ಬಾಲಿವುಡ್ ‘ಹೀ-ಮ್ಯಾನ್’, ಹಿರಿಯ ನಟ ಧರ್ಮೇಂದ್ರ ಇನ್ನಿಲ್ಲ

ಮುಂಬೈ : ಬಾಲಿವುಡ್‌ ಹೀ ಮ್ಯಾನ್‌ ಎಂದೇ ಖ್ಯಾತಿ ಪಡೆದ, ಹಿರಿಯ ನಟ ಧರ್ಮೇಂದ್ರ (Dharmendra) ಸೋಮವಾರ (ನವೆಂಬರ್‌ 24) ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಧರ್ಮೇಂದ್ರ ಅವರನ್ನು ಕೆಲವು ದಿನಗಳ ಹಿಂದೆ ಮುಂಬೈಯ ಬ್ರೀಜ್‌ ಕ್ಯಾಂಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೇತರಿಸಿಕೊಂಡ ಅವರನ್ನು ಡಿಸ್‌ಚಾರ್ಚ್‌ ಮಾಡಲಾಗಿತ್ತು. ಧರ್ಮೇಂದ್ರ ಅವರು ಇಬ್ಬರು ಪತ್ನಿಯರಾದ ಪ್ರಕಾಶ್ ಕೌರ್ … Continued

ಮನೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಬಾಲಿವುಡ್‌ ನಟ ಗೋವಿಂದ ಆಸ್ಪತ್ರೆಗೆ ದಾಖಲು

ಮುಂಬೈ: ಬಾಲಿವುಡ್‌ನ ಹಿರಿಯ ನಟ ಗೋವಿಂದ ಅವರು ಮಂಗಳವಾರ ರಾತ್ರಿ ಮನೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದ ನಂತರ, ಮುಂಬೈನ ಜುಹುವಿನಲ್ಲಿರುವ ಕ್ರಿಟಿಕೇರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 61 ವರ್ಷದ ನಟ ಗೋವಿಂದ ಅವರು ಗೊಂದಲ (disorientation)ದಿಂದಾಗಿ ತಡರಾತ್ರಿ ತಮ್ಮ ಮನೆಯಲ್ಲಿ ಪ್ರಜ್ಞೆ ಕಳೆದುಕೊಂಡಿದ್ದರು ಎಂದು ಅವರ ಸ್ನೇಹಿತ ಮತ್ತು ಕಾನೂನು ಸಲಹೆಗಾರ ಲಲಿತ್ ಬಿಂದಾಲ್ ಅವರು ಎನ್‌ಡಿಟಿವಿಗೆ … Continued

ಹಿಂದಿ ಸಿನೆಮಾದ ಹಿರಿಯ ನಟ ಪ್ರೇಮ್ ಚೋಪ್ರಾ ಆಸ್ಪತ್ರೆಗೆ ದಾಖಲು

ಮುಂಬೈ: ಹಿಂದಿ ಸಿನೆಮಾದ ಹಿರಿಯ ನಟ ಪ್ರೇಮ ಚೋಪ್ರಾ ಅವರು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎದೆಯ ಭಾಗದಲ್ಲಿ ಉಸಿರಾಟದ ಸಮಸ್ಯೆ (Chest Congestion) ಕಾಣಿಸಿಕೊಂಡ ಕಾರಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಕಳೆದ ಮೂರು ದಿನಗಳಿಂದ (ನವೆಂಬರ್ 8) ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ನಟ ಪ್ರೇಮ್ ಚೋಪ್ರಾ ಅವರು ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ. ಮೂರರಿಂದ ನಾಲ್ಕು ದಿನಗಳಲ್ಲಿ … Continued

2023ರಿಂದ ಪರಾರಿಯಾಗಿದ್ದ ಪಾಕಿಸ್ತಾನದ ಮಾದಕ ದ್ರವ್ಯ-ಭಯೋತ್ಪಾದನಾ ಕಿಂಗ್‌ಪಿನ್ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧನ

ಜಮ್ಮು ಮತ್ತು ಕಾಶ್ಮೀರ ರಾಜ್ಯ ತನಿಖಾ ಸಂಸ್ಥೆ (SIA) ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕ ಹೊಂದಿದ್ದ ಪ್ರಮುಖ ನಾರ್ಕೋ-ಭಯೋತ್ಪಾದನಾ ಕಿಂಗ್‌ಪಿನ್‌ನನ್ನು ಶನಿವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸುವ ಮೂಲಕ ಮಹತ್ವದ ಯಶಸ್ಸು ಸಾಧಿಸಲಾಗಿದೆ ಎಂದು ಹೇಳಿಕೊಂಡಿದೆ. ತನಿಖಾ ಸಂಸ್ಥೆ ವಕ್ತಾರರ ಪ್ರಕಾರ, ಪೂಂಚ್‌ನ ಹವೇಲಿ ತಹಸಿಲ್‌ನ ದೇಗ್ವಾರ್-ತೆರ್ವಾನ್ ಗ್ರಾಮದ ನಿವಾಸಿಯಾದ ಮೊಹಮ್ಮದ್ ಅರ್ಷದ್ ಅಲಿಯಾಸ್ ಆಸಿಫ್ … Continued

ಬಾರ್ಕ್‌ ವಿಜ್ಞಾನಿ ಸೋಗಿನಲ್ಲಿ ಇರಾನ್‌ ಗೆ ನ್ಯೂಕ್ಲಿಯರ್ ವಿನ್ಯಾಸ ಮಾರಾಟಕ್ಕೆ ಯತ್ನ: ಬಂಧನ

ಮುಂಬೈ: ಬಾಬಾ ಅಣು ಸಂಶೋಧನಾ ಕೇಂದ್ರದ (BARC) ವಿಜ್ಞಾನಿ ಎಂದು ನಟಿಸಿ ಇರಾನ್‌ನಲ್ಲಿರುವ ಕಂಪನಿಗಳಿಗೆ ಪರಮಾಣು ಸಂಬಂಧಿತ ವಿನ್ಯಾಸವನ್ನು “ವೈಜ್ಞಾನಿಕ ಸಹಯೋಗ” ಮತ್ತು “ಸಂಶೋಧನಾ ಸಹಭಾಗಿತ್ವ”ದ ನೆಪದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ 60 ವರ್ಷದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈತನ ಸಹೋದರನನ್ನೂ ಸಹ ಬಂಧಿಸಲಾಗಿದೆ. ತನಿಖಾ ಸಂಸ್ಥೆಯ ಮೂಲಗಳ ಪ್ರಕಾರ, ಅಖ್ತರ್ ಹುಸೇನಿ ಕುತ್ಬುದ್ದೀನ್ … Continued

ಬಾಲಿವುಡ್‌ ಹಿರಿಯ ನಟ ಧರ್ಮೇಂದ್ರ ಆಸ್ಪತ್ರೆಗೆ ದಾಖಲು

ಮುಂಬೈ : ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಡಿಸೆಂಬರ್ 8ರಂದು ತಮ್ಮ 90ನೇ ವರ್ಷಕ್ಕೆ ಕಾಲಿಡುತ್ತಿರುವ ಅವರು ರೂಟೀನ್‌ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು ಸದ್ಯಕ್ಕೆ ಅವರು ವೈದ್ಯರ ನಿಗಾದಲ್ಲಿದ್ದಾರೆ ಎಂದು ವರದಿಗಳು ಸೂಚಿಸಿವೆ. ವರದಿಗಳ ಪ್ರಕಾರ, ಧರ್ಮೇಂದ್ರ ಅವರ ಪುತ್ರರಾದ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಅವರು … Continued

ಮುಂಬೈ | 17 ಮಕ್ಕಳನ್ನು ಒತ್ತೆ ಇರಿಸಿಕೊಂಡಿದ್ದ ವ್ಯಕ್ತಿ ಪೊಲೀಸರ ಗುಂಡಿಗೆ ಬಲಿ ; ಮಕ್ಕಳ ರಕ್ಷಣೆ

ಮುಂಬೈ: ಮುಂಬೈನ ಪೊವಾಯಿ ಪ್ರದೇಶದಲ್ಲಿ ಗುರುವಾರ 17 ಮಕ್ಕಳನ್ನು ಒತ್ತೆ ಇರಿಸಿದ್ದ ಆರೋಪಿ ರೋಹಿತ್ ಆರ್ಯ ಎಂಬಾತ, ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಪೊಲೀಸರು ಕಾರ್ಯಾಚರಣೆಯ ಮೂಲಕ ಒತ್ತೆಯಲ್ಲಿದ್ದ ಎಲ್ಲಾ ಮಕ್ಕಳನ್ನು ಯಾವುದೇ ತೊಂದರೆಯಿಲ್ಲದೆ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಸ್ಟುಡಿಯೋದಲ್ಲಿ ನಾಟಕೀಯ ಘಟನೆ ಈ ನಾಟಕೀಯ ಘಟನೆಯು ‘ಆರ್.ಎ. ಸ್ಟುಡಿಯೋಸ್’ (RA Studios) ಎಂಬ … Continued

ವಿಶ್ವದ ಅತ್ಯಂತ ಮಾಲಿನ್ಯಯುಕ್ತ ನಗರಗಳ ಪಟ್ಟಿಯಲ್ಲಿ ದೆಹಲಿ ನಂ.1, ಕೋಲ್ಕತ್ತಾ, ಮುಂಬೈ ಕೂಡ ಟಾಪ್ 10 ಪಟ್ಟಿಯಲ್ಲಿ

 ನವದೆಹಲಿ: ಭಾರತದಲ್ಲಿನ ವಾಯುಮಾಲಿನ್ಯದ ಸಮಸ್ಯೆ ಮತ್ತೊಮ್ಮೆ ಜಾಗತಿಕ ಆತಂಕಕ್ಕೆ ಕಾರಣವಾಗಿದೆ. ಸ್ವಿಟ್ಜರ್ಲೆಂಡ್ ಮೂಲದ ವಾಯು ಗುಣಮಟ್ಟ ಸಂಸ್ಥೆ IQAir ಇತ್ತೀಚೆಗೆ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ಭಾರತದ ರಾಜಧಾನಿ ದೆಹಲಿಯು ವಿಶ್ವದ ಅತ್ಯಂತ ಮಾಲಿನ್ಯ ಹೊಂದಿದ ನಗರ ಎಂಬ ಕುಖ್ಯಾತಿ ಪಡೆದುಕೊಂಡಿದೆ. ವಾಯು ಗುಣಮಟ್ಟದ ನೈಜ ಸಮಯದ ಆಧಾರದ ಮೇಲೆ ನಗರಗಳನ್ನು ಶ್ರೇಣೀಕರಿಸಿರುವ ಈ ವರದಿಯಲ್ಲಿ, … Continued

1977ರಲ್ಲಿ ಗೆಳತಿಗೆ ಇರಿದ ವ್ಯಕ್ತಿಯನ್ನು 48 ವರ್ಷಗಳ ನಂತರ ಬಂಧಿಸಿದ ಪೊಲೀಸರು-ಜಾಮೀನು ; 81ನೇ ವಯಸ್ಸಿಗೆ ವಿಚಾರಣೆ…

ಮುಂಬೈ: ತನ್ನ ಗೆಳತಿಗೆ ಚಾಕುವಿನಿಂದ ಇರಿದ ಆರೋಪಿಗೆ ಘಟನೆ ನಡೆದ 48 ವರ್ಷಗಳ ನಂತರ ವಿಚಾರಣೆ ಎದುರಿಸಲಿದ್ದಾರೆ. ದಕ್ಷಿಣ ಮುಂಬೈನ ಕೊಲಾಬಾದಲ್ಲಿ ತನ್ನ ಗೆಳತಿಯನ್ನು ಕೊಲೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ 1977 ರಿಂದ “ತಲೆಮರೆಸಿಕೊಂಡಿದ್ದ” 81 ವರ್ಷದ ಚಂದ್ರಶೇಖರ ಮಧುಕರ ಕಾಳೇಕರ ಅವರಿಗೆ ಮುಂಬೈ ಸೆಷನ್ಸ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಪ್ರಾಸಿಕ್ಯೂಷನ್‌ನ ಪ್ರಕಾರ, ಕಾಳೇಕರ … Continued

ದೇಶದಲ್ಲೇ ಅತಿದೊಡ್ಡ ಸೈಬರ್‌ ವಂಚನೆ ; ₹58 ಕೋಟಿ ಮೊತ್ತದ ‘ಡಿಜಿಟಲ್ ಅರೆಸ್ಟ್’ ಪ್ರಕರಣ ಭೇದಿಸಿದ ಪೊಲೀಸರು…!

ಮುಂಬೈ : ಮುಂಬೈನಲ್ಲಿ ನಡೆದ ಬರೋಬ್ಬರಿ 58.13 ಕೋಟಿ ರೂಪಾಯಿ ಮೌಲ್ಯದ ‘ವರ್ಚುವಲ್ ಅರೆಸ್ಟ್’ (ಕಲ್ಪಿತ ಬಂಧನ) ಹಗರಣವನ್ನು ಮಹಾರಾಷ್ಟ್ರ ಸೈಬರ್ ಪೊಲೀಸರು ಭೇದಿಸಿದ್ದು, ಈ ಸಂಬಂಧ ಏಳು ಜನರನ್ನು ಬಂಧಿಸಿದ್ದಾರೆ. ಇದು ದೇಶದಲ್ಲಿ ಇತ್ತೀಚೆಗೆ ವರದಿಯಾದ ಇಂತಹ ಅತಿ ದೊಡ್ಡ ಸೈಬರ್‌ ವಂಚನೆ ಪ್ರಕರಣ ಎಂದು ಹೇಳಲಾಗಿದೆ. ಮುಂಬೈನ 72 ವರ್ಷದ ಹಿರಿಯ ನಾಗರಿಕರೊಬ್ಬರಿಗೆ … Continued