ಇರಾನ್ ಪರ ನಿಲುವು : ಪಾಕಿಸ್ತಾನಕ್ಕೆ ಬಿಗ್ ಶಾಕ್ ನೀಡಿದ ಯುಎಇ ; ಸುಮಾರು 32466 ಕೋಟಿ ರೂ. ಸಾಲ ತಕ್ಷಣ ಮರುಪಾವತಿಗೆ ಸೂಚನೆ !

ಅಬುಧಾಬಿ: ಮಧ್ಯಪ್ರಾಚ್ಯದಲ್ಲಿ ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿ ಮತ್ತು ಇರಾನ್ ವಿಷಯದಲ್ಲಿ ಪಾಕಿಸ್ತಾನದ ನಿಲುವಿನಿಂದ ಅಸಮಾಧಾನಗೊಂಡಿರುವ ಯುನೈಟೆಡ್ ಅರಬ್ ಎಮಿರೇಟ್ಸ್ (UAE), ತಾನು ನೀಡಿದ್ದ 3.5 ಬಿಲಿಯನ್ ಡಾಲರ್ (ಸುಮಾರು 32466 ಕೋಟಿ ರೂ.) ಸಾಲವನ್ನು ತಕ್ಷಣವೇ ಮರುಪಾವತಿಸುವಂತೆ ಪಾಕಿಸ್ತಾನಕ್ಕೆ ಸೂಚಿಸಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನವು ಇರಾನ್ ದೇಶಕ್ಕೆ ಹತ್ತಿರವಾಗುತ್ತಿದೆ ಎಂಬುದು … Continued

ಪಾಕಿಸ್ತಾನದಲ್ಲಿ ಈಗಲೂ ಭಾರತ ವಿರೋಧಿ ಭಯೋತ್ಪಾದನಾ ಸಂಘಟನೆಗಳು ಸಕ್ರಿಯ : ಅಮೆರಿಕ ವರದಿ

ವಾಷಿಂಗ್ಟನ್: ಭಾರತ ಮತ್ತು ಕಾಶ್ಮೀರದಲ್ಲಿ ಸಾಂತಿ ಉಂಟು ಮಾಡುವ ಭಯೋತ್ಪಾದನಾ ಸಂಘಟನೆಗಳು ಸೇರಿದಂತೆ ಹಲವಾರು ಭಯೋತ್ಪಾದನಾ ಗುಂಪುಗಳಿಗೆ ಪಾಕಿಸ್ತಾನವು ಇಂದಿಗೂ ಆಶ್ರಯ ನೀಡುತ್ತಲೇ ಇದೆ ಎಂದು ಅಮೆರಿಕದ ಕಾಂಗ್ರೆಸ್ ಸಂಶೋಧನಾ ಸಂಸ್ಥೆಯ (CRS) ವರದಿ ಬಹಿರಂಗಪಡಿಸಿದೆ. ಪಾಕಿಸ್ತಾನ ಸರ್ಕಾರವು ಹಲವು ವರ್ಷಗಳಿಂದ ಸೇನಾ ಕಾರ್ಯಾಚರಣೆ ಮತ್ತು ನೀತಿಗಳನ್ನು ಜಾರಿಗೊಳಿಸಿದ್ದರೂ, ಉಗ್ರಗಾಮಿ ಗುಂಪುಗಳು ಅಲ್ಲಿನ ಮಣ್ಣಿನಲ್ಲಿ ಸಕ್ರಿಯವಾಗಿ … Continued

ಪಾಕಿಸ್ತಾನದ ಒಳಹೊಕ್ಕು ವೈರಿ ಸೇನೆಯನ್ನೇ ಸೇರಿ ಅದರ ಪರಮಾಣು ರಹಸ್ಯವನ್ನೇ ಭೇದಿಸಿದ್ದ ಭಾರತದ ಈ ಅಪ್ರತಿಮ ಗೂಢಚಾರಿ ಯಾರು ಗೊತ್ತೆ…?

