ಶಾಕಿಂಗ್‌…. ಜೋರಾದ ಡಿಜೆ ಮ್ಯೂಸಿಕ್‌ ಶಬ್ದಕ್ಕೆ ಮದುವೆ ಮಂಟಪದಲ್ಲೇ ಕುಸಿದುಬಿದ್ದು ಮೃತಪಟ್ಟ ವರ…!

ಸೀತಾಮರ್ಹಿ: ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ವರಮಾಲಾ ಆಚರಣೆ ವೇಳೆ ಡಿಜೆ ಮ್ಯೂಸಿಕ್‌ನ ಹೈ ಡೆಸಿಬಲ್ ಶಬ್ದದಿಂದ ಮದುವೆ ಗಂಡು ಮದುವೆ ಮಂಟಪದಲ್ಲಿಯೇ ಕುಸಿದು ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಇಂದರ್ವಾ ಗ್ರಾಮದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಮೃತನನ್ನು ಅದೇ ಜಿಲ್ಲೆಯ ಮಾಣಿಕ್ತಾರ್ ಗ್ರಾಮದ ಸುರೇಂದ್ರ ಎಂದು ಗುರುತಿಸಲಾಗಿದೆ. ಆತನನ್ನು … Continued

ಉದ್ಘಾಟನೆಗೂ ಮುನ್ನವೇ ಕುಸಿದುಬಿದ್ದ 13 ಕೋಟಿ ರೂಪಾಯಿ ವೆಚ್ಚದ 206 ಮೀಟರ್ ಉದ್ದದ ಸೇತುವೆ…!

ಪಾಟ್ನಾ: ಬೃಹತ್ ಮೋರ್ಬಿ ಸೇತುವೆ ದುರಂತದ ಸುಮಾರು ಎರಡು ತಿಂಗಳ ನಂತರ, ಬಿಹಾರದಲ್ಲಿ ಐದು ವರ್ಷಗಳ ಹಳೆಯ ಸೇತುವೆಯೊಂದು ಭಾನುವಾರ ಎರಡು ತುಂಡಾಗಿ ನದಿಗೆ ಬಿದ್ದಿದೆ. ಸಂಪರ್ಕ ರಸ್ತೆಯ ಕೊರತೆಯಿಂದಾಗಿ ಸೇತುವೆಯನ್ನು ಸಾರ್ವಜನಿಕರಿಗೆ ಇನ್ನೂ ಔಪಚಾರಿಕವಾಗಿ ಮುಕ್ತಗೊಳಿಸದ ಕಾರಣ ಇತ್ತೀಚಿನ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಬೇಗುಸರಾಯ್ ಜಿಲ್ಲೆಯ ಬುರ್ಹಿ ಗಂಡಕ್ ನದಿಗೆ ₹ 13 ಕೋಟಿ … Continued

ವಿವಾದಕ್ಕೆ ಕಾರಣವಾಯ್ತು ಗಯಾದ ವಿಷ್ಣುಪಾದ ದೇವಸ್ಥಾನಕ್ಕೆ ಸಿಎಂ ನಿತೀಶ್ ಜೊತೆ ಹಿಂದೂಯೇತರ ಸಚಿವರ ಪ್ರವೇಶ

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹಿಂದೂಯೇತರ ಸಚಿವರೊಂದಿಗೆ ವಿಷ್ಣುಪಾದ ದೇವಸ್ಥಾನಕ್ಕೆ ಪ್ರವೇಶಿಸಿರುವುದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಗಯಾದ ವಿಷ್ಣುಪಾದ ದೇವಸ್ಥಾನದಲ್ಲಿ ಹಿಂದೂಯೇತರ ಭಕ್ತರ ಪ್ರವೇಶಕ್ಕೆ ಅವಕಾಶವಿಲ್ಲ ಮತ್ತು ಕಳೆದ 100 ವರ್ಷಗಳಿಂದ ಈ ನಿಯಮ ಜಾರಿಯಲ್ಲಿದೆ. ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಹಿಂದೂಯೇತರರಿಗೆ ಪ್ರವೇಶ ನಿಷಿದ್ಧ ಎಂಬ ಸಂದೇಶದ ಫಲಕಗಳನ್ನು ಅಳವಡಿಸಲಾಗಿದೆ. ಆದಾಗ್ಯೂ, … Continued

ಬಿಹಾರ: ಏಳು ಪಕ್ಷಗಳ ಮಹಾಮೈತ್ರಿ ಸರ್ಕಾರದ ಸಿಎಂ ಆಗಿ ನಿತೀಶಕುಮಾರ, ಡಿಸಿಎಂ ಆಗಿ ತೇಜಸ್ವಿ ಯಾದವ್ ನಾಳೆ ಪ್ರಮಾಣ ವಚನ

ಪಾಟ್ನಾ: ಮಂಗಳವಾರ ಬಿಜೆಪಿ ಮೈತ್ರಿಯಿಂದ ಹೊರ ನಡೆದು ಆರ್‌ಜೆಡಿಯ ತೇಜಸ್ವಿ ಯಾದವ್ ಮತ್ತು ಇತರ ವಿರೋಧ ಪಕ್ಷಗಳನ್ನು ಜೊತೆ ಕೈಜೋಡಿಸಿ ಹೊಸ “ಮಹಾಮೈತ್ರಿ” ಘೋಷಿಸಿದ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ನಾಳೆ, ಬುಧವಾರ ಮಧ್ಯಾಹ್ನ 2 ಗಂಟೆಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಏಳು ಪಕ್ಷಗಳ ಮಹಾಘಟಬಂಧನ್ (ಮಹಾಮೈತ್ರಿಕೂಟ) ಕೆಲಸ ಮಾಡುತ್ತದೆ” ಎಂದು ನಿತೀಶ್ … Continued

ಭೂತ ಓಡಿಸುತ್ತೇನೆಂದು ಬಾಲಕಿಗೆ ಥಳಿಸಿ ಧೂಪದ ಕಡ್ಡಿಯಿಂದ ದೇಹ ಸುಟ್ಟ ಮಂತ್ರವಾದಿ ಬಂಧನ: ಬಾಲಕಿ ಆಸ್ಪತ್ರೆಗೆ ದಾಖಲು

ರಾಂಚಿ: ದುಷ್ಟಶಕ್ತಿಗಳನ್ನು ಓಡಸಿಲು 14 ವರ್ಷದ ಬಾಲಕಿಯನ್ನು ಥಳಿಸಿ, ಆಕೆಯ ದೇಹದ ಭಾಗಗಳನ್ನು ಅಗರಬತ್ತಿಗಳಿಂದ ಸುಟ್ಟ ಆರೋಪದ ಮೇಲೆ ಜಾರ್ಖಂಡ್‌ನ ಛತ್ರಾ ಜಿಲ್ಲೆಯಲ್ಲಿ ಮಂತ್ರವಾದಿಯೋರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಕಳೆದ ವಾರ ಹೋಳಿ ಆಡಿದ್ದ ಬಾಲಕಿ ನಂತರ ಬಾಲಕಿ ಅಸ್ವಸ್ಥಳಾಗಿದ್ದಳು. ಮಾಂತ್ರಿಕ ಮೌಲಾನಾ ಎಂ.ಡಿ ವಾಹಿದ್ ಎಂಬಾತ ಅವಳ ಮೈಯಲ್ಲಿ ಭೂತ ಹೊಕ್ಕಿದ್ದು. … Continued

500 ರೂ. ವಿಷಯಕ್ಕೆ ಜಡೆ ಹಿಡಿದು ಜಗ್ಗಾಡಿ ಹೊಡೆದಾಡಿಕೊಂಡ ನರ್ಸ್-ಆಶಾ ಕಾರ್ಯಕರ್ತೆ..!

ಪಾಟ್ನಾ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಹಾಯಕ ನರ್ಸ್ ಮತ್ತು ಆಶಾ ಕಾರ್ಯಕರ್ತೆ ಜುಟ್ಟು ಹಿಡಿದುಕೊಂಡು ಹೊಡೆದಾಡಿಕೊಂಡ ಘಟನೆಯ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡಿದ ಬಳಿಕ ಘಟನೆ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಬಿಹಾರದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಜಮುಯಿನ ಲಕ್ಷ್ಮೀಪುರ್ ಬ್ಲಾಕ್ ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಹಾಯಕ ನರ್ಸ್ ಮತ್ತು ಆಶಾ ಕಾರ್ಯಕರ್ತೆ ತಲೆಕೂದಲು ಹಿಡಿದುಕೊಂಡು … Continued

ದೇಶದಲ್ಲಿ ಬಿಹಾರದಲ್ಲಿ ಹೆಚ್ಚು ಬಡವರು, ಕರ್ನಾಟಕಕ್ಕೆ 19ನೇ ಸ್ಥಾನ: ರಾಜ್ಯದಲ್ಲಿ ಯಾದಗಿರಿ ಅತಿ ಬಡ ಜಿಲ್ಲೆ- ಜಿಲ್ಲಾವಾರು ಮಾಹಿತಿ ಇಲ್ಲಿದೆ

ನವದೆಹಲಿ: ನೀತಿ ಆಯೋಗದ ಮೊದಲ ಬಹು ಆಯಾಮದ ಬಡತನ ಸೂಚ್ಯಂಕ (MPI) ವರದಿಯ ಪ್ರಕಾರ ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶಗಳು ಭಾರತದ ಅತ್ಯಂತ ಬಡ ರಾಜ್ಯಗಳಾಗಿ ಹೊರಹೊಮ್ಮಿವೆ. ಬಡತನದ ಪಟ್ಟಿಯಲ್ಲಿ ಕರ್ನಾಟಕ 19ನೇ ಸ್ಥಾನ ಪಡೆದಿದೆ. ಸೂಚ್ಯಂಕದ ಪ್ರಕಾರ, ಬಿಹಾರದ 51.91 ಶೇಕಡಾ ಜನಸಂಖ್ಯೆಯು ಬಡವರಾಗಿದ್ದರೆ, ಜಾರ್ಖಂಡ್‌ನಲ್ಲಿ 42.16 ಶೇಕಡಾ, ಉತ್ತರ ಪ್ರದೇಶದಲ್ಲಿ 37.79 … Continued

ಪತಿಯೊಂದಿಗೆ ದೂರವಾಣಿಯಲ್ಲಿ ಜಗಳ : ನಾಲ್ವರಲ್ಲಿ ಮೂವರ ಅಪ್ರಾಪ್ತೆಯರನ್ನು ಕೊಳಕ್ಕೆ ನೂಕಿ ಕೊಂದ ತಾಯಿ

ಲಕ್ನೋ: ಪತಿಯ ಜೊತೆ ಜಗಳವಾಡಿದ ಪತ್ನಿ ಆ ಸಿಟ್ಟಿನಿಂದ ತನ್ನ ನಾಲ್ವರು ಅಪ್ರಾಪ್ತೆಯರನ್ನು ಕೊಳಕ್ಕೆ ತಳ್ಳಿದ್ದು, ಅದರಲ್ಲಿ ಮೂವರು ಮೃತಪಟ್ಟ ಘಟನೆ ಬಿಹಾರದಲ್ಲಿ ನಡೆದಿದೆ. ಗಿಲಬ್ಸಾ (8),ನುಸಬಾ ಖತೂನ್(3) ಮತ್ತು ಸಹೆಬಾ ಖತೂನ್ (2) ಮೃತರಾಗಿದ್ದಾರೆ. ನೂರ್ಜಹಾನ್ ನಿಸಾನ್ ಮತ್ತು ಅಸ್ಲಾಮ್ ಅಲಂ ದಂಪತಿ ನಡುವೆ ಜಗಳವಾಗಿದ್ದಕ್ಕೆ ತನ್ನ ನಾಲ್ವರು ಹೆಣ್ಣು ಮಕ್ಕಳನ್ನು ತಾಯಿ ಕೊಳಕ್ಕೆ … Continued