ನವದೆಹಲಿ : “ಅಜ್ಞಾನ, ಸೋಮಾರಿತನ, ದುರಹಂಕಾರ” ಇವುಗಳು ಚುನಾವಣೆಯಲ್ಲಿ ಯಶಸ್ಸು ಪಡೆಯಲು ಕಾಂಗ್ರೆಸ್ಸಿಗೆ ಅಡ್ಡಿಯಾಗುತ್ತಿದೆ ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ ಕಿಶೋರ ಹೇಳಿದ್ದಾರೆ. ಹಾಗೂ ರಾಜಕೀಯದಿಂದ ಕೆಲಕಾಲ ವಿರಾಮ ತೆಗೆದುಕೊಳ್ಳುವಂತೆ ರಾಹುಲ್ ಗಾಂಧಿ ಅವರಿಗೆ ಸಲಹೆ ನೀಡಿದ್ದಾರೆ.
ಇಂಡಿಯಾ ಟುಡೇ ಜೊತೆಗಿನ ವಿಶೇಷ ಸಂವಾದದಲ್ಲಿ ಮಾತನಾಡಿದ ಅವರು, ಪಕ್ಷದ ನಾಯಕತ್ವಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ಅದರಿಂದ ಹೊರಬರಬೇಕು ಹಾಗೂ ಮತ್ತು ‘ಯಥಾಸ್ಥಿತಿ’ ಮನೋಭಾವವನ್ನು ಮೀರಿ ಅದು ಹೋಗಬೇಕು ಎಂದು ಹೇಳಿದರು.
ಭಾರತದ ರಾಜಕೀಯದಲ್ಲಿ ಕಾಂಗ್ರೆಸ್ಸಿಗೆ ಭವಿಷ್ಯದಲ್ಲಿ ಸುಧಾರಣೆಗೆ ಸಾಧ್ಯವಿರುವ ಮಾರ್ಗಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಶಾಂತ ಕಿಶೋರ, “ಅವರು (ಕಾಂಗ್ರೆಸ್ನವರು) ಏನಾದರೂ ಕೊರತೆಯಿದೆ ಮತ್ತು ಸುಧಾರಿಸಬೇಕಾಗಿದೆ ಎಂದು ಅರಿತುಕೊಂಡ ನಂತರವೇ ಸುಧಾರಣೆ ಬರುತ್ತದೆ” ಎಂದು ಉತ್ತರಿಸಿದರು.
ಯಥಾಸ್ಥಿತಿಯು ‘ಮಾನಸಿಕ ಅಜ್ಞಾನ, ಮಾನಸಿಕ ಅಥವಾ ಬೌದ್ಧಿಕ ಸೋಮಾರಿತನ ಅಥವಾ ದುರಹಂಕಾರ’ (ಭಾರತೀಯ ರಾಜಕೀಯ ರಂಗದಲ್ಲಿ ಕಾಂಗ್ರೆಸ್ ನಡೆಯುತ್ತಿರುವ ರೀತಿಯಲ್ಲಿ) ಇದೆ ಎಂದು ಅವರು ವಿವರಿಸಿದರು.
ಕಾಂಗ್ರೆಸ್ನ ಈಗಿನ ಸ್ಥಿತಿಯ ಹಿಂದಿನ ಮತ್ತೊಂದು ಸಾಧ್ಯತೆಯೆಂದರೆ, ಭಾರತೀಯ ರಾಜಕೀಯದಲ್ಲಿ ಏನು ನಡೆಯುತ್ತಿದೆ ಮತ್ತು ಅದು ಸುಧಾರಿಸಲು ಏನು ಮಾಡಬೇಕೆಂಬುದರ ಬಗ್ಗೆ ಅವರಿಗೆ ಇರುವ ‘ತೀರಾ ಅಜ್ಞಾನ’ ಎಂದು ಹೇಳಿದರು.
ಕಾಂಗ್ರೆಸ್ ಬಗ್ಗೆ ತಮ್ಮದೇ ಆದ ವೈಯಕ್ತಿಕ ದೃಷ್ಟಿಕೋನವನ್ನು ಹಂಚಿಕೊಂಡ ಕಿಶೋರ, “ಇದು ಈ ಮೂರರ (ಅಜ್ಞಾನ, ಸೋಮಾರಿತನ, ದುರಹಂಕಾರ) ಸಂಯೋಜನೆಯಾಗಿದೆ ಎಂದು ನಾನು ಭಾವಿಸುತ್ತೇನೆ, ಮೊದಲನೆಯದಾಗಿ, ಜನರು ಏಕೆ ಮತ ಹಾಕುವುದಿಲ್ಲ ಎಂಬುದನ್ನು ಕಾಂಗ್ರೆಸ್ ಅರ್ಥಮಾಡಿಕೊಳ್ಳುವುದಿಲ್ಲ. ಎರಡನೆಯದಾಗಿ, ಅವರು ಅರ್ಥಮಾಡಿಕೊಂಡರೂ, ಅವರು ಅದನ್ನು ಸರಿಪಡಿಸಲು ಪ್ರಯತ್ನಿಸದ ಸೋಮಾರಿಗಳು ಹಾಗೂ ಮೂರನೆಯದು, ಜನರು ತಮಗೆ ಮತ ಹಾಕದಿದ್ದರೂ, ಅವರು(ಜನರು) ಒಂದು ದಿನ ತಮ್ಮ ತಪ್ಪನ್ನು ಅರಿತುಕೊಂಡು ಅಂತಿಮವಾಗಿ ಮತ ಹಾಕುತ್ತಾರೆ ಎಂದು ಅವರು ಭಾವಿಸುತ್ತಾರೆ” ಎಂದು ಪ್ರಶಾಂತ ಕಿಶೋರ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡಿದ ಪ್ರಶಾಂತ ಕಿಶೋರ, ಕಾಂಗ್ರೆಸ್ ಗೆದ್ದರೂ ಅಥವಾ ಸೋತರೂ ಪರವಾಗಿಲ್ಲ, ಕಾಂಗ್ರೆಸ್ ವ್ಯವಹಾರದ ಚುಕ್ಕಾಣಿ ಗಾಂಧಿ ವಂಶಸ್ಥರ ಕೈಯಲ್ಲಿಯೇ ಉಳಿಯುತ್ತದೆ. ಅಲ್ಲದೆ, ಅವರು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವನ್ನು ಯಾವಾಗಲೂ ಬೆಂಬಲಿಸುವ ಮತ್ತು ಸಮರ್ಥಿಸುವ ಸಲಹೆಗಾರರು ಅಲ್ಲಿ ಇರುತ್ತಾರೆ ಎಂದು ಅವರು ಹೇಳಿದ್ದಾರೆ.
2014, 2019 ಮತ್ತು 2024 ರ ಎಲ್ಲಾ ಲೋಕಸಭಾ ಚುನಾವಣೆಗಳಲ್ಲಿ ರಾಹುಲ್ ಗಾಂಧಿ ಯಾವಾಗಲೂ ಕಾಂಗ್ರೆಸ್ನ ಕೇಂದ್ರ ಬಿಂದು ಎಂದು ಪ್ರಶಾಂತ ಕಿಶೋರ ಹೇಳಿದರು,
“ಇದು ವಾಸ್ತವ ಮತ್ತು ಕಾಂಗ್ರೆಸ್ ಅದನ್ನು ನಂಬಬೇಕು ಮತ್ತು ಅದನ್ನು ಕಾರ್ಪೆಟ್ ಅಡಿಯಲ್ಲಿ ಸ್ವೈಪ್ ಮಾಡಬಾರದು” ಎಂದು ಅವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