ನವದೆಹಲಿ: ಬಾಲಿವುಡ್‌ನ ‘ಪಠಾಣ್’, ‘ಟೈಗರ್’ ಅಥವಾ ‘ಧುರಂಧರ್’ ಅಂತಹ ಸಿನಿಮಾಗಳಲ್ಲಿ ಹೀರೊಗಳು ಶತ್ರು ರಾಷ್ಟ್ರದೊಳಗೆ ನುಗ್ಗಿ ಸಾಹಸ ಮಾಡುವುದನ್ನು ನೋಡಿದ್ದೇವೆ. ಆದರೆ, ಬೆಳ್ಳಿತೆರೆಯ ಈ ಕಲ್ಪಿತ ಕಥೆಗಳಿಗಿಂತಲೂ ಮಿಗಿಲಾದ ಹಾಗೂ ಅದ್ಭುತವಾದ ಮತ್ತು ರೋಚಕವಾದ ಜೀವನ ನಡೆಸಿದ ಅಪ್ಪಟ ದೇಶಭಕ್ತ ರವೀಂದ್ರ ಕೌಶಿಕ ಅವರ ಬಗ್ಗೆ ಅನೇಕರಿಗೆ ತಿಳಿದಿಲ್ಲವೇನೋ? ಶತ್ರು ರಾಷ್ಟ್ರವಾದ ಪಾಕಿಸ್ತಾನದ ಗುಂಡಿನ ನೆರಳಲ್ಲೇ … Continued

ಲಷ್ಕರ್ ಉಗ್ರ ಸಂಘಟನೆ ಕಮಾಂಡರ್‌ ಬಿಲಾಲ್ ಆರಿಫ್ ಹತ್ಯೆ : ಕುಟುಂಬ ಸದಸ್ಯರಿಂದಲೇ ಚಾಕು ಇರಿತ, ಗುಂಡೇಟು

ನವದೆಹಲಿ: ಲಷ್ಕರ್-ಎ-ತೈಬಾ ಭಯೋತ್ಪಾದಕ ಸಂಘಟನೆಯ ಕಮಾಂಡರ್ ಬಿಲಾಲ್ ಆರಿಫ್ ಸರಫಿಯನ್ನು ಶನಿವಾರ ಪಾಕಿಸ್ತಾನದಲ್ಲಿ ಈದ್ ಪ್ರಾರ್ಥನೆಯ ನಂತರ ಆತನ ಕುಟುಂಬ ಸದಸ್ಯರೇ ಚಾಕುವಿನಿಂದ ಇರಿದಿದ್ದಾರೆ ಮತ್ತು ಗುಂಡಿಕ್ಕಿ ಕೊಂದಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿದ ಹಲವು ವರದಿಗಳು ತಿಳಿಸಿವೆ. ಈ ಘಟನೆಯು ಮುರಿದ್ಕೆಯ ಮರ್ಕಜ್ ಬಳಿಯಿರುವ ಧ್ವಂಸಗೊಂಡ ಲಷ್ಕರ್-ಎ-ತೈಬಾ ಪ್ರಧಾನ ಕಚೇರಿಯ ಸಮೀಪ ನಡೆದಿದೆ ಎಂದು ವರದಿಯಾಗಿದೆ. … Continued

ಪೆಟ್ರೋಲ್, ಡೀಸೆಲ್‌ ಅಭಾವದಿಂದ ಕಂಗೆಟ್ಟ ಪಾಕಿಸ್ತಾನ: ಗಣರಾಜ್ಯೋತ್ಸವ ಪರೇಡ್‌, ಸಂಭ್ರಮಾಚರಣೆ ರದ್ದುಗೊಳಿಸಿದ ಪಾಕ್‌…!

ಇಸ್ಲಾಮಾಬಾದ್‌ : ಮಧ್ಯಪ್ರಾಚ್ಯದಲ್ಲಿ ಇರಾನ್ ಯುದ್ಧದಿಂದ ಉಂಟಾಗಿರುವ ಇಂಧನ ಬಿಕ್ಕಟ್ಟು ಈಗ ಪಾಕಿಸ್ತಾನಕ್ಕೆ ಹೊಸ ಸಮಸ್ಯೆ ತಂದೊಡ್ಡಿದೆ. ವರದಿಗಳ ಪ್ರಕಾರ, ಮಾರ್ಚ್ 23 ರಂದು ನಡೆಯಬೇಕಿದ್ದ ಪಾಕಿಸ್ತಾನದ ‘ಗಣರಾಜ್ಯೋತ್ಸವ’ದ (Republic Day) ಮಿಲಿಟರಿ ಪರೇಡ್ ಮತ್ತು ಔಪಚಾರಿಕ ನಡಾವಳಿಗಳನ್ನು ರದ್ದುಗೊಳಿಸಲು ಪಾಕಿಸ್ತಾನದ ಪ್ರಧಾನ ಮಂತ್ರಿ ಕಾರ್ಯಾಲಯ ಮಂಗಳವಾರ ನಿರ್ಧರಿಸಿದೆ. ಪ್ರಧಾನಿ ಶೆಹಬಾಜ್ ಶರೀಫ್ ಅವರ ಕಚೇರಿಯು, … Continued

ಕಾಬೂಲ್ ಆಸ್ಪತ್ರೆ ಮೇಲೆ ಪಾಕಿಸ್ತಾನ ವಾಯುದಾಳಿ: 400 ಸಾವು, 250 ಜನರಿಗೆ ಗಾಯ ; ತಾಲಿಬಾನ್‌

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಆಸ್ಪತ್ರೆಯೊಂದರ ಮೇಲೆ ಪಾಕಿಸ್ತಾನ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 400 ಜನರು ಸಾವಿಗೀಡಾಗಿದ್ದಾರೆ ಮತ್ತು ಸುಮಾರು 250 ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ವಕ್ತಾರರು ಮಂಗಳವಾರ ಬೆಳಿಗ್ಗೆ ತಿಳಿಸಿದ್ದಾರೆ. ಅಫ್ಘಾನಿಸ್ತಾನದ ಉಪ ಸರ್ಕಾರಿ ವಕ್ತಾರ ಹಮ್ದುಲ್ಲಾ ಫಿತ್ರತ್ ಈ ಬಗ್ಗೆ ಮಾಹಿತಿ ನೀಡಿ, ಸ್ಥಳೀಯ ಕಾಲಮಾನ ರಾತ್ರಿ 9 ಗಂಟೆ ಸುಮಾರಿಗೆ … Continued

ವೀಡಿಯೊ | ವಿವಾದಾತ್ಮಕ ರನ್ ಔಟ್: ಸಿಟ್ಟಿನಿಂದ ಹೆಲ್ಮೆಟ್ ಎಸೆದು ಆಕ್ರೋಶ ವ್ಯಕ್ತಪಡಿಸಿದ ಪಾಕ್ ಬ್ಯಾಟರ್ ಸಲ್ಮಾನ್ ಅಘಾ !

ಢಾಕಾದ ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಬಾಂಗ್ಲಾದ ಆಲ್ ರೌಂಡರ್ ಮೆಹಿದಿ ಹಸನ್ ಮಿರಾಜ್ ಅವರ ನಡೆ ಪಾಕಿಸ್ತಾನದ ಬ್ಯಾಟರ್ ಸಲ್ಮಾನ್ ಅಘಾ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಪಂದ್ಯದ 39ನೇ ಓವರ್‌ನಲ್ಲಿ ಮೊಹಮ್ಮದ್ ರಿಜ್ವಾನ್ ನೇರವಾಗಿ ಹೊಡೆದ ಚೆಂಡು ಮಿರಾಜ್ ಕಾಲಿಗೆ ಬಡಿದು … Continued

ದುರಸ್ತಿ ಸಾಧ್ಯವಾಗದೇ ‘ಆಪರೇಷನ್ ಸಿಂಧೂರ’ ವೇಳೆ ಭಾರತದ ದಾಳಿಗೆ ಧ್ವಂಸಗೊಂಡಿದ್ದ ಮುರಿದ್ ವಾಯುನೆಲೆ ಕಟ್ಟಡ ನೆಲಸಮ ಮಾಡಿದ ಪಾಕಿಸ್ತಾನ !

ನವದೆಹಲಿ: ಕಳೆದ ವರ್ಷ ಪಹಲ್ಗಾಮ್‌ ಭೀಕರ ದಾಳಿಯನಂತರ ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಆಪರೇಶನ್‌ ಸಿಂಧೂರ ಸೇನಾ ಕಾರ್ಯಾಚರಣೆ ವೇಳೆ ಭಾರತೀಯ ವಾಯುಪಡೆ (IAF) ನಡೆಸಿದ ವೈಮಾನಿಕ ದಾಳಿಯಿಂದ ಪಾಕಿಸ್ತಾನದ ಅತ್ಯಂತ ಪ್ರಮುಖ ‘ಮುರಿದ್’ (Murid) ವಾಯುನೆಲೆ ಸಂಪೂರ್ಣವಾಗಿ ನುಚ್ಚುನೂರಾಗಿದೆ. ದಾಳಿಗೊಳಗಾದ ಅಲ್ಲಿನ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಅನ್ನು ಪುನರ್ನಿರ್ಮಿಸಲು ಪಾಕಿಸ್ತಾನ ನಡೆಸಿದ ಸತತ … Continued

ತೈಲ ಬಿಕ್ಕಟ್ಟು: ಪಾಕಿಸ್ತಾನದಲ್ಲಿ ಶಾಲೆಗಳಿಗೆ ರಜೆ ಘೋಷಣೆ ; ಸರ್ಕಾರಿ ಕಚೇರಿಗಳು ವಾರಕ್ಕೆ 4 ದಿನ ಮಾತ್ರ ಓಪನ್…!

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂಧನ ಉಳಿತಾಯಕ್ಕಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಮುಂದಿನ ವಾರದಿಂದ ಅನ್ವಯವಾಗುವಂತೆ ಎಲ್ಲಾ ಶಾಲೆಗಳಿಗೆ ಎರಡು ವಾರಗಳ ಕಾಲ ರಜೆ ಘೋಷಿಸಲಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳು ತಕ್ಷಣದಿಂದಲೇ ಆನ್‌ಲೈನ್ ತರಗತಿಗಳಿಗೆ ಬದಲಾಗಲಿವೆ. ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದು ಹಾಗೂ … Continued

ಟಿ20 ವಿಶ್ವಕಪ್ 2026: ಶ್ರೀಲಂಕಾ ವಿರುದ್ಧ ಗೆದ್ದರೂ ವಿಶ್ವಕಪ್‌ನಿಂದ ಹೊರಬಿದ್ದ ಪಾಕಿಸ್ತಾನ…!

ಕೊಲಂಬೊ : ಶ್ರೀಲಂಕಾದ ಪಲ್ಲೆಕೆಲೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 5 ರನ್‌ಗಳ ರೋಚಕ ಜಯ ಸಾಧಿಸಿದರೂ ಸಹ, ನಿವ್ವಳ ರನ್ ದರ (Net Run Rate) ಆಧಾರದ ಮೇಲೆ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದೆ. ಹಾಗೂ ಸೂಪರ್ 8ರ ಗುಂಪು 2ರಿಂದ ನ್ಯೂಜಿಲೆಂಡ್ ತಂಡವು ಸೆಮಿ ಫೈನಲ್‌ ಪ್ರವೇಶಿಸಿದ ಎರಡನೇ ತಂಡವಾಯಿತು. ನೆಟ್‌ ರನ್‌ … Continued