329 ಜೀವ ಬಲಿ ಪಡೆದ ಕನಿಷ್ಕ ವಿಮಾನ ದುರಂತ : 40 ವರ್ಷಗಳ ಬಳಿಕ ಇದಕ್ಕೆ ಖಲಿಸ್ತಾನಿ ಉಗ್ರರೇ ಕಾರಣ ಎಂದು ಒಪ್ಪಿದ ಕೆನಡಾ

 ಒಟ್ಟಾವಾ : 1985ರಲ್ಲಿ 329 ಮಂದಿಯನ್ನು ಬಲಿ ಪಡೆದ ಐರ್ ಇಂಡಿಯಾ ಫ್ಲೈಟ್ 182 (ಎಂಪರರ್ ಕನಿಷ್ಕ) ವಿಮಾನ ಸ್ಫೋಟ ಪ್ರಕರಣದಲ್ಲಿ ಕೆನಡಾ ಮೂಲದ ಖಲಿಸ್ತಾನಿ ಉಗ್ರರೇ ಹೊಣೆಗಾರರು ಎಂದು ಕೆನಡಾದ ಭದ್ರತಾ ಗುಪ್ತಚರ ಸಂಸ್ಥೆ (CSIS) ಮೊದಲ ಬಾರಿಗೆ ಅಧಿಕೃತವಾಗಿ ಒಪ್ಪಿಕೊಂಡಿದೆ. ಈ ದಾಳಿಯಲ್ಲಿ ಮೃತಪಟ್ಟವರಲ್ಲಿ ಬಹುತೇಕರು ಭಾರತೀಯ ಮೂಲದ ಕೆನಡಾ ನಾಗರಿಕರಾಗಿದ್ದು, ಅಟ್ಲಾಂಟಿಕ್ … Continued

ವಿಶ್ವದ ಎಲ್ಲ ದೇಶಗಳಿಗೂ ಭೇಟಿ ನೀಡಿ ದಾಖಲೆ ಬರೆದ ಬೆಂಗಳೂರು ಮೂಲದ ಗಿಟಾರ್‌ ವಾದಕ ಬೆನ್ನಿ ಪ್ರಸಾದ…!

ಬೆಂಗಳೂರು ಮೂಲದ ಹೆಸರಾಂತ ಗಿಟಾರ್ ವಾದಕ ಮತ್ತು ಜಾಗತಿಕ ಪ್ರವಾಸಿ ಬೆನ್ನಿ ಪ್ರಸಾದ (Benny Prasad) ಅವರು ತಮ್ಮ ಜೀವಮಾನದ ಅಪರೂಪದ ಪ್ರವಾಸದ ದಾಖಲೆಯನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಜಗತ್ತಿನ ಒಟ್ಟು 245 ದೇಶ ಹಾಗೂ ಪ್ರಾಂತ್ಯಗಳಿಗೆ ಭೇಟಿ ನೀಡಿರುವ ಅವರು, ಅದಕ್ಕೆ ಪುರಾವೆಯಾಗಿ ವೀಸಾ ಮತ್ತು ಸೀಲ್‌ಗಳಿಂದ ತುಂಬಿ … Continued

ಕೇಂದ್ರದಿಂದ ಗುಡ್‌ನ್ಯೂಸ್ ; ವಾಣಿಜ್ಯ ಬಳಕೆ ಎಲ್‌ಪಿಜಿ ಮೇಲಿನ ನಿರ್ಬಂಧ ತೆಗೆದುಹಾಕಿದ ಸರ್ಕಾರ ; ಪೂರೈಕೆ ಸಹಜ ಸ್ಥಿತಿಗೆ

ನವದೆಹಲಿ: ಇರಾನ್‌-ಅಮೆರಿಕ ಸಂಘರ್ಷದ ಕಾರಣ ತಲೆದೋರಿದ್ದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ (ಅಡುಗೆ ಅನಿಲ) ಮೇಲೆ ಹೇರಲಾಗಿದ್ದ ಎಲ್ಲಾ ನಿರ್ಬಂಧಗಳನ್ನು ಕೇಂದ್ರ ಸರ್ಕಾರವು ಗುರುವಾರ ತೆಗೆದುಹಾಕಿದೆ. ದೇಶೀಯ ಉತ್ಪಾದನೆಯಲ್ಲಿನ ಸುಧಾರಣೆ ಹಾಗೂ ಆಮದು ಮಾಡಿಕೊಳ್ಳಲಾದ ಎಲ್‌ಪಿಜಿ ಹೊತ್ತ ಹಡಗುಗಳು ಶೀಘ್ರದಲ್ಲೇ ಭಾರತಕ್ಕೆ ತಲುಪಲಿರುವ ಹಿನ್ನೆಲೆಯಲ್ಲಿ, ವಾಣಿಜ್ಯ ಎಲ್‌ಪಿಜಿ ಪೂರೈಕೆಯನ್ನು ಇರಾನ್‌ ಯುದ್ಧದ ಮೊದಲಿಗೆ ಇದ್ದ … Continued

ಪಾಸ್‌ಪೋರ್ಟ್‌ ಪೌರತ್ವದ ದಾಖಲೆಯಲ್ಲ : ವಿದೇಶಾಂಗ ಸಚಿವಾಲಯ ಸ್ಪಷ್ಟನೆ

ನವದೆಹಲಿ: ಪಾಸ್‌ಪೋರ್ಟ್ ಅನ್ನು ಪೌರತ್ವದ ದೃಢವಾದ ಸಾಕ್ಷ್ಯವೆಂದು ಪರಿಗಣಿಸುವ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ಗೊಂದಲದ ನಡುವೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮಹತ್ವದ ಸ್ಪಷ್ಟನೆ ನೀಡಿದೆ. ಭಾರತೀಯ ಪಾಸ್‌ಪೋರ್ಟ್ ಅನ್ನು ಕೇವಲ ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ಬಳಸುವ ದಾಖಲೆಯಾಗಿ ಪರಿಗಣಿಸಬೇಕು; ಅದನ್ನು ಭಾರತೀಯ ಪೌರತ್ವದ ಅಂತಿಮ ಮತ್ತು ನಿರ್ಣಾಯಕ ದಾಖಲಯೆಂದು ಪರಿಗಣಿಸಬಾರದು ಎಂದು ಸಚಿವಾಲಯ ತಿಳಿಸಿದೆ. ಭಾರತದ … Continued

ಇರಾನ್ ಸುಪ್ರೀಂ ಲೀಡರ್ ಖಮೇನಿ ಅಂತ್ಯಕ್ರಿಯೆಗೆ ಪ್ರಧಾನಿ ಮೋದಿಗೆ ಅಧಿಕೃತ ಆಹ್ವಾನ ನೀಡಿದ ಅಧ್ಯಕ್ಷ ಪೆಜೆಶ್ಕಿಯಾನ್

ತೆಹ್ರಾನ್/ನವದೆಹಲಿ: ಕಳೆದ ಫೆಬ್ರವರಿ 28 ರಂದು ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಹತ್ಯೆಯಾಗಿದ್ದ ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಸಯ್ಯದ್ ಅಲಿ ಖಮೇನಿ ಅವರ ಸರ್ಕಾರಿ ಅಂತ್ಯಸಂಸ್ಕಾರ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧಿಕೃತ ಆಹ್ವಾನ ನೀಡಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿದ್ದ ತೀವ್ರ ಸಂಘರ್ಷದ ಕಾರಣದಿಂದಾಗಿ, … Continued

ಟ್ರಂಪ್ ಮೆಚ್ಚಿದ ಇಬ್ಬರು ಜಾಗತಿಕ ನಾಯಕರು ಯಾರು ? : ಒಬ್ಬರು ಪ್ರಧಾನಿ ಮೋದಿ, ಮತ್ತೊಬ್ಬರು….?

ಎವಿಯನ್ (ಫ್ರಾನ್ಸ್) : ಫ್ರಾನ್ಸ್‌ನಲ್ಲಿ ನಡೆದ ಜಿ-7 (G7) ಶೃಂಗಸಭೆಯ ಸಂದರ್ಭದಲ್ಲಿ ಜಾಗತಿಕ ನಾಯಕತ್ವ ಮತ್ತು ಅಂತಾರಾಷ್ಟ್ರೀಯ ಪ್ರಭಾವದ ಕುರಿತು ನಡೆದ ಚರ್ಚೆಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಜಾಗತಿಕ ನಾಯಕರಲ್ಲಿ ತಾವು ಅತ್ಯಂತ ಹೆಚ್ಚು ಗೌರವಿಸುವ ಮತ್ತು ಇಷ್ಟಪಡುವ ನಾಯಕರ ಪಟ್ಟಿಯಲ್ಲಿ … Continued

ಮುಂಗಾರು ಮಳೆ ತಡೆದದ್ದು ಬರೀ ‘ಎಲ್ ನಿನೊ’ ಮಾತ್ರವಲ್ಲ ; ಇತರ 5 ಜಾಗತಿಕ ಹವಾಮಾನ ವೈಪರೀತ್ಯಗಳೂ ಕಾರಣ…!

ನವದೆಹಲಿ : ಜೂನ್ 4 ರಂದು ಭಾರತಕ್ಕೆ ಸಕಾಲದಲ್ಲಿ ಆಗಮಿಸಿದ್ದ ನೈಋತ್ಯ ಮುಂಗಾರು ಮಾರುತಗಳು ಈಗ ದಿಢೀರನೆ ಸ್ಥಗಿತಗೊಂಡಿವೆ. ಆರಂಭದಲ್ಲಿ ಚುರುಕಾಗಿದ್ದ ಮುಂಗಾರುಈಗ ಸಂಪೂರ್ಣ ಕುಂಠಿತಗೊಂಡಿದ್ದು, ದೇಶಾದ್ಯಂತ ತೀವ್ರ ಮಳೆ ಕೊರತೆ ಎದುರಾಗಿದೆ. ಜೂನ್ 4 ರಿಂದ ಜೂನ್ 18 ರವರೆಗಿನ ಅವಧಿಯಲ್ಲಿ ದೇಶದಲ್ಲಿ ಶೇಕಡಾ 41 ರಷ್ಟು ಮಳೆ ಕೊರತೆಯಾಗಿದೆ ಎಂದು ಭಾರತೀಯ ಹವಾಮಾನ … Continued

