(೦೨.೦೬.೨೦೨೪ರಂದು ಯಲ್ಲಪ್ಪ ಬಸನಗೌಡ ಕೊರಡೂರ ಅವರ ಅಭಿನಂದನಾ ಗ್ರಂಥ ಬನಹಟ್ಟಿಯ ಜನತಾ ಶಿಕ್ಷಣ ಸಮಿತಿ ವತಿಯಿಂದ ಲೋಕರ್ಪಣೆಯಾಗುತ್ತಿದೆ. ಈ ನಿಮಿತ್ತ ಲೇಖನ)
ಗ್ರಾಮೀಣ ಹಿನ್ನಲೆಯಿಂದ ಬಂದ ಗ್ರಾಮೀಣ ವಿದ್ಯಾರ್ಥಿಗಳ ಸ್ನೇಹಿತರಂತೆ ಕಾರ್ಯ ಮಾಡಿರುವ ಗ್ರಂಥಪಾಲರಾಗಿದ್ದ ಬನಹಟ್ಟಿಯ ಎಸ್.ಟಿ.ಸಿ. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಹಿರಿಯ ಗ್ರಂಥಪಾಲಕರಾದ ಯಲ್ಲಪ್ಪ ಬಸನಗೌಡ ಕೊರಡೂರ ಅವರು ಮೇ ೩೧ರಂದು ಸೇವಾ ನಿವೃತ್ತಿಯಾಗಿದ್ದು, ಇಂದು (೦೨.೦೬.೨೦೨೪) ಅವರ ಅಭಿನಂದನಾ ಗ್ರಂಥ ʼಗ್ರಂಥ ಗುರುʼ ಲೋರ್ಪಣೆಯಾಗುತ್ತಿದೆ.
ವಿದ್ಯಾರ್ಥಿಗಳಿಗೆ, ಸಿಬ್ಬಂದಿಮತ್ತು ಸಾರ್ವಜನಿಕರಿಗೆ ಅವರು ಕೊರಡೂರ ಸರ್ ಎಂದೇ ಚಿರಪರಿಚಿತರಾಗಿರುವ ಯಲ್ಲಪ್ಪ ಬಸನಗೌಡ ಕೊರಡೂರ ಅವರು
ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಹರ್ಲಾಪೂರ ಗ್ರಾಮದಲ್ಲಿ ೨೦-೦೫-೧೯೬೪ ಜನಿಸಿದ ಯಲ್ಲಪ್ಪ ಬಸನಗೌಡ ಕೊರಡೂರ ಅವರು ಪ್ರಾಥಮಿಕ ಶಿಕ್ಷಣವನ್ನು ಹರ್ಲಾಪುರದಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ಗುಡಗೇರಿ ಮತ್ತು ಶಿರಗುಪ್ಪಿಯಲ್ಲಿ ಹಾಗೂ ಕಾಲೇಜ ಶಿಕ್ಷಣವನ್ನು ಲಕ್ಷ್ಮೇಶ್ವರದ ಎಂ.ಎ. ಮಹಾವಿದ್ಯಾಲಯ ೧೯೯೧ರಲ್ಲಿ ಪೂರೈಸಿದ್ದಾರೆ. ಅರ್ಥಶಾಸ್ತ್ರ ವಿಷಯ ಪ್ರಧಾನ ಮತ್ತು ಭೂಗೋಳಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರವನ್ನು ಉಪ ಪ್ರಧಾನ ವಿಷಯಗಳಾಗಿ ಆಯ್ಕೆ ಮಾಡಿಕೊಂಡಿದ್ದರು. ಕರ್ನಾಟಕ ಸರಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಧಾರವಾಡದಿಂದ ಸಿಲಿಬ್ ಪದವಿ ಪಡೆದ ನಂತರ ೨೦೦೧ರಲ್ಲಿ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಸ್ನಾತಕ ಮತ್ತು ಸಾತ್ನಕೋತ್ತರ ಪದವಿ ಹಾಗೂ ೨೦೦೬ರಲ್ಲಿ ಎಂ.ಫಿಲ್ ಪದವಿ ಪಡೆದುಕೊಂಡಿದ್ದಾರೆ. ೧೯೯೬ರಲ್ಲಿ ಡಿ.ಫಾರ್ಮ ಪದವಿಯನ್ನು ೨೦೦೩ರಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ಸಹ ಪಡೆದಿದ್ದಾರೆ.
೧೯೮೩ ರಿಂದ ೧೯೯೨ರ ವರೆಗೆ ಲಕ್ಷ್ಮೇಶ್ವರದ ಎಂ.ಎ..ಜೆ.ಜೆ. ಕಾಲೇಜ ಆಫ್ ಫಾರ್ಮಸಿಯಲ್ಲಿ ಮತ್ತು ೧೯೯೨ ರಿಂದ ೨೦೦೮ರ ವರೆಗೆ ಕಲಘಟಗಿಯ ಗುಡ್ನ್ಯೂಸ್ ಕಾಲೇಜಿನಲ್ಲಿ ಗ್ರಂಥಾಲಯದ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸೆಪ್ಟೆಂಬರ್ ೧೧, ೨೦೦೮ರಲ್ಲಿ ಬನಹಟ್ಟಿಯ ಜನತಾ ಶಿಕ್ಷಣ ಶಿಕ್ಷಣ ಸಮಿತಿಯ ಎಸ್.ಟಿ.ಸಿ. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಗ್ರಂಥಪಾಲಕರಾಗಿ ಸೇವೆ ಆರಂಭಿಸಿದ್ದರು. ಇದು ಅವರ ಜೀವನ ಹೊಸ ಸ್ವರೂಪಕ್ಕೆ ಅಡಿಪಾಯ ಹಾಕಿತ್ತು. ೨೦೨೧ರಲ್ಲಿ ಹಿರಿಯ ಗ್ರಂಥಪಾಲಕರಾಗಿ ಬಡ್ತಿ ಪಡೆದ ಅವರು ೩೧.೦೫.೨೦೨೪ ರಂದು ಸೇವಾ ನಿವೃತ್ತಿ ಹೊಂದಿದ್ದಾರೆ. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರಕ್ಕೆ ಸುದೀರ್ಘವಾದ ೪೨ ವರ್ಷಗಳ ಸೇವೆ ಸಲ್ಲಿಸಿರುವುದು ಜೀವನದ ದಾಖಲೆ.
ಗ್ರಂಥಾಲಯ ಪಿತಾಮಹ ಡಾ. ಎಸ್. ಆರ್. ರಂಗನಾಥನ್ ಅವರ ಪಂಚ ಸೂತ್ರಗಳನ್ನು ಕೊರಡೂರ ಅವರು ತಮ್ಮ ಸೇವಾ ಅವಧಿಯಲ್ಲಿ ಪಾಲಿಸುತ್ತಾ, ಓದುಗರಿಗೆ ರಚನಾತ್ಮಕ ಸೇವೆಗಳನ್ನು ನೀಡುತ್ತಾ ಬಂದವರು. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ತಜ್ಞರಾದ ಪ್ರೊ. ಕೆ. ಎಸ್. ದೇಶಪಾಂಡೆ, ಡಾ. ಎಸ್. ಆರ್. ಗುಂಜಾಳ, ಡಾ. ಬಿ. ಡಿ. ಕುಂಬಾರ, ಡಾ. ಸಿ. ಆರ್. ಕರಿಸಿದ್ದಪ್ಪ, ಡಾ. ಎಸ್. ಎಲ್. ಸಂಗಮ, ಜಿ. ಬಿ. ಹೊಂಬಳ, ಎನ್. ಡಿ. ಬಗರಿ ಮುಂತಾದವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅನುಸರಿಸುತ್ತ ಬಂದಿದ್ದಾರೆ.
ಬನಹಟ್ಟಿಯ ಮಹಾವಿದ್ಯಾಲಯದ ಗ್ರಂಥಾಲಯವನ್ನು ಸಂಪೂರ್ಣ ಗಣಕೀರಣಗೊಳಿಸಿದ ಶ್ರೇಯಸ್ಸು ಕೊರಡೂರ ಅವರಿಗೆ ಸಲ್ಲುತ್ತದೆ. ವಿದ್ಯಾರ್ಥಿಗಳಿಗೆ ಸ್ವಯಂ ಅಧ್ಯಯನಕ್ಕೆ ಅವಕಾಶಗಳನ್ನು ನೀಡಿದ್ದರ ಜೊತೆಗೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ವ್ಯಕ್ತಿತ್ವ ವಿಕಸನ ಕಾರ್ಯಗಾರಗಳನ್ನು, ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ, ಪುಸ್ತಕ ಪ್ರದರ್ಶನಗಳನ್ನು ಮುಂತಾದ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಾ ವಿದ್ಯಾರ್ಥಿಗಳ ಯಶಸ್ಸಿಗೆ ಕೈ ಜೋಡಿಸಿ, ಬನಹಟ್ಟಿ ಭಾಗದ ಎಲ್ಲರ ವಿಶ್ವಾಸವನ್ನು ಗಳಿಸಿದ್ದಾರೆ.
ಮಾಹಿತಿ ತಂತ್ರಜ್ಞಾನದ ಪ್ರಯೋಜನಗಳನ್ನು ವಿದ್ಯಾರ್ಥಿ ಸಮುದಾಯಕ್ಕೆ ನಿರಂತರವಾಗಿ ನೀಡುತ್ತಾ, ಮೊಬೈಲ್ ಆ್ಯಪ್ ಮೂಲಕ ಅವರಿಗೆಲ್ಲಾ ಸೂಕ್ತ ಮಾಹಿತಿಗಳನ್ನು ನೀಡುತ್ತ ಬಂದಿದ್ದಾರೆ. ೫೦ಕ್ಕೂ ಹೆಚ್ಚಿನ ಸಮ್ಮೇಳನ, ಕಾರ್ಯಾಗಾರಗಳಲ್ಲಿ ಭಾಗವಹಿಸಿ ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಿದ್ದಾರೆ. ಯುವರ್ಸ್ ರಿಲೇಶನ್ಶಿಪ್ ಮ್ಯಾನೆಜಮೆಂಟ್ ಇನ್ ಕಾಲೇಜ್ ಲೈಬ್ರರಿಸ್, ತಮ್ಮಪ್ಪ ಸತ್ಯಪ್ಪ ಚಿಕ್ಕೋಡಿ ಅವರ ರಚಿಸಿದ ನಾಟಕ ಉಷಾ ಪರಿಣಯ, ಪ್ರೊ. ಸಂಗಮನಾಥ ಹಂಡಿ ಅವರ ಹಳಕಟ್ಟಿ ಫಕ್ಕೀರಪ್ಪನವರು ಗ್ರಂಥ ಮತ್ತು ಇತರ ಮೂರು ಗ್ರಂಥಗಳ ಸಂಪಾದಕರಾಗಿ ಕಾರ್ಯ ಮಾಡಿದ್ದಾರೆ.
ಮಹಾವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣಾಧಿಕಾರಿಯಾಗಿ ಮತ್ತು ಕೌಶಲ್ಯಾಭಿವೃದ್ಧಿಕಾರಿಯಾಗಿ, ಜಿಮಖಾನಾ ಕಾರ್ಯಧ್ಯಕ್ಷರಾಗಿ, ಉದ್ಯೋಗ ಮಾಹಿತಿ ಅಧಿಕಾರಿಯಾಗಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ, ಆಂತರಿಕ ಪರೀಕ್ಷಾ ಸಮಿತಿಯ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ. ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಬಿ.ಒ.ಇ. ಮತ್ತು ಬಿ.ಒ.ಎಸ್. ಸದಸ್ಯರಾಗಿ ಕಾರ್ಯ ಮಾಡಿದ್ದಾರೆ. ಹಲವಾರು ಸಂಘ-ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. ಹಲವಾರು ಮಹಾವಿದ್ಯಾಲಯಗಳಿಗೆ ಮತ್ತು ಸಂಸ್ಥೆಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸಗಳನ್ನು ನೀಡಿದ್ದಾರೆ.
ಕರ್ನಾಟಕ ರಾಜ್ಯ ಕಾಲೇಜ ಗ್ರಂಥಪಾಲಕರ ಸಂಘ ಮತ್ತು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕಾಲೇಜು ಗ್ರಂಥ ಪಾಲಕರ ಸಂಘದ ಉಪಾಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ, ವಿದ್ಯಾಪೋಷಕ ಸಂಸ್ಥೆಯ ಪದಾಧಿಕಾರಿಯಾಗಿ, ಇನ್ನೂ ಹಲವಾರು ಸಂಘ ಸಂಸ್ಥೆಗಳ ಸದಸ್ಯರು ಮತ್ತು ಪದಾಧಿಕಾರಿಯಾಗಿ ಕಾರ್ಯ ಮಾಡಿದ್ದಾರೆ. ಬನಹಟ್ಟಿಯ ಶ್ರೀ ಸಿದ್ಧಾರೂಢಮಠದ ಕಾರ್ಯಕ್ರಮಗಳಲ್ಲಿ ಮತ್ತು ಸತ್ಸಂಗಗಳಲ್ಲಿ ನಿರಂತರ ಭಾಗಿಯಾಗಿ, ಆಧ್ಯಾತ್ಮಿಕ ವಿಷಯಗಳ ಕುರಿತು ಚಿಂತನ-ಮಂಥನ ಮಾಡುತ್ತಿದ್ದಾರೆ.
ಬೇರೆ ಬೇರೆ ಮಹಾವಿದ್ಯಾಲಯಗಳಿಗೆ ಮತ್ತು ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಿಗೆ ಭೇಟಿ ನೀಡಿ ಅಲ್ಲಿರುವ ಉತ್ತಮ ಸೌಲಭ್ಯಗಳನ್ನು ಓದುಗರಿಗೆ ತಲುಪಿಸುತ್ತಿರುವ ಕೊರಡೂರ ಅವರು, ಗ್ರಂಥಾಲಯ ಗಣಕೀಕರಣ, ಗ್ರಂಥಗಳ ಸಂಗ್ರಹ ಮತ್ತು ಗ್ರಂಥಾಲಯಗಳ ಅಭಿವೃದ್ಧಿ ನಿರಂತರ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಕಾಲೇಜು ಗ್ರಂಥಾಲಯಗಳು ವಿದ್ಯಾರ್ಥಿಗಳ ಆಪ್ತ ಮಿತ್ರ ಎಂಬ ಭಾವನೆಯನ್ನು ಮೂಡಿಸಿರುವ ಶ್ರೇಯಸ್ಸು ಕೊರಡೂರ ಅವರದ್ದು. ಶಿಸ್ತು ಮತ್ತು ಸಮಯ ಪಾಲನೆಯನ್ನು ತಮ್ಮ ಸೇವಾ ಅವಧಿಯಲ್ಲಿ ಪಾಲಿಸುತ್ತ ಬಂದವರು.
ಬನಹಟ್ಟಿಯ ಜನತಾ ಶಿಕ್ಷಣ ಸಮಿತಿಯ ಹಿಂದಿನ ಮತ್ತು ಇಂದಿನ ಚೇರ್ಮನ್ನರು ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳು, ಕಾರ್ಯನಿರ್ವಹಿಸಿದ ಎಲ್ಲ ಪ್ರಾಚಾರ್ಯರುಗಳ ಮಾರ್ಗದರ್ಶನದಲ್ಲಿ, ಸಿಬ್ಬಂದಿ, ಬಂಧುಗಳ, ಹಿತೈಷಿಗಳು ಮತ್ತು ತಂದೆ ಬಸನಗೌಡ, ತಾಯಿ ಕಾಶಮ್ಮ, ಸಹೋದರರಾದ ಗಂಗಾಧರ ಮತ್ತು ಸೋಮನಾಥ, ಹಿತೈಷಿ ಈಶ್ವರಪ್ಪ ಗುಳಗಣ್ಣವರ, ಪತ್ನಿ ಅನ್ನಪೂರ್ಣ, ಮಗಳು ಸಹನಾ, ಅಳಿಯ ಅನಿಲಕುಮಾರ, ಮಗ ವಿಶ್ವನಾಥ, ಸ್ನೇಹಿತರಾದ ಜಿನದತ್ತ ಹಡಗಲಿ, ಡಾ. ಬಿ.ಜಿ. ಬಿರಾದಾರ ಮೊದಲಾದವರು ನೀಡುತ್ತಿರುವ ಸಹಕಾರವನ್ನು ಸೌಜನ್ಯದಿಂದ ಸ್ಮರಿಸುತ್ತಾರೆ.
-ಡಾ. ಬಿ.ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು ಹುಬ್ಬಳ್ಳಿ
ನಿಮ್ಮ ಕಾಮೆಂಟ್ ಬರೆಯಿರಿ