ತನ್ನ ಸಂಗಾತಿ ಸತ್ತ ನಂತರ ಎಬ್ಬಿಸಲು ಪ್ರಯತ್ನಿಸಿ, ತಬ್ಬಿಕೊಂಡು ದುಃಖಿಸಿದ ಭಾವುಕ ಆನೆಯ ಅಸಾಧಾರಣ ವೀಡಿಯೊ ವೈರಲ್‌ ; ಕಣ್ಣೀರು ತರಿಸುತ್ತೆ…!

ಸರ್ಕಸ್ ಆನೆಯೊಂದು ಬಹುಕಾಲದಿಂದ ತನ್ನ ಸಂಗಾತಿಯಾಗಿದ್ದ ಮತ್ತೊಂದು ಆನೆಯ ಸಾವಿಗೆ ದುಃಖಿಸುತ್ತಿರುವ ವೀಡಿಯೊ ವೈರಲ್ ಆದ ನಂತರ ಅದನ್ನು ನೋಡಿದ ಬಹುತೇಕರ ಕಣ್ಣಂಚಿನಲ್ಲಿ ನೀರು ಬಂದಿದೆ. ರಷ್ಯಾದ ಸರ್ಕಸ್‌ ಕಂಪನಿಯಲ್ಲಿ 25 ವರ್ಷಗಳಿಂದ ಜೊತೆಗಿದ್ದ ಜೆನ್ನಿ ಮತ್ತು ಮ್ಯಾಗ್ಡಾ ಎಂಬ ಎರಡು ಭಾರತೀಯ ಹೆಣ್ಣಾನೆಗಳು ಬೇರ್ಪಡಿಸಲಾಗದ ಅನುಬಂಧವನ್ನು ಹೊಂದಿದ್ದವು. ಸರ್ಕಸ್‌ ಕಂಪನಿಯಿಂದ ಪ್ರದರ್ಶನದಿಂದ ದೂರವಾಗಿ ನಿವೃತ್ತಿ … Continued

ವಿಶ್ವದ ಟಾಪ್ 10 ಸಂತೋಷದ ಮನಸ್ಥಿತಿಯ ಪ್ರಾಣಿಗಳು ಯಾವುವು; ಇಲ್ಲಿದೆ ಪಟ್ಟಿ…

ಬೃಹತ್ ಸಸ್ತನಿಗಳಿಂದ ಹಿಡಿದು ಸಣ್ಣ ಕೀಟಗಳವರೆಗೆ ಈ ಭೂಮಿಯು ಕೆಲವು ಆಕರ್ಷಕ ಜೀವಿಗಳಿಗೆ ನೆಲೆಯಾಗಿದೆ, ಭೂಮಿಯ ಮೇಲಿನ ಪ್ರತಿಯೊಂದು ಪ್ರಾಣಿ ಪ್ರಭೇದಗಳು ಬೇರೆಬೇರೆ ಗುಣಲಕ್ಷಣಗಳನ್ನು ಮತ್ತು ಮನೋಧರ್ಮವನ್ನು ಹೊಂದಿವೆ. ಒಂದೇ ಜಾತಿಯ ಪ್ರಾಣಿಗಳು ಸಹ ವಿಭಿನ್ನವಾಗಿ ವರ್ತಿಸಬಹುದು. ಕೆಲವು ಪ್ರಾಣಿಗಳು ಇತರರಿಗಿಂತ ಸ್ವಾಭಾವಿಕವಾಗಿ ಹೆಚ್ಚು ಆಕ್ರಮಣಕಾರಿಯಾಗಿದ್ದರೆ ಕೆಲವು ಪ್ರಾಣಿಗಳು ಸ್ವಾಭಾವಿಕವಾಗಿ ಶಾಂತ ಹಾಗೂ ಸಂತೋಷದ ಮನಸ್ಥಿತಿಯನ್ನು … Continued

ಹಾಸನ : ಕಾಡಾನೆ ದಾಳಿಗೆ ವೃದ್ಧ ಸಾವು; ಕೊಂದ ನಂತರ ಶವ ಮುಚ್ಚಿಟ್ಟು ಹೋದ ಆನೆ…!

ಹಾಸನ: ಕಾಡಾನೆಯೊಂದು (Elephant) ವೃದ್ಧನ ಮೇಲೆ ಏಕಾಏಕಿ ದಾಳಿ ನಡೆಸಿ ಕೊಂದು, ಶವದ ಮೇಲೆ ಕಾಫಿ ಗಿಡ ಮುಚ್ಚಿದ ಘಟನೆ ಆಲೂರು ತಾಲೂಕಿನ ಅಡಿಬೈಲು ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಕಾಡಾನೆ ದಾಳಿಗೆ ಬಲಿಯಾದ ವೃದ್ಧರನ್ನು ಪುಟ್ಟಯ್ಯ (78) ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ ಮಗ್ಗೆ ಗ್ರಾಮದಿಂದ ಅಡಿಬೈಲು ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಏಕಾಏಕಿ … Continued

ವೀಡಿಯೊ | ಆಹಾರ ಹುಡುಕಿಕೊಂಡು ಸೀದಾ ಮನೆಗೇ ನುಗ್ಗಿದ ಕಾಡಾನೆ ; ಮುಂದಾಗಿದ್ದೇನೆಂದರೆ….

ಕೊಯಮತ್ತೂರು : ತಮಿಳುನಾಡಿನ ಕೊಯಮತ್ತೂರಿನಲ್ಲಿ ಶನಿವಾರ (ಜನವರಿ 18) ರಾತ್ರಿ ಕಾಡಾನೆಯೊಂದು ಮನೆಯೊಂದಕ್ಕೆ ನುಗ್ಗಲು ಯತ್ನಿಸಿದ ಭಯಾನಕ ಘಟನೆ ನಡೆದಿದೆ. ಅನಿರೀಕ್ಷಿತ ಅತಿಥಿಯ ಭೇಟಿಯಿಂದ ಮನೆಯೊಳಗಿದ್ದ ಜನರು ಭಯಭೀತರಾಗಿದ್ದರು. ಈ ಘಟನೆಯನ್ನು ಮನೆಯವರೇ ವೀಡಿಯೊ ಮಾಡಿದ್ದು, ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದೃಷ್ಟವಶಾತ್ ಆನೆ ಮನೆಯೊಳಗೆ ನುಗ್ಗದ ಕಾರಣ ಯಾರಿಗೂ ಹಾನಿಯಾಗಿಲ್ಲ, ಬಾಗಿಲ ಬಳಿಯೇ … Continued

ಭಯಾನಕ ವೀಡಿಯೊ…| ಉತ್ಸವದಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯನ್ನು ಮೇಲಕ್ಕೆತ್ತಿ ಒಗೆದ ಕೋಪಗೊಂಡ ಆನೆ

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ಉತ್ಸವದ ವೇಳೆ ಆನೆಯೊಂದು ಕೋಪಗೊಂಡ ನಂತರ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಸೇರಿದಂತೆ ಕನಿಷ್ಠ 17 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ತಿರುರ್‌ನ ಪುತಿಯಂಗಡಿ ಉತ್ಸವದಲ್ಲಿ ಈ ಘಟನೆ ಸಂಭವಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಕಾರ್ಯಕ್ರಮದ ದೃಶ್ಯಗಳು ಐದು ಆನೆಗಳು ಉತ್ಸವದಲ್ಲಿ ಪಾಲ್ಗೊಂಡಿರುವುದನ್ನು ತೋರಿಸುತ್ತವೆ. ಆನೆಗಳನ್ನು ಅಲಂಕರಿಸಲಾಗಿದೆ. ಉತ್ಸವದಲ್ಲಿ … Continued

ವೀಡಿಯೊ…| ತನ್ನ ಸತ್ತ ಮರಿಯನ್ನು ಎಬ್ಬಿಸಲು ಹತಾಶ ಪ್ರಯತ್ನ ನಡೆಸಿದ ತಾಯಿ ಆನೆ

ದುಃಖಕ್ಕೆ ಯಾವುದೇ ಗಡಿ ಇಲ್ಲ, ಅದು ಕೇವಲ ಮಾನವರಿಗೆ ಹಾಗೂ ಸಾಕು ಪ್ರಾಣಿಗಳಿಗೆ ಮಾತ್ರ ಸೀಮಿತವಾಗಿಯೂ ಅಲ್ಲ. ಅದು ಎಲ್ಲ ಪ್ರಾಣಿಗಳಲ್ಲಿಯೂ ಕಂಡುಬರುತ್ತದೆ. ಈಗ ಅಂಥದ್ದೇ ಒಂದು ವೀಡಿಯೊವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಕಾಡಿನಲ್ಲಿ ಹೆಣ್ಣಾನೆಯೊಂದು ಆನೆಯೊಂದು ದುಃಖದಿಂದ ತನ್ನ ಸತ್ತ ಮರಿಯ ದೇಹವನ್ನು … Continued

ಸೆಲ್ಫಿ ತೆಗೆಯಲು ಹೋಗಿ ಕಾಡಾನೆಯಿಂದ ಸಾವಿಗೀಡಾದ ಯುವಕ…!

ಮುಂಬೈ : ಗುರುವಾರ (ಅಕ್ಟೋಬರ್ 24) ನಡೆದ ಅಹಿತಕರ ಘಟನೆಯಲ್ಲಿ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಮುಟ್ನೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ 24 ವರ್ಷದ ವ್ಯಕ್ತಿಯೊಬ್ಬರು ಆನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಡಾನೆ ದಾಳಿಯಿಂದ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ವ್ಯಕ್ತಿ ಸಮೀಪ ಹೋಗಿ ಆನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಆನೆ ಆತನ ಮೇಲೆ ದಾಳಿ … Continued

ಆಹಾರ ಅರಸಿ ನಾಡಿಗೆ ಬಂದ ಕಾಡಾನೆ ಕಂದಕಕ್ಕೆ ಬಿದ್ದು ಸಾವು

ಮೈಸೂರು: ನಾಡ ಹಬ್ಬ ದಸರಾ ಸಂದರ್ಭದಲ್ಲೇ ಕಾಡಾನೆಯೊಂದು ಕಂದಕಕ್ಕೆ ಬಿದ್ದು ಸಾವಿಗೀಡಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೆಲ್ಲುಪುರ ಗ್ರಾಮದ ಮಲ್ಲಹಳ್ಳಿ ಬಳಿ ನಡೆದಿದೆ ಎಂದು ವರದಿಯಾಗಿದೆ. ಮೃತಪಟ್ಟ ಆನೆಗೆ ಸುಮಾರು 40-೪೫ ವರ್ಷ ಆಗಿರಬಹುದು ಎಂದು ಹೇಳಲಾಗಿದೆ. ಆಹಾರ ಅರಸುತ್ತ ಬಂದ ಕಾಡಾನೆ ಗೊತ್ತಾಗದೆ ಕಂದಕಕ್ಕೆ ಬಿದ್ದಿದ್ದು, ಪರಿಣಾಮ ದಾರುಣವಾಗಿ ಮೃತಪಟ್ಟಿದೆ. ಮಲ್ಲಹಳ್ಳಿ … Continued

ವೀಡಿಯೊ..| ಅನಾರೋಗ್ಯ ಪೀಡಿತ ತನ್ನ ʼಕೇರ್‌ ಟೇಕರ್‌ʼ ನೋಡಲು ಆಸ್ಪತ್ರೆಗೆ ಬಂದ ಆನೆ : ಅದು ಮಂಡಿಯೂರಿ ತೋರಿದ ಪ್ರೀತಿ ಭಾವುಕರನ್ನಾಗಿಸದೇ ಇರದು

ಕೆಲವು ಪ್ರಾಣಿಗಳು ತುಂಬಾ ಸ್ನೇಹಪರವಾಗಿರುತ್ತವೆ. ಅವುಗಳಲ್ಲಿ ಆನೆಯೂ ಒಂದು. ಆನೆಗಳಿಗೆ ಸಂಬಂಧಿಸಿದ ಇಂತಹ ಹಲವು ವೀಡಿಯೋಗಳನ್ನು ನೀವು ಇಂಟರ್ನೆಟ್‌ನಲ್ಲಿ ನೋಡಿರಬೇಕು, ಅದರಲ್ಲಿ ಕೆಲವೊಮ್ಮೆ ಅವುಗಳ ತುಂಟಾಟ ಮತ್ತು ಕೆಲವೊಮ್ಮೆ ಅವುಗಳ ಮುದ್ದಾದ ನಡೆಗಳು ಮನ ಗೆಲ್ಲುತ್ತವೆ. ಆನೆಗಳಿಗೆ ಸಂಬಂಧಿಸಿದ ಇಂಥದ್ದೇ ವೀಡಿಯೊವೊದು ಜನರ ಗಮನ ಸೆಳೆಯುತ್ತಿದ್ದು, ದೊಡ್ಡ ಆನೆಯೊಂದು ಜೀವಮಾನವಿಡೀ ತನ್ನನ್ನು ನೋಡಿಕೊಳ್ಳುತ್ತಿದ್ದ ಈಗ ಸಾಯುವ … Continued

ವೀಡಿಯೊ…| ದೇವಾಲಯದ ಕಾರ್ಯಕ್ರಮದ ವೇಳೆ ಮತ್ತೊಂದು ಆನೆಯ ಮೇಲೆ ದಾಳಿ ಮಾಡಿದ ದೇವರನ್ನು ಹೊತ್ತೊಯ್ಯುತ್ತಿದ್ದ ಆನೆ : ಹಲವರಿಗೆ ಗಾಯ

ತಿರುವನಂತಪುರಂ: ಕೇರಳದ ತರಕ್ಕಲ್‌ನಲ್ಲಿ ದೇವಸ್ಥಾನದ ಕಾರ್ಯಕ್ರಮದ ವೇಳೆ ದೇವರ ಮೂರ್ತಿಯನ್ನು ಹೊತ್ತ ಆನೆಯೊಂದು ಮತ್ತೊಂದು ಆನೆಯ ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ. ಘಟನೆಯ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಶುಕ್ರವಾರ ರಾತ್ರಿ 10:30 ಕ್ಕೆ ಗುರುವಾಯೂರ್ ರವಿಕೃಷ್ಣನ್ ಎಂಬ ಆನೆ, ‘ಅಮ್ಮತಿರುವಾಡಿ’ ದೇವರನ್ನು ಹೊತ್ತೊಯ್ಯುತ್ತಿದ್ದಾಗ, ನಿಯಂತ್ರಣ ಕಳೆದುಕೊಂಡು ದೇವರಮೂರ್ತಿ ಹೊತ್ತೊಯ್ಯುತ್ತಿದ್ದ ಪುತ್ತುಪಲ್ಲಿ … Continued