ಬೆಂಗಳೂರು: ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿರುವ ಬಿಜೆಪಿ ವರಿಷ್ಠ ಮಂಡಳಿಯು ರಾಜ್ಯ ಚುನಾವಣಾ ಉಸ್ತುವಾರಿಯನ್ನು ರಾಧಮೋಹನದಾಸ ಅಗರವಾಲ್ ಹಾಗೂ ಹಾಗೂ ಸಹ ಉಸ್ತುವಾರಿಯನ್ನಾಗಿ ಸುಧಾಕರ್ ರೆಡ್ಡಿ ಅವರನ್ನು ನೇಮಿಸಿದ ಬೆನ್ನಲ್ಲೇ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೂ ಉಸ್ತುವಾರಿಗಳನ್ನು ನೇಮಕ ಮಾಡಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಉಸ್ತುವಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಈ ಕುರಿತು ಬಿಜೆಪಿಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದೆ.
ಲೋಕಸಭಾ ಕ್ಷೇತ್ರವಾರು ಉಸ್ತುವಾರಿಗಳ ಪಟ್ಟಿ….
ಮೈಸೂರು, ಕೊಡಗು ಕ್ಷೇತ್ರ: ಡಾ.ಸಿ.ಎನ್.ಅಶ್ವತ್ಥ ನಾರಾಯಣ
ಚಾಮರಾಜನಗರ: ಎನ್.ವಿ.ಫಣೀಶ
ಮಂಡ್ಯ: ಸುನೀಲ ಸುಬ್ರಹ್ಮಣಿ
ಹಾಸನ : ಎಂ.ಕೆ.ಪ್ರಾಣೇಶ
ದಕ್ಷಿಣ ಕನ್ನಡ : ಶ್ರೀನಿವಾಸ್ ಪೂಜಾರಿ
ಉಡುಪಿ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಆರಗ ಜ್ಞಾನೇಂದ್ರ
ಶಿವಮೊಗ್ಗ: ರಘುಪತಿ ಭಟ್
ಉತ್ತರ ಕನ್ನಡ: ಹರತಾಳು ಹಾಲಪ್ಪ
ಧಾರವಾಡ: ಈರಣ್ಣ ಕಡಾಡಿ
ಹಾವೇರಿ: ಅರವಿಂದ್ ಬೆಲ್ಲದ
ಬೆಳಗಾವಿ: ವೀರಣ್ಣ ಚರಂತಿಮಠ
ಚಿಕ್ಕೋಡಿ: ಅಭಯ ಪಾಟೀಲ
ಬಾಗಲಕೋಟೆ: ಲಿಂಗರಾಜ ಪಾಟೀಲ
ವಿಜಯಪುರ: ರಾಜಶೇಖರ ಶೀಲವಂತ
ಬೀದರ: ಅಮರನಾಥ ಪಾಟೀಲ
ಕಲಬುರಗಿ: ರಾಜುಗೌಡ
ರಾಯಚೂರು ಲೋಕಸಭಾ ಕ್ಷೇತ್ರ: ದೊಡ್ಡನಗೌಡ ಎಚ್.ಪಾಟೀಲ್
ಕೊಪ್ಪಳ ಲೋಕಸಭಾ ಕ್ಷೇತ್ರ: ರಘುನಾಥ ರಾವ್ ಮಲ್ಕಾಪುರೆ
ಬಳ್ಳಾರಿ: ಎನ್.ರವಿಕುಮಾರ
ದಾವಣಗೆರೆ: ಭೈರತಿ ಬಸವರಾಜ
ಚಿತ್ರದುರ್ಗ: ಚನ್ನಬಸಪ್ಪ
ತುಮಕೂರು: ಕೆ.ಗೋಪಾಲಯ್ಯ
ಚಿಕ್ಕಬಳ್ಳಾಪುರ: ಕಟ್ಟಾ ಸುಬ್ರಹ್ಮಣ್ಯ ನಾಯ್ಡು
ಕೋಲಾರ: ಸುರೇಶ ಗೌಡ
ಬೆಂಗಳೂರು ಗ್ರಾಮಾಂತರ ಕ್ಷೇತ್ರ: ನಿರ್ಮಲಕುಮಾರ ಸುರಾನಾ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ: ಎಂ.ಕೃಷ್ಣಪ್ಪ
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ: ಗುರುರಾಜ ಗಂಟಿಹೊಳೆ
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ: ಎಸ್.ಆರ್.ವಿಶ್ವನಾಥ
ನಿಮ್ಮ ಕಾಮೆಂಟ್ ಬರೆಯಿರಿ