ನವದೆಹಲಿ: ಪ್ರಮುಖ ಬೆಳವಣಿಗೆಯಲ್ಲಿ, ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದ ಮಾಸ್ಟರ್ ಮೈಂಡ್ ಮತ್ತು ಆರನೇ ಆರೋಪಿ ಗುರುವಾರ ದೆಹಲಿ ಪೊಲೀಸರ ಮುಂದೆ ಶರಣಾಗಿದ್ದಾನೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಆರೋಪಿ ಲಲಿತ್ ಝಾ ಸ್ವತಃ ದೆಹಲಿಯ ಕರ್ತವ್ಯ ಮಾರ್ಗವನ್ನು ತಲುಪಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಈ ವೇಳೆ ಮಹೇಶ ಎಂಬ ವ್ಯಕ್ತಿ ಈತನ ಜೊತೆಗಿದ್ದ ಎನ್ನಲಾಗಿದೆ. ದೆಹಲಿ ಪೊಲೀಸರು ನಂತರ ಲಲಿತ್ ಝಾನನ್ನು ವಿಶೇಷ ಸೆಲ್ಗೆ ಹಸ್ತಾಂತರಿಸಿದರು. ಗಮನಾರ್ಹವಾಗಿ, ಝಾ ಈ ಘಟನೆಯ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತದೆ. ಈ ಘಟನೆಯ ಹಿಂದೆ ದೊಡ್ಡ ಸಂಚು ಇರಬಹುದೆಂದು ದೆಹಲಿ ಪೊಲೀಸರು ಶಂಕಿಸಿದ್ದಾರೆ.
ಮೂಲಗಳ ಪ್ರಕಾರ, ಆರೋಪಿಯನ್ನು ಬಂಧಿಸಲು ದೆಹಲಿ ಪೊಲೀಸರ ತಂಡವು ರಾಜಸ್ಥಾನದ ನಾಗೌರ್ನಲ್ಲಿಯೂ ಬೀಡುಬಿಟ್ಟಿತ್ತು. ಝಾ ಎಲ್ಲಾ ಆರೋಪಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎಂದು ನಂಬಲಾಗಿದೆ ಮತ್ತು ಆತನ ಸೂಚನೆಯ ಮೇರೆಗೆ ಭದ್ರತಾ ಉಲ್ಲಂಘನೆ ಮಾಡಲಾಗಿದೆ ನಡೆಸಲಾಗಿದೆ.
ಸಂಸತ್ತಿನ ಹೊರಗೆ ನಡೆದ ಪ್ರತಿಭಟನೆಯ ವೀಡಿಯೋವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದಾತ ಝಾ. ಡಿಸೆಂಬರ್ 13 ರಂದು ನಡೆದ ಘಟನೆಗೂ ಮುನ್ನ ಆತ ಇತರ ನಾಲ್ವರು ಆರೋಪಿಗಳ ಫೋನ್ಗಳನ್ನು ತೆಗೆದುಕೊಂಡು ಪರಾರಿಯಾಗಿದ್ದ ಎಂಬುದು ಗಮನಾರ್ಹ.
ನಿಮ್ಮ ಕಾಮೆಂಟ್ ಬರೆಯಿರಿ