ಮಹಿಳೆಯರು ಹೊರಗೆ ಬಂದರೆ ಅನಾಹುತ, ಮನೆಯೊಳಗೆ ಇರಬೇಕು : ಕೇರಳ ಧರ್ಮಗುರುವಿನ ವಿವಾದಾತ್ಮಕ ಹೇಳಿಕೆ

ಕೊಚ್ಚಿ: ಕೇರಳದ ಖ್ಯಾತ ಮುಸ್ಲಿಂ ಧರ್ಮಗುರು ಮಹಿಳೆಯರ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ. ಮಹಿಳೆಯರು ಮನೆಗಳಲ್ಲೇ ಉಳಿಯಬೇಕು ಹಾಗೂ ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದರಿಂದ “ದೊಡ್ಡ ವಿನಾಶ” ಉಂಟಾಗುತ್ತದೆ ಎಂದು ಮುಸ್ಲಿಂ ಧರ್ಮಗುರು ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ (95) ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದ್ದು, ಸಿಪಿಐ(ಎಂ) ಮತ್ತು ಬಿಜೆಪಿ ಸೇರಿದಂತೆ … Continued

2026ರ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡ ಕೇರಳದ 19ರ ಹರೆಯದ ಕಾಜಿಯಾ

ಜೈಪುರ: ರಾಜಸ್ಥಾನದ ಜೈಪುರದಲ್ಲಿರುವ ಜೀ ಸ್ಟುಡಿಯೋಸ್‌ನಲ್ಲಿ ಭಾನುವಾರ ನಡೆದ ಅದ್ಧೂರಿ ಸಮಾರಂಭದಲ್ಲಿ ಕೇರಳದ 19 ವರ್ಷದ ಕಾಜಿಯಾ ಲಿಜ್ ಮೆಜೊ ಅವರು ಪ್ರತಿಷ್ಠಿತ ಮಿಸ್ ಯೂನಿವರ್ಸ್ ಇಂಡಿಯಾ 2026 ಕಿರೀಟವನ್ನು ತಮ್ಮದಾಗಿಸಿಕೊಂಡರು. ದೇಶದ ವಿವಿಧ ಭಾಗಗಳಿಂದ ಸ್ಪರ್ಧಿಸಿದ್ದ 52 ಫೈನಲಿಸ್ಟ್‌ಗಳನ್ನು ಹಿಂದಿಕ್ಕಿ ಕಾಜಿಯಾ ಈ ಗೌರವಕ್ಕೆ ಪಾತ್ರರಾದರು. ಸಮಾರಂಭದಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ 2025ರ ವಿಜೇತೆ … Continued

ವಯನಾಡು ಭೂಕುಸಿತ | ಹಲವರು ಮೃತಪಟ್ಟಿರುವ ಶಂಕೆ : ಆ ಕ್ಷಣದ ಭಯಾನಕ ವಿಡಿಯೋ ವೈರಲ್ ; ಕೊಚ್ಚಿಹೋದ ಜನರು-ವಾಹನಗಳು

ವಯನಾಡು : ಕೇರಳದ ವಯನಾಡು ಜಿಲ್ಲೆಯ ಮೆಪ್ಪಾಡಿ ಸಮೀಪದ ಕಲ್ಲಾಡಿ ಪ್ರದೇಶದಲ್ಲಿ ಮಂಗಳವಾರ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಐವರು ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಹಲವರು ಇನ್ನೂ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸಾವಿನ ಸಂಖ್ಯೆ ಎಷ್ಟೆಂಬುದು ಇನ್ನೂ ದೃಢಪಟ್ಟಿಲ್ಲ. ಮಲಪ್ಪುರಂ ಮತ್ತು ವಯನಾಡು ಜಿಲ್ಲೆಗಳನ್ನು ಸಂಪರ್ಕಿಸುವ ಸುರಂಗ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಮೀನಾಕ್ಷಿ ಸೇತುವೆ ಸಮೀಪ … Continued

ನಾಯಿ ಕಚ್ಚಿ ಹಾಳಾದ ₹690 ಚಪ್ಪಲಿ ದುರಸ್ತಿಗೆ ನಿರಾಕರಿಸಿದ ಕಂಪನಿಯಿಂದಲೇ ₹5,000 ಪರಿಹಾರ, ಹೊಸ ಚಪ್ಪಲಿ ಪಡೆದ ಗ್ರಾಹಕ…!

ಪಾಲಕ್ಕಾಡು: ದೇವಾಲಯಕ್ಕೆ ತೆರಳಿದ್ದ ವೇಳೆ ಹೊಸದಾಗಿ ಖರೀದಿಸಿದ್ದ ಚಪ್ಪಲಿಯನ್ನು ಬೀದಿ ನಾಯಿಯೊಂದು ಕಚ್ಚಿ ಹಾಳು ಮಾಡಿದ ಘಟನೆಗೆ ಸಂಬಂದಿಸಿದಂತೆ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದ, ಸಾಮಾಜಿಕ ಹಾಗೂ ಪರಿಸರ ಕಾರ್ಯಕರ್ತ ಬೋಬನ್ ಮಟ್ಟುಮಂತ ಅವರಿಗೆ ಮಹತ್ವದ ಜಯ ದೊರೆತಿದೆ. ₹690 ಮೌಲ್ಯದ ಸ್ಲಿಪ್ಪರ್ ಹಾನಿಯಾದ ಪ್ರಕರಣದಲ್ಲಿ ಅದನ್ನು ಉತ್ಪಾದಿಸಿದ ಕಂಪನಿಯು ₹5,000 ಪರಿಹಾರ ನೀಡುವುದರ ಜೊತೆಗೆ ಹೊಸ … Continued

ಟ್ರಾಫಿಕ್ ಜಾಮ್‌ನಲ್ಲಿ ಕಾರಿನಲ್ಲೇ ವ್ಯಕ್ತಿಗೆ ಹೃದಯಾಘಾತ, ಬಸ್‌ನಿಂದ ಧಾವಿಸಿ ಬಂದು ಜೀವ ಉಳಿಸಿದ ನರ್ಸ್‌ಗಳು

ಎರ್ನಾಕುಳಂ: ಕೇರಳದ ಎರ್ನಾಕುಳಂ ಜಿಲ್ಲೆಯಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿದ್ದು, ಅವರ ಜೀವವನ್ನು ಇಬ್ಬರು ನರ್ಸ್‌ಗಳು ತೋರಿದ ಸಮಯಪ್ರಜ್ಞೆ ಮತ್ತು ತಕ್ಷಣದ ಸ್ಪಂದನೆ ಆ ವ್ಯಕ್ತಿಯ ಜೀವ ಉಳಿಸಿದೆ. ಅಂಗಮಾಲಿಯ ಎಲ್‌ಎಫ್ ಆಸ್ಪತ್ರೆಯ ಸಿಬ್ಬಂದಿ ನರ್ಸ್ ಅಂಜಲಿ ಬೈಜು ಹಾಗೂ ಬೆಂಗಳೂರಿನಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಆರ್ಧ್ರ ರಾಜ ಅವರು, ಕೇರಳ ಸಾರಿಗೆ … Continued

ಮನೆಯ ಆವರಣದಲ್ಲಿ 24 ಗಂಟೆಯೊಳಗೆ ಪತ್ತೆಯಾಯ್ತು ಬರೋಬ್ಬರಿ 18 ಹೆಬ್ಬಾವಿನ ಮರಿಗಳು….!

ಪೂಂಕುನ್ನಂ (ಕೇರಳ): ಮನೆಯೊಂದರ ಆವರಣದಲ್ಲಿ ಒಂದಲ್ಲ, ಎರಡಲ್ಲ, ಬರೋಬ್ಬರಿ 18 ಹೆಬ್ಬಾವುಗಳು ಪತ್ತೆಯಾಗಿರುವ ಆಘಾತಕಾರಿ ಮತ್ತು ಅಪರೂಪದ ಘಟನೆಯೊಂದು ಕೇರಳದ ತ್ರಿಶೂರ್ ಜಿಲ್ಲೆಯ ಪೂಂಕುನ್ನಂನಲ್ಲಿ ವರದಿಯಾಗಿದೆ. ಕೇವಲ 24 ಗಂಟೆಗಳ ಅವಧಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಈ ಎಲ್ಲಾ ಹಾವುಗಳನ್ನು ಸುರಕ್ಷಿತವಾಗಿ ರಕ್ಷಿಸಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮತ್ತು ಕುತೂಹಲ ಮೂಡಿಸಿದೆ. ಪೂಂಕುನ್ನಂನ ಸೀತಾರಾಮ್ ಲೇನ್‌ನ … Continued

2 ತಾಸು ಹುಡುಕಿದ್ರೂ ಏನೂ ಸಿಗದ ಪೊಲೀಸರಿಗೆ ಕುಕ್ಕರ್ ಸೀಟಿಯಿಂದ ಪತ್ತೆಯಾಯ್ತು ಗಾಂಜಾ…!

ತಿರುವನಂತಪುರಂ: ಖಚಿತ ಮಾಹಿತಿ ಮೇರೆಗೆ ಮನೆ ಮೇಲೆ ದಾಳಿ ನಡೆಸಿ ಸುಮಾರು ಎರಡು ಗಂಟೆಗಳ ಕಾಲ ಜಾಲಾಡಿದರೂ ಪೊಲೀಸರಿಗೆ ಏನೂ ಪತ್ತೆಯಾಗಲಿಲ್ಲ. ಇನ್ನೇನು ಕಾರ್ಯಾಚರಣೆ ಮುಗಿಸಬೇಕು ಎನ್ನುವಷ್ಟರಲ್ಲಿ ಅಡುಗೆ ಮನೆಯಲ್ಲಿದ್ದ ಪ್ರೆಶರ್ ಕುಕ್ಕರ್ ಮಾಡಿದ ಸದ್ದು ಪೊಲೀಸರಿಗೆ ಪ್ರಕರಣ ಭೇದಿಸಲು ನೆರವಾದಪ್ರಸಂಗ ಕೇರಳದಲ್ಲಿ ನಡೆದಿದೆ. ಕುಕ್ಕರ್ ತೆರೆದು ನೋಡಿದ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಪೊಲೀಸರು ಬರುತ್ತಿರುವುದನ್ನು ಗಮನಿಸಿದ … Continued

