ವೀಡಿಯೊ..| ವೈದ್ಯೆಗೆ ಕಿರುಕುಳ ನೀಡಿದ ವ್ಯಕ್ತಿ ಬಂಧಿಸಲು ಆಸ್ಪತ್ರೆ ವಾರ್ಡ್ ಒಳಕ್ಕೇ ವಾಹನ ನುಗ್ಗಿಸಿದ ಪೊಲೀಸರು…!

ನವದೆಹಲಿ: ಆರೋಪಿಯನ್ನು ಬೆನ್ನಟ್ಟಲು ಅಸಹಜ ಉತ್ಸಾಹ ಪ್ರದರ್ಶಿಸಿದ ಪೊಲೀಸರು ಮಂಗಳವಾರ ರಿಷಿಕೇಶದ ಏಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ವಾಹನ ಓಡಿಸಿದ ಘಟನೆಯ ವೀಡಿಯೊ ವೈರಲ್ ಆಗಿದೆ.
ಮಹಿಳಾ ವೈದ್ಯರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನರ್ಸಿಂಗ್ ಅಧಿಕಾರಿಯನ್ನು ಬಂಧಿಸಲು ಪೊಲೀಸರು ಬಂದಿದ್ದರು. 26-ಸೆಕೆಂಡ್‌ಗಳ ಕ್ಲಿಪ್‌ನಲ್ಲಿ ಆಕ್ಷನ್ ಚಲನಚಿತ್ರದ ದೃಶ್ಯವನ್ನು ಹೋಲುವಂತೆ ಪೋಲೀಸ್ ವಾಹನವನ್ನು ಕಿಕ್ಕಿರಿದ ತುರ್ತು ಚಿಕಿತ್ಸಾ ವಿಭಾಗದ ಮೂಲಕ ಚಲಾಯಿಸಿಕೊಂಡು ಹೋಗುವುದು ಕಂಡುಬಂದಿದೆ. ಎರಡೂ ಬದಿಗಳಲ್ಲಿ ರೋಗಿಗಳ ಹಾಸಿಗೆಯ ಸಾಲುಗಳಿವೆ. ಭದ್ರತಾ ಅಧಿಕಾರಿಗಳ ಗುಂಪು ಪೊಲೀಸ್‌ ವಾಹನಕ್ಕೆ ದಾರಿ ಮಾಡಿಕೊಡುವುದು ಕಂಡುಬಂದಿದೆ. ಅಲ್ಲದೆ, ದಾರಿಯಲ್ಲಿದ್ದ ರೋಗಿಗಳನ್ನು ಸಾಗಿಸುವ ಸ್ಟ್ರೆಚರ್‌ಗಳನ್ನು ದಾರಿಯಿಂದ ದೂರಕ್ಕೆ ತಳ್ಳುವುದು ಕಂಡುಬರುತ್ತದೆ. ಪೊಲೀಸ್‌ ಕಾರ್ ಮುಂದೆ ಜೂಮ್ ಆಗುತ್ತದೆ. ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿರುವ ಮತ್ತೊಂದು ವೀಡಿಯೊದಲ್ಲಿ, ಪೊಲೀಸ್ ಅಧಿಕಾರಿಗಳ ತಂಡವು ಆರೋಪಿಯನ್ನು ಪೊಲೀಸ್‌ ವಾಹನದ ಬಳಿ ಕರೆದೊಯ್ಯುವಾಗ ಪ್ರತಿಭಟನಾನಿತರ ವೈದ್ಯರು ಸುತ್ತುವರಿದಿರುವುದನ್ನು ಸಹ ಕಾಣಬಹುದಾಗಿದೆ.

ಪೋಲೀಸರ ಪ್ರಕಾರ, ನರ್ಸಿಂಗ್ ಅಧಿಕಾರಿಯು ಪ್ರಧಾನ ಆರೋಗ್ಯ ಸೌಲಭ್ಯದ ಆಪರೇಷನ್ ಥಿಯೇಟರ್‌ನಲ್ಲಿ ಮಹಿಳಾ ವೈದ್ಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಇದೀಗ ಅಮಾನತುಗೊಂಡಿರುವ ಸತೀಶಕುಮಾರ ಎಂಬಾತ ಮಹಿಳಾ ವೈದ್ಯರಿಗೆ ಅಶ್ಲೀಲ ಎಸ್‌ಎಂಎಸ್‌ (SMS) ಕಳುಹಿಸಿದ್ದಾನೆ ಎಂದು ರಿಷಿಕೇಶದ ಪೊಲೀಸ್ ಅಧಿಕಾರಿ ಶಂಕರ ಸಿಂಗ್ ಬಿಶ್ತ್ ತಿಳಿಸಿದ್ದಾರೆ.
ಈ ಘಟನೆಗೆ ಆಸ್ಪತ್ರೆಯ ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದು, ಅವರು ಮುಷ್ಕರ ನಡೆಸಿದರು ಮತ್ತು ಅಪರಾಧಿಯನ್ನು ಹುದ್ದೆಯಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಡೀನ್ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದರು. ಅಲ್ಲದೆ, ವೈದ್ಯರು ಪೊಲೀಸರನ್ನು ಸಂಪರ್ಕಿಸಿ ಘಟನೆಯ ಬಗ್ಗೆ ಮಾಹಿತಿ ನೀಡಿದರು. ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು ಪ್ರತಿಭಟನೆ ನಡೆಸುತ್ತಿರುವುದನ್ನು ಕಂಡ ಪೊಲೀಸರು ಸತೀಶಕುಮಾರನನ್ನು ಬಂಧಿಸಲು ಆಸ್ಪತ್ರೆಗೆ ಆಗಮಿಸಿದರು. ಸತೀಶಕುಮಾರ ಮಾಡಿರುವ ತಪ್ಪಿಗೆ ಕೇವಲ ಅಮಾನತು ಸಾಕಾಗುವುದಿಲ್ಲ, ಆತನನ್ನು ಕೂಡಲೇ ವಜಾಗೊಳಿಸಬೇಕು ಎಂದು ವೈದ್ಯರು ಘೋಷಣೆ ಕೂಗಿದರು.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

ರಿಷಿಕೇಶದ ಏಮ್ಸ್ ತುರ್ತು ಸೇವೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಮಂಗಳವಾರದಿಂದ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ.
“ವೈದ್ಯರು ಸತೀಶಕುಮಾರ ಅವರನ್ನು ತಕ್ಷಣವೇ ವಜಾಗೊಳಿಸುವಂತೆ ಒತ್ತಾಯಿಸಿದರು, ಅವರು ಮಾಡಿದ ಅಪರಾಧಕ್ಕೆ ಕೇವಲ ಅಮಾನತು ಸಾಕಾಗುವುದಿಲ್ಲ” ಎಂದು ವೈದ್ಯಕೀಯ ಅಧೀಕ್ಷಕ ಸಂಜೀವಕುಮಾರ ಮಿತ್ತಲ್ ತಿಳಿಸಿದ್ದಾರೆ. ಮಂಗಳವಾರದಿಂದ ಹಿರಿಯ ಮತ್ತು ಕಿರಿಯ ವೈದ್ಯರ ಮುಷ್ಕರದ ಹೊರತಾಗಿಯೂ, ತುರ್ತು ಸೇವೆಗಳು ಮತ್ತು ಆಸ್ಪತ್ರೆಯ ಶೇ 90 ರಷ್ಟು ಆಪರೇಶನ್‌ ಥಿಯೇಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಸತೀಶಕುಮಾರ ಅವರನ್ನು ವಜಾಗೊಳಿಸುವಂತೆ ಕೋರಿ ಉನ್ನತ ಅಧಿಕಾರಿಗಳಿಗೆ ಪತ್ರ ಕಳುಹಿಸಲಾಗಿದೆ ಎಂದು ಮಿತ್ತಲ್ ಹೇಳಿದರು.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement