ದುರಸ್ತಿ ಸಾಧ್ಯವಾಗದೇ ‘ಆಪರೇಷನ್ ಸಿಂಧೂರ’ ವೇಳೆ ಭಾರತದ ದಾಳಿಗೆ ಧ್ವಂಸಗೊಂಡಿದ್ದ ಮುರಿದ್ ವಾಯುನೆಲೆ ಕಟ್ಟಡ ನೆಲಸಮ ಮಾಡಿದ ಪಾಕಿಸ್ತಾನ !

ನವದೆಹಲಿ: ಕಳೆದ ವರ್ಷ ಪಹಲ್ಗಾಮ್‌ ಭೀಕರ ದಾಳಿಯನಂತರ ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಆಪರೇಶನ್‌ ಸಿಂಧೂರ ಸೇನಾ ಕಾರ್ಯಾಚರಣೆ ವೇಳೆ ಭಾರತೀಯ ವಾಯುಪಡೆ (IAF) ನಡೆಸಿದ ವೈಮಾನಿಕ ದಾಳಿಯಿಂದ ಪಾಕಿಸ್ತಾನದ ಅತ್ಯಂತ ಪ್ರಮುಖ ‘ಮುರಿದ್’ (Murid) ವಾಯುನೆಲೆ ಸಂಪೂರ್ಣವಾಗಿ ನುಚ್ಚುನೂರಾಗಿದೆ. ದಾಳಿಗೊಳಗಾದ ಅಲ್ಲಿನ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಅನ್ನು ಪುನರ್ನಿರ್ಮಿಸಲು ಪಾಕಿಸ್ತಾನ ನಡೆಸಿದ ಸತತ … Continued

ಎಷ್ಟೇ ಆಫರ್‌ ನೀಡಿದ್ರೂ ಭಾರತವು ಅಮೆರಿಕದ ʼಸೂಪರ್ ಪವರ್ʼ ಯುದ್ಧ ವಿಮಾನಗಳನ್ನು ಯಾವತ್ತೂ ಖರೀದಿಸಿಲ್ಲ ಯಾಕೆ ಗೊತ್ತೆ ?

ನವದೆಹಲಿ: ಭಾರತದ ರಕ್ಷಣಾ ಪಡೆಯಲ್ಲಿ ಫ್ರಾನ್ಸ್‌ನ ರಾಫೆಲ್ ಇರಲಿ ಅಥವಾ ರಷ್ಯಾದ ಸುಖೋಯ್ ಇರಲಿ, ಅತ್ಯಾಧುನಿಕ ಯುದ್ಧ ವಿಮಾನಗಳ ದೊಡ್ಡ ಬತ್ತಳಿಕೆಯೇ ಇದೆ. ಆದರೆ  ಭಾರತದ ಬಳಿ ಒಂದೇ ಒಂದು ಅಮೆರಿಕದ  ಫೈಟರ್ ಜೆಟ್ ಇಲ್ಲ. ಹೌದು, ಭಾರತವು ರಷ್ಯಾ ಮತ್ತು ಫ್ರಾನ್ಸ್‌ನಿಂದ ಯುದ್ಧ ವಿಮಾನಗಳನ್ನು ಖರೀದಿಸುತ್ತದೆ, ಆದರೆ ಅಮೆರಿಕದಿಂದ ಖರೀದಿಸಿಲ್ಲ. ಭಾರತವು ಅಮೆರಿಕದಿಂದ ಅಪಾಚೆ … Continued

ವೀಡಿಯೊ | ಮಿಲಿಟರಿ ಇತಿಹಾಸದಲ್ಲೇ ಅತಿ ದೂರದ ಟಾರ್ಗೆಟ್‌ ಧ್ವಂಸ : 300 ಕಿಮೀ ದೂರದಲ್ಲೇ ವಿಮಾನ ಹೊಡೆದುರುಳಿಸಿದ ಭಾರತದ ಎಸ್-400…!

ನವದೆಹಲಿ: ಭಾರತೀಯ ವಾಯುಪಡೆಯು (IAF) ತನ್ನ ಅತ್ಯಾಧುನಿಕ ದೀರ್ಘ ವ್ಯಾಪ್ತಿಯ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯಾದ S-400 ಸುದರ್ಶನ ಕಾರ್ಯಾಚರಣೆಯ ರೋಚಕ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ವಾಯುಪಡೆ ಬಿಡುಗಡೆ ಮಾಡಿರುವ ಈ ವಿಡಿಯೊದಲ್ಲಿ, ರಾಡಾರ್ ವ್ಯವಸ್ಥೆಯು ಅತೀ ದೂರದಲ್ಲಿರುವ ವೈರಿ ಟಾರ್ಗೆಟ್‌ ಅನ್ನು ಪತ್ತೆಹಚ್ಚುತ್ತದೆ. ಕೂಡಲೇ ಕ್ಷಿಪಣಿಯು ಹಾರಿಹೋಗಿ ಆ ಟಾರ್ಗೆಟ್‌ ಅನ್ನು ಧ್ವಂಸಗೊಳಿಸಿದೆ. “ಸೇನಾ … Continued

ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಭೇಟಿಗೆ ಮುನ್ನ ₹3.25 ಲಕ್ಷ ಕೋಟಿ ವೆಚ್ಚದಲ್ಲಿ 114 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಡಿಎಸಿ ಒಪ್ಪಿಗೆ

ನವದೆಹಲಿ: ಭಾರತೀಯ ವಾಯುಪಡೆಯ (IAF) ಬಲವರ್ಧನೆಗಾಗಿ ಕೇಂದ್ರ ಸರ್ಕಾರವು ಐತಿಹಾಸಿಕ ತೀರ್ಮಾನವೊಂದನ್ನು ಕೈಗೊಂಡಿದೆ. ಸುಮಾರು ₹3.25 ಲಕ್ಷ ಕೋಟಿ ವೆಚ್ಚದಲ್ಲಿ 114 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಪ್ರಸ್ತಾವನೆಗೆ ರಕ್ಷಣಾ ಸಚಿವಾಲಯವು ಅಧಿಕೃತ ಒಪ್ಪಿಗೆ ನೀಡಿದೆ. ಇದು ದೇಶದ ರಕ್ಷಣಾ ಖರೀದಿ ಇತಿಹಾಸದಲ್ಲೇ ಅತಿದೊಡ್ಡ ಒಪ್ಪಂದ ಎಂದು ಗುರುತಿಸಲ್ಪಟ್ಟಿದೆ. ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ … Continued

ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಭೇಟಿಗೂ ಮುನ್ನ ಭಾರತ 114 ರಫೇಲ್ ಜೆಟ್‌ಗಳ ಖರೀದಿ ಒಪ್ಪಂದಕ್ಕೆ ಅನುಮೋದನೆ ಸಾಧ್ಯತೆ

ನವದೆಹಲಿ: ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಭಾರತ ಭೇಟಿಗೂ ಮುನ್ನವೇ, ಫ್ರಾನ್ಸ್‌ನಿಂದ 114 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಪ್ರಸ್ತಾವನೆಗೆ ರಕ್ಷಣಾ ಸ್ವಾಧೀನ ಮಂಡಳಿ (DAC) ಅನುಮೋದನೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ರಕ್ಷಣಾ ಸಚಿವ ರಾಜನಾಥ ಸಿಂಗ್ ನೇತೃತ್ವದ ಡಿಎಸಿ ಸಭೆಯು ಶೀಘ್ರದಲ್ಲೇ ನಡೆಯಲಿದ್ದು, ಈ ಬೃಹತ್ ಯೋಜನೆಗೆ ‘ಅಗತ್ಯದ ಅಂಗೀಕಾರ’ … Continued

ರಕ್ಷಣಾ ಕ್ಷೇತ್ರದಲ್ಲಿ ಭಾರತದ ಬೃಹತ್ ಹೆಜ್ಜೆ : 114 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಸಿದ್ಧತೆ

ನವದೆಹಲಿ: ಭಾರತೀಯ ವಾಯುಪಡೆಯ ಬಲವರ್ಧನೆಗಾಗಿ ಫ್ರಾನ್ಸ್‌ನಿಂದ 114 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಬೃಹತ್ ಪ್ರಸ್ತಾವನೆಯ ಕುರಿತು ಚರ್ಚಿಸಲು ರಕ್ಷಣಾ ಸಚಿವಾಲಯವು ಈ ವಾರ ಉನ್ನತ ಮಟ್ಟದ ಸಭೆಯನ್ನು ಆಯೋಜಿಸಿದೆ. ಸುಮಾರು 3.25 ಲಕ್ಷ ಕೋಟಿ ರೂಪಾಯಿ ಮೌಲ್ಯದ ಈ ಒಪ್ಪಂದವು ಭಾರತದ ರಕ್ಷಣಾ ಇತಿಹಾಸದಲ್ಲೇ ಅತ್ಯಂತ ದೊಡ್ಡದಾದ ಖರೀದಿ ಪ್ರಕ್ರಿಯೆಯಾಗಲಿದೆ. ಒಟ್ಟು 114 ವಿಮಾನಗಳ … Continued

ವೀಡಿಯೊ : ದುಬೈ ಏರ್‌ ಶೋದಲ್ಲಿ ʼತೇಜಸ್ʼ ಯುದ್ಧ ವಿಮಾನ ಅಪಘಾತ ; ಕೊನೆ ಕ್ಷಣದಲ್ಲಿ ಹೊರಬರಲು ಯತ್ನಿಸಿದ್ದ ಪೈಲಟ್‌

ನವದೆಹಲಿ: ದುಬೈ ಏರ್‌ಶೋ (Dubai Airshow)ದಲ್ಲಿ ಅಪಘಾತಕ್ಕೀಡಾದ ಭಾರತೀಯ ವಾಯುಪಡೆಯ ‘ತೇಜಸ್’ (Tejas) ಯುದ್ಧ ವಿಮಾನ ಪತನದ ಹೊಸ ವೀಡಿಯೊ ಬಿಡುಗಡೆಯಾಗಿದ್ದು, ಅದರಲ್ಲಿ ಪೈಲಟ್‌ನ ಅಂತಿಮ ಕ್ಷಣಗಳ ಸ್ಪಷ್ಟ ಚಿತ್ರಣವನ್ನು ಒದಗಿಸಿದೆ. ದುಬೈ ಏರ್‌ಶೋ ವೇಳೆ ತೇಜಸ್ ಜೆಟ್ ಕಡಿಮೆ ಎತ್ತರದಲ್ಲಿ ವೈಮಾನಿಕ ಪ್ರದರ್ಶನವನ್ನು (Aerobatic Manoeuvre) ನಿರ್ವಹಿಸುತ್ತಿದ್ದಾಗ, ನೆಲಕ್ಕೆ ಅಪ್ಪಳಿಸಿ ದೊಡ್ಡ ಬೆಂಕಿಯ ಚೆಂಡಾಗಿ … Continued

ವೀಡಿಯೊಗಳು…| ದುಬೈ ಏರ್ ಶೋನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ ; ಪೈಲಟ್ ಸಾವು : ವಿಮಾನ ಬೀಳುವ ದೃಶ್ಯಗಳು ಸೆರೆ

 ನವದೆಹಲಿ: ದುಬೈ ಏರ್ ಶೋನಲ್ಲಿ ವೈಮಾನಿಕ ಪ್ರದರ್ಶನ ನೀಡುತ್ತಿದ್ದ ಭಾರತೀಯ ವಾಯುಪಡೆಯ (IAF) ತೇಜಸ್ ಯುದ್ಧ ವಿಮಾನವು ಶುಕ್ರವಾರ ಮಧ್ಯಾಹ್ನ ಪತನಗೊಂಡಿದೆ. ಈ ಅಪಘಾತದಲ್ಲಿ ಪೈಲಟ್ ಸಾವಿಗೀಡಾಗಿದ್ದಾರೆ ಎಂದು ಭಾರತೀಯ ವಾಯುಪಡೆ ದೃಢಪಡಿಸಿದೆ. ಈ ಘಟನೆ ದುಬೈನ ಅಲ್ ಮಕ್ತೂಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ವೈಮಾನಿಕ ಪ್ರದರ್ಶನ ನೋಡಲು ಸೇರಿದ್ದ ಜನಸಮೂಹ ತೀವ್ರ ಆಘಾತಕ್ಕೆ … Continued

ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ 6 ಪಾಕ್ ವಿಮಾನಗಳನ್ನು ಹೊಡೆದುರುಳಿಸಿದ ಭಾರತದ ಸೇನೆ : ವಾಯುಪಡೆ ಮುಖ್ಯಸ್ಥ

ಬೆಂಗಳೂರು : ಆಪರೇಷನ್ ಸಿಂಧೂರ ವೇಳೆ ಐದು ಫೈಟರ್ ಜೆಟ್‌ಗಳು ಮತ್ತು ಇನ್ನೊಂದು ದೊಡ್ಡ ವಿಮಾನ ಸೇರಿದಂತೆ ಪಾಕಿಸ್ತಾನದ ಆರು ವಿಮಾನಗಳನ್ನು ಹೊಡೆದುರುಳಿಸಲಾಯಿತು ಎಂದು ಭಾರತೀಯ ವಾಯುಪಡೆ ದೃಢಪಡಿಸಿದೆ, ಇದು ದೊಡ್ಡ ಮಿಲಿಟರಿ ದಾಳಿಯ ಸಮಯದಲ್ಲಿ ಪಾಕಿಸ್ತಾನದ ಭಾಗಕ್ಕೆ ಉಂಟಾದ ಹಾನಿಯ ಪ್ರಮಾಣವನ್ನು ಬಹಿರಂಗಪಡಿಸಿದೆ. ಆಕಾಶದಲ್ಲಿ ಹೊಡೆದುರುಳಿಸಿದ ಆರು ವಿಮಾನಗಳ ಜೊತೆಗೆ, ಪಾಕಿಸ್ತಾನ ವಾಯುನೆಲೆಗಳ ಮೇಲೆ … Continued

ಬೆಂಗಳೂರು ರಸ್ತೆ ಜಗಳ ಪ್ರಕರಣಕ್ಕೆ ಟ್ವಿಸ್ಟ್ : ಐಎಎಫ್ ಅಧಿಕಾರಿಯ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲು

ಬೆಂಗಳೂರು : ಸಾಮಾಜಿಕ ಮಾಧ್ಯಮ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ತನ್ನ ಮೇಲೆ ಹಲ್ಲೆ ನಡೆಸಿ, ನಿಂದಿಸಿದ್ದಾನೆಂದು ಹೇಳಿಕೊಂಡಿದ್ದ ಭಾರತೀಯ ವಾಯುಪಡೆಯ ಅಧಿಕಾರಿ ಶಿಲಾದಿತ್ಯ ಬೋಸ್ ವಿರುದ್ಧ, ಬೆಂಗಳೂರಿನ ರಸ್ತೆ ಜಗಳದ ಪ್ರಕರಣದಲ್ಲಿ ‘ಕೊಲೆ ಯತ್ನ’ ಮತ್ತು ಕನ್ನಡ ಮಾತನಾಡದ ಕಾರಣ ಬೈಕ್‌ ಸವಾರ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸುಳ್ಳು ಹೇಳಿದ ಆರೋಪದ ಮೇಲೆ ಪ್ರಕರಣ … Continued