ವಾಹನಗಳಿಗೆ ಕಣ್ಣುಕುಕ್ಕುವ ಎಲ್‌ಇಡಿ ಲೈಟ್‌ ಹಾಕಿಸಿದ್ದೀರಾ : ಜುಲೈ 1ರಿಂದ ಬೀಳಲಿದೆ ದಂಡ…

ಬೆಂಗಳೂರು : ಕೇಂದ್ರ ಮೋಟಾರು ಕಾಯಿದೆಯ ಮಾನದಂಡದಂತೆ ವಾಹನಗಳಿಗೆ ಹೆಡ್‌ಲೈಟ್‌ ಅಳವಡಿಸಬೇಕು. ಈ ಕಾಯಿದೆ ಉಲ್ಲಂಘಿಸಿ ಹೆಚ್ಚು ಪ್ರಕಾಶಮಾನವಾದ ಅಥವಾ ಕಣ್ಣಿಗೆ ಕುಕ್ಕುವಂತಹ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಅಳವಡಿಸುವ ಹಾಗಿಲ್ಲ. ಈ ಬಗ್ಗೆ ಜುಲೈ 1ರಿಂದ ರಾಜ್ಯ ಪೊಲೀಸ್‌ ವಿಶೇಷ ಅಭಿಯಾನ ಕೈಗೊಳ್ಳಲಿದೆ. ವಾಹನಗಳಿಗೆ ಕಣ್ಣಿಗೆ ಕುಕ್ಕುವಂತಹ ಎಲ್ಇಡಿ ದೀಪ ಅಳವಡಿಸಿದ್ದರೆ ಅಂತಹ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕಕುಮಾರ ಎಚ್ಚರಿಸಿದ್ದಾರೆ.
ಇಂತಹ ಲೈಟ್‌ಗಳಿದ್ದರೆ ಪೊಲೀಸರು ಇನ್ನು ಮುಂದೆ ದಂಡ ವಿಧಿಸಲಿದ್ದಾರೆ. ದಂಡದ ನಂತರವೂ ಮುಂದುವರೆಸಿದರೆ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸಬಹುದಾಗಿದೆ.

ಎಲ್‌ಒಡಿ ದೀಪ ಅಳವಡಿಸಿದ ವಾಹನಗಳಿಂದ ರಸ್ತೆಗಳಲ್ಲಿ ಸಂಚರಿಸುವವರಿಗೆ ಹಾಗೂ ಇತರ ವಾಹನಗಳಿಗೆ ಕಿರಿಕಿರಿ ಉಂಟಾಗುತ್ತಿದ್ದು, ಅಪಘಾತಗಳು ಸಂಭವಿಸಯತ್ತಿವೆ ಎನ್ನುವ ಮಾಹಿತಿ ಆಧರಿಸಿ ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ಇದು ಜಾರಿಯಲ್ಲಿದ್ದು, ಇದನ್ನು ಕಟ್ಟುನಿಟ್ಟಾಗಿ ಪಾಲಿಸಿ ಇಂತಹ ದೀಪ ಅಳವಡಿಸಿರುವ . ದ್ವಿಚಕ್ರ ವಾಹನ, ತ್ರಿಚಕ್ರ ಹಾಗೂ ಕಾರು, ಲಾರಿ ಹಾಗೂ ಬಸ್‌ ಮೊದಲಾದ ವಾಹನಗಳನ್ನು ಗುರುತಿಸಿ ದಂಡ ವಿಧಿಸಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಪ್ರಮುಖ ಸುದ್ದಿ :-   ಸಾಹಿತಿ ದೊಡ್ಡರಂಗೇಗೌಡರ ಆರೋಗ್ಯದಲ್ಲಿ ಏರುಪೇರು ; ಆಸ್ಪತ್ರೆಗೆ ದಾಖಲು

ಈ ಕುರಿತು ಕರ್ನಾಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕಕುಮಾರ ಮಾಹಿತಿ ನೀಡಿದ್ದಾರೆ. ರಸ್ತೆ ಅಪಘಾತಗಳು ಮತ್ತು ಅದರಿಂದಾಗುವ ಸಾವು-ನೋವುಗಳನ್ನು ತಪ್ಪಿಸಲು, ಕೇಂದ್ರ ಮೋಟಾರು ವಾಹನಗಳ ನಿಯಮಗಳ ಅಡಿಯಲ್ಲಿ ಅನುಮತಿಸಲಾದ ಲೈಟ್​ಗಳನ್ನು ಮಾತ್ರ ವಾಹನಗಳಲ್ಲಿ ಅಳವಡಿಸಬೇಕು ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ ಎಂದು ಅಲೋಕಕುಮಾರ ಸುದ್ದಿ ಸಂಸ್ಥೆ ‘ಎಎನ್​ಐ’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಬೆಳಕು ಕಣ್ಣಿಗೆ ಕುಕ್ಕುವಂತಹ ಎಲ್‌ಇಡಿ ಬಲ್ಬ್‌ ಅಳವಡಿಕೆ ಬಗ್ಗೆ ನಾವು ಹೇಳುತ್ತಿದ್ದೇವೆ. ಇದರ ಅಳವಡಿಕೆಯಿಂದ ಎದುರುಗಡೆ ಬರುವವರಿಗೆ ತೊಂದರೆಯಾಗಲಿದೆ. ಈ ರೀತಿ ತೊಂದರೆಯಾಗಿ ಅಪಘಾತ ಸಂಭವಿಸಿದ ನಿದರ್ಶನಗಳಿವೆ. ಈ ಕಾರಣದಿಂದ ಬೆಳಕು ಕಣ್ಣಿಗೆ ಕುಕ್ಕುವಂತಹ ಎಲ್‌ಎಡಿ ದೀಪಗಳನ್ನು ಬಳಸದಂತೆ ನಿರ್ಬಂಧ ಹೇರಲಾಗಿದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ. ಎಲ್ಲಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಹಾಗೂ ಪೊಲೀಸ್‌ ಆಯುಕ್ತರಿಗೆ ಈಗಾಗಲೇ ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
IMV ಸೆಕ್ಷನ್ 177 ರ ಅಡಿಯಲ್ಲಿ, ಅಂತಹ ಚಾಲಕರು ಮೊದಲ ತಪ್ಪಿಗೆ ದಂಡವಾಗಿ 500 ರೂ. ಮತ್ತು ನಂತರದ ತಪ್ಪುಗಳಿಗೆ 1,000 ರೂ. ವರೆಗೆ ದಂಡ ವಿಧಿಸಬಹುದು. ಹಾಗೂ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬಹುದಾಗಿದೆ.

ಪ್ರಮುಖ ಸುದ್ದಿ :-   ಸಾಹಿತಿ ದೊಡ್ಡರಂಗೇಗೌಡರ ಆರೋಗ್ಯದಲ್ಲಿ ಏರುಪೇರು ; ಆಸ್ಪತ್ರೆಗೆ ದಾಖಲು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement