ನಿಮ್ಮ ಧೈರ್ಯ-ಸಂಕಲ್ಪಕ್ಕೆ ನಮ್ಮ ಸೆಲ್ಯೂಟ್‌…: ಎರಡೂ ತೋಳುಗಳಿಲ್ಲದ ಕ್ರಿಕೆಟಿಗನ ಆಟದ ಕೌಶಲ್ಯಕ್ಕೆ ಬೆರಗಾದ ಸಚಿನ್ ತೆಂಡೂಲ್ಕರ್, ಅದಾನಿ | ವೀಕ್ಷಿಸಿ

ಜಮ್ಮು ಮತ್ತು ಕಾಶ್ಮೀರ ಪ್ಯಾರಾ ಕ್ರಿಕೆಟ್ ತಂಡದ ನಾಯಕ ಅಮೀರ್ ಹುಸೇನ್ ಲೋನ್ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಎರಡು ತೋಳುಗಳಿಲ್ಲದ ಕ್ರಿಕೆಟಿಗ ಅಮೀರ್ ಅವರು ಕ್ರಿಕೆಟ್ ಆಡಲು ಅಪ್ರತಿಮ ಸಂಕಲ್ಪವನ್ನು ತೋರಿಸುವ ವೀಡಿಯೊವನ್ನು ಸುದ್ದಿ ಸಂಸ್ಥೆ ಎಎನ್‌ಐ (ANI) ಹಂಚಿಕೊಂಡ ನಂತರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸ್ಪೂರ್ತಿದಾಯಕ ದೃಶ್ಯಗಳನ್ನು ಗಮನಿಸಿ, ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಪ್ಯಾರಾ ಕ್ರಿಕೆಟಿಗನಿಗೆ ‘ಸೆಲ್ಯೂಟ್’ ಮಾಡಿದ್ದಾರೆ ಹಾಗೂ ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡೂಲ್ಕರ್‌ ಅವರು ಕ್ರಿಕೆಟಿಗ ಅಮೀರ್‌ ಅವರನ್ನು ಭೇಟಿಯಾಗಿ ಅವರಿಂದ ಜೆರ್ಸಿ ಪಡೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಭಾರತದ ಬಿಲಿಯನೇರ್‌ ಗೌತಮ ಅದಾನಿ ಅವರು ತಮ್ಮ ಅಧಿಕೃತ X ಖಾತೆಯಲ್ಲಿ ವೀಡಿಯೊವನ್ನು ಮರುಹಂಚಿಕೊಂಡಿದ್ದಾರೆ. ಅಮೀರ್ ಅವರ ದೃಢಸಂಕಲ್ಪಕ್ಕೆ ಬೆರಗಾಗಿದ್ದೇನೆ ಎಂದು ಹೇಳಿರುವ ಅದಾನಿ, ತಮ್ಮ ಅದಾನಿ ಫೌಂಡೇಶನ್ ಶೀಘ್ರದಲ್ಲೇ ಅಮೀರ್‌ ಅವರನ್ನು ಸಂಪರ್ಕಿಸುತ್ತದೆ ಎಂದು ಹೇಳಿದ್ದಾರೆ.
“ಅಮೀರ್ ಅವರ ಈ ಭಾವನಾತ್ಮಕ ಕಥೆ ಅದ್ಭುತವಾಗಿದೆ! ನಿಮ್ಮ ಧೈರ್ಯ, ಆಟದ ಮೇಲಿನ ಸಮರ್ಪಣೆ ಮತ್ತು ಪ್ರತಿಕೂಲ ಸಂದರ್ಭಗಳಲ್ಲಿಯೂ ಎಂದಿಗೂ ಧೃತಿಗೆಡದ ಮನೋಭಾವಕ್ಕೆ ನಾವು ನಮಸ್ಕರಿಸುತ್ತೇವೆ. ಅದಾನಿ ಫೌಂಡೇಶನ್ ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸುತ್ತದೆ ಮತ್ತು ಈ ಅನನ್ಯ ಪ್ರಯಾಣದಲ್ಲಿ ನಿಮಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತದೆ. ನಿಮ್ಮ ಹೋರಾಟ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ” ಎಂದು ಅದಾನಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಗಮನಾರ್ಹವಾಗಿ, ಸಚಿನ್ ತೆಂಡೂಲ್ಕರ್ ಕೂಡ ಒಂದು ದಿನದ ಮೊದಲು ತಮ್ಮ X ಪ್ರೊಫೈಲ್‌ನಲ್ಲಿ ವೀಡಿಯೊವನ್ನು ಮರುಹಂಚಿಕೊಂಡಿದ್ದಾರೆ. ಅಮೀರ್ ಅವರ ಪ್ರಯಾಣದಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಹೇಳಿದ್ದಾರೆ ಮತ್ತು ಅಮೀರ್‌ ಅವರನ್ನು ಭೇಟಿಯಾಗಲು ಮತ್ತು ಅವರ ಜರ್ಸಿಯನ್ನು ಪಡೆಯಲು ಸಹ ಆಶಿಸಿದ್ದಾರೆ. ” ಅಮೀರ್ ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದಾರೆ. ಇದನ್ನು ನೋಡುವಾಗ ನಾನು ತುಂಬಾ ಸ್ಪರ್ಶಿಸಿದ್ದೇನೆ! ಅವರು ಆಟದ ಬಗ್ಗೆ ಎಷ್ಟು ಪ್ರೀತಿ ಮತ್ತು ಸಮರ್ಪಣಾಭಾವವನ್ನು ಹೊಂದಿದ್ದಾರೆಂದು ತೋರಿಸುತ್ತದೆ. ನಾನು ಅವರನ್ನು ಒಂದು ದಿನ ಭೇಟಿಯಾಗುತ್ತೇನೆ ಮತ್ತು ಅವರ ಹೆಸರಿನ ಜೆರ್ಸಿಯನ್ನು ಪಡೆಯುತ್ತೇನೆ ಎಂದು ಭಾವಿಸುತ್ತೇನೆ. ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದ್ದಕ್ಕಾಗಿ ಧನ್ಯವಾದಗಳು ಎಂದು ಸಚಿನ್ ತಮ್ಮ ಎಕ್ಸ್ ಪ್ರೊಫೈಲ್‌ನಲ್ಲಿ ಬರೆದಿದ್ದಾರೆ.

ಪ್ರಮುಖ ಸುದ್ದಿ :-   ಮಾದಕ ವಸ್ತು ಪ್ರಕರಣ : ನಟ ಶ್ರೀಕಾಂತ ಬಂಧನ

ಅಮೀರ್ ಹುಸೇನ್ ಲೋನ್ ಯಾರು?
ಅಮೀರ್ ಹುಸೇನ್ ಲೋನ್ ಅವರು ಪ್ಯಾರಾ ಕ್ರಿಕೆಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ನಾಯಕರಾಗಿರುವ ವಿಕಲ ಚೇತನ ಕ್ರಿಕೆಟಿಗರಾಗಿದ್ದಾರೆ. ಅವರು ಕೇವಲ 8 ವರ್ಷದವರಾಗಿದ್ದಾಗ ಮಾರಣಾಂತಿಕ ಅಪಘಾತದಿಂದ ಎರಡು ತೋಳುಗಳನ್ನು ಕಳೆದುಕೊಂಡಿದ್ದಾರೆ. 34 ವರ್ಷ ವಯಸ್ಸಿನ ಅಮೀರ್‌ 8 ವರ್ಷದವರಾಗಿದ್ದಾಗ ತನ್ನ ತಂದೆಯ ಗಿರಣಿಯಲ್ಲಿ ಸಂಭವಿಸಿದ ಅವಘಡದಲ್ಲಿ ತನ್ನ ಎರಡೂ ಕೈಗಳನ್ನು ಕಳೆದುಕೊಂಡರು. ಇವರು ತನ್ನ ತಲೆ ಮತ್ತು ಅವನ ಭುಜಗಳ ನಡುವೆ ಬ್ಯಾಟ್‌ ಇಟ್ಟುಕೊಂಡು ಬ್ಯಾಟ್‌ ಮಾಡುತ್ತಾರೆ. ಕಾಲುಗಳಿಂದ ಬೌಲ್‌ ಮಾಡುತ್ತಾರೆ.
“ಅಪಘಾತದ ನಂತರ, ನಾನು ಭರವಸೆ ಕಳೆದುಕೊಳ್ಳಲಿಲ್ಲ ಮತ್ತು ಕಷ್ಟಪಟ್ಟು ಕೆಲಸ ಮಾಡಿದ್ದೇನೆ, ಕ್ರಿಕೆಟ್‌ ಕಲಿತಿದ್ದೇನೆ, ನಾನು ಎಲ್ಲವನ್ನೂ ಮಾಡಬಲ್ಲೆ ಮತ್ತು ನಾನು ಯಾರನ್ನೂ ಅವಲಂಬಿಸಿಲ್ಲ ಎಂದು ಅಮೀರ್ ಹೇಳಿದ್ದಾರೆ.

“ನಾನು 2013 ರಲ್ಲಿ ದೆಹಲಿಯಲ್ಲಿ ರಾಷ್ಟ್ರೀಯ ತಂಡದಲ್ಲಿ ಆಡಿದ್ದೇನೆ ಮತ್ತು 2018 ರಲ್ಲಿ ನಾನು ಬಾಂಗ್ಲಾದೇಶ ವಿರುದ್ಧ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದೇನೆ. ನಂತರ ನಾನು ನೇಪಾಳ, ಶಾರ್ಜಾ ಮತ್ತು ದುಬೈನಲ್ಲಿ ಕ್ರಿಕೆಟ್ ಆಡಿದ್ದೇನೆ. ನಾನು ನನ್ನ ಕಾಲಿನಿಂದ (ಬೌಲಿಂಗ್) ಮತ್ತು ನನ್ನ ಭುಜದ ಮೇಲೆ ಬ್ಯಾಟಿಂಗ್ ಮಾಡುವುದನ್ನು ನೋಡಿ ಎಲ್ಲರೂ ಬೆರಗಾಗಿದ್ದಾರೆ. ಮತ್ತು ಕ್ರಿಕೆಟ್ ಆಡಲು ನನಗೆ ಶಕ್ತಿ ನೀಡಿದ ದೇವರಿಗೆ ನಾನು ಧನ್ಯವಾದ ಹೇಳುತ್ತೇನೆ” ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

ಮಹಾನ್ ವ್ಯಕ್ತಿಗಳು ನನಗಾಗಿ ಟ್ವೀಟ್ ಮಾಡುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ನಾನು ತುಂಬಾ ಸಂತೋಷವಾಗಿದ್ದೇನೆ. ನನ್ನ ಹೋರಾಟಕ್ಕೆ ಪ್ರತಿಫಲ ಸಿಗುತ್ತಿದೆ ಎಂದು ಭಾವಿಸುತ್ತೇನೆ. ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಸಂತೋಷವನ್ನು ಹೇಳಲು ಸಾಧ್ಯವಿಲ್ಲ. ಅದಾನಿ ಸರ್ ಹಾಗೂ ಸಚಿನ್‌ ಸರ್‌ ನನಗಾಗಿ ಟ್ವೀಟ್ ಮಾಡಿದ್ದಾರೆ ಎಂದು ತಿಳಿದಾಗ ನನಗೆ ಎಷ್ಟು ಸಂತೋಷವಾಯಿತು ಎಂದು ಹೇಳಲು ಸಾಧ್ಯವಿಲ್ಲ. ಅವರು ಯಾವಾಗ ನಮ್ಮನ್ನು ಭೇಟಿಯಾಗಲು ಕರೆಯುತ್ತಾರೆ ಎಂದು ನಾನು ಕಾಯುತ್ತಿದ್ದೇನೆ. ನನ್ನ ಕನಸುಗಳು ನನಸಾಗುತ್ತಿವೆ” ಎಂದು ಅವರು ಹೇಳಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement