ವೀಡಿಯೊ..| ಬ್ಯಾಂಕಿನ ಮಹಿಳಾ ಮ್ಯಾನೇಜರ್‌ ಜೊತೆ ದುರ್ವರ್ತನೆ; ಬೆದರಿಕೆ ಹಾಕಿ-ಆಕೆಯ ಮೊಬೈಲ್ ಒಡೆದು ಹಾಕಿದ ವ್ಯಕ್ತಿಯ ಬಂಧನ

ಪಾಟ್ನಾ: ಮಹಿಳಾ ಬ್ಯಾಂಕ್ ಮ್ಯಾನೇಜರ್ ಜೊತೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿರುವ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಆಘಾತಕಾರಿ ಘಟನೆ ಬಿಹಾರದ ಪಾಟ್ನಾದ ಕೆನರಾ ಬ್ಯಾಂಕ್ ಶಾಖೆಯೊಂದರಲ್ಲಿ ನಡೆದಿದ್ದು ಈ ಘಟನೆಯದ್ದು ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ. ತಾನು ತೋರಿದ ದುರ್ವರ್ತನೆ ಕೃತ್ಯ ಸೆರೆ ಹಿಡಿಯುತ್ತಿದ್ದರು ಎನ್ನುವ ಕಾರಣಕ್ಕೆ ವ್ಯಕ್ತಿಯು ಮಹಿಳಾ … Continued

ವೀಡಿಯೊ..| ಸಮಾರಂಭದಲ್ಲಿ ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಲು ಮುಂದಾದ ಬಿಹಾರ ಸಿಎಂ ನಿತೀಶಕುಮಾರ : ಮೋದಿ ಏನು ಮಾಡಿದ್ರು ನೋಡಿ

ದರ್ಭಾಂಗ : ಬಿಹಾರದ ದರ್ಭಾಂಗದಲ್ಲಿ ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರು ಪ್ರಧಾನಿ ನರೇಂದ್ರ ಮೋದಿಯವರ ಪಾದಗಳನ್ನು ಮುಟ್ಟಿ ನಮಸ್ಕರಿಸಲು ಮುಂದಾಗಿರುವುದು ಕಂಡುಬಂದಿದೆ. ಬಿಹಾರ ಮುಖ್ಯಮಂತ್ರಿ ಪ್ರಧಾನಿ ಬಳಿಗೆ ಬರುತ್ತಿದ್ದಂತೆ ಅವರ ಪಾದ ಮುಟ್ಟಿ ಮುಂದಾಗುತ್ತಾರೆ. ಆದಾಗ್ಯೂ, ಪ್ರಧಾನಿ ಮೋದಿ ಅವರನ್ನು ನಡುವೆ ತಡೆಯುತ್ತಾರೆ, ನಂತರ ಅವರು ಅವರೊಂದಿಗೆ ಹಸ್ತಲಾಘವ ಮಾಡುತ್ತಾರೆ.ಈ ಕ್ಷಣದ … Continued

ಚುನಾವಣಾ ತಂತ್ರಜ್ಞ ಪ್ರಶಾಂತ ಕಿಶೋರ ಫೀಸ್‌ ಕೇಳಿದ್ರೆ ಶಾಕ್‌ ಆಗ್ತೀರಾ ; ಒಂದು ಸಲಹೆಗೆ ಪಡೆವ ಶುಲ್ಕ 1…10…50 ಕೋಟಿ ರೂ. ಅಲ್ಲ, ಎಷ್ಟೆಂದರೆ…

ಪಾಟ್ನಾ: ಬಿಹಾರದ ನಾಲ್ಕು ವಿಧಾನಸಭಾ ಸ್ಥಾನಗಳ ಮುಂಬರುವ ಉಪಚುನಾವಣೆಗಳಿಗೆ ಮುಂಚಿತವಾಗಿ, ಜನ ಸೂರಜ್‌ ಪಕ್ಷದ ಸಂಸ್ಥಾಪಕರಾದ ಪ್ರಶಾಂತ ಕಿಶೋರ ಅವರು ತಾವು ಚುನಾವಣಾ ತಂತ್ರಗಾರರಾಗಿ ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕನಿಗೆ ಸಲಹೆ ನೀಡಲು ಕನಿಷ್ಠ 100 ಕೋಟಿ ರೂಪಾಯಿಗಳ ಶುಲ್ಕವಾಗಿ ವಿಧಿಸುವುದಾಗಿ ಹೇಳಿದ್ದಾರೆ. ಬಿಹಾರದ ಬೆಳಗಂಜನಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಅವರು ಇದನ್ನು … Continued

ವೀಡಿಯೊ…| ಚಿನ್ನಾಭರಣ ಅಂಗಡಿ ಮಾಲೀಕ-ದರೋಡೆಕೋರರ ನಡುವೆ ಗುಂಡಿನ ಚಕಮಕಿ ; 3 ಮಂದಿಗೆ ಗಾಯ

ನವದೆಹಲಿ : ಬಿಹಾರದ ಬೇಗುಸರಾಯ್‌ನಲ್ಲಿರುವ ಆಭರಣ ಮಳಿಗೆಯೊಂದರಲ್ಲಿ ಶಸ್ತ್ರಧಾರಿಗಳ ತಂಡವೊಂದು ಹಗಲು ದರೋಡೆ ನಡೆಸಿದ ನಾಟಕೀಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂಗಡಿಯ ಮಾಲೀಕರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಆಭರಣ ಅಂಗಡಿಯ ಉದ್ಯೋಗಿ ಮತ್ತು ಇಬ್ಬರು ದರೋಡೆಕೋರರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಇಬ್ಬರು ದರೋಡೆಕೋರರನ್ನು … Continued

ಬಿಹಾರದ ಕಳ್ಳಬಟ್ಟಿ ದುರಂತ ; ಸಾವಿನ ಸಂಖ್ಯೆ 35ಕ್ಕೆ ಏರಿಕೆ

ಪಾಟ್ನಾ: ಬಿಹಾರದ ಸಿವಾನ್ ಮತ್ತು ಸರನ್ ಜಿಲ್ಲೆಗಳಲ್ಲಿ ಅಕ್ರಮ ಮದ್ಯ ಸೇವಿಸಿದ ಹತ್ತು ಮಂದಿ ಸಾವಿಗೀಡಾಗಿದ್ದು ಈ ಕಳ್ಳಬಟ್ಟಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಸರನ್ ಪೊಲೀಸ್ ಉಪ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ನೀಲೇಶಕುಮಾರ ಶುಕ್ರವಾರ ಮಾತನಾಡಿ, ಸಿವಾನ್ 28 ಸಾವುಗಳಿಗೆ ಕಾರಣವಾಗಿದ್ದರೆ, ಸರನ್‌ ಜಿಲ್ಲೆಯಿಂದ ಏಳು ಸಾವುಗಳು … Continued

ವೀಡಿಯೊ : ವಿಷಕಾರಿ ಹಾವು ಕಚ್ಚಿದ ನಂತರ ಹಾವನ್ನು ಹಿಡಿದುಕೊಂಡೇ ಆಸ್ಪತ್ರೆಯೊಳಗೆ ಬಂದ ವ್ಯಕ್ತಿ…!

ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾದ ರಸೆಲ್ಸ್ ವೈಪರ್ ಬಿಹಾರದ ಭಾಗಲ್ಪುರದಲ್ಲಿ ವ್ಯಕ್ತಿಯನ್ನು ಕಚ್ಚಿದೆ. ಮುಂದೆ ನಡೆದಿದ್ದು ಮಾತ್ರ ಅನಿರೀಕ್ಷಿತ. ರಸೆಲ್ಸ್ ವೈಪರ್ ಕಚ್ಚಿದ ನಂತರ ಪ್ರಕಾಶ ಮಂಡಲ ಎಂಬ ವ್ಯಕ್ತಿ ವಿಷಪೂರಿತ ಹಾವಿನ ಬಾಯಿಯನ್ನು ಹಿಡಿದು ಕುತ್ತಿಗೆಗೆ ಸುತ್ತಿಕೊಂಡು ಆಸ್ಪತ್ರೆಗೆ ಬಂದಿದ್ದಾರೆ. ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ತುರ್ತು ಚಿಕಿತ್ಸಾ ಕೇಂದ್ರಕ್ಕೆ ಹಾವು ಹಿಡಿದು … Continued

ಬಿಹಾರ | ‘ಜೀವಿತ ಪುತ್ರಿಕಾ’ ಉತ್ಸವದಲ್ಲಿ ಪವಿತ್ರ ಸ್ನಾನ ಮಾಡುವಾಗ 37 ಮಕ್ಕಳು ಸೇರಿ 43 ಸಾವು

ಪಾಟ್ನಾ : ಬಿಹಾರದಲ್ಲಿ ‘ಜೀವಿತ್‌ ಪುತ್ರಿಕಾ’ ಹಬ್ಬದ ಸಂದರ್ಭದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ನದಿಗಳು ಮತ್ತು ಕೊಳಗಳಲ್ಲಿ ಪವಿತ್ರ ಸ್ನಾನ ಮಾಡುವಾಗ 37 ಮಕ್ಕಳು ಸೇರಿದಂತೆ ಕನಿಷ್ಠ 43 ಜನರು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ ಹಾಗೂ ಮೂವರು ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ಸರ್ಕಾರ ಗುರುವಾರ ತಿಳಿಸಿದೆ. ಬುಧವಾರ ನಡೆದ ಉತ್ಸವದಲ್ಲಿ ರಾಜ್ಯದ 15 ಜಿಲ್ಲೆಗಳಲ್ಲಿ ಈ ಘಟನೆಗಳು … Continued

ಶವಪರೀಕ್ಷೆಗೆ ಒಯ್ಯುವಾಗ ಎದ್ದು ಕುಳಿತ ʼಸತ್ತʼ ವ್ಯಕ್ತಿ…!

ಬಿಹಾರದಲ್ಲಿ ಗೊಂದಲಕಾರಿ ಘಟನೆಯೊಂದು ತೆರೆದುಕೊಂಡಿದ್ದು, ʼಸತ್ತಿದ್ದಾನೆʼ ಎಂದು ಘೋಷಿಸಿದ್ದ ವ್ಯಕ್ತಿಯೊಬ್ಬ ಕೆಲವು ಗಂಟೆಗಳ ನಂತರ ಇದ್ದಕ್ಕಿದ್ದಂತೆ ಜೀವಂತವಾಗಿ ಎದ್ದು ಕುಳಿತಿದ್ದಾನೆ..! ಇದು ವೈದ್ಯರು ಮತ್ತು ಪೊಲೀಸರನ್ನು ಬೆರಗುಗೊಳಿಸಿತು. ನಂತರ ವ್ಯಕ್ತಿಯನ್ನು ಬಿಹಾರ ಷರೀಫ್‌ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವರದಿಗಳ ಪ್ರಕಾರ, ವ್ಯಕ್ತಿ ಸ್ನಾನಗೃಹದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಇದು ಸ್ವಚ್ಛತಾ ಸಿಬ್ಬಂದಿ ಸ್ನಾನಗೃಹದ ಬಾಗಿಲು … Continued

ಯೂ ಟ್ಯೂಬ್ ವೀಡಿಯೊ ನೋಡಿ ಶಸ್ತ್ರಚಿಕಿತ್ಸೆ ; ಬಾಲಕ ಸಾವು…

ಪಾಟ್ನಾ: ಯೂಟ್ಯೂಬ್ ವೀಡಿಯೊ ನೆಚ್ಚಿಕೊಂಡ ವೈದ್ಯನೊಬ್ಬ ಪಿತ್ತಕೋಶದಿಂದ ಕಲ್ಲು ತೆಗೆಯಲು ಆಪರೇಷನ್ ಮಾಡಿ 15 ವರ್ಷದ ಬಾಲಕ ಸಾವಿಗೀಡಾಗಿರುವ ಘಟನೆ ಬಿಹಾರದ ಸರನ್ ನಲ್ಲಿ ನಡೆದಿದೆ. ಬಾಲಕನ ಪರಿಸ್ಥಿತಿ ಹದಗೆಡುತ್ತಿದ್ದಂತೆ, ರಾಜ್ಯ ರಾಜಧಾನಿ ಪಾಟ್ನಾದ ಆಸ್ಪತ್ರೆಗೆ ಆತನನ್ನು ಸಾಗಿಸಲು ‘ವೈದ್ಯರು’ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು. ಮಾರ್ಗಮಧ್ಯೆ ಬಾಲಕ ಮೃತಪಟ್ಟಿದ್ದು, ಆತನೊಂದಿಗೆ ಇದ್ದ ‘ವೈದ್ಯ’ ಮತ್ತು ಇತರರು … Continued

34 ವರ್ಷದ ಹಿಂದೆ ₹20 ಲಂಚ ಪಡೆದ ಪ್ರಕರಣ : ಮಾಜಿ ಕಾನ್‌ಸ್ಟೆಬಲ್ ಬಂಧನಕ್ಕೆ ಕೋರ್ಟ್ ಆದೇಶ…

ಪಾಟ್ನಾ: 34 ವರ್ಷಗಳ ಹಿಂದಿನ 20 ರೂಪಾಯಿಯ ಲಂಚ ಪ್ರಕರಣವೊಂದು ಈಗ ಮತ್ತೆ ಸುದ್ದಿಯಲ್ಲಿದೆ. 1990ರಲ್ಲಿ ಬಿಹಾರದ ಸಹರ್ಸಾ ರೈಲ್ವೇ ನಿಲ್ದಾಣದಲ್ಲಿ ತರಕಾರಿ ಸಾಗಿಸುತ್ತಿದ್ದ ಮಹಿಳೆಯೊಬ್ಬರಿಂದ 20 ರೂಪಾಯಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ನ್ಯಾಯಾಲಯವೊಂದು ಮಾಜಿ ಕಾನ್‌ಸ್ಟೆಬಲ್‌ನನ್ನು ಬಂಧಿಸಲು ಆದೇಶಿಸಿದೆ. 1990ರ ಮೇ 6ರಂದು ಸಹಾರ್ಸ ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯಕ್ಕೆ ನಿಯೋಜಿತನಾಗಿದ್ದ ಬರಾಹಿಯಾದ ಕಾನ್‌ಸ್ಟೆಬಲ್ … Continued