ಒಡಿಶಾದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಮೋಹನಚರಣ ಮಾಝಿ ಪ್ರಮಾಣ ವಚನ : ಸಚಿವರ ಪಟ್ಟಿ

ಭುವನೇಶ್ವರ : ಒಡಿಶಾದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಮೋಹನ ಚರಣ ಮಾಝಿ ಅವರು ಬುಧವಾರ ಸಂಜೆ ಜನತಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದ ಭವ್ಯ ಸಮಾರಂಭದಲ್ಲಿ ಒಡಿಶಾ ರಾಜ್ಯಪಾಲ ರಘುಬರದಾಸ ಅವರು ಅಧಿಕಾರಿಯಾಗಿ ಪ್ರಮಾಣ ವಚನ ಬೋಧಿಸಿದರು. ಇದರೊಂದಿಗೆ, ಬಿಜೆಪಿ ಪಕ್ಷದಿಂದ ಮಾಝಿ ಒಡಿಶಾದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ ಸಿಂಗ್, ಭೂಪೇಂದರ ಯಾದವ್, ಧರ್ಮೇಂದ್ರ ಪ್ರಧಾನ, ಜುಯಲ್ ಓರಮ್, ಅಶ್ವಿನಿ ವೈಷ್ಣವ್ ಮುಂತಾದವರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಉಪ ಮುಖ್ಯಮಂತ್ರಿಗಳಿಂದ ಪ್ರಮಾಣ ವಚನ ಸ್ವೀಕಾರ
ಏತನ್ಮಧ್ಯೆ, ಬಿಜೆಪಿ ನಾಯಕರಾದ ಕನಕವರ್ಧನ್ ಸಿಂಗ್ ದೇವ್ ಮತ್ತು ಪ್ರವತಿ ಪರಿದಾ ಕೂಡ ಒಡಿಶಾದ ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. 2024 ರ ವಿಧಾನಸಭಾ ಚುನಾವಣೆಯಲ್ಲಿ, ದೇವ್‌ ಅವರು ಬಿಜೆಡಿಯ ಸರೋಜಕುಮಾರ ಮೆಹರ್ ಅವರನ್ನು 9,3823 ಮತಗಳ ಅಂತರದಿಂದ ಸೋಲಿಸಿದ್ದಾರೆ. ಪರಿದಾ ಅವರು, ನಿಮಾಪಾರಾ ಕ್ಷೇತ್ರದಲ್ಲಿ ಬಿಜೆಡಿಯ ದಿಲೀಪಕುಮಾರ ನಾಯಕ್ ಅವರನ್ನು 4,588 ಮತಗಳ ಅಂತರದಿಂದ ಸೋಲಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ...| ವಂದೇ ಭಾರತ ರೈಲಿನಲ್ಲಿ ಬಿಜೆಪಿ ಶಾಸಕನ ಜೊತೆ ತನ್ನ ಸೀಟು ಬದಲಾಯಿಸಿಕೊಳ್ಳಲು ಒಪ್ಪದ ಪ್ರಯಾಣಿಕನ ಮೇಲೆ ಹಲ್ಲೆ

ಪ್ರಮಾಣ ವಚನ ಸ್ವೀಕರಿಸಿದ ಸಚಿವರ ಪಟ್ಟಿ:
ಉಪಮುಖ್ಯಮಂತ್ರಿಗಳು:
ಕನಕ​​ವರ್ಧನ್ ಸಿಂಗ್ ದೇವ್
ಪ್ರವತಿ ಪರಿದಾ
ಕ್ಯಾಬಿನೆಟ್ ಸಚಿವರು…
ಸುರೇಶ ಪೂಜಾರಿ
ರಬಿನಾರಾಯಣ ನಾಯಕ್
ನಿತ್ಯಾನಂದ ಗೊಂಡ
ಕೃಷ್ಣ ಚಂದ್ರ ಪಾತ್ರ
ಪೃಥ್ವಿರಾಜ ಹರಿಚಂದನ್
ಮುಖೇಶ್ ಮಹಾಲಿಂಗ
ಬಿಭೂತಿ ಭೂಷಣ ಜೇನಾ
ಡಾ.ಕೃಷ್ಣ ಚಂದ್ರ ಮಹಾಪಾತ್ರ
ರಾಜ್ಯ ಸಚಿವರು (ಸ್ವತಂತ್ರ):
ಗಣೇಶರಾಮ ಸಿಂಗ್ ಖುಂಟಿಯಾ
ಸೂರ್ಯವಂಶಿ ಸೂರಜ್ ಸ್ಥಿತಪ್ರಜ್ಞಾ
ಪ್ರದೀಪ್ ಬಾಲ ಸಾಮಂತ
ಗೋಕುಲ ನಂದ ಮಲ್ಲಿಕ
ಸಂಪದ ಚಂದ್ರ ಸ್ವೈನ್

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ, ಮಾಝಿ ಸುಮಾರು 87,815 ಮತಗಳ ಅಂತರದಿಂದ ಕಿಯೋಂಜರ್ ಸ್ಥಾನದಲ್ಲಿ ಜಯಗಳಿಸಿದ್ದಾರೆ. ಕ್ಷೇತ್ರದಿಂದ ಬಿಜೆಡಿಯ ಮಿನಾ ಮಾಝಿ ಅವರನ್ನು ಸೋಲಿಸಿದರು. ಸತತ ನಾಲ್ಕನೇ ಬಾರಿಗೆ ಆಯ್ಕೆಯಾಗಿರುವ ಮಾಝಿ, ಹೊಸ ಸರ್ಕಾರ ರಚನೆಯಾದ 100 ದಿನಗಳಲ್ಲಿ ಬಿಜೆಪಿಯ ಪ್ರಣಾಳಿಕೆಯಲ್ಲಿ ನೀಡಲಾದ ಭರವಸೆಗಳನ್ನು ಈಡೇರಿಸುವ ಕೆಲಸ ಪ್ರಾರಂಭವಾಗಲಿದೆ ಎಂದು ಹೇಳಿದರು.
ಮಂಗಳವಾರ ನಡೆದ ಸಭೆಯಲ್ಲಿ ಒಡಿಶಾದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಅವರನ್ನು ಆಯ್ಕೆ ಮಾಡಲಾಯಿತು. 1997-2000 ವರೆಗೆ ಸರಪಂಚ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಮೋಹನಚರಣ ಮಾಝಿ, 2000 ರಲ್ಲಿ ಬಿಜೆಡಿ-ಬಿಜೆಪಿ ಮೈತ್ರಿಯೊಂದಿಗೆ ಕಿಯೋಂಜಾರ್‌ನಿಂದ ಮೊದಲ ಬಾರಿಗೆ ರಾಜ್ಯ ವಿಧಾನಸಭೆಗೆ ಆಯ್ಕೆಯಾದರು. ಅವರು 2004 ರಲ್ಲಿ ಮರು ಆಯ್ಕೆಯಾದರು. 2005 ರಿಂದ 09 ರವರೆಗೆ ಅವರು ಬಿಜೆಡಿ-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಸರ್ಕಾರದ ಉಪ ಮುಖ್ಯ ಸಚೇತಕರಾಗಿದ್ದರು. 2019ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದರು.

ಪ್ರಮುಖ ಸುದ್ದಿ :-   ಬೆಂಗಳೂರು ಬಳಿ ಯುವತಿಗೆ ಕಿರುಕುಳ ನೀಡಿ, ಹಲ್ಲೆಗೈದ ಗ್ಯಾಂಗ್ ; ಕೃತ್ಯ ಸಿಸಿಟಿವಿಯಲ್ಲಿ ಸೆರೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement