ಬೆಂಗಳೂರು: ಹಲವಾರು ಪ್ರಶಸ್ತಿಗಳನ್ನು ನಾಲ್ಕು ವರ್ಷಗಳ ನಂತರ ಏಕಕಾಲಕ್ಕೆ ಸರ್ಕಾರ ಪ್ರಕಟಿಸಿದೆ. ಒಟ್ಟು 75 ಸಾಧಕರ ಹೆಸರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುವಾರ ಪ್ರಕಟಿಸಿದೆ. ಹಿರಿಯ ಸಾಹಿತಿ, ನಾ. ಡಿಸೋಜಾ ಅವರನ್ನು ರಾಜ್ಯ ಸರ್ಕಾರ ನೀಡುವ 2023-24ನೇ ಸಾಲಿನ ಪಂಪ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮೊದಲ ಬಾರಿಗೆರಾಜ್ಯ ಸರ್ಕಾರ 21 ವಿಭಾಗದ ಸಾಧಕರ ಪಟ್ಟಿಯನ್ನು ಒಟ್ಟಿಗೆ ಬಿಡುಗಡೆ ಮಾಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ. ಹಿರಿಯ ಸಾಹಿತಿ ನಾ. ಡಿಸೋಜ ಅವರನ್ನು ರಾಜ್ಯ ಸರ್ಕಾರ ನೀಡುವ ಪ್ರತಿಷ್ಠಿತ `ಪಂಪ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದ್ದು, ಈ ಪ್ರಶಸ್ತಿಯು 5 ಲಕ್ಷ ರೂ. ನಗದು ಒಳಗೊಂಡಿದೆ.
ಬಸವ ರಾಷ್ಟ್ರೀಯ ಪ್ರಶಸ್ತಿಗೆ ಮಹಾರಾಷ್ಟ್ರದ ಆನಂದ ತೆಲ್ತುಂಬಡೆ ಹಾಗೂ ಧಾರವಾಡದ ಡಾ. ಎನ್.ಜಿ. ಮಹದೇವಪ್ಪ ಅವರನ್ನು ಕ್ರಮವಾಗಿ 2022-23 ಹಾಗೂ 2023-24ನೇ ಸಾಲಿನ ಪ್ರಶಸ್ತಿಗೆಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಘೋಷಣೆಯಾಗಿದ್ದರೂ ಇನ್ನೂ ಪ್ರಶಸ್ತಿ ಪ್ರದಾನ ಮಾಡದಿರುವ 2020-21ನೇ ಸಾಲಿನ ಪ್ರಶಸ್ತಿಗೆ ರತ್ನಗಿರಿಯ ಭಿಕು ರಾಮ್ಜಿ ಇದಾತೆ ಹಾಗೂ 2021-22ನೇ ಸಾಲಿಗೆ ಡಾ. ವೀರಣ್ಣ ರಾಜೂರು ಅವರನ್ನು ಬಸವ ರಾಷ್ಟ್ರೀಯ ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ. ಇದು 10 ಲಕ್ಷ ರೂ. ಬಹುಮಾನ ಒಳಗೊಂಡಿದೆ.
ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿಗೆ ಧಾರವಾಡದ ಜಿನದತ್ತ ದೇಸಾಯಿ ಹಾಗೂ ಗುಜರಾತಿನ ಗಾಂಧೀ ಸೇವಾಶ್ರಮ ಆಯ್ಕೆಯಾಗಿದೆ. ಗಾಯನಯೋಗಿ ಪಂ. ಪಂಚಾಕ್ಷರಿ ಗವಾಯಿ ಪ್ರಶಸ್ತಿಗೆ ಹಿಂದೂಸ್ಥಾನಿ ಗಾಯಕ ಧಾರವಾಡದ ಪಂ. ಸೋಮನಾಥ ಮರಡೂರ ಮತ್ತು ಮೈಸೂರು ಡಾ. ನಾಗಮಣಿ ಶ್ರೀನಾಥ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರತಿಷ್ಠಿತ ಟಿ. ಚೌಡಯ್ಯ ಪ್ರಶಸ್ತಿಗೆ ಮುಂಬಯಿನ ಕೊಳಲು ವಾದಕ ನಿತ್ಯಾನಂದ ಹಳದಿಪುರ, ಕೋಲಾರದ ನಾದಸ್ವರ ಕಲಾವಿದ ಶ್ರೀರಾಮುಲು ಭಾಜನರಾಗಿದ್ದಾರೆ. ಈ ಪ್ರಶಸ್ತಿಗಳು 10 ಲಕ್ಷ ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡಿವೆ.
2018-19ನೇ ಸಾಲಿನ ಬಿ.ವಿ. ಕಾರಂತ ಪ್ರಶಸ್ತಿಗೆ ಶಿವಮೊಗ್ಗದ ಎಸ್. ಮಾಲತಿ ಅವರನ್ನು ಆಯ್ಕೆ ಮಾಡಲಾಗಿದೆ.
ವಿವಿಧ ಪ್ರಶಸ್ತಿಗಳಿಗೆ ಆಯ್ಕೆಯಾದ ಸಾಧಕರ ಪಟ್ಟಿ
ಪಂಪ ಪ್ರಶಸ್ತಿ
ಸಾಹಿತಿ ನಾ. ಡಿಸೋಜಾ (ಸಾಗರ, ಶಿವಮೊಗ್ಗ ಜಿಲ್ಲೆ)
ಸಿ.ಪಿ. ಕೃಷ್ಣಕುಮಾರ (ಕಳೆದ ವರ್ಷ)
ಡಾ. ಎಸ್.ಆರ್. ರಾಮಸ್ವಾಮಿ (ಕಳೆದ ವರ್ಷ)
ಬಸವ ರಾಷ್ಟ್ರೀಯ ಪ್ರಶಸ್ತಿ (10 ಲಕ್ಷ ರೂ. ಬಹುಮಾನ)
ಭಿಕು ರಾಮ್ಜಿ ಇದಾತೆ (ರತ್ನಗಿರಿ)
ಡಾ. ವೀರಣ್ಣ ರಾಜೂರು (ಧಾರವಾಡ)
ಆನಂದ ತೆಲ್ತುಂಬಡೆ (ಮಹಾರಾಷ್ಟ್ರ)
ಡಾ. ಎನ್.ಜಿ. ಮಹದೇವಪ್ಪ (ಧಾರವಾಡ)
ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ
ಜಪಾನಂದ ಸ್ವಾಮೀಜಿ
ಸದಾನಂದ ಮಾಸ್ಟರ್ ಜಿನದತ್ತ ದೇಸಾಯಿ (ಧಾರವಾಡ)
ಗಾಂಧೀ ಸೇವಾಶ್ರಮ (ಗುಜರಾತ್)
ಟಿ. ಚೌಡಯ್ಯ ಪ್ರಶಸ್ತಿ
ಎಂ. ವಾಸುದೇವ ಮೋಹಿತೆ
ಹರಿಪ್ರಸಾದ್ ಚೌರಾಸಿಯಾ ಕೊಳಲು ವಾದಕ
ನಿತ್ಯಾನಂದ ಹಳದಿಪುರ (ಮುಂಬಯಿ)
ಶ್ರೀರಾಮುಲು (ಕೋಲಾರ)”
ಪಂ. ಪಂಚಾಕ್ಷರಿ ಗವಾಯಿ ಪ್ರಶಸ್ತಿ
ಹಿಂದೂಸ್ಥಾನಿ ಗಾಯಕ ಪಂ. ಸೋಮನಾಥ ಮರಡೂರ (ಧಾರವಾಡ)
ಡಾ. ನಾಗಮಣಿ ಶ್ರೀನಾಥ (ಮೈಸೂರು)
ಸಂಗೊಳ್ಳಿ ರಾಯಣ್ಣ ಪ್ರಶಸ್ತಿ
ಕೆ. ಮರುಳಸಿದ್ದಪ್ಪ (ಬೆಂಗಳೂರು)
ಹಸನ್ ನಯೀಂ ಸುರಕೋಡ (ಬೆಳಗಾವಿ)
ಕೆ. ರಾಮಯ್ಯ (ಕೋಲಾರ)
ವೀರ ಸಂಗಯ್ಯ (ವಿಜಯನಗರ)
ಅಕ್ಕಮಹಾದೇವಿ ಪ್ರಶಸ್ತಿ
ಅಕ್ಕಮಹಾದೇವಿ ಆಶ್ರಮ ಟ್ರಸ್ಟ್ (ಧಾರವಾಡ)
ಡಾ. ಆರ್.ಸುನಂದಮ್ಮ (ಮಂಡ್ಯ)
ಮೀನಾಕ್ಷಿ ಬಾಳಿ ( ಕಲಬುರಗಿ)
ಡಾ. ವಸುಂಧರಾ ಭೂಪತಿ (ಬೆಂಗಳೂರು)
ಕನಕಶ್ರೀ ಪ್ರಶಸ್ತಿ
ಡಾ. ಲಿಂಗದಹಳ್ಳಿ ಹಾಲಪ್ಪ (ಹಾವೇರಿ)
ಡಾ. ಬಿ. ಶಿವರಾಮ ಶೆಟ್ಟಿ (ಮಂಗಳೂರು)
ಕೆ.ಜಿ.ಕುಂದಣಗಾರ ಗಡಿನಾಡ ಡಾ. ರಮಾನಂದ ಬನಾರಿ ಎಂ.ಎನ್. ವೆಂಕಟೇಶ (ಕುಪ್ಪಂ)
ಡಾ. ಕೆ. ವಿಶ್ವನಾಥ್ ಕಾರ್ನಾಡ್ (ಮಹಾರಾಷ್ಟ್ರ)
ಚಂದ್ರಕಾಂತ ಪೋಕಳೆ (ಬೆಳಗಾವಿ) ”
ಅತ್ತಿಮಬ್ಬೆ ಪ್ರಶಸ್ತಿ
ಕೌಸಲ್ಯಾ ಧರಣೇಂದ್ರ
ಮಾಲತಿ ಪಟ್ಟಣಶೆಟ್ಟಿ
ಬಾನು ಮುಷ್ತಾಕ್ (ಹಾಸನ) ಎಚ್.ಎಸ್.ಮುಕ್ತಾಯಕ್ಕ (ರಾಯಚೂರು) ”
ಬಿ.ವಿ.ಕಾರಂತ ಪ್ರಶಸ್ತಿ
ಸಿ.ಬಸವಲಿಂಗಯ್ಯ (ಬೆಂಗಳೂರು)
ಸದಾನಂದ ಸುವರ್ಣ (ಮಂಗಳೂರು)
ಗುಬ್ಬಿ ವೀರಣ್ಣ ಪ್ರಶಸ್ತಿ
ಕುಮಾರಸ್ವಾಮಿ (ಚಿತ್ರದುರ್ಗ)
ಬಾಬಣ್ಣ ಕಲ್ಮನಿ ಚನ್ನಬಸಯ್ಯ ಗುಬ್ಬಿ (ತುಮಕೂರು)
ಎಲ್.ಬಿ.ಶೇಖ್ ಮಾಸ್ತರ (ವಿಜಯಪುರ) ”
ಡಾ. ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ
ಡಾ. ಮೊಗಳ್ಳಿ ಗಣೇಶ (ಹಂಪಿ)
ಉತ್ತಮ ಕಾಂಬ್ಳೆ (ಮರಾಠಿ ಲೇಖಕರು)
ಬಿ.ಟಿ.ಜಾಹ್ನವಿ (ದಾವಣಗೆರೆ)
ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ
ಗಾಯತ್ರಿ ದೇಸಾಯಿ
ವಿಜಯ್ ಹಾಗರ ಗುಂಡಗಿ
ಜಿ.ಎಲ್.ಎನ್.ಸಿಂಹ (ಮೈಸೂರು)
ಬಸವರಾಜ್ ಎಲ್. ಜಾನೆ (ಕಲಬುರಗಿ) ”
ಜಾನಪದಶ್ರೀ ಪ್ರಶಸ್ತಿ (ವಾದನ)
ಹುಸೇನ ಬಿ. ಬುಡೇನ್
ಕುಮಾರಸ್ವಾಮಿ (ಮೈಸೂರು)
ಅರುವ ಕೊರಗಪ್ಪ ಶೆಟ್ಟಿ (ದ.ಕ)
ಜಿ.ಪಿ. ಜಗದೀಶ್ (ಚಿಕ್ಕಮಗಳೂರು) ”
ಜಾನಪದಶ್ರೀ (ಗಾಯನ)
ಮಾರೆಪ್ಪ ದಾಸರ
ಡಾ. ಅಪ್ಪಗೆರೆ ತಿಮ್ಮರಾಜು
ಕಲ್ಲಪ್ಪ ಮಿರ್ಜಾಪುರ (ಬೀದರ್)
ಹಲಗೆ ದುರ್ಗಮ್ಮ (ಚಿತ್ರದುರ್ಗ)
ನಿಜಗುಣಶ್ರೀ ಪುರಂದರ ಪ್ರಶಸ್ತಿ
ಪಂ.ವೆಂಕಟೇಶಕುಮಾರ
ಎಂ.ಎಸ್. ಶೀಲಾ
ಎಂ.ಕೆ.ಸರಸ್ವತಿ (ಮೈಸೂರು)
ಅಕ್ಕಮಹಾದೇವಿ ಮಠ (ಧಾರವಾಡ)
ಕುಮಾರವ್ಯಾಸ ಪ್ರಶಸ್ತಿ
ರಾಜಾರಾಂ ಮೂರ್ತಿ
ಡಾ. ಎಂ.ಕೆ. ರಾಮಶೇಷನ್
ಸಿದ್ದೇಶ್ವರ ಶಾಸ್ತ್ರಿ (ಗದಗ)
ಕೃಷ್ಣಗಿರಿ ರಾಮಚಂದ್ರ (ಮೈಸೂರು)
ಶಾಂತಲಾ ನಾಟ್ಯ ಪ್ರಶಸ್ತಿ
ಎಂ.ಆರ್. ಕೃಷ್ಣಮೂರ್ತಿ
ಬಿ.ಎಸ್. ಸುನಂದಾದೇವಿಚಿತ್ರಾ ವೇಣುಗೋಪಾಲ್ (ಬೆಂಗಳೂರು)
ರೇವತಿ ನರಸಿಂಹನ್ (ಬೆಂಗಳೂರು)
ಸಂತ ಶಿಶುನಾಳ ಷರೀಫ ಪ್ರಶಸ್ತಿ
ಪುತ್ತೂರು ನರಸಿಂಹ ನಾಯಕ
ಚಂದ್ರಶೇಖರ ಜೋಯಿಸ್
ಕಸ್ತೂರಿ ಶಂಕರ್ (ಬೆಂಗಳೂರು)
ಎನ್.ಬಿ.ಶಿವಲಿಂಗಪ್ಪ (ಶಿವಮೊಗ್ಗ)
ನಿಮ್ಮ ಕಾಮೆಂಟ್ ಬರೆಯಿರಿ