ವಿಡಿಯೋ | ಬೆಚ್ಚಿಬೀಳಿಸುವ ದೃಶ್ಯ : ಭೀಕರ ಗಾಳಿ ರಭಸಕ್ಕೆ ತಗಡಿನ ಶೀಟ್‌ ಜೊತೆ 50 ಅಡಿ ಎತ್ತರಕ್ಕೆ ಹಾರಿಹೋಗಿ ಬಿದ್ದ ವ್ಯಕ್ತಿ

ಬರೇಲಿ/ಲಕ್ನೋ: ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಬುಧವಾರ ಅಪ್ಪಳಿಸಿದ ಪ್ರಬಲ ಚಂಡಮಾರುತ ಮತ್ತು ಮಳೆಗೆ ರಾಜ್ಯವೇ ತತ್ತರಿಸಿ ಹೋಗಿದೆ. ಬರೇಲಿ ಜಿಲ್ಲೆಯ ಬಮಿಯಾನಾ ಗ್ರಾಮದಲ್ಲಿ ಸಂಭವಿಸಿದ ಒಂದು ಘಟನೆ ಚಂಡಮಾರುತದ ತೀವ್ರತೆಗೆ ಸಾಕ್ಷಿಯಾಗಿದೆ. ಬಲವಾದ ಗಾಳಿಯ ವೇಗಕ್ಕೆ ವ್ಯಕ್ತಿಯೊಬ್ಬ ತಗಡಿನ ಶೀಟ್‌ನೊಂದಿಗೆ ಸುಮಾರು 50 ಅಡಿ ಎತ್ತರಕ್ಕೆ ಹಾರಿ ಹೋಗಿರುವ ಆಘಾತಕಾರಿ ದೃಶ್ಯಗಳು ಮುನ್ನೆಲೆಗೆ ಬಂದಿವೆ. … Continued

ಮದುವೆ ಕೆಲವೇ ಕ್ಷಣಗಳ ಮೊದಲು ವರನನ್ನು ಧಿಕ್ಕರಿಸಿ ಮದುವೆ ಸ್ಥಗಿತಗೊಳಿಸಿದ ವಧು…!

ಬರೇಲಿ: ದಂಪತಿಯ ಜೀವನದ ಅತ್ಯಂತ ಸಂತೋಷದ ದಿನವು ದುಃಸ್ವಪ್ನವಾಗಿ ಮಾರ್ಪಟ್ಟಿದೆ. ಮದುವೆಯ ವಿಧಿವಿಧಾನಗಳು ಆರಂಭಗೊಳ್ಳುವ ಕೆಲವೇ ಕ್ಷಣಗಳ ಮೊದಲು ವರನನ್ನು ಮದುವೆಯಾಗಲು ವಧಿ ನಿರಾಕರಿಸಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ (Bareilly) ನಡೆದಿದೆ ಎಂದು ವರದಿಯಾಗಿದೆ. ವರನು ಭಾರೀ ವರದಕ್ಷಿಣೆಯಾಗಿ ಕಾರು ಮತ್ತು ₹20 ಲಕ್ಷ ನಗದು ಹಣಕ್ಕೆ ಬೇಡಿಕೆ ಇಟ್ಟಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. … Continued

ಬಾಲಿವುಡ್‌ ನಟಿ ದಿಶಾ ಪಟಾನಿ ಮನೆ ಮೇಲೆ ಗುಂಡಿನ ದಾಳಿ: ಪೊಲೀಸ್‌ ಎನ್‌ಕೌಂಟರಿನಲ್ಲಿ ಇಬ್ಬರು ದಾಳಿಕೋರರು ಸಾವು

ನವದೆಹಲಿ: ಬಾಲಿವುಡ್‌ ನಟಿ ದಿಶಾ ಪಟಾನಿ ಅವರ ಬರೇಲಿ ಮನೆಯ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾದ ರೋಹಿತ್ ಗೋದಾರ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗ್‌ನ ಇಬ್ಬರು ಸದಸ್ಯರು ಬುಧವಾರ (ಸೆಪ್ಟೆಂಬರ್ 17, 2025) ದೆಹಲಿ ಪೊಲೀಸರ ವಿಶೇಷ ಘಟಕ, ಹರಿಯಾಣ ಎಸ್‌ಟಿಎಫ್ ಮತ್ತು ಉತ್ತರ ಪ್ರದೇಶ ಎಸ್‌ಟಿಎಫ್ ಜಂಟಿಯಾಗಿ ನಡೆಸಿದ ಎನ್‌ಕೌಂಟರ್‌ನಲ್ಲಿ … Continued

ಕೊಲೆಯಾದ ವ್ಯಕ್ತಿ ಜೀವಂತವಾಗಿ ಪತ್ತೆ…! 3 ವರ್ಷದಿಂದ ಜೈಲಿನಲ್ಲಿದ್ದ ಕೊಲೆ ಆರೋಪಿ ಬಿಡುಗಡೆ…!!

ಬರೇಲಿ : ರೈಲಿನಲ್ಲಿ ಮೊಬೈಲ್ ಕಳ್ಳತನದ ವಿಚಾರಕ್ಕೆ ನಡೆದ ಜಗಳದಲ್ಲಿ ಕೊಲೆಯಾಗಿದ್ದಾರೆ ಎಂದು ಭಾವಿಸಲಾದ ವ್ಯಕ್ತಿಯೊಬ್ಬರು ಇತ್ತೀಚೆಗೆ ಬಿಹಾರದಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾರೆ….! ಈ ಪ್ರಕರಣದಲ್ಲಿ ಕೊಲೆ ಆಪಾದನೆ ಹೊತ್ತು ಜೈಲು ಸೇರಿದ್ದ ಅಯೋಧ್ಯೆಯ ನಿವಾಸಿಯನ್ನು ಮೂರು ವರ್ಷಗಳ ನಂತರ ಬಿಡುಗಡೆ ಮಾಡಲಾಗಿದೆ. ಅಯೋಧ್ಯೆಯ ಖೇಮಸರಾಯ್ ಗ್ರಾಮದ ಮೂಲದ ನರೇಂದ್ರ ದುಬೆ, ಹತ್ತಿರದ ಶಹಜಹಾನ್‌ಪುರ ಜಿಲ್ಲೆಯ ವ್ಯಾಪ್ತಿಯಲ್ಲಿ … Continued

ನೇಪಾಳಕ್ಕೆ ಹೋಗಲು ಗೂಗಲ್‌ ಮ್ಯಾಪ್‌ ಸೂಚಿಸಿದ ದಾರಿಯಲ್ಲಿ ಹೋಗಿ ಬರೇಲಿಯಲ್ಲಿ ಸಿಕ್ಕಿಹಾಕಿಕೊಂಡ ಇಬ್ಬರು ಫ್ರೆಂಚ್ ಸೈಕ್ಲಿಸ್ಟ್‌ಗಳು…!

ಬರೇಲಿ: ದೆಹಲಿಯಿಂದ ಕಠ್ಮಂಡುವಿಗೆ ಸೈಕ್ಲಿಂಗ್ ಮಾಡುತ್ತಿದ್ದ ಇಬ್ಬರು ಫ್ರೆಂಚ್ ಪ್ರವಾಸಿಗರು ದಾರಿ ತಪ್ಪಿ ಬರೇಲಿಯ ಚುರೈಲಿ ಅಣೆಕಟ್ಟಿನ ಬಳಿ ತಲುಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾತ್ರಿ ಸೈಕ್ಲಿಂಗ್ ಮಾಡುತ್ತಿದ್ದ ಇವರಿಬ್ಬರನ್ನು ಕೆಲವು ಗ್ರಾಮಸ್ಥರು ಗಮನಿಸಿ ಚುರೈಲಿ ಪೊಲೀಸ್ ಹೊರ ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸರು ಸೈಕ್ಲಿಸ್ಟ್‌ಗಳನ್ನು ರಾತ್ರಿ ಗ್ರಾಮದ ಪ್ರಧಾನ ಅವರ ಮನೆಯಲ್ಲಿ ಇರಿಸಿದರು ಮತ್ತು ಅವರು … Continued

ಶಾಕಿಂಗ್‌…| ತಪ್ಪು ಮಾರ್ಗ ತೋರಿಸಿದ ಜಿಪಿಎಸ್‌ ; ಮುರಿದುಬಿದ್ದ ಸೇತುವೆಯಿಂದ ಕಾರು ನದಿಗೆ ಬಿದ್ದು ಮೂವರು ಸಾವು…!

ಜಿಪಿಎಸ್ ದೋಷದಿಂದಾಗಿ ಕಾರೊಂದು ಮುರಿದು ಬಿದ್ದ ಸೇತುವೆಯಿಂದ ರಾಮಗಂಗಾ ನದಿಗೆ ಬಿದ್ದು ಮೂವರು ಸಾವಿಗೀಡಾದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಖಲ್ಪುರ-ದತಗಂಜ್ ರಸ್ತೆಯಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಮೃತರು ಬರೇಲಿಯಿಂದ ಬದೌನ್ ಜಿಲ್ಲೆಯ ದತಗಂಜ್‌ಗೆ ಪ್ರಯಾಣಿಸುತ್ತಿದ್ದರು ಎಂದು ವರದಿಗಳು ತಿಳಿಸಿವೆ. ನ್ಯಾವಿಗೇಷನ್‌ಗಾಗಿ ಜಿಪಿಎಸ್ ಬಳಸಿ ಅದು … Continued

ವೀಡಿಯೊ…| ಜೂಜಾಟ ನಿಲ್ಲಿಸಲು ಹೋದ ಪೊಲೀಸರ ಮೇಲೆಯೇ ದೊಣ್ಣೆ, ಇಟ್ಟಿಗೆಗಳಿಂದ ದಾಳಿ ಮಾಡಿದ ಗುಂಪು ; ಇಬ್ಬರು ಪೊಲೀಸರಿಗೆ ಗಾಯ

ಲಕ್ನೋ: ದೀಪಾವಳಿ ಸಂದರ್ಭದಲ್ಲಿ ಜೂಜಾಡುತ್ತಿದ್ದವರಿಗೆ ಅಲ್ಲಿಂದ ತೆರಳಲು ಸೂಚಿಸಿದ ಪೊಲೀಸರ ಮೇಲೆ ಗುಂಪೊಂದು ದಾಳಿ ನಡೆಸಿದ ಪರಿಣಾಮ ಇಬ್ಬರು ಪೊಲೀಸರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಭೀಕರ ದಾಳಿಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಬರೇಲಿಯ ಪ್ರೇಮ ನಗರ (Prem Nagar) ಪ್ರದೇಶದಲ್ಲಿ ಅನಧಿಕೃತ … Continued

ಹೊಟ್ಟೆ ನೋವೆಂದು ಹೋದ ಮಹಿಳೆಯ ಹೊಟ್ಟೆಯೊಳಗಿತ್ತು 2 ಕೆಜಿ ತೂಕದ ಕೂದಲಿನ ಉಂಡೆ…!

ಬರೇಲಿ : ಉತ್ತರ ಪ್ರದೇಶದ ಬರೇಲಿಯ ವೈದ್ಯರು 31 ವರ್ಷದ ಮಹಿಳೆಯ ಹೊಟ್ಟೆಯಿಂದ 2 ಕಿಲೋಗ್ರಾಂ ತೂಕದ ಕೂದಲಿನ ಉಂಡೆಯನ್ನು ಹೊರತೆಗೆದಿದ್ದಾರೆ. ಮಹಿಳೆ ಅಪರೂಪದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು, ಇದರಿಂದಾಗಿ ಮಹಿಳೆ 15 ವರ್ಷಗಳಿಂದ ಕೂದಲು ತಿನ್ನುತ್ತಿದ್ದರು ಎಂದು ಹೇಳಲಾಗಿದೆ. ದೀರ್ಘಕಾಲದವರೆಗೆ ತೀವ್ರವಾದ ಹೊಟ್ಟೆ ನೋವನ್ನು ಅನುಭವಿಸುತ್ತಿದ್ದ ರೋಗಿಯು ಟ್ರೈಕೊಲೊಟೊಮೇನಿಯಾ ಎಂಬ ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದರು … Continued