ಯಗಾದಿ ನಂತರ ಉತ್ತಮ ಮಳೆ-ಬೆಳೆ : ಎಲ್ಲರಿಗೂ ಒಳ್ಳೆಯ ಸುದ್ದಿ ನೀಡಿದ ಕೋಡಿಮಠದ ಶ್ರೀಗಳು

ಕೋಲಾರ: ಈ ವರ್ಷ ಯುಗಾದಿ ಕಳೆದ ನಂತರ ಜಾಗತಿಕವಾಗಿ ಹಾಗೂ ದೇಶದಲ್ಲಿ ಹಲವಾರು ರೀತಿಯ ಬದಲಾವಣೆಗಳಾಗಲಿವೆ. ಮಳೆ ಬೆಳೆ ಉತ್ತಮ ರೀತಿಯಲ್ಲಿ ಆಗುತ್ತದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಕೋಲಾರದ ಜಿಲ್ಲೆ‌ ಮಾಲೂರು ಪಟ್ಟಣದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಯುಗಾದಿಯ ನಂತರದಲ್ಲಿ ನಿಸರ್ಗದ ಅನೇಕ ವಲಯಗಳಲ್ಲಿ ಬದಲಾವಣೆಯಾಗಲಿದೆ. ಮೋಡಗಳು ಕವಿಯುತ್ತವೆ, ಆಕಾಶ ಮಳೆ ಸುರಿಸುತ್ತದೆ. ಭೂಮಿಯು ಉತ್ತಮ ಬೆಳೆಯನ್ನು ನೀಡುತ್ತದೆ. ರೈತರು ಬೆಳೆದ ಬೆಳೆಗಳಿಗೆ ಹಾಕಿದ ಬಂಡವಾಳಕ್ಕೆ ಮೋಸವಿಲ್ಲ ಎಂದು ಅವರು ಭವಿಷ್ಯ ಹೇಳಿದ್ದಾರೆ.ಇದೇ ವೇಳೆ, ಈ ಜಗತ್ತಿನ ಒಬ್ಬ ಧಾರ್ಮಿಕ ಮುಖಂಡರ ಸಾವು ಸಹ ಸಂಭವಿಸಬಹುದು ಎಂದು ಹೇಳಿದ್ದಾರೆ.

ಜಗತ್ತಿನಲ್ಲಿ ಶಾಂತಿ, ನೆಮ್ಮದಿಗೆ ಭಂಗ ತರುವಂಥ ಅನೇಕ ಪ್ರಸಂಗಗಳು ನಡೆಯಲಿವೆ ಎಂದು ಹೇಳಿದ್ದಾರೆ. ಅವರ ಪ್ರಕಾರ, ಜಗತ್ತಿನ ನಾನಾ ದೇಶಗಳಲ್ಲಿ ಮತಾಂಧತೆ ತಾರಕಕ್ಕೇರುತ್ತದೆ. ಅದರ ಪರಿಣಾಮವಾಗಿ ಹಿಂಸಾಚಾರಗಳು ನಡೆಯುತ್ತವೆ ಎಂದು ಹೇಳಿದ್ದಾರೆ.
ಇದಲ್ಲದೆ, ಜಗತ್ತಿನ ನಾನಾ ಭಾಗಗಳಲ್ಲಿ ಪ್ರಾಕೃತಿಕ ವಿಕೋಪಗಳೂ ಸಂಭವಿಸುತ್ತದೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಅಲ್ಲಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ ಇತ್ಯಾದಿಗಳು ಸಂಭವಿಸುತ್ತವೆ ಎಂದು ಹೇಳಿದ್ದಾರೆ. ಆದರೂ, ಯುಗಾದಿ ಹಬ್ಬದ ನಂತರ ಹೊಸದಾಗಿ ಭವಿಷ್ಯ ಹೇಳಬಹುದು. ರಾಷ್ಟ್ರ ಹಾಗೂ ರಾಜ್ಯದ ರಾಜಕಾರಣ ಬಗ್ಗೆ ಸಹ ಯುಗಾದಿ ಮೇಲೆ ಗೊತ್ತಾಗುತ್ತದೆ. ಯುಗಾದಿ ನಂತರ ಕಾಲ, ನಕ್ಷತ್ರಗಳು ಬದಲಾಗಿರುತ್ತವೆ. ಆಗ ಮತ್ತಷ್ಟು ನಿಖರತೆ ಸಿಗುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಬೆಂಗಳೂರಿನಲ್ಲಿ ಭಾರೀ ಮಳೆ : ತಾಪಮಾನ ದಿಢೀರ್‌ ಕುಸಿತ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement