ವಿಡಿಯೋ | ಅಸ್ತಿತ್ವದಲ್ಲೇ ಇಲ್ಲದ ಭಾರತದ ವಾಯುನೆಲೆಗಳ ಮೇಲೆ ದಾಳಿ ಮಾಡಿದ್ದಾಗಿ ಬಡಾಯಿ ಕೊಚ್ಚಿಕೊಂಡ ಪಾಕ್ ಸೇನಾಧಿಕಾರಿ…!

ಕಳೆದ ವರ್ಷ ನಡೆದ ಪಹಲ್ಗಾಮ್ ಭಯೋತ್ಪಾದನಾ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ತೀವ್ರಗೊಂಡಿತ್ತು. ಭಾರತದ ‘ಆಪರೇಷನ್ ಸಿಂಧೂರ’ಕ್ಕೆ ಪ್ರತಿಯಾಗಿ ಪಾಕಿಸ್ತಾನವು ಭಾರತದ ನಗರಗಳು ಮತ್ತು ರಕ್ಷಣಾ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಸರಣಿ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ನಡೆಸಿತ್ತು. ಪಾಕಿಸ್ತಾನದ ‘ಆಪರೇಷನ್ ಬುನ್ಯಾನ್ ಉಲ್ ಮರ್ಸೂಸ್’ ಹೆಸರಿನ ಸೇನಾ ಕಾರ್ಯಾಚರಣೆಯ ಭಾಗವಾಗಿ ಜಮ್ಮು … Continued

ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್-ಏಕದಿನ ಸರಣಿಗೆ ಭಾರತ ತಂಡ ಪ್ರಕಟ ; ಶುಭಮನ್‌ ಗಿಲ್ ನಾಯಕ

ಮುಂಬೈ: ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧದ ಮುಂಬರುವ ಏಕೈಕ ಟೆಸ್ಟ್ ಹಾಗೂ ಮೂರು ಪಂದ್ಯಗಳ ಏಕದಿನ (ODI) ಸರಣಿಗೆ ಬಿಸಿಸಿಐ (BCCI) ಆಯ್ಕೆ ಸಮಿತಿಯು ಭಾರತ ತಂಡವನ್ನು ಪ್ರಕಟಿಸಿದೆ. ಅಜಿತ್ ಅಗರ್ಕರ ನೇತೃತ್ವದ ಆಯ್ಕೆ ಸಮಿತಿಯು ಯುವ ಬ್ಯಾಟರ್ ಶುಭಮನ್ ಗಿಲ್ ಅವರಿಗೆ ಎರಡೂ ಸರಣಿಗಳಲ್ಲಿ ನಾಯಕತ್ವದ ದೊಡ್ಡ ಜವಾಬ್ದಾರಿ ನೀಡಿದೆ. ಹೊಸ ಮುಖಗಳಿಗೆ ಮನ್ನಣೆ ಸಿಕ್ಕಿರುವುದು … Continued

ವಿಡಿಯೋ..| ಭಾರತದ ಮೊದಲ ಬುಲೆಟ್ ರೈಲು ಹೇಗೆ ಕಾಣುತ್ತದೆ ಗೊತ್ತಾ? ಬುಲೆಟ್‌ ರೈಲಿನ ಫಸ್ಟ್‌ ಲುಕ್ ಅನಾವರಣ…!

ನವದೆಹಲಿ: ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಮುಂಬೈ-ಅಹಮದಾಬಾದ್ ಬುಲೆಟ್ ರೈಲು’ ಯೋಜನೆಯ ಮೊದಲ ಲುಕ್ (First Look) ಅನಾವರಣಗೊಂಡಿದೆ. ನವದೆಹಲಿಯಲ್ಲಿರುವ ರೈಲ್ವೆ ಸಚಿವಾಲಯದ ಕಟ್ಟಡದಲ್ಲಿ ದೇಶದ ಈ ಮೊದಲ ಹೈಸ್ಪೀಡ್ ರೈಲಿನ ಮಾದರಿ ಚಿತ್ರವನ್ನು ಪ್ರದರ್ಶಿಸಲಾಗಿದೆ. ರೈಲ್ವೆ ಸಚಿವಾಲಯದ ಕಟ್ಟಡದ ‘ಗೇಟ್ ಸಂಖ್ಯೆ 4’ ರಲ್ಲಿ ಈ ಹೈಸ್ಪೀಡ್ ರೈಲಿನ ಆಕರ್ಷಕ ಚಿತ್ರವನ್ನು ಅಳವಡಿಸಲಾಗಿದೆ. ಈ … Continued

1000 ವರ್ಷಗಳ ಹಳೆಯ ಚೋಳರ ಕಾಲದ ತಾಮ್ರದ ಶಾಸನಗಳನ್ನು ಭಾರತಕ್ಕೆ ಮರಳಿ ನೀಡಿದ ನೆದರ್ಲ್ಯಾಂಡ್ಸ್

ನವದೆಹಲಿ/ಆಮ್ಸ್ಟರ್‌ಡ್ಯಾಮ್: ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಮರಳಿ ತರುವ ನಿಟ್ಟಿನಲ್ಲಿ ಮತ್ತೊಂದು ಐತಿಹಾಸಿಕ ಯಶಸ್ಸು ಸಿಕ್ಕಿದೆ. ನೆದರ್ಲ್ಯಾಂಡ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ, 11ನೇ ಶತಮಾನದ ಚೋಳರ ಕಾಲದ ಅತ್ಯಂತ ಅಪರೂಪದ ತಾಮ್ರದ ಶಾಸನಗಳನ್ನು (ಕಾಪರ್ ಪ್ಲೇಟ್ಸ್) ನೆದರ್ಲ್ಯಾಂಡ್ಸ್ ಸರ್ಕಾರವು ಶನಿವಾರ ಅಧಿಕೃತವಾಗಿ ಭಾರತಕ್ಕೆ ಹಸ್ತಾಂತರಿಸಿದೆ. ಐರೋಪ್ಯ ದೇಶಗಳಲ್ಲಿ ‘ಲೈಡನ್ ಪ್ಲೇಟ್ಸ್’ (Leiden Plates) … Continued

ಭಾರತಕ್ಕೂ ತಟ್ಟಿದ ಮಧ್ಯಪ್ರಾಚ್ಯ ಸಂಘರ್ಷದ ಬಿಸಿ : ದೇಶಾದ್ಯಂತ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಯುದ್ಧ ಹಾಗೂ ಉದ್ವಿಗ್ನ ಪರಿಸ್ಥಿತಿ ಪರಿಣಾಮ ಇದೀಗ ಭಾರತಕ್ಕೂ ತಟ್ಟಿದ್ದು, ದೇಶದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳ ಮಾಡಲಾಗಿದೆ. ಈ ದರ ಏರಿಕೆಗಳು ಇಂದಿನಿಂದಲೇ ಜಾರಿಯಾಗಿವೆ. ನಾಲ್ಕು ವರ್ಷಗಳ ಬಳಿಕ ಸರ್ಕಾರಿ ತೈಲ … Continued

ವಿಡಿಯೋ..| ರಾಮಸೇತು ಸಮುದ್ರ ಮಾರ್ಗದಲ್ಲಿ ಶ್ರೀಲಂಕಾದಿಂದ ಭಾರತಕ್ಕೆ 11 ತಾಸಿನೊಳಗೆ 32 ಕಿ.ಮೀ ಈಜಿ ಬಂದ ಬೆಂಗಳೂರು ದಂಪತಿ…!

ಬೆಂಗಳೂರು: ಸಿಲಿಕಾನ್ ಸಿಟಿಯ ಐಟಿ ಉದ್ಯೋಗಿಗಳಾದ ದಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದೆ ಅವರು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇವರು ಶ್ರೀಲಂಕಾದಿಂದ ಭಾರತಕ್ಕೆ ರಾಮಸೇತು ಮಾರ್ಗದ ಮೂಲಕ ‘ಸೈಡ್-ಬೈ-ಸೈಡ್’ (ಜೊತೆಜೊತೆಯಾಗಿ) ಈಜುವ ಮೂಲಕ ಈ ಸಾಧನೆ ಮಾಡಿದ ಮೊದಲ ದಂಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೇ 7 ರಂದು ಮುಂಜಾನೆ ಸುಮಾರು 4:30ಕ್ಕೆ ಶ್ರೀಲಂಕಾದ ತಲೈಮನ್ನಾರ್‌ನಿಂದ … Continued

ʼಆಪರೇಷನ್ ಸಿಂಧೂರ’ ವೇಳೆ ಸಹಾಯ ಮಾಡಲು ಪಾಕ್ ವಾಯುನೆಲೆಗಳಲ್ಲಿದ್ದ ಚೀನಾ ತಜ್ಞರ ತಂಡ : ಮೊದಲ ಬಾರಿಗೆ ಒಪ್ಪಿಕೊಂಡ ಚೀನಾ !

ನವದೆಹಲಿ : ಭಾರತ ಮತ್ತು ಪಾಕಿಸ್ತಾನ ನಡುವೆ ಕಳೆದ ವರ್ಷ ನಡೆದ ಸೇನಾ ಸಂಘರ್ಷದ ವೇಳೆ ತಾನು ಪಾಕಿಸ್ತಾನಕ್ಕೆ ನೇರವಾಗಿ ‘ಆನ್-ಸೈಟ್’ ತಾಂತ್ರಿಕ ನೆರವು ನೀಡಿದ್ದಾಗಿ ಚೀನಾ ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿದೆ. ಭಾರತವು ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ನಡೆಸಿದ್ದ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆಯ ಸಂದರ್ಭದಲ್ಲಿ ಚೀನಾದ ತಜ್ಞರ ತಂಡವು ಪಾಕಿಸ್ತಾನ ಸೇನೆಗೆ ಬೆಂಬಲವಾಗಿ … Continued

ಪಾಕಿಸ್ತಾನದ 9 ಭಯೋತ್ಪಾದಕ ಶಿಬಿರ, 11 ವಾಯುನೆಲೆ, 13 ಯುದ್ಧ ವಿಮಾನ ಧ್ವಂಸ : ಆಪರೇಷನ್ ಸಿಂಧೂರ ವರ್ಷಾಚರಣೆ ; ಭಾರತದಿಂದ ಮಾಹಿತಿ ಬಿಡುಗಡೆ

ನವದೆಹಲಿ: ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ (Pahalgam Terror Attack) ಪ್ರತೀಕಾರವಾಗಿ ಭಾರತವು ಪಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ನಡೆಸಿದ ‘ಆಪರೇಷನ್ ಸಿಂಧೂರ (Operation Sindoor)ʼ ಸೇನಾ ಕಾರ್ಯಾಚರಣೆಯ ಮೊದಲ ವಾರ್ಷಿಕೋತ್ಸವದಂದು ಭಾರತವು ಪಾಕಿಸ್ತಾನಕ್ಕೆ ಉಂಟಾದ ಭಾರಿ ನಷ್ಟದ ಅಂಕಿಅಂಶಗಳನ್ನು ಗುರುವಾರ ಬಿಡುಗಡೆ ಮಾಡಿದೆ. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳು, ವಾಯುನೆಲೆಗಳು ಮತ್ತು ಯುದ್ಧ ವಿಮಾನಗಳನ್ನು … Continued

ಟರ್ಕಿಯಲ್ಲಿ 1.5 ವರ್ಷದಿಂದ ರೂಮಿನಿಂದ ಹೊರಬರದೆ ಅಡಗಿಕೊಂಡಿದ್ದ ದಾವೂದ್ ಆಪ್ತ : ಆದ್ರೆ ಒಂದೇ ಒಂದು ಸಣ್ಣ ತಪ್ಪಿನಿಂದ ಸಿಕ್ಕಿಬಿದ್ದ…!

ನವದೆಹಲಿ: ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ಹಾಗೂ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸಾಗಣೆದಾರ ಮೊಹಮ್ಮದ್ ಸಲೀಂ ಡೋಲಾನನ್ನು ಇತ್ತೀಚೆಗೆ ಟರ್ಕಿಯಿಂದ ಭಾರತಕ್ಕೆ ಹಸ್ತಾಂತರಿಸಲಾಗಿದೆ. ಮುಂಬೈನ ಡೋಂಗ್ರಿ ನಿವಾಸಿಯಾದ 59 ವರ್ಷದ ಸಲೀಂ ಡೋಲಾ, ಭಾರತದಲ್ಲಿ ದಾಖಲಾಗಿರುವ ಹಲವಾರು ಮಾದಕ ದ್ರವ್ಯ ಸಾಗಣೆ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಭಾರತದ ಮನವಿಯ ಮೇರೆಗೆ 2024ರಲ್ಲಿ ಇಂಟರ್‌ಪೋಲ್ … Continued

ವಿಡಿಯೋ | ಅಂಡಮಾನ್‌ ಬೀಚ್‌ನಲ್ಲಿ ಇತಿಹಾಸ : ಸಾಗರದ ನೀರಿನೊಳಗೆ ರಾರಾಜಿಸಿದ ವಿಶ್ವದ ಅತಿದೊಡ್ಡ ರಾಷ್ಟ್ರಧ್ವಜ ; ಗಿನ್ನೆಸ್ ದಾಖಲೆ

ಶ್ರೀ ವಿಜಯಪುರಂ: ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹವು ಶನಿವಾರದಂದು ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಸ್ವರಾಜ್ ದ್ವೀಪದ (ಹ್ಯಾವ್ಲಾಕ್ ಐಲೆಂಡ್) ವಿಶ್ವಪ್ರಸಿದ್ಧ ರಾಧಾನಗರ ಬೀಚ್‌ನಲ್ಲಿ ವಿಶ್ವದ ಅತಿದೊಡ್ಡ ‘ಅಂಡರ್ ವಾಟರ್’ (ನೀರೊಳಗಿನ) ರಾಷ್ಟ್ರಧ್ವಜವನ್ನು ಅನಾವರಣಗೊಳಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದೆ. ಸಮುದ್ರದಾಳದಲ್ಲಿ ಅನಾವರಣಗೊಂಡ ಈ ಬೃಹತ್ ತ್ರಿವರ್ಣ ಧ್ವಜವು ಸುಮಾರು 60 … Continued