ಕೇರಳಕ್ಕೆ ಮುಂಗಾರು ಆಗಮನ : ಕರ್ನಾಟಕದಲ್ಲಿ 6 ದಿನ ಭಾರಿ ಮಳೆ ಸಾಧ್ಯತೆ ; ಹಲವು ಜಿಲ್ಲೆಗಳಿಗೆ ಆರೇಂಜ್‌ ಅಲರ್ಟ್‌ ಘೋಷಣೆ

ಬೆಂಗಳೂರು: ನೈರುತ್ಯ ಮಾನ್ಸೂನ್ ಮೂರು ದಿನ ತಡವಾಗಿ ಕೊನೆಗೂ ಕೇರಳ ಪ್ರವೇಶ ಮಾಡಿದ್ದು, ಭಾರಿ ಮಳೆ ಸುರಿಸುತ್ತಿದೆ. ಇದರ ಬೆನ್ನಲ್ಲೇ ಇತ್ತ ಕರ್ನಾಟಕದಲ್ಲಿಯೂ ಮುಂಗಾರು ಮಳೆ ಜೋರಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೇರಳಕ್ಕೆ ಮುಂಗಾರು ಪ್ರವೇಶ ಮಾಡಿದ್ದರಿಂದ ಕರ್ನಾಟಕಕ್ಕೂ ಎರಡ್ಮೂರು ದಿನಗಳಲ್ಲಿ ಮುಂಗಾರು ಮಳೆ ಪ್ರವೇಶಿಸಲಿದ್ದು, ಮುಂದಿನ 6 ದಿನಗಳ ಕಾಲ ರಾಜ್ಯದ … Continued

ಕೇರಳಕ್ಕೆ ಮುಂಗಾರು ಪ್ರವೇಶ: 8 ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಣೆ

ತಿರುವನಂತಪುರಂ: ನೈಋತ್ಯ ಮುಂಗಾರು ಗುರುವಾರ ಕೇರಳವನ್ನು ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ದೃಢಪಡಿಸಿದೆ. ಇದು ವಾಡಿಕೆಗಿಂತ ಮೂರು ದಿನ ವಿಳಂಬವಾಗಿದೆ. ಮುಂಗಾರು ಮಾರುತಗಳ ಆಗಮನದಿಂದಾಗಿ ಕೇರಳ ಮತ್ತು ಲಕ್ಷದ್ವೀಪದಾದ್ಯಂತ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ಈಗಾಗಲೇ ಕೇರಳದ ಹಲವು ಜಿಲ್ಲೆಗಳಲ್ಲಿ ಭಾರಿ ಹಾಗೂ ಅತಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್‌ … Continued

ಮುಂಗಾರು ಕಣ್ಣಾಮುಚ್ಚಾಲೆ ? ಕೇರಳಕ್ಕೆ ಮುಂಗಾರು ಪ್ರವೇಶ ಮತ್ತಷ್ಟು ವಿಳಂಬ: ಹೊಸ ಟೈಮ್‌ಲೈನ್ ನೀಡಿದ ಹವಾಮಾನ ಇಲಾಖೆ

ನವದೆಹಲಿ: ಮಾನ್ಸೂನ್ ಆರಂಭಕ್ಕೆ ಅಗತ್ಯವಿರುವ ಬಲವಾದ ಮೇಲ್ಮಟ್ಟದ ಗಾಳಿ ಜೂನ್ 5–6 ರ ನಂತರವೇ ರೂಪುಗೊಳ್ಳುತ್ತದೆ ಮತ್ತು ಹೀಗಾಗಿ ಕೇರಳಕ್ಕೆ ಮಾನ್ಸೂನ್‌ ಪ್ರವೇಶ ಮಳೆ ವಿಳಂಬವಾಗುತ್ತದೆ ಎಂದು ಐಎಂಡಿ ಹೇಳಿದೆ. ನೈಋತ್ಯ ಮಾನ್ಸೂನ್‌ ಮುನ್ನಡೆಯಲು ಬೇಕಾದ ನಿರ್ಣಾಯಕವಾಗಿರುವ ಬಲವಾದ ಮೇಲ್ಮಟ್ಟದ ಗಾಳಿಯು ಜೂನ್ 5–6 ರ ನಂತರವೇ ದಕ್ಷಿಣ ಭಾರತದ ಮೇಲೆ ರಚನೆಯಾಗುವ ಸಾಧ್ಯತೆಯಿದೆ ಎಂದು … Continued