ವೀಡಿಯೊ: ಪ್ರಜ್ಞೆತಪ್ಪಿದ ಹಾವಿನ ಬಾಯಿಗೆ ಬಾಯಿ ಇಟ್ಟು ಉಸಿರು ನೀಡಿದ ಪೊಲೀಸ್‌ ಸಿಬ್ಬಂದಿ ; ಬದುಕಿದ ಹಾವು | ವೀಕ್ಷಿಸಿ

ಭೋಪಾಲ್:‌ CPR ಹೃದಯಾಘಾತದ ಸಮಯದಲ್ಲಿ ನಡೆಸುವ ತುರ್ತು ಜೀವ ಉಳಿಸುವ ವಿಧಾನವಾಗಿದೆ. ರಕ್ತದ ಹರಿವನ್ನು ಸಕ್ರಿಯಗೊಳಿಸಲು ಮತ್ತು ಹೃದಯ ಸ್ತಂಭನದಿಂದ ಬಳಲುತ್ತಿರುವ ವ್ಯಕ್ತಿಯ ಬದುಕುವ ಸಾಧ್ಯತೆಗಳನ್ನು ಹೆಚ್ಚಿಸಲು ಎದೆಯ ಸಂಕೋಚನ ಮತ್ತು ಬಾಯಿಯಿಂದ ಬಾಯಿಗೆ ಉಸಿರಾಟದ ಅಗತ್ಯವಿರುತ್ತದೆ. ಆದರೆ ಯಾರಾದರೂ ಹಾವಿಗೆ ಸಿಪಿಆರ್ ನೀಡುವುದನ್ನು ನೀವು ಎಂದಾದರೂ ಕಂಡಿದ್ದೀರಾ? ಹೌದು, ನೀವು ಕೇಳಿದ್ದು ಸರಿ, ಕ್ರಿಮಿನಾಶಕ ಬೆರೆಸಿದ ನೀರನ್ನು ಸೇವಿಸಿ ಚಲನರಹಿತವಾಗಿದ್ದ ಹಾವನ್ನು ಪುನರುಜ್ಜೀವನಗೊಳಿಸಲು ಪೋಲೀಸರೊಬ್ಬರು ಬಾಯಿಯಿಂದ ಬಾಯಿಗೆ ಪುನಶ್ಚೇತನ ನೀಡುವ ಪ್ರಯತ್ನ ಮಾಡಿದ್ದಾರೆ. ಇದರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ಈ ಘಟನೆ ಮಧ್ಯಪ್ರದೇಶದ ನರ್ಮದಾಪುರಂನಲ್ಲಿ ನಡೆದಿದೆ. ವಿಷಕಾರಿಯಲ್ಲದ ಹಾವೊಂದು ವಸತಿ ಪ್ರದೇಶದ ಪೈಪ್‌ಲೈನ್‌ ಒಳಗೆ ನುಗ್ಗಿತ್ತು. ಇದನ್ನು ಹೊರತೆಗೆಯುವ ಭರದಲ್ಲಿ ಅಲ್ಲಿನ ಜನರು ಪೈಪ್‌ ಒಳಗೆ ಕ್ರಿಮಿನಾಶಕವಿದ್ದ ನೀರನ್ನು ಸುರಿದಿದ್ದಾರೆ. ಹಾವು ಹೊರಗೆ ಬಂದಿದೆ. ಆದರೆ ಕೆಲವೇ ಸಮಯದಲ್ಲಿ ಪ್ರಜ್ಞೆ ತಪ್ಪಿದೆ.

ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸ್‌ ಪೇದೆ ಅತುಲ್ ಶರ್ಮಾ‌ ಆಗಮಿಸಿದ್ದಾರೆ. ಅವರು ಕಾನ್‌ಸ್ಟೆಬಲ್ ಅತುಲ್ ಶರ್ಮಾ ಅವರು “ಸ್ವಯಂ-ಕಲಿತ ಹಾವು ರಕ್ಷಕ” ಆಗಿದ್ದು, ಮೊದಲು ಹಾವು ಬದುಕಿರುವ ಬಗ್ಗೆ ಪರಿಶೀಲಿಸಿದ್ದಾರೆ. ಹಾವು ಬದುಕಿರುವುದು ದೃಢವಾದ ಹಿನ್ನೆಲೆಯಲ್ಲಿ ಅತುಲ್‌ ಅವರು ಹಾವಿನ ಬಾಯಿಗೆ ತನ್ನ ಬಾಯಿಯಿಟ್ಟು ಸಿಪಿಆರ್‌ ಮಾಡಿ ಉಸಿರು ನೀಡಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಹಾವು ಸಲ್ಪ ಅಲ್ಲಾಡಿದೆ. ಇದನ್ನು ನೋಡಿ ಹಾವಿನ ಮೇಲೆ ನೀರು ಸಿಂಪಡಿಸಿದ್ದಾರೆ. ಸ್ವಲ್ಪ ಸಮಯದ ನಂತರ, ಉತ್ಸಾಹಭರಿತ ಗುಂಪಿನ ಹರ್ಷೋದ್ಗಾರಗಳ ನಡುವೆ ಹಾವು ಚಲಿಸಲು ಪ್ರಾರಂಭಿಸುತ್ತದೆ.

ಎಕ್ಸ್‌ನಲ್ಲಿ ಅನುರಾಗ್ ದ್ವಾರಿ ಎಂಬವರು ವೀಡಿಯೊ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಹಾವಿಗೆ ಸಿಪಿಆರ್‌ ನೀಡುವುದು ಸಾಧ್ಯವಿಲ್ಲ. ಪ್ರಜ್ಞೆತಪ್ಪಿದ ಹಾವು ಕೆಲ ಸಮಯದ ಬಳಿಕ ತಾನಾಗಿಯೇ ಚೇತರಿಸಿಕೊಳ್ಳುತ್ತದೆ ಎಂದು ಪಶುವೈದ್ಯರು ಹೇಳುತ್ತಾರೆ.
ಇಡೀ ಘಟನೆಯ ವಿಡಿಯೋ ಮೊಬೈಲ್‌ ನಲ್ಲಿ ಸೆರೆಯಾಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅತುಲ್‌ ಅವರು ಹಾವಿನ ಪ್ರಾಣ ಉಳಿಸಲು ಮಾಡಿದ ಪ್ರಯತ್ನಕ್ಕೆ ನೆಟ್ಟಿಗರು ಶ್ಲಾಘಿಸಿದ್ದಾರೆ.

ಪ್ರಮುಖ ಸುದ್ದಿ :-   ಹಿಂದಿ ರಾಜ್ಯಗಳಿಗೆ ʼಗೋ ಮೂತ್ರʼ ರಾಜ್ಯಗಳೆಂದು ಟೀಕಿಸಿದ ಡಿಎಂಕೆ ಸಂಸದ : ಹೇಳಿಕೆಗೆ ಪಕ್ಷಾತೀತವಾಗಿ ಖಂಡನೆ ನಂತರ ಸೆಂಥಿಲ್ ಕುಮಾರ ಕ್ಷಮೆಯಾಚನೆ

 

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement