ಇಸ್ಕಾನ್ ದೊಡ್ಡ ಮೋಸಗಾರ, ಗೋವುಗಳನ್ನು ಕಟುಕರಿಗೆ ಮಾರುತ್ತದೆ: ಮೇನಕಾ ಗಾಂಧಿ ಆರೋಪ, ಅಲ್ಲಗಳೆದ ಇಸ್ಕಾನ್‌ ವಕ್ತಾರ

ನವದೆಹಲಿ: ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರು ಇಂಟರ್‌ನ್ಯಾಶನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್ (ಇಸ್ಕಾನ್) ಮೇಲೆ ಮಾಡಿರುವ ಆರೋಪ ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ಇಸ್ಕಾನ್‌ ಸಂಘಟನೆಯನ್ನು ದೇಶದ “ದೊಡ್ಡ ಮೋಸಗಾರ” ಎಂದು ಕರೆದಿದ್ದಾರೆ ಹಾಗೂ ಇಸ್ಕಾನ್ ತಮ್ಮ ಗೋಶಾಲೆಗಳಿಂದ (ಗೋಶಾಲೆಗಳಿಂದ) ಕಟುಕರಿಗೆ ಹಸುಗಳನ್ನು ಮಾರಾಟ ಮಾಡುತ್ತದೆ ಎಂದು ಆರೋಪಿಸಿದ್ದಾರೆ.
“ಇಂದು ಭಾರತದಲ್ಲಿ ದೊಡ್ಡ ವಂಚಕ ಎಂದರೆ ಇಸ್ಕಾನ್. ಅವರು ಗೋಶಾಲೆಗಳನ್ನು ಸ್ಥಾಪಿಸುತ್ತಾರೆ, ಅದಕ್ಕಾಗಿ ಅವರು ಅವುಗಳನ್ನು ನಡೆಸಲು ಸರ್ಕಾರದಿಂದ ಅನಿಯಮಿತ ಪ್ರಯೋಜನಗಳನ್ನು ಪಡೆಯುತ್ತಾರೆ. ಬೃಹತ್ ಭೂಮಿಯನ್ನು ಪಡೆಯುತ್ತಾರೆ … ಎಲ್ಲವೂ. ನಾನು ಅವರ ಅನಂತಪುರ ಗೋಶಾಲೆಗೆ ಭೇಟಿ ನೀಡಿದ್ದೆ. ಒಂದು ಹಸುವೂ ಇರಲಿಲ್ಲ..ಒಂದು ಕರುವೂ ಇರಲಿಲ್ಲ. ಇದರರ್ಥ ಅವೆಲ್ಲವನ್ನೂ ಮಾರಾಟ ಮಾಡಲಾಗಿದೆ. ಇಸ್ಕಾನ್ ತನ್ನ ಎಲ್ಲಾ ಹಸುಗಳನ್ನು ಕಟುಕರಿಗೆ ಮಾರುತ್ತಿದೆ” ಎಂದು ಗಾಂಧಿ ಹೇಳುವುದನ್ನು ವೀಡಿಯೊದಲ್ಲಿ ಕೇಳಬಹುದು.
“…ಅವರು ಬೀದಿ ಬೀದಿಗಳಲ್ಲಿ ಹರೇ ರಾಮ್- ಹರೇ ಕೃಷ್ಣ ಎಂದು ಹೇಳಿಕೊಂಡು ಅಡ್ಡಾಡುವ ಇವರು ಹಾಲಿನಲ್ಲೇ ತಮ್ಮ ಜೀವನವಿದೆ ಎಂದು ಹೇಳಿಕೊಳ್ಳುತ್ತಾರೆ.  ಬಹುಶಃ ಅವರು ಕಟುಕರಿಗೆ ಮಾರಿದಷ್ಟು ಗೋವುಗಳನ್ನು ಖಂಡಿತವಾಗಿಯೂ ಬೇರೆ ಯಾರೂ ಕೂಡ ಮಾರಿರಲು ಸಾಧ್ಯವಿವೇನೋ? ಇವರೇ ಹೀಗೆ ಮಾಡಿರುವಾಗ ಬೇರೆಯವರ ಕಥೆಯೇನು? ಎಂದು ಬಿಜೆಪಿ ಸಂಸದೆ ಮೇನಕಾ ಹೇಳಿರುವ ವೀಡಿಯೋ ವೈರಲ್ ಆಗಿದೆ.

ಆರೋಪ ಅಲ್ಲಗಳೆದ ಇಸ್ಕಾನ್‌…
ವೀಡಿಯೊ ವೈರಲ್ ಆದ ಕೆಲವೇ ಗಂಟೆಗಳ ನಂತರ, ಇಸ್ಕಾನ್ ಈ ಆರೋಪವನ್ನು ಅಲ್ಲಗಳೆದಿದೆ. ಹಾಗೂ ಬಿಜೆಪಿ ಸಂಸದರ ಹೇಳಿಕೆ ಆಧಾರ ರಹಿತವಾದದ್ದು ಮತ್ತು “ಸುಳ್ಳು” ಎಂದು ಹೇಳಿದೆ.
“ಇಸ್ಕಾನ್ ಹಸು ಮತ್ತು ಗೂಳಿ ರಕ್ಷಣೆ ಮತ್ತು ಆರೈಕೆಯಲ್ಲಿ ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಹಸುಗಳು ಮತ್ತು ಹೋರಿಗಳನ್ನು ಕಟುಕರಿಗೆ ಮಾರಾಟ ಮಾಡಲಾಗುವುದಿಲ್ಲ ”ಎಂದು ಇಸ್ಕಾನ್ ವಕ್ತಾರ ಯುಧಿಸ್ಟಿರ ಗೋವಿಂದ ದಾಸ್ ಎಕ್ಸ್‌ನಲ್ಲಿ ಬರೆದಿದ್ದಾರೆ. ಗಾಂಧಿಯವರ ಹೇಳಿಕೆಗಳಿಂದ ಇಸ್ಕಾನ್‌ “ಆಶ್ಚರ್ಯಗೊಂಡಿದೆ” ಎಂದು ಅವರು ಹೇಳಿದ್ದಾರೆ.

“ಇಸ್ಕಾನ್ ಪ್ರಪಂಚದ ಅನೇಕ ಭಾಗಗಳಲ್ಲಿ ಗೋಸಂರಕ್ಷಣೆಯನ್ನು ಪ್ರಾರಂಭಿಸಿದೆ, ಇಸ್ಕಾನ್ ಪ್ರಪಂಚದ ಅನೇಕ ಭಾಗಗಳಲ್ಲಿ ಗೋಸಂರಕ್ಷಣೆಯನ್ನು ಪ್ರಾರಂಭಿಸಿದೆ, ಯಾವ ದೇಶಗಳಲ್ಲಿ ಗೋಮಾಂಸವು ಪ್ರಧಾನ ಆಹಾರವಾಗಿದೆಯೋ ಅಲ್ಲಿ ಇಸ್ಕಾನ್‌ ಗೋಶಾಲೆಗಳನ್ನು ಪ್ರಾರಂಭಿಸಿದೆ. ಭಾರತದೊಳಗೆ, ಇಸ್ಕಾನ್ ನೂರಾರು ಪವಿತ್ರ ಹಸುಗಳು ಮತ್ತು ಎತ್ತುಗಳನ್ನು ರಕ್ಷಿಸುವ ಮತ್ತು ಅವರ ಸಂಪೂರ್ಣ ಜೀವಿತಾವಧಿಯಲ್ಲಿ ವೈಯಕ್ತಿಕ ಆರೈಕೆಯನ್ನು ಒದಗಿಸುವ 60 ಕ್ಕೂ ಹೆಚ್ಚು ಗೋಶಾಲೆಗಳನ್ನು ನಡೆಸುತ್ತದೆ. ಇಸ್ಕಾನ್‌ನ ಗೋಶಾಲೆಗಳಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಹಲವು ಹಸುಗಳು ಜನರು ತೊರೆದ, ಗಾಯಗೊಂಡ ಅಥವಾ ವಧೆಯಿಂದ ರಕ್ಷಿಸಿದ ನಂತರ ನಮ್ಮ ಬಳಿಗೆ ತರಲಾಯಿತು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

“ಇತ್ತೀಚಿನ ದಿನಗಳಲ್ಲಿ, ಇಸ್ಕಾನ್ ಹಿಂದಿನ ತಲೆಮಾರುಗಳಂತೆ ಗೋವಿನ ಆರಾಧನೆ ಮತ್ತು ಆರೈಕೆಯ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡಲು ಹಸುವಿನ ಆರೈಕೆ ತಂತ್ರಗಳ ಕುರಿತು ರೈತರಿಗೆ ಮತ್ತು ಗ್ರಾಮೀಣ ಮನೆಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ಹಲವಾರು ಇಸ್ಕಾನ್ ಗೋಶಾಲೆಗಳನ್ನು ಉನ್ನತ ಗೋಸಂರಕ್ಷಣಾ ಮಾನದಂಡಗಳಿಗಾಗಿ ಗುರುತಿಸಲಾಗಿದೆ ಮತ್ತು ಪ್ರಶಂಸಿಸಲಾಗಿದೆ ಎಂದು ಇಸ್ಕಾನ್‌ ಹೇಳಿದೆ.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement