ಕಾರವಾರ : ಮನೆ ಮುಂದೆ ನಿಲ್ಲಿಸಿದ್ದ ಬೈಕಿನೊಳಗೆ ಅಡಗಿಕೊಂಡಿದ್ದ ಬೃಹತ್‌ ಕಾಳಿಂಗ ಸರ್ಪದ ರಕ್ಷಣೆ | ವೀಕ್ಷಿಸಿ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಶೇಜವಾಡ ಬಳಿ ಮನೆಯಂಗಳದಲ್ಲಿ ನಿಲ್ಲಿಸಿದ್ದ ಬೈಕ್‌ನಲ್ಲಿ ಕಾಳಿಂಗ ಸರ್ಪ ಪತ್ತೆಯಾದ ವಿದ್ಯಮಾನ ವರದಿಯಾಗಿದೆ…!
ಶೇಜವಾಡದ ಮಂಜುನಾಥ ನಾಯ್ಕ ಎಂಬವರ ಬೈಕ್‌‌ನ ಒಳಗೆ ಕಾಳಿಂಗ ಸರ್ಪ ಸೇರಿಕೊಂಡಿತ್ತು. ಬೈಕ್ ಹಿಂಬದಿಯ ಚೈನ್ ಪಾಕೆಟ್‌ ಬಳಿ ಈ ಬೃಹತ್‌ ಕಾಳಿಂಗ ಸರ್ಪ ಅಡಗಿಕೊಂಡಿತ್ತು.

ಇದನ್ನು ಗಮನಿಸಿದ ಮನೆಯವರು  ಅದನ್ನು ಒಮ್ಮೆ ಅವಾಕ್ಕಾದರು. ಹಾಗೂ ತಕ್ಷಣವೇ ಸ್ಥಳೀಯ ಉರಗ ರಕ್ಷಕ ಅನಿಲ ಪೂಜಾರಿ ಎಂಬವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.ತಕ್ಷಣವೇ ಆಗಮಿಸಿದ ಉರಗ ರಕ್ಷಕ ಅನಿಲ ಪೂಜಾರಿ ಅವರು ಕಾಳಿಂಗ ಸರ್ಪ ಹಿಡಿದು ರಕ್ಷಣೆ ಮಾಡಿದ್ದಾರೆ.

ಸ್ಥಳೀಯ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ನಂತರ ಅನಿಲ ಪೂಜಾರಿಯವರು ಕಾಳಿಂಗ ಸರ್ಪವನ್ನು ಸುರಕ್ಷಿತ ಪ್ರದೇಶಕ್ಕೆ ಒಯ್ದು ಬಿಟ್ಟಿದ್ದಾರೆ. ಕಾಳಿಂಗ ಸರ್ಪ ರಕ್ಷಣೆ ಮಾಡಿದ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement