾಡಿಗೆ ಭೇಟಿ ನೀಡುವ ನಿರೀಕ್ಷೆಯಿದೆ. ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷ ಶಿಕ್ಷೆಗೆ ಒಳಗಾದ ನಂತರ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ಅನರ್ಹಗೊಂಡಿತ್ತು. ಸೂರತ್ ನ್ಯಾಯಾಲಯವು 2019 ರಲ್ಲಿ … Continued

ಕೇರಳ ಶಾಕರ್ : ವಾಗ್ವಾದದ ನಂತರ ರೈಲಿನಲ್ಲಿ ಸಹ ಪ್ರಯಾಣಿಕರಿಗೆ ಬೆಂಕಿ ಹಚ್ಚಿದ ವ್ಯಕ್ತಿ ; ಪರಿಣಾಮ 3 ಸಾವು, 9 ಮಂದಿಗೆ ಗಾಯ

ಕೋಝಿಕ್ಕೋಡ್: ಎಕ್ಸ್‌ಪ್ರೆಸ್ ರೈಲಿನಲ್ಲಿ ಸಹ ಪ್ರಯಾಣಿಕನಿಗೆ ಬೆಂಕಿ ಹಚ್ಚಿದ ಘಟನೆಯಲ್ಲಿ ಒಂಬತ್ತು ಮಂದಿ ಗಾಯಗೊಂಡ ಕೆಲವೇ ಗಂಟೆಗಳ ನಂತರ ಇಲ್ಲಿನ ಎಲತ್ತೂರ್ ರೈಲು ನಿಲ್ದಾಣದ ಬಳಿ ಹಳಿಗಳ ಮೇಲೆ ಒಂದು ವರ್ಷದ ಮಗು ಮತ್ತು ಮಹಿಳೆ ಸೇರಿದಂತೆ ಮೂವರು ಶವವಾಗಿ ಪತ್ತೆಯಾಗಿದೆ. ಭಾನುವಾರ ತಡರಾತ್ರಿ ಹಳಿಯಿಂದ ಮಹಿಳೆ, ಮಗು ಮತ್ತು ಪುರುಷನ ಮೃತದೇಹಗಳು ಪತ್ತೆಯಾಗಿವೆ ಎಂದು … Continued

ಕಣ್ಣಿನ ಕಾಯಿಲೆ ಪತ್ತೆ ಹಚ್ಚಲು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಆಧಾರಿತ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ 10 ವರ್ಷದ ಕೇರಳ ಮೂಲದ ಬಾಲಕಿ…!

ಅಪ್ಲಿಕೇಶನ್ ಅನ್ನು ರಚಿಸುವ ಮೂಲಕ ಅತ್ಯಂತ ಕಿರಿಯ ಐಒಎಸ್ ಡೆವಲಪರ್ ಆಗಿರುವ ಹನಾ ರಫೀಕ್ ಎಂಬ 9 ವರ್ಷದ ಹುಡುಗಿ ನೆನಪಿದೆಯೇ? ನಂತರ ಅವಳು ಆಪಲ್ ಸಿಇಒ ಟಿಮ್ ಕುಕ್ ಅವರಿಂದ ಪ್ರಶಂಸೆ ಪಡೆದಳು. ಈಗ ಅವಳ ಸಹೋದರಿ ಲೀನಾ ರಫೀಕ್ ಕೂಡ ಸುದ್ದಿಯಾಗುತ್ತಿದ್ದಾಳೆ. ದುಬೈನಲ್ಲಿರುವ ಭಾರತದ ಕೇರಳ ಮೂಲದ ಈ ಹುಡುಗಿ ಕೇವಲ 10ನೇ … Continued

ಉತ್ತರಾಧಿಕಾರ ಕಾನೂನಿನ ಲಿಂಗ ತಾರತಮ್ಯದ ವಿರುದ್ಧ ಹೋರಾಡಲು ವಿಶೇಷ ವಿವಾಹ ಕಾಯ್ದೆಯಡಿ ‘ಮರುಮದುವೆ’ಯಾಗುತ್ತಿರುವ ಮುಸ್ಲಿಂ ದಂಪತಿ

ಕಾಸರಗೋಡು (ಕೇರಳ) : ಕೇರಳದ ಕಾಸರಗೋಡು ಜಿಲ್ಲೆಯ ಮುಸ್ಲಿಂ ದಂಪತಿ ತಮ್ಮ ಹೆಣ್ಣುಮಕ್ಕಳ ಆರ್ಥಿಕ ಭದ್ರತೆಗಾಗಿ ಮತ್ತು ಮುಸ್ಲಿಂ ಉತ್ತರಾಧಿಕಾರ ಕಾನೂನುಗಳಲ್ಲಿ ಲಿಂಗ ಸಮಾನತೆಗಾಗಿ ಬಲವಾದ ಸಂದೇಶ ಕಳುಹಿಸಲು ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ಮರುಮದುವೆ ಮಾಡಲು ಯೋಜಿಸಿದ್ದಕ್ಕಾಗಿ ಈಗ ಸುದ್ದಿಯಲ್ಲಿದ್ದಾರೆ. ಶುಕ್ಕೂರ್‌ ದಂಪತಿ ಮುಸ್ಲಿಂ ಪಿತ್ರಾರ್ಜಿತ ಕಾನೂನುಗಳಲ್ಲಿ ಹೇರಲಾದ ಕೆಲವು ಷರತ್ತುಗಳಿಂದಾಗಿ ತಮ್ಮ ಮದುವೆಯನ್ನು … Continued

ಕೇರಳದ ದೇಗುಲಕ್ಕೆ ಬಂತು ರೋಬೋಟ್‌ ಆನೆ…! ಫೆಬ್ರವರಿ 26 ರಂದು ದೇವಸ್ಥಾನಕ್ಕೆ ಅರ್ಪಣೆ: ಇದರ ತೂಕ 800 ಕೆ.ಜಿ

ತ್ರಿಶೂರ್ : ಇದೇ ಮೊದಲ ಬಾರಿಗೆ, ಫೆಬ್ರವರಿ 26 ರಂದು ನಾದೈರುತಲ್ (ದೇವಾಲಯಗಳಲ್ಲಿ ದೇವರ ಮುಂದೆ ಆನೆಗಳನ್ನು ಅರ್ಪಿಸುವ ಆಚರಣೆ) ಸಮಾರಂಭಕ್ಕಾಗಿ ಇರಿಂಜಲಕುಡ ಬಳಿಯ ಶ್ರೀಕೃಷ್ಣ ದೇವಸ್ಥಾನದಲ್ಲಿ ರಾಮನ್‌ ಎಂಬ ರೋಬೋಟ್ ಆನೆ ಸಿದ್ಧವಾಗಿದೆ. ದೇವಸ್ಥಾನದ ಭಕ್ತ ಸಮೂಹದಿಂದ ಐದು ಮೋಟಾರುಗಳಲ್ಲಿ ಕಾರ್ಯನಿರ್ವಹಿಸುವ ರೋಬೋಟ್‌ ಆನೆಯನ್ನು ಕೊಡುಗೆಯಾಗಿ ನೀಡಲಾಗಿದೆ. ದೇವಾಲಯದ ಆಚರಣೆಗಳಿಗೆ ಆನೆಗಳನ್ನು ಬಾಡಿಗೆಗೆ ತೆಗೆದುಕೊಳ್ಳುವಲ್ಲಿ … Continued

ಕರ್ನಾಟಕ, ತಮಿಳುನಾಡು, ಕೇರಳದ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಎನ್‌ಐಎ ದಾಳಿ

ನವದೆಹಲಿ: 2022ರ ಅಕ್ಟೋಬರ್‌ನಲ್ಲಿ ನಡೆದ ಕೊಯಮತ್ತೂರು ಕಾರ್ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬುಧವಾರ ದಕ್ಷಿಣ ಭಾರತದ ಮೂರು ರಾಜ್ಯಗಳಲ್ಲಿನ 60 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದೆ. ತಮಿಳುನಾಡು, ಕೇರಳ ಮತ್ತು ಕರ್ನಾಟಕ ಸೇರಿದಂತೆ ದಾಳಿಗಳನ್ನು ನಡೆಸಲಾಯಿತು. ಇಂದು, ಬುಧವಾರ ಬೆಳಿಗ್ಗೆ 6 ಗಂಟೆಗೆ 60 ಕ್ಕೂ ಹೆಚ್ಚು … Continued

ತನ್ನ ಕಾರಿಗೆ ಒರಗಿ ನಿಂತಿದ್ದ ಎಂಬ ಕಾರಣಕ್ಕೆ 6 ​​ವರ್ಷದ ಬಾಲಕನ ಎದೆಗೆ ಝಾಡಿಸಿ ಒದ್ದ ವ್ಯಕ್ತಿಯ ಬಂಧನ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಗುರುವಾರ, ಕೇರಳ ಪೊಲೀಸರು ರಾಜ್ಯದ ತಲಸ್ಸೆರಿ ಪ್ರದೇಶದಲ್ಲಿ 6 ವರ್ಷದ ಮಗುವಿನೊಂದಿಗೆ ಅಮಾನುಷವಾಗಿ ವರ್ತಿಸಿದ ಶಿಹಶಾದ್ ಎಂಬ ಯುವಕನನ್ನು ಬಂಧಿಸಿದ್ದಾರೆ. ವಲಸೆ ಕಾರ್ಮಿಕನ ಮಗುವನ್ನು ತನ್ನ ಕಾರಿನ ಮೇಲೆ ಒರಗಿದ್ದ ಎಂಬ ಕಾರಣಕ್ಕೆ ಆರೋಪಿ ಒದ್ದಿದ್ದಾನೆ. ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ, ಅದರ ಆಧಾರದ ಮೇಲೆ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಶಿಹಶಾದ್ … Continued

ಶ್ರೀಮಂತರಾಗಲು ಬಯಸಿದ್ದ ದಂಪತಿಯಿಂದ “ನರಬಲಿ”…! ಇಬ್ಬರು ಮಹಿಳೆಯರನ್ನು ಕೊಂದು ಶವಗಳನ್ನು ತುಂಡುತುಂಡು ಮಾಡಿ ಹೂತಿಟ್ಟರು..!

ತಿರುವನಂತಪುರಂ: ಕೇರಳದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮಹಿಳೆಯರನ್ನು ದಂಪತಿ ಕೊಂದು ತುಂಡುತುಂಡು ಮಾಡಿ ಹೂತಿಟ್ಟಿರುವ ಭೀಕರ ನರಬಲಿ ಪ್ರಕರಣವನ್ನು ಪೊಲೀಸರು ಇಂದು, ಮಂಗಳವಾರ ಭೇದಿಸಿದ್ದಾರೆ. ತಮ್ಮ ಆರ್ಥಿಕ ತೊಂದರೆಗಳನ್ನು ಕೊನೆಗೊಳಿಸಿ ಶ್ರೀಮಂತರಾಗಲು ಬಯಸಿದ್ದ ದಂಪತಿ ಎರ್ನಾಕುಲಂ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಇಬ್ಬರು ಮಹಿಳೆಯರಾದ ರೋಸ್ಲಿನ್ ಮತ್ತು ಪದ್ಮಾ ಅವರನ್ನು ನರಬಲಿ ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. … Continued