ವಿಡಿಯೋ | ಕಾರವಾರದಿಂದ ಹೊರಟಿದ್ದ ತೈಲ ಸಾಗಣೆ ಹಡಗಿಗೆ ಒಮಾನ್‌ ಕರಾವಳಿಯಲ್ಲಿ ಹೊತ್ತಿಕೊಂಡ ಬೆಂಕಿ

ಮಸ್ಕತ್ (ಓಮನ್): ಕಾರವಾರದಿಂದ ಹೊರಟಿದ್ದ ಓಮನ್ ಕರಾವಳಿಯ ಸಮುದ್ರ ಪ್ರದೇಶದಲ್ಲಿ ಹೋಗುತ್ತಿದ್ದ  ‘ಮಾರಿವೆಕ್ಸ್’ (Marivex) ಎಂಬ ತೈಲ ಸಾಗಣೆ ಹಡಗಿನಲ್ಲಿ (ಆಯಿಲ್ ಟ್ಯಾಂಕರ್) ಸೋಮವಾರ ಭಾರಿ ಅಗ್ನಿ ಅವಘಡ ಸಂಭವಿಸಿದೆ ಎಂದುವರದಿಯಾಗಿದೆ.  ಅದೃಷ್ಟವಶಾತ್, ಹಡಗಿನಲ್ಲಿದ್ದ ಎಲ್ಲಾ 24 ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ. ಇರಾನ್ ಮತ್ತು ಇಸ್ರೇಲ್ ಗಳು ಕದನ ವಿರಾಮವನ್ನು ಉಲ್ಲಂಘಿಸಿ ಮತ್ತೆ … Continued

ಗೋವಾ ಕರಾವಳಿಯಲ್ಲಿ ಕಾರವಾರದ ಬೋಟ್ ಮುಳುಗಡೆ : 22 ಮೀನುಗಾರರ ರಕ್ಷಣೆ

ಬೆತುಲ್ (ಗೋವಾ): ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಕಾರವಾರ ಮೂಲದ ಪರ್ಶಿಯನ್ ಮಾದರಿಯ ಮೀನುಗಾರಿಕಾ ಬೋಟ್ ಗೋವಾದ ಬೆತುಲ್ ಕರಾವಳಿ ಪ್ರದೇಶದಲ್ಲಿ ಮುಳುಗಡೆಯಾಗಿದೆ. ಬೋಟ್‌ನಲ್ಲಿದ್ದ ಎಲ್ಲಾ 22 ಮೀನುಗಾರರನ್ನು ಹತ್ತಿರದಲ್ಲಿದ್ದ ಇತರ ಮೀನುಗಾರರು ರಕ್ಷಿಸಿದ್ದು, ಭಾರಿ ದುರಂತವೊಂದು ತಪ್ಪಿದಂತಾಗಿದೆ. ಕಾರವಾರದ ಮುದಗಾ ನಿವಾಸಿ ದಿನೇಶ ಕಾಂಚನ್ ಎಂಬವರಿಗೆ ಸೇರಿದ “ಶ್ರೀ ಅಮ್ಮ” ಹೆಸರಿನ ಬೋಟ್ ಸುಮಾರು … Continued

ಹಬ್ಬು ಸಮುದಾಯ ಒಂದು ಜನಾಂಗೀಯ ಅಧ್ಯಯನ ಕೃತಿ ಬಿಡುಗಡೆ

ಕಾರವಾರ: ಅನ್ನ ಹಾಗೂ ಅಕ್ಷರ ತೋರಿಸಿದ ಹಬ್ಬು ಬ್ರಾಹ್ಮಣರ ಕುರಿತು ಎಲ್ಲ ದಾಖಲೆ ಪರಿಶೀಲಿಸಿ ನಮ್ಮಲ್ಲಿ ಯಾವುದೆ ಗೊಂದಲ ಇರದ ಹಾಗೆ ಆರ್.ಎಸ್. ಹಬ್ಬು ಕೃತಿ ನೀಡಿದ್ದಾರೆ ಎಂದು ಪರಿಸರ ತಜ್ಞ ಶಿವಾನಂದ ಕಳವೆ ಅಭಿಪ್ರಾಯಪಟ್ಟರು. ನಗರದ ರಾಘವೇಂದ್ರ ಮಠದ ಸಭಾಭವನದಲ್ಲಿ ಆರ್.ಎಸ್.ಹಬ್ಬು ಅವರ ʼಹಬ್ಬು ಸಮುದಾಯʼ ಒಂದು ಜನಾಂಗೀಯ ಅಧ್ಯಯನ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ … Continued

ಭಾರತದ ನೌಕಾಪಡೆಗೆ ಮತ್ತಷ್ಟು ಬಲ: ಕಾರವಾರದಲ್ಲಿ ‘ಕಲ್ವರಿ’ ಜಲಾಂತರ್ಗಾಮಿಗಳ ಅತ್ಯಾಧುನಿಕ ನಿರ್ವಹಣಾ ಘಟಕ ಉದ್ಘಾಟನೆ

ಕಾರವಾರ : ಕಲ್ವರಿ ದರ್ಜೆಯ (Kalvari-class) ಜಲಾಂತರ್ಗಾಮಿ ನೌಕೆಗಳಲ್ಲಿ ಅಳವಡಿಸಲಾಗಿರುವ ಅತ್ಯಂತ ನಿರ್ಣಾಯಕ ‘ನ್ಯೂಮ್ಯಾಟಿಕ್’ (Pneumatic) ವ್ಯವಸ್ಥೆಗಳ ಪರೀಕ್ಷೆ, ನಿರ್ವಹಣೆ ಮತ್ತು ದುರಸ್ತಿಗಾಗಿ ದೇಶದ ಮೊದಲ ವಿಶೇಷ ಘಟಕವನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾ ನೆಲೆಯಲ್ಲಿ ಉದ್ಘಾಟಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಕಾರವಾರದ ಕದಂಬ ನೌಕಾ ನೆಲಯ ತಾಂತ್ರಿಕ ವರ್ಕ್‌ಶಾಪ್‌ನಲ್ಲಿ ನಿಯೋಜಿಸಲಾಗಿದೆ … Continued

ವೀಡಿಯೊಗಳು | ಕಾರವಾರ : ಶಾಲಾ ಕೊಠಡಿಯೊಳಗೆ ಬಂದ ಕಾಳಿಂಗ ಸರ್ಪ…!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಗುಡ್ಡಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ತರಗತಿ ಕೊಠಡಿಯಲ್ಲಿ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿದ್ದು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ತರಗತಿಯಲ್ಲಿ ಬೃಹತ್‌ ಹಾವಿನ ಆರ್ಭಟಕ್ಕೆ  ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ತಕ್ಷಣ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಗೆ ಕಳುಹಿಸಿದ … Continued

ಕಾರವಾರ : ಸಚಿವ-ಶಾಸಕರ ನಡುವೆ ವಾಗ್ವಾದ ; ಕೆಡಿಪಿ ಸಭೆಯಿಂದ ಹೊರನಡೆದ ಸತೀಶ ಸೈಲ್

ಕಾರವಾರ: ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಸಭೆಯಲ್ಲಿ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮತ್ತು ಕಾಂಗ್ರೆಸ್‌ ಶಾಸಕ ಸತೀಶ ಸೈಲ್ ನಡುವೆ ನಡೆದ ವಾಗ್ವಾದ ನಡೆದು, ಸೈಲ್ ಸಭೆಯ ಮಧ್ಯದಲ್ಲೇ ಹೊರನಡೆದ ಘಟನೆ ನಡೆದಿದೆ. ಇಬ್ಬರೂ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು ಎಂಬುದು ಗಮನಿಸಬೇಕಾದ ಸಂಗತಿ. ಜಿಲ್ಲಾ ಉಸ್ತುವಾರಿ … Continued

ಕೈಗಾ ಅಣು ವಿದ್ಯುತ್ ಸ್ಥಾವರ: 5, 6ನೇ ಘಟಕಗಳ ಕಾಮಗಾರಿಗೆ ಚಾಲನೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕಗಳ ನಿರ್ಮಾಣದ ಪ್ರಮುಖ ಹಂತವಾದ ‘ಕಾಂಕ್ರೀಟಿಂಗ್’ ಕಾರ್ಯಕ್ಕೆ ಭಾರತೀಯ ಅಣುಶಕ್ತಿ ಆಯೋಗದ ಅಧ್ಯಕ್ಷ ಅಜಿತಕುಮಾರ ಮೊಹಾಂತಿ ಭಾನುವಾರ ಅಧಿಕೃತವಾಗಿ ಚಾಲನೆ ನೀಡಿದರು. ದೇಶೀಯ ತಂತ್ರಜ್ಞಾನದ PHW (Pressurised Heavy Water) ಮಾದರಿಯ ರಿಯಾಕ್ಟರ್‌ಗಳನ್ನು ಇಲ್ಲಿ ಬಳಸಲಾಗುತ್ತಿದೆ. ಈ ತಂತ್ರಜ್ಞಾನದ … Continued

ಕಾರವಾರ : ಒಂದೇ ಸ್ಥಳದಲ್ಲಿ 6 ಹೆಬ್ಬಾವುಗಳು ಪತ್ತೆ…!

ಕಾರವಾರ : ನಗರದ ಕಠಿಣಕೋಣ ಭಾಗದಲ್ಲಿ ಭಾನುವಾರ ಅಪರೂಪದ ಘಟನೆಯೊಂದು ನಡೆದಿದ್ದು, ಇಲ್ಲಿನ ನಿವಾಸಿಯೊಬ್ಬರ ಮನೆಯ ಆವರಣದಲ್ಲಿ ಒಟ್ಟಿಗೆ ಆರು ಹೆಬ್ಬಾವುಗಳು ಪತ್ತೆಯಾಗಿವೆ. ವಿಜಯ ತಳೇಕರ ಎಂಬವರ ಮನೆಯ ಆವರಣದಲ್ಲಿ ಕಾಂಕ್ರೀಟ್ ಕಮಾನು ನಿರ್ಮಾಣಕ್ಕಾಗಿ ಇರಿಸಲಾಗಿದ್ದ ಕಬ್ಬಿಣದ ಸಾಮಗ್ರಿಗಳ ಮಧ್ಯೆ ಈ ಬೃಹತ್ ಹಾವುಗಳು ಅಡಗಿಕೊಂಡಿದ್ದವು. ಒಂದೇ ಕಡೆ ಇಷ್ಟೊಂದು ಸಂಖ್ಯೆಯ ಹೆಬ್ಬಾವುಗಳನ್ನು ಕಂಡ ಸ್ಥಳೀಯರು … Continued

ಕಾರವಾರ : ಸಮುದ್ರ ಸ್ನಾನ ಮಾಡುವಾಗ ಮುಳುಗಿ ಬಾಲಕ ಸಾವು

ಕಾರವಾರ: ಶಿವರಾತ್ರಿ ಹಿನ್ನೆಲೆಯಲ್ಲಿ ಸಮುದ್ರ ಸ್ನಾನಕ್ಕೆ ಇಳಿದ ಬಾಲಕನೊಬ್ಬ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ಬಳಿ ಸಂಭವಿಸಿದೆ ಎಂದು ವರದಿಯಾಗಿದೆ. ಗಾಂವಗೇರಿಯ ಯಶ್ (17) ಎಂಬಾತ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಬಾಲಕನಾಗಿದ್ದಾನೆ. ಶಿವರಾತ್ರಿ ಹಿನ್ನೆಲೆಯನ್ನು ಮಾಜಾಳಿ ಸಮುದ್ರಕ್ಕೆ ರಾಮನಾಥ ಪರಿವಾರ ದೇವರು ಸೇರುದಂತೆ ಸುತ್ತಮುತ್ತಲಿನ ದೇವರನ್ನು ಪಲ್ಲಕ್ಕಿಯಲ್ಲಿ ತಂದು … Continued

ಫಾರ್ಮಾಸಿಸ್ಟ್ ಆತ್ಮಹತ್ಯೆ ಪ್ರಕರಣ: ವೀಡಿಯೊ ವೈರಲ್ ಮಾಡಿದ ಮೂವರ ಬಂಧನ

ಕಾರವಾರ:  ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅವರ್ಸಾದಲ್ಲಿ ನಡೆದ ಫಾರ್ಮಾಸಿಸ್ಟ್ ರಾಜೀವ ಪಿಕ್ಳೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್ ಮಾಡಿದ ಆರೋಪದ ಮೇಲೆ ಅಂಕೋಲಾ ಪೊಲೀಸರು ಮೂವರನ್ನು ಬಂಧಿಸಿದ್ದಾರೆಎಂದು ವರದಿಯಾಗಿದೆ. ಕಾರವಾರ ತಾಲೂಕಿನ ವೈಲವಾಡ ಗ್ರಾಮದ ಸುಭಾಷ, ಹರಿಶ್ಚಂದ್ರ ಮತ್ತು ಅನಿಲ ಎಂಬವರು ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಕಾರವಾರದ … Continued