ವಿಡಿಯೋ | ಮೋದಿ ಪ್ರಧಾನಿಯಾಗಿದ್ದಾಗ ಯಾರಾದ್ರೂ ಭಾರತದ ಮೇಲೆ ದಾಳಿ ಮಾಡಿದ್ರೆ……’: ಟ್ರಂಪ್ ಉತ್ತರಕ್ಕೆ ಜಾಗತಿಕ ಸಂಚಲನ

ಎವಿಯನ್ (ಫ್ರಾನ್ಸ್): ಅಮೆರಿಕ ಮತ್ತು ಭಾರತದ ನಡುವೆ ಯಾವುದೇ ಔಪಚಾರಿಕ ರಕ್ಷಣಾ ಒಪ್ಪಂದವಿಲ್ಲದಿದ್ದರೂ, ಸಂಕಷ್ಟದ ಸಮಯದಲ್ಲಿ ಅಮೆರಿಕ ಯಾವಾಗಲೂ ನವದೆಹಲಿಯ ಬೆಂಬಲಕ್ಕೆ ನಿಲ್ಲಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಉಭಯ ದೇಶಗಳ ರಕ್ಷಣಾ ಬಾಂಧವ್ಯದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ನಮ್ಮ ನಡುವಿನ ಸಂಬಂಧ ಅತ್ಯುತ್ತಮವಾಗಿದೆ. ಭಾರತದೊಂದಿಗೆ ನಮ್ಮದು ಯಾವುದೇ ಔಪಚಾರಿಕ … Continued

ಭಾರತದ ಆಕಾಶದಲ್ಲಿಲ್ಲ ಮಳೆ ತರುವ ಮೋಡಗಳು ; ಆತಂಕಕಾರಿ ವಾಸ್ತವ ಬಿಂಬಿಸಿದ 3 ಉಪಗ್ರಹಗಳ ಚಿತ್ರಗಳು ; ಇದಕ್ಕೆ ಕಾರಣಗಳೇನು?

ನವದೆಹಲಿ: ದಕ್ಷಿಣ ಮತ್ತು ಮಧ್ಯ ಭಾರತದ ಭಾಗಗಳಿಗೆ ಪ್ರವೇಶಿಸಿದ ಬೆನ್ನಲ್ಲೇ ನೈಋತ್ಯ ಮುಂಗಾರು ಮಳೆ ಆರ್ಭಟ ತೀವ್ರವಾಗಿ ಕ್ಷೀಣಿಸಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಅಂಕಿ-ಅಂಶಗಳ ಪ್ರಕಾರ, ಜೂನ್ 4 ರಿಂದ ಜೂನ್ 15 ರ ನಡುವಿನ ಅವಧಿಯಲ್ಲಿ ದೇಶದಲ್ಲಿ ಕೇವಲ 19.2 ಮಿಮೀ ಮಳೆಯಾಗಿದೆ. ಈ ಅವಧಿಯಲ್ಲಿ ವಾಡಿಕೆ ಮಳೆಯು 53.7 ಮಿಮೀ … Continued

ಆಪರೇಷನ್ ಸಿಂಧೂರ ; ಪಾಕ್‌ಗೆ ಬೆಂಬಲಿಸಿದ ಟರ್ಕಿ : ಭಾರತದಿಂದ ಹೊರದಬ್ಬಿದ ಒಂದೇ ದಿನದಲ್ಲಿ ಟರ್ಕಿ ಕಂಪನಿಗೆ ₹4700 ಕೋಟಿ ನಷ್ಟ !

ನವದೆಹಲಿ : ಟರ್ಕಿಯ ವಿಮಾನಯಾನ ಸೇವಾ ಸಂಸ್ಥೆಯಾದ ‘ಸೆಲೆಬಿ ಏವಿಯೇಷನ್’ (Celebi Aviation) ಭಾರತದ ವಿಮಾನ ನಿಲ್ದಾಣಗಳಿಂದ ಹೊರಬಿದ್ದು ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ. ಭಾರತ-ಪಾಕಿಸ್ತಾನ ನಡುವಿನ ‘ಆಪರೇಷನ್ ಸಿಂಧೂರ’ ಸೇನಾ ಸಂಘರ್ಷದ ವೇಳೆ ಪಾಕಿಸ್ತಾನಕ್ಕೆ ಟರ್ಕಿ ಸೇನಾ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಈ ಕ್ರಮ ಕೈಗೊಂಡಿತ್ತು. ಇದೀಗ ಈ ಕುರಿತು … Continued