ಲೋಕಸಭೆ ಚುನಾವಣೆ : ಬಿಜೆಪಿಯ ಎರಡನೇ ಪಟ್ಟಿಯಲ್ಲಿ ತ್ರಿಪುರ, ಮೈಸೂರಿನ ರಾಜವಂಶಸ್ಥರು…

ನವದೆಹಲಿ: ಲೋಕಸಭೆ ಚುನಾವಣೆಗೆ ಬಿಜೆಪಿಯ ಎರಡನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಇಬ್ಬರು ರಾಜವಂಶಸ್ಥರು ಸ್ಥಾನ ಪಡೆದಿದ್ದಾರೆ. ತ್ರಿಪುರಾದಿಂದ ಮಹಾರಾಣಿ ಕೃತಿ ಸಿಂಗ್ ದೇಬ್‌ಬರ್ಮಾ ಮತ್ತು ಹಿಂದಿನ ಮೈಸೂರು ರಾಜಮನೆತನದ ಮುಖ್ಯಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬಿಜೆಪಿ ಎರಡನೇ ಪಟ್ಟಿಯ 72 ಅಭ್ಯರ್ಥಿಗಳಲ್ಲಿ ಸೇರಿದ್ದಾರೆ.
ಕೃತಿ ಸಿಂಗ್ ದೇಬ್‌ಬರ್ಮಾ ಅವರಿಗೆ ತ್ರಿಪುರ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್‌ ನೀಡಲಾಗಿದೆ. ಒಡೆಯರ್ ರಾಜವಂಶದ ರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಮೈಸೂರು ಕ್ಷೇತ್ರದಿಂದ ಪಕ್ಷದ ಟಿಕೆಟ್‌ ನೀಡಲಾಗಿದೆ.
ತ್ರಿಪುರದ ರಾಜವಂಶಸ್ಥೆ ಬಗ್ಗೆ…
ಮಹಾರಾಣಿ ಕೃತಿ ಸಿಂಗ್ ದೇಬ್‌ಬರ್ಮಾ ಅವರು ತಿಪ್ರಾ ಮೋಥಾ ಪಕ್ಷದ ಸಂಸ್ಥಾಪಕ ಮತ್ತು ತ್ರಿಪುರಾ ರಾಜಮನೆತನದ ಮುಖ್ಯಸ್ಥ ಪ್ರದ್ಯೋತ್ ಮಾಣಿಕ್ಯ ದೇಬ್‌ಬರ್ಮಾ ಅವರ ಹಿರಿಯ ಸಹೋದರಿ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅವರು ತಮ್ಮ ಮೊದಲ ಚುನಾವಣೆಯನ್ನು ಎದುರಿಸಲಿದ್ದಾರೆ. ಆಕೆಯ ಪೋಷಕರು ರಾಜಕೀಯದಲ್ಲಿ ಸಕ್ರಿಯರಾಗಿದ್ದರು ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು.
ಆಕೆಯ ತಂದೆ ಕಿರಿತ್ ಬಿಕ್ರಮ್ ದೇಬ್‌ಬರ್ಮಾ ಅವರು ಮೂರು ಬಾರಿ ಸಂಸದರಾಗಿದ್ದರು ಮತ್ತು ಅವರ ತಾಯಿ ಬಿಭು ಕುಮಾರಿ ದೇವಿ ಎರಡು ಬಾರಿ ಕಾಂಗ್ರೆಸ್ ಶಾಸಕರಾಗಿದ್ದರು, ತ್ರಿಪುರಾದ ಕಂದಾಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕಿರಿತ್ ದೇಬ್‌ಬರ್ಮಾ ತ್ರಿಪುರಾದ ಕೊನೆಯ ರಾಜ.
ಕೃತಿ ಸಿಂಗ್ ದೇಬ್‌ಬರ್ಮಾ ಅವರು ತಮ್ಮ ಸಹೋದರನ ತಿಪ್ರಾ ಮೋಥಾ ಪಕ್ಷದ ಸದಸ್ಯರಾಗಿದ್ದಾರೆ. ಆದರೆ ಬಿಜೆಪಿಯ ಚಿಹ್ನೆಯಡಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಇತ್ತೀಚೆಗೆ ತ್ರಿಪುರಾದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ತಿಪ್ರಾ ಮೋಥಾ ಸೇರಿದ ನಂತರ ಕೃತಿ ದೇಬ್‌ಬರ್ಮಾ ಅವರಿಗೆ ಟಿಕೆಟ್‌ ನೀಡಲಾಗಿದೆ.
ಕೃತಿ ಸಿಂಗ್ ಅವರ ಸಹೋದರಿ ಕುಮಾರಿ ಪ್ರಜ್ಞಾ ದೇಬ್‌ಬರ್ಮಾ ಅವರು 2019 ರ ಲೋಕಸಭೆ ಚುನಾವಣೆಯಲ್ಲಿ ತ್ರಿಪುರ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

ಪ್ರಮುಖ ಸುದ್ದಿ :-   ತಾಯಿ, ಹೆಂಡತಿ, ಮೂವರು ಮಕ್ಕಳನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ...

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಗ್ಗೆ…
ಬಿಜೆಪಿಯ ಎರಡನೇ ಪಟ್ಟಿಯಲ್ಲಿರುವ ಮತ್ತೊಂದು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಹಿಂದಿನ ಮೈಸೂರು ರಾಜಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹೆಜ್ಜೆಗಳನ್ನು ಅನುಸರಿಸಲಿದ್ದಾರೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಮೈಸೂರು ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಪ್ರತಿನಿಧಿಸಿ ಸಂಸದರಾಗಿ ಆಯ್ಕೆಯಾದರಯ. ಹಾಗೂ ಒಮ್ಮೆ ಸೋತರು.
ಯದುವೀರ್ ಅವರು 2015 ರಲ್ಲಿ ಮೈಸೂರು ರಾಜಮನೆತನದ ಪಟ್ಟದ ಮುಖ್ಯಸ್ಥರಾಗಿ ಕಿರೀಟ ಧಾರಣೆ ಮಾಡಿದರು. ಅವರು ಒಡೆಯರ್ ರಾಜವಂಶದ 27 ನೇ ‘ರಾಜ’.
ತಮ್ಮ ಪತಿ ಶ್ರೀಕಂಠದತ್ತ ಒಡೆಯರ್ ಅವರ ಮರಣದ ನಂತರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಪ್ರಮೋದಾ ದೇವಿ ಒಡೆಯರ್ ಅವರು ದತ್ತು ಪಡೆದರು. ಅವರು ಅಮೆರಿಕದ ಅಮ್ಹೆರ್ಸ್ಟ್‌ನ ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ಇಂಗ್ಲಿಷ್‌ನಲ್ಲಿ ತಮ್ಮ ಬಿಎ ಪದವಿ ಪಡೆದರು. ಅವರು ಹಲವಾರು ಸಾಂಸ್ಕೃತಿಕ ಮತ್ತು ದತ್ತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.
ಒಡೆಯರ್ ರಾಜವಂಶವು 1399 ರಿಂದ 1947 ರವರೆಗೆ ಮೈಸೂರು ರಾಜ್ಯವನ್ನು ಆಳಿತು, ಜಯಚಾಮರಾಜೇಂದ್ರ ಒಡೆಯರ್ ಅದರ ಕೊನೆಯ ರಾಜರಾಗಿ 1940 ರಿಂದ 1947 ರಲ್ಲಿ ಭಾರತದ ಸ್ವಾತಂತ್ರ್ಯದವರೆಗೆ ಆಳ್ವಿಕೆ ನಡೆಸಿದರು. ಅವರು 1950 ರಲ್ಲಿ ಭಾರತ ಗಣರಾಜ್ಯವಾಗುವವರೆಗೆ ಮೈಸೂರಿನ ರಾಜರಾಗಿ ಮುಂದುವರೆದರು.
ಯದುವೀರ್ ಒಡೆಯರ್ ಅವರು ಜಯಚಾಮರಾಜೇಂದ್ರ ಒಡೆಯರ್ ಅವರ ಹಿರಿಯ ಪುತ್ರಿ ರಾಜಕುಮಾರಿ ಗಾಯತ್ರಿ ದೇವಿಯವರ ಮೊಮ್ಮಗ.

ಪ್ರಮುಖ ಸುದ್ದಿ :-   ಗರ್ಭಧಾರಣೆ ಕುರಿತ ಪುಸ್ತಕದಲ್ಲಿ 'ಬೈಬಲ್' ಪದ ಬಳಕೆ: ನಟಿ ಕರೀನಾ ಕಪೂರಗೆ ಮಧ್ಯಪ್ರದೇಶ ಹೈಕೋರ್ಟ್ ನೋಟಿಸ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement