ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಮಾಹೆವಾಘಾಟ್ ಪ್ರದೇಶದ ಹಳ್ಳಿಯೊಂದರಲ್ಲಿ 19 ವರ್ಷದ ಅತ್ಯಾಚಾರ ಸಂತ್ರಸ್ತೆಯ ಕೊಲೆಯ ಪ್ರಮುಖ ಆರೋಪಿಯನ್ನು ಶನಿವಾರ ಎನ್ಕೌಂಟರ್ ನಡೆಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪರಾಧ ಎಸಗಿದಾಗ ಜಾಮೀನಿನ ಮೇಲೆ ಹೊರಗಿದ್ದ ಪವನ್ ನಿಶಾದ್ ಎಂಬ ಆರೋಪಿ ತನ್ನನ್ನು ಸುತ್ತುವರಿದಿದ್ದ ಪೊಲೀಸರ ಮೇಲೆ ಗುಂಡು ಹಾರಿಸಿದ ನಂತರ ಪ್ರತಿಯಾಗಿ ಗುಂಡು ಹಾರಿಸಿದ ಕ್ರಮವಾಗಿ ಎರಡೂ ಕಾಲುಗಳಿಗೆ ಗುಂಡೇಟಿನ ಗಾಯಗಳಾಗಿವೆ. ಆರೋಪಿಯು ತನ್ನ ತಲೆಯ ಮೇಲೆ ₹ 25,000 ನಗದು ಬಹುಮಾನವನ್ನು ಹೊಂದಿದ್ದ. ಪೊಲೀಸರು ಎನ್ಕೌಂಟರ್ ನಡೆಸಿ 315 ಬೋರ್ ದೇಶ ನಿರ್ಮಿತ ಬಂದೂಕು ಮತ್ತು ಕೆಲವು ಜೀವಂತ ಕಾಟ್ರಿಡ್ಜ್ ಸಮೇತ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್ಪಿ-ಕೌಶಂಬಿ ಬ್ರಿಜೇಶಕುಮಾರ ಶ್ರೀವಾಸ್ತವ ತಿಳಿಸಿದ್ದಾರೆ. ನವೆಂಬರ್ 22 ರಂದು, ಇದೇ ಕೊಲೆ ಪ್ರಕರಣದ ಮತ್ತೊಬ್ಬ ಆರೋಪಿ ಅಶೋಕ ನಿಶಾದ್ ಎಂಬಾತನನ್ನು ಸಹ ಎನ್ಕೌಂಟರ್ ನಂತರ ಪೊಲೀಸರು ಬಂಧಿಸಿದ್ದರು, ಆತನ ಕಾಲಿಗೆ ಬುಲೆಟ್ ಗಾಯವಾಗಿತ್ತು.
ಮೇ 2022 ರಲ್ಲಿ ಮಾಹೆವಾಘಾಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ತನ್ನ ಗ್ರಾಮದ ಆಗ ಅಪ್ರಾಪ್ತಳಾಗಿದ್ದ 19 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಪವನ್ ಎಂಬಾತ ಜೈಲಿಗೆ ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಇತ್ತೀಚೆಗೆ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ನಂತರ ಸಂತ್ರಸ್ತೆಯ ಮೇಲೆ ಪ್ರಕರಣ ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರಿದ್ದ ಮತ್ತು ಅವಳು ನಿರಾಕರಿಸಿದಾಗ, ಅವನು ತನ್ನ ಮೂವರು ಸಹೋದರರಾದ ಅಶೋಕ, ಪ್ರಭು ಮತ್ತು ಲೋಕಚಂದ್ ಎಂಬವರ ಜೊತೆಗೂಡಿ ನವೆಂಬರ್ 20 ರಂದು ಕೊಡಲಿಯಿಂದ ಕೊಚ್ಚಿ ಯುವತಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶೇಷ ಕಾರ್ಯಾಚರಣೆ ಗುಂಪಿನ (ಎಸ್ಒಜಿ) ಸಿಬ್ಬಂದಿ ಮತ್ತು ಪೊಲೀಸ್ ತಂಡ ಶನಿವಾರ ಬೆಳಿಗ್ಗೆ ಯಮುನಾ ನದಿಯ ಬಳಿ ಆರೋಪಿಯನ್ನು ಸುತ್ತುವರೆದಿದೆ. ಅಲ್ಲಿ ಅಡಗಿಕೊಂಡಿದ್ದ ಆರೋಪಿ ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದ್ದು, ನಂತರ ಪೊಲೀಸರು ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿದ ನಂತರ ಆರೋಪಿಯ ಎರಡೂ ಕಾಲುಗಳಿಗೆ ಗುಂಡು ತಗುಲಿ ಗಾಯಗಳಾಗಿವೆ ಎಂದು ಕೌಶಂಬಿ ಎಸ್ಪಿ ಶ್ರೀವಾಸ್ತವ ತಿಳಿಸಿದ್ದಾರೆ.
ಇಬ್ಬರು ಆರೋಪಿಗಳಾದ ಪ್ರಭು ಮತ್ತು ಲೋಕಚಂದ್ ಇನ್ನೂ ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಹೇಳಿದರು.
ಹತ್ಯೆಯ ಹದಿನೈದು ದಿನಗಳ ಮೊದಲು ಪವನ್ಗೆ ಜಾಮೀನು ಸಿಕ್ಕಿತು ಎಂದು ಸಂತ್ರಸ್ತೆಯ ಸಂಬಂಧಿಕರು ಹೇಳಿದ್ದಾರೆ. ನಂತರ ಆತ ಮತ್ತು ಆತನ ಸಹೋದರ ಅಶೋಕ ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳಲು ಅತ್ಯಾಚಾರ ಸಂತ್ರಸ್ತೆಯ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಮೂರು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ನವೆಂಬರ್ 20 ರಂದು, ಯುವತಿ ಮತ್ತು ಆಕೆಯ ಅತ್ತಿಗೆ ಮತ್ತೆ ಹೊಸ ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದರು. ಅವರು ಮನೆಗೆ ಹಿಂದಿರುಗುತ್ತಿದ್ದಾಗ ಆರೋಪಿ ಪವನ್ ನಿಶಾದ್, ಆತನ ಸಹೋದರರಾದ ಅಶೋಕ್, ಪ್ರಭು ಮತ್ತು ಲೋಕಚಂದ್ ಆಕೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ಸಂತ್ರಸ್ತೆಯ ಸೊಸೆಯ ದೂರಿನ ಮೇರೆಗೆ ಮಾಹೆವಾಘಾಟ್ ಪೊಲೀಸ್ ಠಾಣೆಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