ಅಥಣಿ : ಮಾರಕಾಸ್ತ್ರದಿಂದ ಕೊಚ್ಚಿ ನವ ದಂಪತಿ ಕೊಲೆ

ಬೆಳಗಾವಿ: ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಕಟನೂರು ಗ್ರಾಮದಲ್ಲಿ ಮಂಗಳವಾರ ನವ ದಂಪತಿಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಅವರ ರಕ್ಷಣೆಗೆ ಬಂದ ಇನ್ನಿಬ್ಬರ ಮೇಲೂ ಹಲ್ಲೆ ಮಾಡಲಾಗಿದೆ.
ಕೊಲೆಯಾದವರನ್ನು ಯಾಸಿನ್‌ ಬ್ಯಾಗೋಡೆ (21) ಹಾಗೂ ಹೀನಾಕೌಸರ್‌ (19) ಎಂದು ಗುರುತಿಸಲಾಗಿದೆ. ಇದೇ ಊರಿನ ತೌಫಿಕ್‌ ಕ್ಯಾಡಿ (24) ಎಂಬಾತ ಕೊಲೆ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾಸಿನ್‌ ಹಾಗೂ ಹೀನಾಕೌಸರ್‌ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ನಾಲ್ಕು ತಿಂಗಳ ಹಿಂದೆ ಹೀನಾ ಮದುವೆಯನ್ನು ತೌಫಿಕ್‌ ಜೊತೆ ಮಾಡಲು ಕುಟುಂಬದ ಹಿರಿಯರು ನಿಶ್ಚಯಿಸಿದ್ದರು. ಮದುವೆ ಬಳಿಕ ಪ್ರೇಮಿಗಳು ಮನೆಯಿಂದ ಓಡಿ ಹೋಗಿದ್ದರು.

ಅವರನ್ನು ಮರಳಿ ಊರಿಗೆ ಕರೆತಂದ ಪಾಲಕರು, ಮೊದಲ ಮದುವೆ ಮುರಿದುಕೊಂಡು ಗ್ರಾಮದ ಮುಖಂಡರು ಸಮ್ಮುಖದಲ್ಲಿ ಯಾಸಿನ್‌ ಹಾಗೂ ಹೀನಾಗೆ ಮದುವೆ ಮಾಡಿಸಿದ್ದರು.
ಈ ಬೆಳವಣಿಗೆಗಳಿಂದ ತೌಫಿಕ್‌ ಕೋಪಗೊಂಡಿದ್ದ. ಮಂಗಳವಾರ ಯಾಸಿನ್‌ ಮನೆಗೆ ನುಗ್ಗಿ ದಂಪತಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದ ದಂಪತಿ ಮೃತಪಟ್ಟಿದ್ದಾರೆ. ಇವರ ರಕ್ಷಣೆಗೆ ಬಂದ ಪಾಲಕರ ಮೇಲೂ ಮಾರಕಾಸ್ತ್ರದಿಂದ ಹಲ್ಲೆ ಮಾಡಲಾಗಿದೆ. ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆರೆ.
ಐಗಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪರಾರಿಯಾದ ಆರೋಪಿ ಹುಡುಕಾಟಕ್ಕೆ ಎರಡು ತಂಡ ರಚಿಸಲಾಗಿದೆ

ಪ್ರಮುಖ ಸುದ್ದಿ :-   ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement