ʼಭಾರತ ರತ್ನʼ ನೀಡಿದ್ದಕ್ಕೆ ಎಲ್‌.ಕೆ.ಅಡ್ವಾಣಿ ಬರೆದ ಕೃತಜ್ಞತಾ ಪತ್ರದಲ್ಲಿ ಸಂಸ್ಕೃತ ಮಂತ್ರದ ಉಲ್ಲೇಖ, ವಾಜಪೇಯಿಗೆ ನಮನ

ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಇಂದು, ಶುಕ್ರವಾರ ತಮಗೆ ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ʼಭಾರತ ರತ್ನʼವನ್ನು ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.
“ಇದು ಒಬ್ಬ ವ್ಯಕ್ತಿಯಾಗಿ ನನಗೆ ಗೌರವ ಮಾತ್ರವಲ್ಲ, ನನ್ನ ಜೀವನದುದ್ದಕ್ಕೂ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸೇವೆ ಸಲ್ಲಿಸಲು ನಾನು ಶ್ರಮಿಸಿದ ಆದರ್ಶಗಳು ಮತ್ತು ತತ್ವಗಳಿಗೆ ಸಹ ನೀಡಿದ ಗೌರವವಾಗಿದೆ” ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಭಾರತ ರತ್ನ ಪುರಸ್ಕಾರಕ್ಕೆ ಅಡ್ವಾಣಿಯವರ ಹೆಸರನ್ನು ಘೋಷಿಸಿದರು, ಇದು ತಮಗೆ “ಭಾವನಾತ್ಮಕ ಕ್ಷಣ” ಎಂದು ಕರೆದರು.
96 ವರ್ಷದ ಲಾಲಕೃಷ್ಣ ಅಡ್ವಾಣಿ ಅವರು 14 ನೇ ವಯಸ್ಸಿನಲ್ಲಿ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಆರ್‌ಎಸ್‌ಎಸ್‌ಗೆ ಸೇರಿದ ಸಮಯವನ್ನು ನೆನಪಿಸಿಕೊಂಡಿದ್ದಾರೆ “ನಾನು 14 ನೇ ವಯಸ್ಸಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಅದರ ಸ್ವಯಂಸೇವಕನಾಗಿ ಸೇರಿದಾಗಿನಿಂದ, ನಾನು ನನಗೆ ನಿಯೋಜಿಸಲಾದ ಯಾವುದೇ ಕಾರ್ಯದಲ್ಲಿ ನನ್ನ ಪ್ರೀತಿಯ ದೇಶದ ಸಮರ್ಪಿತ ಮತ್ತು ನಿಸ್ವಾರ್ಥ ಸೇವೆಯಲ್ಲಿ ಪ್ರತಿಫಲವನ್ನು ಬಯಸಿದ್ದೇನೆ ಎಂದು ಅವರು ಹೇಳಿದರು.

ನನ್ನ ಜೀವನಕ್ಕೆ ಸ್ಫೂರ್ತಿ ನೀಡಿದ್ದು “ಇದಮ್-ನ-ಮಮ” – ಇದು ನನ್ನದಲ್ಲ. ನನ್ನ ಜೀವನ ನನ್ನ ರಾಷ್ಟ್ರಕ್ಕಾಗಿ” ಎಂದು ಅವರು ಹೇಳಿದ್ದಾರೆ.
ಇದಮ್-ನ-ಮಮ ಅಥವಾ “ಇದು ನನ್ನದಲ್ಲ” ಎಂಬುದು ಸಂಸ್ಕೃತ ಮಂತ್ರ – ಇದು ಭಾರತೀಯ ತಾತ್ವಿಕ ಚಿಂತನೆಯಲ್ಲಿ ಬೇರೂರಿರುವ ದೃಷ್ಟಿಕೋನವಾಗಿದೆ. ಇದನ್ನು ಹೆಚ್ಚಾಗಿ ಪವಿತ್ರ ಮತ್ತು ವಿಧ್ಯುಕ್ತ ಅರ್ಪಣೆಗಳ ಸಮಯದಲ್ಲಿ ಉಚ್ಚರಿಸಲಾಗುತ್ತದೆ.
ಎಲ್‌.ಕೆ. ಅಡ್ವಾಣಿಯವರು ತಮಗೆ ಭಾರತ ರ್ನ ನೀಡಿದ್ದಕ್ಕೆ ಬರೆದ ತಮ್ಮ ಧನ್ಯವಾದ ಪತ್ರದಲ್ಲಿ ಇಬ್ಬರು ಹಿರಿಯರಾದ ಪಂಡಿತ್ ದೀನದಯಾಳ ಉಪಾಧ್ಯಾಯ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರನ್ನು ನೆನಪಿಸಿಕೊಂಡಿದ್ದಾರೆ. ಪಂಡಿತ್ ದೀನದಯಾಳ ಉಪಾಧ್ಯಾಯ ಮತ್ತು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುವ ಗೌರವವನ್ನು ಪಡೆದಿದ್ದು, ಆ ಇಬ್ಬರು ವ್ಯಕ್ತಿಗಳನ್ನು ಇಂದು ನಾನು ಕೃತಜ್ಞತೆಯಿಂದ ಸ್ಮರಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಹುಲಿ-ಕರಡಿ ಮಧ್ಯೆ "ಅಪರೂಪದ" ಮುಖಾಮುಖಿ; ಆಕ್ರಮಣಕಾರಿ ಕರಡಿಗೆ ಹುಲಿಯ ತಣ್ಣನೆಯ ಉತ್ತರ | ವೀಕ್ಷಿಸಿ

ಅಲ್ಲದೆ, ಅವರು ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ಅವರ ಪತ್ನಿ ಕಮಲಾ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. “ನನ್ನ ಲಕ್ಷಾಂತರ ಪಕ್ಷದ ಕಾರ್ಯಕರ್ತರು, ಸ್ವಯಂಸೇವಕರು ಮತ್ತು ಇತರರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನಾನು ಸಾರ್ವಜನಿಕ ಜೀವನದಲ್ಲಿ ನನ್ನ ಪ್ರಯಾಣದ ಉದ್ದಕ್ಕೂ ಕೆಲಸ ಮಾಡುವ ಅವಕಾಶವನ್ನು ಹೊಂದಿದ್ದೇನೆ. ನನ್ನ ಕುಟುಂಬದ ಎಲ್ಲಾ ಸದಸ್ಯರು, ವಿಶೇಷವಾಗಿ ನನ್ನ ಪ್ರೀತಿಯ ಅಗಲಿದ ಪತ್ನಿ ಕಮಲಾ ಅವರ ಬಗ್ಗೆ ನನ್ನ ಆಳವಾದ ಭಾವನೆಗಳನ್ನು ವ್ಯಕ್ತಪಡಿಸುತ್ತೇನೆ. ಅವರು ನನ್ನ ಜೀವನದಲ್ಲಿ ಶಕ್ತಿ ಮತ್ತು ಪೋಷಣೆಯ ದೊಡ್ಡ ಮೂಲವಾಗಿದ್ದಾರೆ ಎಂದು ಅಡ್ವಾಣಿ ಹೇಳಿದ್ದಾರೆ.
ಅಡ್ವಾಣಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ಮೋದಿಯವರಿಗೂ ಧನ್ಯವಾದ ಅರ್ಪಿಸಿದ್ದಾರೆ.
ಎಲ್‌.ಕೆ. ಅಡ್ವಾಣಿಯವರು ಕರಾಚಿಯಲ್ಲಿ (ಇಂದಿನ ಪಾಕಿಸ್ತಾನದಲ್ಲಿ) ನವೆಂಬರ್ 8, 1927 ರಂದು ಜನಿಸಿದರು. ಅವರು 1980 ರಲ್ಲಿ ಬಿಜೆಪಿಯ ಸ್ಥಾಪನೆಯಾಗಿನಿಂದ ಸುದೀರ್ಘ ಅವಧಿಯವರೆಗೆ ಸೇವೆ ಸಲ್ಲಿಸಿದ ಅಧ್ಯಕ್ಷರೆಂದು ಪ್ರಸಿದ್ಧರಾಗಿದ್ದಾರೆ. ಅಡ್ವಾಣಿ ಅವರು ಸುಮಾರು ಮೂರು ದಶಕಗಳ ಸುದೀರ್ಘ ಸಂಸದೀಯ ವೃತ್ತಿಜೀವನವನ್ನು ಹೊಂದಿದ್ದರು. ಅವರು ಅಟಲ್ ಬಿಹಾರಿ ವಾಜಪೇಯಿ (1999-2004) ಸಂಪುಟದಲ್ಲಿ ಮೊದಲು ಗೃಹ ಸಚಿವರಾಗಿ ಮತ್ತು ನಂತರ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ..| ರಸ್ತೆಬದಿ ರೋಲ್‌ ಮಾರುವ 10 ವರ್ಷದ ಬಾಲಕನ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ; ಸ್ಫೂರ್ತಿಯೂ ಹೌದು; ಸಹಾಯ ಮಾಡುವೆ ಎಂದ ಆನಂದ ಮಹೀಂದ್ರಾ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement