ಬಿಹಾರದಲ್ಲಿ ನಿತೀಶ ಆಡಳಿತ ಅಂತ್ಯ : ಇದೇ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಸಿಎಂ ಆಗಿ ಆಯ್ಕೆ..!

ಪಾಟ್ನಾ: ಬಿಹಾರ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿಯ ನಾಯಕರೊಬ್ಬರು ಮುಖ್ಯಮಂತ್ರಿ ಪಟ್ಟಕ್ಕೇರುವುದು ಈಗ ಅಧಿಕೃತಗೊಂಡಿದೆ. ಬಿಜೆಪಿಯ ಹಿರಿಯ ನಾಯಕ ಸಾಮ್ರಾಟ ಚೌಧರಿ ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಮೂಲಗಳ ಪ್ರಕಾರ, ನೂತನ ಮುಖ್ಯಮಂತ್ರಿಗಳ ಪ್ರಮಾಣವಚನ ಸಮಾರಂಭವು ಬುಧವಾರ (ಏ.೧೫) ನಡೆಯುವ ಸಾಧ್ಯತೆಯಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಪಾಟ್ನಾಕ್ಕೆ ಭೇಟಿ … Continued

ಬಿಹಾರದಲ್ಲಿ ಹೊಸ ನಾಯಕತ್ವಕ್ಕೆ ದಾರಿ: ಪರಿಷತ್ ಸದಸ್ಯತ್ವಕ್ಕೆ ನಿತೀಶಕುಮಾರ ರಾಜೀನಾಮೆ

ಪಾಟ್ನಾ: ಬಿಹಾರದ ಸುದೀರ್ಘ ಅವಧಿಯ ಮುಖ್ಯಮಂತ್ರಿ ನಿತೀಶಕುಮಾರ ಸೋಮವಾರ (ಮಾರ್ಚ್ 30) ತಮ್ಮ ಬಿಹಾರ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈ ತಿಂಗಳ ಆರಂಭದಲ್ಲಿ ರಾಜ್ಯಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಮಾರ್ಚ್ 16 ರಂದು ನಿತೀಶಕುಮಾರ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. … Continued

10ನೇ ಅವಧಿಗೆ ಸಿಎಂ ಆಗಲು ನಿತೀಶಕುಮಾರ ಸಜ್ಜು ; ಭಾರತದಲ್ಲಿ ಅತಿ ಹೆಚ್ಚು ಅವಧಿಗೆ ಸಿಎಂ ಆದ ಟಾಪ್‌-10 ನಾಯಕರ ವಿವರ ಇಲ್ಲಿದೆ…

ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಅಭೂತಪೂರ್ವ ವಿಜಯ ಸಾಧಿಸಿದ್ದು, ಜೆಡಿಯು ಪಕ್ಷದ ನಾಯಕ ಮತ್ತು ಬಿಹಾರ ರಾಜ್ಯದಲ್ಲಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾದ ಕೀರ್ತಿಗೆ ಭಾಜನರಾದ ನಿತೀಶಕುಮಾರ ಅವರು ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಲು ಸಜ್ಜಾಗಿದ್ದಾರೆ. ನಿತೀಶಕುಮಾರ  ಈ ಹಿಂದೆ 2000ನೇ ಇಸವಿಯಲ್ಲಿ ಏಳು ದಿನಗಳ ಕಾಲ ಸೇರಿದಂತೆ ಒಟ್ಟು … Continued

ಬಿಹಾರ ಚುನಾವಣೆ | ಜೆಡಿಯು, ಬಿಜೆಪಿಗಿಂತ ಹೆಚ್ಚು ಮತ ಪಡೆದ ತೇಜಸ್ವಿ ಯಾದವರ ಆರ್‌ ಜೆಡಿ ; ಆದ್ರೂ ಹೀನಾಯವಾಗಿ ಸೋತಿದ್ದೇಕೆ..?

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ (RJD) ಕೇವಲ 25 ಸ್ಥಾನಗಳನ್ನು ಗಳಿಸಿ ಸೋಲನುಭವಿಸಿದೆ. ಆರ್‌ಜೆಡಿ ನೇತೃತ್ವದ ಮಹಾಘಟಬಂಧನ ಧೂಳೀಪಟವಾಗಿದೆ. ಆದರೂ ಆರ್‌ಜೆಡಿ ನೇತಾರ ತೇಜಸ್ವಿ ಯಾದವ್ ಅವರಿಗೆ ಒಂದು ಧನಾತ್ಮಕ ಅಂಶವಿದೆ. ಯಾಕೆಂದರೆ ಆರ್‌ಜೆಡಿ ಪಕ್ಷವು ಉಳಿದೆಲ್ಲ ಪಕ್ಷಗಳಿಗಿಂತ ಹೆಚ್ಚು ಮತಗಳನ್ನು ಪಡೆದುಕೊಂಡಿದೆ. ಚುನಾವಣಾ ಆಯೋಗದ ಪ್ರಕಾರ, ಆರ್‌ಜೆಡಿ (RJD)ಯು ಸ್ಪರ್ಧಿಸಿದ 143 … Continued

ಬಿಹಾರ ಚುನಾವಣೆ: ಇಂಡಿ ಬ್ಲಾಕ್‌ ನ ‘ಎಂವೈ’ ಸೂತ್ರಕ್ಕೆ ‘ಎಂವೈಇ’ ಸೂತ್ರ ಬಳಸಿ ಭರ್ಜರಿ ಗೆಲುವು ಸಾಧಿಸಿದ ಎನ್‌ಡಿಎ ; ಏನಿದು ಎಂವೈಇ..?

 ಪಾಟ್ನಾ: ಬಿಹಾರದ ರಾಜಕಾರಣದಲ್ಲಿ ಸುಮಾರು ಮೂರು ದಶಕಗಳ ಕಾಲ ಲಾಲು ಪ್ರಸಾದ ಯಾದವ್ ಅವರ ಆರ್‌ಜೆಡಿ ಪಕ್ಷದ ಏಳಿಗೆಗೆ ಶಕ್ತಿಯಾಗಿದ್ದ ‘ಎಂವೈ’ (ಮುಸ್ಲಿಂ-ಯಾದವ್) ಸಮೀಕರಣವು ಈಗ ಬದಲಾಗಿದೆ. 2025ರ ಬಿಹಾರ ಚುನಾವಣೆಯಲ್ಲಿ, ಹೊಸ ‘ಎಂವೈಇ’ (ಮಹಿಳೆ, ಯುವಜನತೆ ಮತ್ತು ಅತಿ ಹಿಂದುಳಿದ ವರ್ಗ-EBC) ಸಮೀಕರಣವು ಹೊರಹೊಮ್ಮಿದ್ದು, ಇದು ಈ ಸಲದ ಚುನಾವಣೆಯಲ್ಲಿ ಎನ್‌ಡಿಎಗೆ ಅಭೂತಪೂರ್ವ ಜಯ … Continued

ಬಿಹಾರ ಚುನಾವಣಾ ಫಲಿತಾಂಶ : ಭಾರೀ ಗೆಲುವಿನತ್ತ ಎನ್‌ ಡಿಎ, ಮಹಾಘಟಬಂಧನಕ್ಕೆ ಹಿನ್ನಡೆ

ಪಾಟ್ನಾ : ಬಿಹಾರದ ಬಹು ನಿರೀಕ್ಷಿತ ವಿಧಾನಸಭಾ ಚುನಾವಣೆಯ ಮತ ಎಣಿಕೆಯು ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದ್ದು, ಆರಂಭಿಕ ಟ್ರೆಂಡ್‌ಗಳಲ್ಲಿ ಮುಖ್ಯಮಂತ್ರಿ ನಿತೀಶಕುಮಾರ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟವು ಭಾರೀ ಮುನ್ನಡೆ ಸಾಧಿಸಿದೆ. ಆರ್‌ಜೆಡಿ ನೇತೃತ್ವದ ಮಹಾಘಟಬಂಧನ (Mahagathbandhan) ಹಿನ್ನಡೆಯಲ್ಲಿದೆ. ಬಿಹಾರದಲ್ಲಿ ಬಹುತೇಕ ಎಲ್ಲಾ ಚುನಾವಣಾ ಸಮೀಕ್ಷೆಗಳು (Exit Polls) ಎನ್‌ಡಿಎಗೆ ಸ್ಪಷ್ಟ ಮುನ್ನಡೆ … Continued

ಬಿಹಾರ ಚುನಾವಣೆ : ಈ ಬಾರಿ ಅಧಿಕಾರಿ ಯಾರಿಗೆ ? ಜೆವಿಸಿ ಸಮೀಕ್ಷೆಯಲ್ಲಿ ಕಂಡುಬಂದಿದ್ದೇನು..?

ಬಿಹಾರ ವಿಧಾನಸಭಾ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ, ಪ್ರಶಾಂತ್ ಕಿಶೋರ್ ಅವರ ಜನ್‌ ಸುರಾಜ್‌ ಪಕ್ಷವು ಎನ್‌ಡಿಎ (NDA) ಮತ್ತು ಮಹಾ ಮೈತ್ರಿಕೂಟದ ಜೊತೆಗೆ ಸ್ಪರ್ಧಿಸುತ್ತಿದ್ದು, ಸ್ಪರ್ಧೆಯನ್ನು ಆಸಕ್ತಿದಾಯಕವಾಗಿಸಿದೆ. ಚುನಾವಣೆಗೆ ಕೆಲದಿನಗಳ ಮೊದಲು, ಟೈಮ್ಸ್ ನೌ ಸುದ್ದಿ ಚಾನೆಲ್ -ಜೆವಿಸಿ (JVC) ನಡೆಸಿದ ಅಭಿಪ್ರಾಯ ಸಮೀಕ್ಷೆಯು … Continued

ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ ಧನಕರ ಅನಿರೀಕ್ಷಿತ ರಾಜೀನಾಮೆ ನಂತರದ ವದಂತಿಗಳು

ನವದೆಹಲಿ : ಸೋಮವಾರದ ಅಚ್ಚರಿಯ ನಡೆಯಲ್ಲಿ, 74 ವರ್ಷ ವಯಸ್ಸಿನ ಉಪರಾಷ್ಟ್ರಪತಿ ಜಗದೀಪ ಧನಕರ ಆರೋಗ್ಯದ ಕಾಳಜಿಯನ್ನು ಉಲ್ಲೇಖಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆದರೆ, ಅವರು ನೀಡಿದ ಈ ಕಾರಣವನ್ನು ಒಪ್ಪುವವರು ಕಡಿಮೆ. ಇದರ ಹಿಂದೆ ಇದಕ್ಕೂ ಮಿಗಿಲಾದ ಕಾರಣಗಳಿವೆ ಎಂದು ಅನೇಕರು ಭಾವಿಸುತ್ತಾರೆ. ಧನಕರ ಅವರ ಅಧಿಕಾರಾವಧಿಯಲ್ಲಿ ಆಗಾಗ್ಗೆ ಅವರ ಜೊತೆ ಘರ್ಷಣೆ … Continued

ವೀಡಿಯೊ..| ಸ್ವಾಗತಿಸಲು ಬಂದ ಐಎಎಸ್‌ ಅಧಿಕಾರಿ ತಲೆ ಮೇಲೆ ಹೂ ಕುಂಡ ಇಟ್ಟು ವಿಚಿತ್ರವಾಗಿ ವರ್ತಿಸಿ ಮತ್ತೊಮ್ಮೆ ಸುದ್ದಿಯಾದ ಬಿಹಾರ ಸಿಎಂ..!

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರು ತಮ್ಮ ವಿಚಿತ್ರ ವರ್ತನೆಯಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಪಾಟ್ನಾದ ಕೃಷಿ ಭವನದಲ್ಲಿ ನಡೆದ ನೇಮಕಾತಿ ಪತ್ರ ವಿತರಣಾ ಸಮಾರಂಭದಲ್ಲಿ ಅವರು ವೇದಿಕೆಯನ್ನು ತಲುಪಿದ ತಕ್ಷಣ, ಬಿಹಾರ ಸರ್ಕಾರದ ಕ್ಯಾಬಿನೆಟ್ ತಲೆ ಮೇಲೆ ಹೂ ಕುಂಡ ಇಟ್ಟಿರುವ ಘಟನೆಯ ವೀಡಿಯೊ ಈಗ ಸಾಕಷ್ಟು ಚರೆಗೆ ಗ್ರಾಸವಾಗಿದೆ. ಅವರು ವೇದಿಕೆಗೆ ಬರುತ್ತಿದ್ದಂತೆಯೇ ಹೆಚ್ಚುವರಿ … Continued

ವಕ್ಫ್ ತಿದ್ದುಪಡಿ ಮಸೂದೆಗೆ ಪಕ್ಷದ ಬೆಂಬಲ; ರಾಜೀನಾಮೆ ನೀಡಿದ ಇಬ್ಬರು ಜೆಡಿಯು ನಾಯಕರು

ನವದೆಹಲಿ:ವಕ್ಫ್ ತಿದ್ದುಪಡಿ ಮಸೂದೆಯ ಪರವಾಗಿ ಜೆಡಿಯು ಪಕ್ಷ ಬೆಂಬಲಿಸಿದ್ದಕ್ಕಾಗಿ ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ನೇತೃತ್ವದ ಪಕ್ಷಕ್ಕೆ ಇಬ್ಬರು ಪ್ರಮುಖ ಜನತಾ ದಳ ನಾಯಕರು ರಾಜೀನಾಮೆ ನೀಡಿದ್ದಾರೆ. ನಿತೀಶಕುಮಾರ ಅವರಿಗೆ ಪತ್ರ ಬರೆದಿರುವ ಹಿರಿಯ ಜೆಡಿಯು ನಾಯಕ ಮೊಹಮ್ಮದ್ ಖಾಸಿಂ ಅನ್ಸಾರಿ ಅವರು, ವಕ್ಫ್ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಬೆಂಬಲಿಸುತ್ತಿರುವ ಪಕ್ಷವು ತಮ್ಮನ್ನು “ನಿರುತ್ಸಾಹಗೊಳಿಸಿದೆ” ಎಂದು ಹೇಳಿದ್ದಾರೆ. … Continued