ಮಹುವಾ ಮೊಯಿತ್ರಾ ವಿರುದ್ಧದ ಆರೋಪ “ಗಂಭೀರ”ವಾದದ್ದು ಎಂದ ಸಂಸತ್ತಿನ ನೈತಿಕ ಸಮಿತಿ: ಅಕ್ಟೋಬರ್ 31 ರಂದು ಹಾಜರಾಗುವಂತೆ ಮೊಯಿತ್ರಾಗೆ ಸಮನ್ಸ್

ನವದೆಹಲಿ: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರಿಗೆ ಸಂಸತ್ತಿನ ಸಮಿತಿಯು ಸಮನ್ಸ್ ನೀಡಲಿದ್ದು, ಅಕ್ಟೋಬರ್ 31 ರಂದು ಅದರ ಮುಂದೆ ಹಾಜರಾಗುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಮಹುವಾ ಮೊಯಿತ್ರಾ ವಿರುದ್ಧದ ‘ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ್ದಕ್ಕಾಗಿ ಹಣ’ ಆರೋಪಕ್ಕೆ ಸಂಬಂಧಿಸಿದಂತೆ ನಡೆದ ಮೊದಲ ಸಭೆಯ ನಡುವೆಯೇ ಈ ವಿಷಯ ಬಹಿರಂಗವಾಗಿದೆ. ಸಂಸದೆ ಮಹುವಾ ಮೊಯಿತ್ರಾ ವಿರುದ್ಧದ ‘ಕ್ಯಾಶ್ ಫಾರ್ ಕ್ವೆರಿ’ ಆರೋಪಕ್ಕೆ ಸಂಬಂಧಿಸಿದಂತೆ ಮೊದಲ ಸಭೆ ಗುರುವಾರ ಬೆಳಿಗ್ಗೆ ನಡೆಯಿತು.
ತೃಣಮೂಲ ಕಾಂಗ್ರೆಸ್ ಸದಸ್ಯೆ ಮಹುವಾ ಮೊಯಿತ್ರಾ ವಿರುದ್ಧದ ಪ್ರಶ್ನೆಗಾಗಿ ಹಣದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ವಕೀಲ ಜೈ ಅನಂತ ದೆಹದ್ರಾಯಿ ಮತ್ತು ಬಿಜೆಪಿ ನಾಯಕ ನಿಶಿಕಾಂತ ದುಬೆ ಲೋಕಸಭೆಯ ನೈತಿಕ ಸಮಿತಿಯ ಮುಂದೆ ಹಾಜರಾಗಿದ್ದರು. ಸ್ಪೀಕರ್ ಓಂ ಬಿರ್ಲಾ ಅವರಿಗೆ ನೀಡಿದ ದೂರಿನಲ್ಲಿ, ಬಿಜೆಪಿ ಸದಸ್ಯ ನಿಶಿಕಾಂತ ದುಬೆ ಅವರು ಮೊಯಿತ್ರಾ ವಿರುದ್ಧ ಪ್ರಶ್ನೆಗಾಗಿ ಹಣದ ಆರೋಪಗಳಿಗೆ ಪೂರಕವಾಗಿ ವಕೀಲರಾದ ಜೈ ಅನಂತ ದೇಹದ್ರಾಯ್‌ ಅವರು ಹಂಚಿಕೊಂಡ ದಾಖಲೆಗಳನ್ನು ಉಲ್ಲೇಖಿಸಿದ್ದಾರೆ.

ಸಮಿತಿಯ ಮುಂದೆ ಹಾಜರಾದ ಬಿಜೆಪಿ ಸಂಸದ ನಿಶಿಕಾಂತ ದುಬೆ ಅವರು, “ಅವು ಸಾಮಾನ್ಯ ಪ್ರಶ್ನೆಗಳು.. ಎಲ್ಲಾ ಸಂಸದರಿಗೆ ಕಾಳಜಿ ಇದೆ ಎಂದು ನಾನು ಹೇಳಬಲ್ಲೆ … ಅವರು ನನ್ನನ್ನು ಕರೆದಾಗ ನಾನು ಬರುತ್ತೇನೆ … ಔಚಿತ್ಯವೇ ಎಂಬುದು ಪ್ರಶ್ನೆಯಾಗಿದೆ. ಇದು ಸಂಸತ್ತಿನ ಘನತೆಯ ಪ್ರಶ್ನೆಯಾಗಿದೆ. ನೈತಿಕ ಸಮಿತಿಯು ನನಗಿಂತ ಹೆಚ್ಚು ಚಿಂತಿತವಾಗಿದೆ ಎಂದು ಹೇಳಿದ್ದಾರೆ.
ಮೊಯಿತ್ರಾ ತನ್ನ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ ಎಂದು ಹೇಳಿದ್ದಕ್ಕೆ “ದಾಖಲೆಗಳು ಸುಳ್ಳಾಗುವುದಿಲ್ಲ,” ಎಂದು ದುಬೆ ಹೇಳಿದರು. ಸಂಸದ ನಿಶಿಕಾಂತ ದುಬೆ ಅವರು ಅಕ್ಟೋಬರ್ 15 ರಂದು ಸ್ಪೀಕರ್‌ ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ, ಮೊಯಿತ್ರಾ ಅವರ ಸಮೀಪವರ್ತಿ ವಕೀಲರು ಅದಾನಿ ಗ್ರೂಪ್ ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ಗುರಿಯಾಗಿಸಲು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಹಣ ವಿನಿಮಯ ಮಾಡಿಕೊಂಡಿದ್ದಾರೆ ಎಂಬುದಕ್ಕೆ ನಿರಾಕರಿಸಲಾಗದ ಪುರಾವೆಗಳನ್ನು ಹಂಚಿಕೊಂಡಿದ್ದಾರೆ ಎಂದು ದುಬೆ ಹೇಳಿದರು.

ಪ್ರಮುಖ ಸುದ್ದಿ :-   ಜಮ್ಮು-ಕಾಶ್ಮೀರ : ಮೂವರು ಲಷ್ಕರ್ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

‘ಆರೋಪಗಳು ಗಂಭೀರ’
ಸಮನ್ಸ್ ಕುರಿತು ಮಾಹಿತಿ ನೀಡಿದ ಸಂಸತ್ತಿನ ನೈತಿಕ ಸಮಿತಿಯ ಅಧ್ಯಕ್ಷ ವಿನೋದ ಸೋಂಕರ್ ಅವರು, “…ಸಮಿತಿ ಗುರುವಾರದಂದು ಸಮನ್ಸ್ ನೀಡಲಾದ ವಕೀಲ ಮತ್ತು ನಿಶಿಕಾಂತ ದುಬೆ ಇಬ್ಬರನ್ನೂ ಆಲಿಸಿದೆ. ಅವರ ಸಾಕ್ಷ್ಯವನ್ನು ಪರಿಶೀಲಿಸಲಾಗಿದೆ. ಅದರ ಗಂಭೀರತೆಯನ್ನು ಪರಿಶೀಲಿಸಲಾಗಿದೆ, ಸಮಿತಿ ಅಕ್ಟೋಬರ್ 31 ರಂದು ತನ್ನ ಮುಂದೆ ಹಾಜರಾಗುವಂತೆ ಮಹುವಾ ಮೊಯಿತ್ರಾ ಅವರಿಗೆ ಸಮನ್ಸ್ ನೀಡಲು ನಿರ್ಧರಿಸಿದೆ. ಎರಡನೆಯದಾಗಿ, (ದರ್ಶನ್) ಹಿರಾನಂದಾನಿ, ಮಹುವಾ ಮೊಯಿತ್ರಾ ಮತ್ತು ವಕೀಲ (ಜೈ ಅನಂತ್ ದೆಹದ್ರಾಯಿ) ನಡುವಿನ ಸಂಭಾಷಣೆಯ ವಿವರಗಳಿಗಾಗಿ ಸಮಿತಿಯು ಐಟಿ ಸಚಿವಾಲಯ ಮತ್ತು ಎಂಎಚ್‌ಎಗೆ ಪತ್ರಗಳನ್ನು ಕಳುಹಿಸಲು ನಿರ್ಧರಿಸಿದೆ ಎಂದು ಹೇಳಿದರು.
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಬಿಜೆಪಿ ಸದಸ್ಯ ವಿನೋದಕುಮಾರ ಸೋಂಕರ್ ನೇತೃತ್ವದ ಸಮಿತಿಗೆ ವಿಷಯ ತಿಳಿಸಿದ್ದಾರೆ. ದೆಹದ್ರಾಯ್ ಅವರು ನೈತಿಕ ಸಮಿತಿಯ ಮುಂದೆ ತಮ್ಮ ಹೇಳಿಕೆಯನ್ನು ದಾಖಲಿಸಿದ ಮೊದಲ ವ್ಯಕ್ತಿ, ದುಬೆ ಮಧ್ಯಾಹ್ನ ಸಮಿತಿಯ ಮುಂದೆ ಹಾಜರಾದರು. ಸಮಿತಿಯು ಕೇಳುವ ಯಾವುದೇ ಪ್ರಶ್ನೆಗಳಿಗೆ ನಾನು ಉತ್ತರಿಸುತ್ತೇನೆ ಎಂದು ದುಬೆ ಸುದ್ದಿಗಾರರಿಗೆ ತಿಳಿಸಿದರು.

ಪ್ರಮುಖ ಸುದ್ದಿ :-   ಇಂದು ಕರ್ನಾಟಕದ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ; ಯಲ್ಲೋ ಅಲರ್ಟ್‌

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement