ವಿಡಿಯೋ | ಹಫೀಜ್ ಸಯೀದ್ ಕಾಶ್ಮೀರಕ್ಕೆ 10 ಸಾವಿರ ಉಗ್ರರನ್ನು ಕಳುಹಿಸಿದ್ದಾನೆ : ಪಾಕಿಸ್ತಾನದ ನಸೀರ್ ಮದನಿ ಬಹಿರಂಗ ಹೇಳಿಕೆ

ಬಹವಾಲನಗರ: ಈ ತಿಂಗಳ ಆರಂಭದಲ್ಲಿ ಶುಕ್ರವಾರದ ಧಾರ್ಮಿಕ ಪ್ರವಚನ ನೀಡುತ್ತಿದ್ದ ವೇಳೆ ಗಂಭೀರ ಹೃದಯ ಸಂಬಂಧಿತ ತೊಂದರೆಗೆ ಒಳಗಾಗಿದ್ದಾಗಿ ವರದಿಯಾಗಿದ್ದ ಪಾಕಿಸ್ತಾನದ ನಸೀರ್ ಮದನಿ ಮತ್ತೆ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾನೆ. ಆಗಸ್ಟ್ 14ರಂದು ಬಹವಾಲನಗರದಲ್ಲಿ ನಡೆದ ನಿಷೇಧಿತ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ ಸಭೆಯಲ್ಲಿ ಮಾತನಾಡಿದ ಮದನಿ, ಲಷ್ಕರ್-ಎ-ತೊಯ್ಬಾ (LeT) ಸಂಸ್ಥಾಪಕ ಹಫೀಜ್ ಸಯೀದ್ ಕುರಿತು ಗಂಭೀರ … Continued

ಕಾಶ್ಮೀರ : ಗುಂಡು ತಗುಲಿದ್ರೂ ಧೈರ್ಯದಿಂದ ಮುನ್ನುಗ್ಗಿ ಮೂವರು ಉಗ್ರರನ್ನು ಕೊಲ್ಲಲು ಸೇನೆಗೆ ನೆರವಾದ ನಾಯಿ ಟೈಸನ್‌…!

ಕಿಶ್ತ್ವಾರ : ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರದ ಛಾತ್ರು ಎಂಬ ದುರ್ಗಮ ಪ್ರದೇಶದ ಕಡಿದಾದ ಬೆಟ್ಟಗಳಲ್ಲಿ ಅಡಗಿದ್ದ ಉಗ್ರರನ್ನು ಸದೆಬಡಿಯಲು ಭಾರತೀಯ ಸೇನೆಯು ‘ಆಪರೇಷನ್ ಟ್ರಾಶಿ-1’ (Operation Trashi-I) ಎಂಬ ಬೃಹತ್ ಕಾರ್ಯಾಚರಣೆ ಕೈಗೊಂಡಿದ್ದು, ಈ ಕಾರ್ಯಾಚರಣೆಯಲ್ಲಿ ಜೀವದ ಹಂಗು ತೊರೆದು ಖತರ್ನಾಕ್‌ ಭಯೋತ್ಪಾದಕರು ಎಲ್ಲಿದ್ದಾರೆಂದು ಪತ್ತೆ ಹಚ್ಚಿ ಅವರ ಸಾವಿಗೆ ಕಾರಣವಾದ ಸೇನೆಯ ಹೆಮ್ಮೆಯ … Continued

ಜಮ್ಮು ಜೈಲಿಂದ ತಪ್ಪಿಸಿಕೊಳ್ಳಲು ನಡೆಸಿದ ವಿಫಲ ಯತ್ನ, ನಂತರ ಹೊಡೆತ ತಿಂದಿದ್ದನ್ನು ನೆನಪಿಸಿಕೊಂಡ ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕ

ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಜೈಶ್-ಎ-ಮೊಹಮ್ಮದ್ (JeM) ನ ಮುಖ್ಯಸ್ಥ ಮಸೂದ್ ಅಜರ್, 1990 ರ ದಶಕದಲ್ಲಿ ಜಮ್ಮು ಮತ್ತು ಕಾಶ್ಮೀರದ ಜೈಲಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ತಾನು ಅದಕ್ಕೆ ದೊಡ್ಡ ಬೆಲೆ ತೆರಬೇಕಾಯಿತು ಎಂದು ಒಪ್ಪಿಕೊಂಡಿದ್ದಾನೆ. ಪಾಕಿಸ್ತಾನದಲ್ಲಿ ನಡೆದ ಒಂದು ಕಾರ್ಯಕ್ರಮದ ಆಡಿಯೋ ಕ್ಲಿಪ್‌ನಲ್ಲಿ ಆತ ಜೈಲಿನಲ್ಲಿ ಸುರಂಗ ತೋಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ವಿಫಲವಾಗಿದ್ದರ ಬಗ್ಗೆ … Continued

ದೆಹಲಿ ಸ್ಫೋಟಕ್ಕೂ ಮುನ್ನ ʼಆತ್ಮಾಹುತಿ ಬಾಂಬ್​ʼ ದಾಳಿ ಸಮರ್ಥಿಸಿಕೊಂಡು ಮಾತನಾಡಿದ್ದ ಭಯೋತ್ಪಾದಕ ಉಮರ್ ; ವೀಡಿಯೊ ವೈರಲ್‌

ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ನಡೆದ ಸ್ಫೋಟದಲ್ಲಿ 13 ಜನರು ಮೃತಪಟ್ಟ ಒಂದು ವಾರದ ನಂತರ, ಈ ಕೃತ್ಯದ ಆರೋಪಿಯಾದ ಉಮರ್-ಉನ್-ನಬಿ ಎಂಬಾತನ ವೀಡಿಯೊವೊಂದು ಬಹಿರಂಗವಾಗಿದೆ. ಈ ವೀಡಿಯೊದಲ್ಲಿ ಆತ ಆತ್ಮಾಹುತಿ ದಾಳಿಗಳ ಬಗ್ಗೆ ಮಾತನಾಡಿದ್ದು, ಅವುಗಳನ್ನು ಆತ “ಹುತಾತ್ಮತೆ” (Martyrdom) ಎಂದು ಬಣ್ಣಿಸಿದ್ದಾನೆ. ಉಮರ್ ನಬಿ ಒಬ್ಬನೇ ಕ್ಯಾಮೆರಾ ಮುಂದೆ ಕುಳಿತು ವೀಡಿಯೊ ಚಿತ್ರೀಕರಣ … Continued

ಕುಪ್ವಾರಾ : ಇಬ್ಬರು ಭಯೋತ್ಪಾಕರನ್ನು ಹೊಡೆದುರುಳಿಸಿದ ಭದ್ರತಾ ಪಡೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕುಪ್ವಾರ ಜಿಲ್ಲೆಯಲ್ಲಿ ಭದ್ರತಾ ಪಡೆಯ ಸಿಬ್ಬಂದಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಕುಪ್ವಾರದ ಗಡಿ ನಿಯಂತ್ರಣ ರೇಖೆ ಬಳಿ ಭಾರತದ ಒಳಕ್ಕೆ ನುಸುಳಲು ಯತ್ನಿಸಿದ ಭಯೋತ್ಪಾದಕರ ಪ್ರಯತ್ನವನ್ನು ತಡೆದ ಭದ್ರತಾ ಪಡೆ ನುಸುಳುಕೋರರನ್ನು ಹೊಡೆದುರುಳಿಸಿದೆ ಎಂದು ಮೂಲಗಳು ತಿಳಿಸಿವೆ. ಗಡಿ ನಿಯಂತ್ರಣ ರೇಖೆ ಬಳಿ ಅನುಮಾನಾಸ್ಪದ ಚಟುವಟಿಕೆ … Continued

ಜಮ್ಮು-ಕಾಶ್ಮೀರ : ಗಡಿಯೊಳಗೆ ಒಳನುಸುಳಲು ಯತ್ನಿಸುತ್ತಿದ್ದ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು…

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಸೆಕ್ಟರ್‌ನ ಗುರೆಜ್ ಸೆಕ್ಟರ್‌ನ ನೌಶೆಹ್ರಾ ನಾರ್ಡ್ ಪ್ರದೇಶದಲ್ಲಿ ಗುರುವಾರ ಸೇನೆಯು ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದೆ. ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ನಡೆಯುತ್ತಿದೆ. ನೌಶೆಹ್ರಾ ನಾರ್ ಬಳಿ ಈ … Continued

ಪಹಲ್ಗಾಮ್ ದಾಳಿಕೋರರು ಪಾಕಿಸ್ತಾನದವರು ಹೇಗೆ ಬಹಿರಂಗವಾಯ್ತು..? ಹತ ಭಯೋತ್ಪಾದಕರ ಬಳಿ ಸಿಕ್ಕ ಯಾವ ದಾಖಲೆಗಳು ಇದನ್ನು ಪುಷ್ಟೀಕರಿಸಿವೆ..?

ನವದೆಹಲಿ: ಜುಲೈ 28 ರಂದು ನಡೆದ ಆಪರೇಷನ್ ಮಹಾದೇವ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟ ಮೂವರು ಭಯೋತ್ಪಾದಕರು ಪಾಕಿಸ್ತಾನಿ ಪ್ರಜೆಗಳು ಎಂದು ಭದ್ರತಾ ಸಂಸ್ಥೆಗಳು ದೃಢಪಡಿಸಿವೆ. ಬಯೋಮೆಟ್ರಿಕ್ ಪುರಾವೆಗಳು ಮತ್ತು ಪಾಕಿಸ್ತಾನ ಸರ್ಕಾರ ನೀಡಿದ ದಾಖಲೆಗಳನ್ನು ಉಲ್ಲೇಖಿಸಿ, ಲಷ್ಕರ್-ಎ-ತೈಬಾ (ಎಲ್‌ಇಟಿ)ದ ಭಯೋತ್ಪಾದಕ ಸಂಘಟನೆಯ ಹಿರಿಯ ಸದಸ್ಯರೆಂದು ಗುರುತಿಸಲ್ಪಟ್ಟ ಹತ್ಯೆಗೀಡಾದ ವ್ಯಕ್ತಿಗಳನ್ನು ಶ್ರೀನಗರದ ಹೊರವಲಯದಲ್ಲಿರುವ ‘ಆಪರೇಷನ್ ಮಹಾದೇವ’ ಸಮಯದಲ್ಲಿ ಕೊಲ್ಲಲಾಯಿತು. … Continued

ಆಪರೇಶನ್‌ ಸಿಂಧೂರ : ಪಾಕಿಸ್ತಾನದ ವಾಯುನೆಲೆಗಳ ಮೇಲಿನ ದಾಳಿಯಲ್ಲಿ 20% ಮೂಲಸೌಕರ್ಯ; ಹಲವಾರು ಯುದ್ಧ ವಿಮಾನಗಳು ನಾಶ…!

ನವದೆಹಲಿ: ಮೇ 10 ರಂದು ಪಾಕಿಸ್ತಾನದ 11 ವಾಯುನೆಲೆಗಳ ಮೇಲೆ ಭಾರತ ನಡೆಸಿದ ದಾಳಿಯಲ್ಲಿ ಅದರ ವಾಯುಪಡೆಯ ಮೂಲಸೌಲಭ್ಯಗಳಲ್ಲಿ ಶೇಕಡಾ 20 ರಷ್ಟು ನಾಶವಾಗಿದೆ ಮತ್ತು ಸ್ಕ್ವಾಡ್ರನ್ ಲೀಡರ್‌ ಸೇರಿದಂತೆ 50 ಕ್ಕೂ ಹೆಚ್ಚು ವ್ಯಕ್ತಿಗಳು ಸಾವಿಗೀಡಾಗಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳನ್ನು ಉಲ್ಲೇಖಿಸಿದ ಕೆಲವು ವರದಿಗಳು ತಿಳಿಸಿವೆ. ಈ ದಾಳಿಯು ಪಾಕಿಸ್ತಾನದ ಪ್ರಮುಖ ಶಸ್ತ್ರಾಸ್ತ್ರ … Continued

ಜಮ್ಮು-ಕಾಶ್ಮೀರ : ಮೂವರು ಲಷ್ಕರ್ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ. ಆ ಪ್ರದೇಶದಲ್ಲಿ ಮತ್ತೊಬ್ಬ ಭಯೋತ್ಪಾದಕ ಇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆರಂಭದಲ್ಲಿ ಕುಲ್ಗಾಮ್‌ನಲ್ಲಿ ಆರಂಭವಾದ ಈ ಎನ್‌ಕೌಂಟರ್ ನಂತರ ಶೋಪಿಯಾನ್‌ನ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಗೊಂಡಿತು. ಗುಪ್ತಚರ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಭಯೋತ್ಪಾದಕರ ವಿರುದ್ಧ ಶೋಧ ಕಾರ್ಯಾಚರಣೆ … Continued

ಪಹಲ್ಗಾಮ್‌ ಭಯೋತ್ಪಾದಕ ದಾಳಿ | ಭಯೋತ್ಪಾಕರ ಮಟ್ಟ ಹಾಕಲು ಸೇನೆಗೆ ಸಂಪೂರ್ಣ ಅಧಿಕಾರ ನೀಡಿದ ಪ್ರಧಾನಿ ಮೋದಿ

ನವದೆಹಲಿ : ಪಹಲ್ಗಾಮ್‌ ಭಯೋತ್ಪಾದಕರ ದಾಳಿಗೆ ತಕ್ಕ ಉತ್ತರ ನೀಡಲು ಸಜ್ಜಾಗಿರುವ ಭಾರತ ಅವರ ವಿರುದ್ಧದ ಕಾರ್ಯಾಚರಣೆಗೆ ಸಂಬಂಧಿಸಿ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡುವ ವಿಧಾನ, ಗುರಿಗಳು ಮತ್ತು ಸಮಯವನ್ನು ನಿರ್ಧರಿಸಲು ಭಾರತೀಯ ಸಶಸ್ತ್ರ ಪಡೆಗಳಿಗೆ ಕಾರ್ಯಾಚರಣೆ ನಡೆಸಲು … Continued