ವೀಡಿಯೊ…| ಬೇಜವಾಬ್ದಾರಿಯ ಪರಮಾವಧಿ : ಮಗುವನ್ನು ಸ್ಕೂಟರ್ ಡಿಕ್ಕಿಯಲ್ಲಿ ಮಲಗಿಸಿ ಲಾಕ್‌ ಮಾಡಿ ಗಾಡಿ ಓಡಿಸಿದ ಮಹಿಳೆ…!

ಮಹಿಳೆಯೊಬ್ಬರು ತನ್ನ ಮಗುವನ್ನು ಸ್ಕೂಟರ್‌ನ ಸೀಟ್ ಕೆಳಗಿನ ಸ್ಟೋರೇಜ್ ಕಂಪಾರ್ಟ್‌ಮೆಂಟ್ (ಡಿಕ್ಕಿ) ಒಳಗೆ ಮಲಗಿಸಿ, ಗಾಡಿ ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ದೃಶ್ಯವನ್ನು ಕಂಡ ಹಲವರು ಮಹಿಳೆಯ ನಡೆಯನ್ನು ಖಂಡಿಸಿದ್ದಾರೆ. ವೈರಲ್ ಆಗಿರುವ ಈ ಕ್ಲಿಪ್‌ನಲ್ಲಿ, ಮಹಿಳೆಯೊಬ್ಬರು ಮನೆಯ ಪ್ರವೇಶ ದ್ವಾರದ ಬಳಿ ನಿಂತಿರುವುದು ಕಂಡುಬರುತ್ತದೆ. ಅವರ ಕೈಯಲ್ಲಿ … Continued

1917ರಲ್ಲಿ ಭಾರತದ ಉದ್ಯಮಿಯಿಂದ 35000 ರೂ. ಸಾಲ ಪಡೆದಿದ್ದ ಬ್ರಿಟಿಷ್‌ ಸರ್ಕಾರ ; 109 ವರ್ಷಗಳ ಬಳಿಕ ವಾಪಸ್ ಕೇಳಿದ ಮೊಮ್ಮಗ…!

ಭೋಪಾಲ್: ಒಂದು ಕಾಲದಲ್ಲಿ ಬ್ರಿಟಿಷ್ ಸಾಮ್ರಾಜ್ಯವನ್ನು ಸೂರ್ಯ ಮುಳುಗದ ಸಾಮ್ರಾಜ್ಯ ಎಂದುಕರೆಯಲಾಗುತ್ತಿತ್ತು. ಆದರೆ, ಅದೇ ಬ್ರಿಟಿಷ್ ಸಾಮ್ರಾಜ್ಯಕ್ಕೆ ಒಂದು ಕಾಲದಲ್ಲಿ ಭಾರತದ ಸಾಮಾನ್ಯ ಉದ್ಯಮಿಯೊಬ್ಬರು ಸಾಲ ನೀಡಿದ್ದರು ಎಂದರೆ ನಂಬಲು ಅಸಾಧ್ಯ. ಮಧ್ಯಪ್ರದೇಶದ ಸೆಹೋರ್ ಪಟ್ಟಣದ ಶ್ರೀಮಂತ ಉದ್ಯಮಿಯೊಬ್ಬರು ಬ್ರಿಟಿಷರಿಗೆ ನೀಡಿದ್ದ ಸಾಲದ ವಿಚಾರ ಈಗ ಒಂದು ಶತಮಾನದ ನಂತರ ಮುನ್ನೆಲೆಗೆ ಬಂದಿದೆ. ಸುಮಾರು 109 … Continued

ಪ್ರಾಮಾಣಿಕತೆಗೆ ಸಾಟಿಯಿಲ್ಲ : ಅಚಾತುರ್ಯದಿಂದ ಗುಜರಿಗೆ ಹೋಗಿದ್ದ 15 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು 4 ತಿಂಗಳ ನಂತರ ಹಿಂದಿರುಗಿಸಿದ ವ್ಯಾಪಾರಿ…!

ಫರೀದಾಬಾದ್: ಹಳೆಯ ಸಾಮಾನುಗಳ ಜೊತೆ ಅಚಾತುರ್ಯದಿಂದ ಮಾರಾಟ ಮಾಡಲಾಗಿದ್ದ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಗುಜರಿ ವ್ಯಾಪಾರಿಯೊಬ್ಬರು ಅದರ ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಫರೀದಾಬಾದ್ ನಿವಾಸಿ ಅಶೋಕ ಶರ್ಮಾ ಎಂಬವರು ಕಳೆದ ವರ್ಷ ಜನವರಿಯಲ್ಲಿ ಕುಂಭಮೇಳಕ್ಕೆ ಹೋಗುವ ಮುನ್ನ, ಕಳ್ಳರ ಭಯದಿಂದ ತಮ್ಮ ಮನೆಯಲ್ಲಿದ್ದ ಸುಮಾರು 100 ಗ್ರಾಂ … Continued

10 ದಿನದ ಮಗುವಿನೊಂದಿಗೆ 12ನೇ ತರಗತಿ ಪರೀಕ್ಷೆ ಬರೆದ ತಾಯಿ…! ಭಾರೀ ಪ್ರಶಂಸೆ

ನಾಂದೇಡ್: ಒಂದು ಕಡೆ ಹತ್ತು ದಿನದ ಹಸುಗೂಸು, ಮತ್ತೊಂದು ಕಡೆ ಭವಿಷ್ಯದ ಕನಸುಗಳನ್ನು ಹೊತ್ತ ಪರೀಕ್ಷೆ. ಈ ಎರಡರ ನಡುವೆ ಆಕೆ ಎದೆಗುಂದಲಿಲ್ಲ. ಹೆರಿಗೆಯಾಗಿ ಕೇವಲ ಹತ್ತೇ ದಿನಕ್ಕೆ ಕೈಯಲ್ಲಿ ಮಗುವನ್ನು ಹಿಡಿದು ಪರೀಕ್ಷಾ ಕೇಂದ್ರಕ್ಕೆ ಬಂದ ಈ ಯುವತಿಯ ದೃಢತೆ ಈಗ ಇಡೀ ದೇಶದ ಗಮನ ಸೆಳೆದಿದೆ. ಮಹಾರಾಷ್ಟ್ರದ ನಾಂದೇಡ್‌ನ ಶೀತಲ್ ಚಂದ್ರಕಾಂತ ಚಿತ್ತೆ … Continued

ಈಜಿಪ್ಟಿನ ರಾಜವಂಶಸ್ಥರ ಸಮಾಧಿಯಲ್ಲಿ 2000 ವರ್ಷಗಳಷ್ಟು ಪುರಾತನ ತಮಿಳು-ಬ್ರಾಹ್ಮಿ ಶಾಸನಗಳು ಪತ್ತೆ…!

ಚೆನ್ನೈ : ಪ್ರಾಚೀನ ಭಾರತದ ಸಮುದ್ರಯಾನದ ಇತಿಹಾಸವನ್ನೇ ಮರುಚಿತ್ರಿಸುವಂತಹ ರೋಚಕ ಸಂಶೋಧನೆಯೊಂದು ಬೆಳಕಿಗೆ ಬಂದಿದೆ. ಈಜಿಪ್ಟ್‌ನ ಪ್ರಸಿದ್ಧ ‘ವ್ಯಾಲಿ ಆಫ್ ದಿ ಕಿಂಗ್ಸ್’ (Valley of the Kings) ಎಂಬ ಅತ್ಯಂತ ಬಿಗಿ ಭದ್ರತೆಯ ರಾಜವಂಶಸ್ಥರ ಸಮಾಧಿಗಳ ಒಳಭಾಗದಲ್ಲಿ 2,000 ವರ್ಷಗಳಷ್ಟು ಹಳೆಯದಾದ ‘ತಮಿಳು-ಬ್ರಾಹ್ಮಿ’ ಲಿಪಿಯ ಶಾಸನಗಳು ಪತ್ತೆಯಾಗಿವೆ. ಫೆಬ್ರವರಿ 11 ರಂದು ಚೆನ್ನೈನಲ್ಲಿ ಆರಂಭವಾದ … Continued

ಏಕಾಏಕಿ ಬೈಕ್ ಶೋರೂಂ ಒಳಗೆ ನುಗ್ಗಿದ ಕಾಡುಕೋಣ ; ಬೈಕುಗಳು ಜಖಂ, ಗಾಜುಗಳು ಪುಡಿ ಪುಡಿ | ವೀಡಿಯೊ ವೈರಲ್

ಕಣ್ಣೂರು : ಕೇರಳದ ಕಣ್ಣೂರು ಜಿಲ್ಲೆಯ ಕೂತುಪರಂಬದಲ್ಲಿ ಭಾನುವಾರ ಬೆಳಿಗ್ಗೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಜನನಿಬಿಡ ಪ್ರದೇಶದ ಹೀರೋ ಹೋಂಡಾ ಬೈಕ್ ಶೋರೂಮ್‌ಗೆ ಕಾಡುಕೋಣವೊಂದು ಏಕಾಏಕಿ ನುಗ್ಗಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಫೆಬ್ರವರಿ 1ರ ಭಾನುವಾರ ಬೆಳಿಗ್ಗೆ ಸುಮಾರು 8:10ಕ್ಕೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಹತ್ತಿರದ ಕಣ್ಣವಂ … Continued

ಪತಿಯನ್ನು ಜೈಲಿಗೆ ಕಳುಹಿಸಿ ವಿಚ್ಛೇದನ ಪಡೆಯಲು ಪತ್ನಿಯಿಂದ ಪ್ರಿಯಕರನ ಜೊತೆ ಸೇರಿ ‘ಗೋಮಾಂಸ’ದ ಸಂಚು…!

ಲಕ್ನೋ: ಸಿನಿಮೀಯ ಶೈಲಿಯಲ್ಲಿ ಪತಿಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಪತ್ನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ನಡೆಸಿದ ಭೀಕರ ಸಂಚನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಗೋಮಾಂಸ ಸಾಗಾಟದ ಆರೋಪ ಹೊರಿಸಿ ಪತಿಯನ್ನು ಜೈಲಿಗೆ ಅಟ್ಟಲು ಸಂಚು ನಡೆಸಿದ ಪತ್ನಿಯ ಕೃತ್ಯ ಈಗ ಬೆಳಕಿಗೆ ಬಂದಿದೆ. ಜನವರಿ 14 ರಂದು  ಉತ್ತರ ಪ್ರದೇಶದ ಲಕ್ನೋದ ಕಾಕೋರಿ ಪ್ರದೇಶದಲ್ಲಿ ಬಜರಂಗದಳದ ಕಾರ್ಯಕರ್ತರು … Continued

ಮೊಟ್ಟೆ ಕರಿ ವಿಚಾರಕ್ಕೆ ಜಗಳ : ಗಂಡನ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ ಹೆಂಡತಿ…!

ಘಾಜಿಯಾಬಾದ್ : ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುವೆ ನಡೆದ ಜಗಳ ವಿಕೋಪಕ್ಕೆ ಹೋಗಿ, ಪತ್ನಿಯೇ ತನ್ನ ಗಂಡನ ನಾಲಿಗೆಯನ್ನು ಕಚ್ಚಿ ತುಂಡರಿಸಿದ ಭೀಕರ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನ ಬೇಗಮಾಬಾದ್ ಎಂಬ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆಯಿಂದಾಗಿ 32 ವರ್ಷದ ವಿಪಿನ್ ಎಂಬ ಯುವಕ ತನ್ನ ಮಾತು ಹಾಗೂ ನಾಲಿಗೆಯನ್ನು ಕಳೆದುಕೊಳ್ಳುವಂತಾಗಿದೆ. ಸೋಮವಾರ … Continued

ಮಾಘ ಮೇಳ : 40 ವರ್ಷದಿಂದ ಮುಳ್ಳಿನ ಹಾಸಿಗೆ ಮೇಲೆ ಮಲಗುತ್ತಿರುವ ‘ಕಾಂಟೇ ವಾಲೆ ಬಾಬಾ’ ವೀಡಿಯೊ ವೈರಲ್

 ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಪವಿತ್ರ ಮಾಘ ಮೇಳಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ದಿನನಿತ್ಯ ಲಕ್ಷಾಂತರ ಜನರು ಆಗಮಿಸುತ್ತಿದ್ದಾರೆ. 2025ರ ಮಹಾಕುಂಭದಂತೆಯೇ ಈ ವರ್ಷವೂ ಜನಜಂಗುಳಿ ಕಂಡುಬರುತ್ತಿದೆ. ಈ ನಡುವೆ, ಮೇಳದಲ್ಲಿರುವ ಒಬ್ಬರು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರೇ ‘ಕಾಂಟೇ ವಾಲೆ … Continued

ವೈದ್ಯಕೀಯ ಲೋಕಕ್ಕೆ ಅಚ್ಚರಿ…: ಕಳೆದ 50 ವರ್ಷಗಳಿಂದ ನಿದ್ದೆಯನ್ನೇ ಮಾಡಿಲ್ಲ ಈ ವ್ಯಕ್ತಿ…!

ವೈದ್ಯಕೀಯ ವಿಜ್ಞಾನದ ಪ್ರಕಾರ ಆರೋಗ್ಯವಂತ ಮನುಷ್ಯನಿಗೆ ದಿನಕ್ಕೆ ಕನಿಷ್ಠ 6 ರಿಂದ 8 ಗಂಟೆಗಳ ನಿದ್ರೆ ಅತ್ಯಗತ್ಯ. ನಿದ್ರೆಯಿಲ್ಲದಿದ್ದರೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದರೆ, ಮಧ್ಯಪ್ರದೇಶದ 75 ವರ್ಷದ ವೃದ್ಧರೊಬ್ಬರ ಪ್ರಕರಣವು ಈಗ ವೈದ್ಯಕೀಯ ಲೋಕವನ್ನೇ ಅಚ್ಚರಿಗೊಳಿಸಿದೆ.  ಮಧ್ಯಪ್ರದೇಶದ ರೇವಾ ಜಿಲ್ಲೆಯ ಚಾಣಕ್ಯಪುರಿ ಕಾಲೋನಿಯ ನಿವಾಸಿ ಮೋಹನಲಾಲ ದ್ವಿವೇದಿ … Continued