ವಿಮಾನದಲ್ಲಿ ರಾಮ ನಾಮ ಬರೆದ ಕೆ.ಎಚ್‌. ಮುನಿಯಪ್ಪ : 20 ವರ್ಷಗಳಿಂದ ರಾಮ ಕೋಟಿ ಬರೆಯುತ್ತಿದ್ದೇನೆ ಎಂದ ಸಚಿವರು

ನವದೆಹಲಿ: ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಹೋಗದಿರಲು ನಿರ್ಧರಿಸಿರುವ ವಿಚಾರ ಬೆನ್ನಲ್ಲೇ ಬಿಜೆಪಿ-ಕಾಂಗ್ರೆಸ್ ನಾಯಕರ ನಡುವೆ ಪರಸ್ಪರ ವಾಗ್ವಾದ ಜೋರಾಗಿದೆ. ಇದೇ ವೇಳೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಾಮನಾಮ ಜಪ ಬರೆಯುತ್ತಿದ್ದ ವೀಡಿಯೊ ಕೂಡ ವೈರಲ್ ಆಗಿದೆ.
ಕೆ.ಎಚ್.‌ ಮುನಿಯಪ್ಪ ಅವರು ಎಐಸಿಸಿ ಸಭೆ ನಿಮಿತ್ತ ನವದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ವಿಮಾನದಲ್ಲಿ ಕುಳಿತುಕೊಂಡೇ ರಾಮ ಕೋಟಿ ಬರೆದಿದ್ದಾರೆ. ಅದಕ್ಕಾಗಿಯೇ ಒಂದು ನೋಟ್‌ಬುಕ್‌ ಅನ್ನು ಇಟ್ಟುಕೊಂಡಿದ್ದು, ಅದರಲ್ಲಿ ಅವರು ರಾಮ ಕೋಟಿ ಎಂದು ಬರೆದಿದ್ದಾರೆ. ಸದ್ಯ ಈ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.
ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಗೈರಾಗುವ ನಿರ್ಧಾರ ಪ್ರಕಟಿಸಿದ ನಂತರ ಕಾಂಗ್ರೆಸ್ ನಾಯಕರು ರಾಮನ ವಿರೋಧಿಗಳು ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದ ವೇಳೆಯೇ ಕಾಂಗ್ರೆಸ್ ಸಚಿವರ ಈ ವೀಡಿಯೊ ಭಾರೀ ಚರ್ಚೆಗೆ ಕಾರಣವಾಗಿದೆ.

ವಿಮಾನದಲ್ಲಿ ರಾಮ ನಾಮ ಬರೆದ ವಿಚಾರವಾಗಿ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಮುನಿಯಪ್ಪ, ನಾನೂ ರಾಮನ ಭಕ್ತ. ಕಳೆದ 20 ವರ್ಷಗಳಿಂದ ರಾಮ ಕೋಟಿ ಬರೆಯುತಿದ್ದೇನೆ ಎಂದು ಹೇಳಿದ್ದಾರೆ.
ನಾನು ಶ್ರೀರಾಮನ ಭಕ್ತ. ಪ್ರತಿನಿತ್ಯ ರಾಮಕೋಟಿ ಬರೆಯುತ್ತೇನೆ. ನಾವು ಭಕ್ತಿಯನ್ನು ತೋರ್ಪಡಿಕೆ ಮಾಡುವುದಿಲ್ಲ. ಇದು ನಮ್ಮ ನಿತ್ಯಪೂಜೆಯಾಗಿದೆ. ನಿತ್ಯಪೂಜೆ ಮಾಡುವವರು ಅಲ್ಲಿಗೆ ಹೇಗಬೇಕು ಎಂದಿಲ್ಲ. ಯಾಕೆಂದರೆ ರಾಮನನ್ನು ನಾವು ಇಲ್ಲಿಯೇ ನೋಡುತ್ತೇವೆ. ಬಿಜೆಪಿಯವರು ರಾಜಕೀಯಕ್ಕೆ ಈ ವಿಚಾರ ಬಳಸಿಕೊಳ್ಳುತ್ತಿದ್ದಾರೆ. ದೇವರ ಹೆಸರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು.
ಕಾಂಗ್ರೆಸ್ಸಿನ ಪತಿಯೊಬ್ಬ ಹಿಂದುವೂ ರಾಮ ಭಕ್ತನೇ. ಅದರಲ್ಲಿ ಎರಡು ಮಾತಿಲ್ಲ. ಭಕ್ತಿ ಎನ್ನುವುದು ತೋರ್ಪಡಿಕೆಯಲ್ಲ. ಅದು ತೋರ್ಪಡಿಕೆಯೂ ಆಗಬಾರದು. ಅದು ನಮ್ಮೊಳಗೆ ಇರಬೇಕು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement