ವಿಶ್ವದ ಎಲ್ಲ ದೇಶಗಳಿಗೂ ಭೇಟಿ ನೀಡಿ ದಾಖಲೆ ಬರೆದ ಬೆಂಗಳೂರು ಮೂಲದ ಗಿಟಾರ್‌ ವಾದಕ ಬೆನ್ನಿ ಪ್ರಸಾದ…!

ಬೆಂಗಳೂರು ಮೂಲದ ಹೆಸರಾಂತ ಗಿಟಾರ್ ವಾದಕ ಮತ್ತು ಜಾಗತಿಕ ಪ್ರವಾಸಿ ಬೆನ್ನಿ ಪ್ರಸಾದ (Benny Prasad) ಅವರು ತಮ್ಮ ಜೀವಮಾನದ ಅಪರೂಪದ ಪ್ರವಾಸದ ದಾಖಲೆಯನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಜಗತ್ತಿನ ಒಟ್ಟು 245 ದೇಶ ಹಾಗೂ ಪ್ರಾಂತ್ಯಗಳಿಗೆ ಭೇಟಿ ನೀಡಿರುವ ಅವರು, ಅದಕ್ಕೆ ಪುರಾವೆಯಾಗಿ ವೀಸಾ ಮತ್ತು ಸೀಲ್‌ಗಳಿಂದ ತುಂಬಿ … Continued

ವಿಚಿತ್ರ ಮದುವೆ…: ಹೆಂಡತಿಯನ್ನು ಕೈಬಿಟ್ಟು ಅತ್ತೆಯನ್ನೇ ವರಿಸಿದ ಅಳಿಯ ! ವಿಲಕ್ಷಣ ಮದುವೆಯ ವಿಡಿಯೋ ವೈರಲ್

ಉತ್ತರ ಪ್ರದೇಶದ ಕಾನ್ಪುರ ದೇಹತ್‌ನಿಂದ ಇತ್ತೀಚೆಗೆ ವರದಿಯಾಗಿರುವ ಅತ್ಯಂತ ವಿಲಕ್ಷಣ ಹಾಗೂ ಅಚ್ಚರಿಯ ವಿವಾದವೊಂದು ಸಾಮಾಜಿಕ ಜಾಲತಾಣಗಳಲ್ಲಿ ತಲ್ಲಣ ಸೃಷ್ಟಿಸಿದೆ. ಪ್ರೀತಿ, ಸಂಬಂಧಗಳ ಎಲ್ಲ ಕಲ್ಪನೆಗಳನ್ನೂ ಮೀರಿ ನಿಂತಿರುವ ಈ ಘಟನೆಯಲ್ಲಿ, ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೈಬಿಟ್ಟು ಸ್ವತಃ ತನ್ನ ಅತ್ತೆಯನ್ನೇ ವಿವಾಹವಾಗಿದ್ದಾನೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಈ ವಿಲಕ್ಷಣ ಘಟನೆ ಉತ್ತರ ಪ್ರದೇಶದ … Continued

ಧಗಧಗಿಸುವ ಜ್ವಾಲಾಮುಖಿ ಬಾಯಿಯ ಅಂಚಿನಲ್ಲೇ 700 ವರ್ಷಗಳಿಂದ ಇದೆ ಭಗವಾನ್ ಗಣೇಶನ ಮೂರ್ತಿ ! ಇದು ಎಲ್ಲಿದೆ ಗೊತ್ತಾ ?

ಇಂಡೋನೇಷ್ಯಾದ ಸಜೀವ ‘ಮೌಂಟ್ ಬ್ರೋಮೋ’ ಜ್ವಾಲಾಮುಖಿಯ ಅಂಚಿನಲ್ಲಿ ಭಗವಾನ್ ಗಣೇಶನ 700 ವರ್ಷಗಳಷ್ಟು ಹಳೆಯದಾದ ಅಪರೂಪದ ಮೂರ್ತಿಯೊಂದು ನೆಲೆ ನಿಂತಿದೆ. ಸ್ಥಳೀಯರಿಂದ ಅತ್ಯಂತ ಭಕ್ತಿ-ಗೌರವಗಳಿಂದ ಪೂಜಿಸಲ್ಪಡುವ ಈ ಪವಿತ್ರ ತಾಣವು ಆಧ್ಯಾತ್ಮಿಕ ರಹಸ್ಯಗಳು ಹಾಗೂ ಪ್ರಾಚೀನ ಆಚರಣೆಗಳಿಂದ ಆವೃತವಾಗಿದೆ. ಈ ಗಣೇಶನೇ ಜ್ವಾಲಾಮುಖಿಯ ವಿನಾಶಕಾರಿ ಸ್ಫೋಟಗಳಿಂದ ಸುತ್ತಮುತ್ತಲಿನ ಹಳ್ಳಿಗಳನ್ನು ರಕ್ಷಿಸುತ್ತಾನೆ ಎಂಬ ಬಲವಾದ ನಂಬಿಕೆ ಅಲ್ಲಿನ … Continued

ವಿಡಿಯೋ..| ಬಾಂಗ್ಲಾದೇಶದಲ್ಲಿ ‘ ಡೊನಾಲ್ಡ್ ಟ್ರಂಪ್’ ಹೋಲುವ ʼಕೋಣದ್ದೇ ಹವಾ: ನೋಡಲು ಮುಗಿಬಿದ್ದ ಜನ !

ಬಾಂಗ್ಲಾದೇಶದಲ್ಲಿ ಎರಡು ಅಪರೂಪದ ಅಲ್ಬಿನೋ (ಬಿಳಿ/ಗುಲಾಬಿ ಚರ್ಮದ) ಕೋಣಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ. ಈ ಎಮ್ಮೆಗಳು ವಿಶ್ವದ ಇಬ್ಬರು ಪ್ರಮುಖ ರಾಜಕೀಯ ನಾಯಕರನ್ನು ಹೋಲುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. ‘ದಿ ಇಂಡಿಪೆಂಡೆಂಟ್’ ವರದಿ ಪ್ರಕಾರ, ಬಾಂಗ್ಲಾದೇಶದ ರಾಜಧಾನಿ ಢಾಕಾ ಸಮೀಪದ ನಾರಾಯಣಗಂಜ್‌ನ ಫಾರ್ಮ್‌ವೊಂದರಲ್ಲಿರುವ 700 ಕೆಜಿ ತೂಕದ ಗುಲಾಬಿ ಚರ್ಮದ … Continued

ಬ್ಯಾಂಕಿನಲ್ಲಿದ್ದ ಹಣ ಪಡೆಯಲು ಮೃತ ಅಕ್ಕನ ಅಸ್ಥಿಪಂಜರವನ್ನೇ ಹೊತ್ತು 3 ಕಿಮೀ ನಡೆದು ಬ್ಯಾಂಕಿಗೆ ಬಂದ ಅಸಹಾಯಕ ತಮ್ಮ…!

ಕಿಯೋಂಜರ್ (ಒಡಿಶಾ): ಹಸಿವು ಮತ್ತು ಬಡತನ ಮನುಷ್ಯನನ್ನು ಎಂತಹ ಪರಿಸ್ಥಿತಿಗೆ ತಳ್ಳುತ್ತದೆ ಎನ್ನುವುದಕ್ಕೆ ಒಡಿಶಾದ ಕಿಯೋಂಜರ್ ಜಿಲ್ಲೆಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಮೃತಪಟ್ಟ ತನ್ನ ಅಕ್ಕನ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಪಡೆಯಲು, ವ್ಯಕ್ತಿಯೊಬ್ಬ ಅಕ್ಕನ ಅಸ್ಥಿಪಂಜರವನ್ನೇ ಹೆಗಲ ಮೇಲೆ ಹೊತ್ತು ಸುಡುವ ಬಿಸಿಲಿನಲ್ಲಿ 3 ಕಿಲೋಮೀಟರ್ ನಡೆದುಕೊಂಡು ಬ್ಯಾಂಕ್‌ಗೆ ಬಂದಿರುವ ಘಟನೆ ನಾಗರಿಕ ಸಮಾಜವನ್ನು … Continued

ಪತಿಯ ಸಹೋದರಿಯನ್ನೇ ಆತನ ಎರಡನೇ ಹೆಂಡತಿ ಎಂದು ಬಿಂಬಿಸಿ ವಿಚ್ಛೇದನ ಪಡೆದ ಮಹಿಳೆ…!

ಸಾಮಾನ್ಯವಾಗಿ ದಂಪತಿಗಳು ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದಾಗ ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಅಥವಾ ಪರಸ್ಪರ ಭಿನ್ನಾಭಿಪ್ರಾಯಗಳ ಕಾರಣ ನೀಡುತ್ತಾರೆ. ಆದರೆ, ಮಧ್ಯಪ್ರದೇಶದ ಮಹಿಳೆಯೊಬ್ಬಳು ವಿಚ್ಛೇದನ ಪಡೆಯಲು ತನ್ನ ಪತಿಯ ಸ್ವಂತ ಅಕ್ಕನನ್ನೇ ಆತನ ಎರಡನೇ ಪತ್ನಿ ಎಂದು ಬಿಂಬಿಸಿ ನ್ಯಾಯಾಲಯವನ್ನೇ ದಿಕ್ಕು ತಪ್ಪಿಸಿರುವ ವಿದ್ಯಮಾನ ನಡೆದಿದೆ ಎಂದು ವರದಿಯಾಗಿದೆ. ಈ ವಿಚಿತ್ರ ಪ್ರಕರಣವು ಈಗ ಮಧ್ಯಪ್ರದೇಶ … Continued

ಒಬ್ಬಳೇ ಪತ್ನಿ, ಇಬ್ಬರು ಪತಿಯಂದಿರು; ಈಗ ಮಗುವಿನ ಆಗಮನ : ಮತ್ತೆ ಸುದ್ದಿಯಲ್ಲಿ ಈ ವಿಶಿಷ್ಟ ವಿವಾಹ…

ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ವಿಶಿಷ್ಟ ವಿವಾಹ ಪದ್ಧತಿಯ ದಂಪತಿಗಳಿಗೆ ಈಗ ಮಗು ಜನಿಸಿದ್ದು, ಈ ಸುದ್ದಿ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಕುಟುಂಬವು ಅಲ್ಲಿನ ಸಾಂಪ್ರದಾಯಿಕ “ಜೋಡಿದಾರ್” ಪದ್ಧತಿಯನ್ನು ಅನುಸರಿಸುತ್ತಿದ್ದು, ಈ ಪದ್ಧತಿಯಂತೆ ಒಬ್ಬ ಮಹಿಳೆ ಇಬ್ಬರು ಸಹೋದರರನ್ನು ವಿವಾಹವಾಗುತ್ತಾರೆ. ಸುನಿತಾ ಚೌಹಾಣ ಎಂಬ ಮಹಿಳೆ ಪ್ರದೀಪ ನೇಗಿ ಮತ್ತು … Continued

ಪತಿ ನಾಪತ್ತೆ…ಮೈದುನನನ್ನೇ ಮದುವೆಯಾಗಿದ್ದ ಪತ್ನಿ…25 ವರ್ಷಗಳ ನಂತರ ಮರಳಿ ಬಂದ ಪತಿ…ಪತ್ನಿಗೆ ಈಗ ಧರ್ಮಸಂಕಟ

ಬಿಜ್ನೋರ್​ : ಇದು ಸಿನಿಮೀಯ ತಿರುವುಗಳನ್ನೂ ಮೀರಿಸುವಂತಹ ಒಂದು ಹೃದಯವಿದ್ರಾವಕ ಮತ್ತು ಅಷ್ಟೇ ಸಂಕೀರ್ಣವಾದ ಘಟನೆ. 25 ವರ್ಷಗಳ ಹಿಂದೆ ನಾಪತ್ತೆಯಾಗಿ, ಮನೆಯವರು ಸತ್ತೇ ಹೋಗಿದ್ದಾನೆ ಎಂದು ಭಾವಿಸಿದ್ದ ವ್ಯಕ್ತಿಯೊಬ್ಬ ಹಠಾತ್ ಪ್ರತ್ಯಕ್ಷನಾಗಿದ್ದಾನೆ. ಈತನ ಪುನರಾಗಮನವು ಕುಟುಂಬದಲ್ಲಿ ಸಂತೋಷಕ್ಕಿಂತ ಹೆಚ್ಚಾಗಿ ಕಾನೂನಾತ್ಮಕ ಮತ್ತು ಸಾಮಾಜಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ. ಪಂಜಾಬ್‌ನ ಕಪುರ್ಥಲಾ ಜಿಲ್ಲೆಯ ಶಿವದಯಾಳ ವಾಲಾ ಗ್ರಾಮದ … Continued

ವೀಡಿಯೊ…| ಬೇಜವಾಬ್ದಾರಿಯ ಪರಮಾವಧಿ : ಮಗುವನ್ನು ಸ್ಕೂಟರ್ ಡಿಕ್ಕಿಯಲ್ಲಿ ಮಲಗಿಸಿ ಲಾಕ್‌ ಮಾಡಿ ಗಾಡಿ ಓಡಿಸಿದ ಮಹಿಳೆ…!

ಮಹಿಳೆಯೊಬ್ಬರು ತನ್ನ ಮಗುವನ್ನು ಸ್ಕೂಟರ್‌ನ ಸೀಟ್ ಕೆಳಗಿನ ಸ್ಟೋರೇಜ್ ಕಂಪಾರ್ಟ್‌ಮೆಂಟ್ (ಡಿಕ್ಕಿ) ಒಳಗೆ ಮಲಗಿಸಿ, ಗಾಡಿ ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ದೃಶ್ಯವನ್ನು ಕಂಡ ಹಲವರು ಮಹಿಳೆಯ ನಡೆಯನ್ನು ಖಂಡಿಸಿದ್ದಾರೆ. ವೈರಲ್ ಆಗಿರುವ ಈ ಕ್ಲಿಪ್‌ನಲ್ಲಿ, ಮಹಿಳೆಯೊಬ್ಬರು ಮನೆಯ ಪ್ರವೇಶ ದ್ವಾರದ ಬಳಿ ನಿಂತಿರುವುದು ಕಂಡುಬರುತ್ತದೆ. ಅವರ ಕೈಯಲ್ಲಿ … Continued

1917ರಲ್ಲಿ ಭಾರತದ ಉದ್ಯಮಿಯಿಂದ 35000 ರೂ. ಸಾಲ ಪಡೆದಿದ್ದ ಬ್ರಿಟಿಷ್‌ ಸರ್ಕಾರ ; 109 ವರ್ಷಗಳ ಬಳಿಕ ವಾಪಸ್ ಕೇಳಿದ ಮೊಮ್ಮಗ…!

ಭೋಪಾಲ್: ಒಂದು ಕಾಲದಲ್ಲಿ ಬ್ರಿಟಿಷ್ ಸಾಮ್ರಾಜ್ಯವನ್ನು ಸೂರ್ಯ ಮುಳುಗದ ಸಾಮ್ರಾಜ್ಯ ಎಂದುಕರೆಯಲಾಗುತ್ತಿತ್ತು. ಆದರೆ, ಅದೇ ಬ್ರಿಟಿಷ್ ಸಾಮ್ರಾಜ್ಯಕ್ಕೆ ಒಂದು ಕಾಲದಲ್ಲಿ ಭಾರತದ ಸಾಮಾನ್ಯ ಉದ್ಯಮಿಯೊಬ್ಬರು ಸಾಲ ನೀಡಿದ್ದರು ಎಂದರೆ ನಂಬಲು ಅಸಾಧ್ಯ. ಮಧ್ಯಪ್ರದೇಶದ ಸೆಹೋರ್ ಪಟ್ಟಣದ ಶ್ರೀಮಂತ ಉದ್ಯಮಿಯೊಬ್ಬರು ಬ್ರಿಟಿಷರಿಗೆ ನೀಡಿದ್ದ ಸಾಲದ ವಿಚಾರ ಈಗ ಒಂದು ಶತಮಾನದ ನಂತರ ಮುನ್ನೆಲೆಗೆ ಬಂದಿದೆ. ಸುಮಾರು 109 … Continued