ಚುನಾವಣೆ ವೇಳೆ ಮಾಡಿದ್ದ ವಾಗ್ದಾನದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಜಸ್ಥಾನದ ಸಚಿವ ಕಿರೋಡಿ ಲಾಲ ಮೀನಾ

ಜೈಪುರ: ಬಿಜೆಪಿ ನಾಯಕ ಕಿರೋಡಿ ಲಾಲ ಮೀನಾ ಅವರು ರಾಜಸ್ಥಾನದ ತಮ್ಮ ಸಚಿವ ರಾಜೀನಾಮೆ ನೀಡಿರುವುದಾಗಿ ಗುರುವಾರ ಹೇಳಿದ್ದಾರೆ. ಬಿಜೆಪಿ ಪಕ್ಷವು ತನ್ನ ಉಸ್ತುವಾರಿಯಲ್ಲಿರುವ ಏಳು ಲೋಕಸಭಾ ಸ್ಥಾನಗಳಲ್ಲಿ ಯಾವುದಾದರು ಒಂದು ಸ್ಥಾನ ಕಳೆದುಕೊಂಡರೆ ರಾಜೀನಾಮೆ ನೀಡುವುದಾಗಿ ಾವರು ಹೇಳಿದ್ದರು. ಅದರಂತೆ ಅವರು ರಾಜೀನಾಮೆ ನೀಡಿದ್ದಾರೆ ಎಂದು ಅವರ ಸಹಾಯಕ ಗುರುವಾರ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆ ಪ್ರಚಾರದ ವೇಳೆ ವಾಗ್ದಾನ ಮಾಡಿದಂತೆ 72 ವರ್ಷದ ಬಿಜೆಪಿ ನಾಯಕ ಕಿರೋಡಿ ಲಾಲ ಮೀನಾ ಅವರು ತಮ್ಮ ತವರು ಕ್ಷೇತ್ರ ದೌಸಾ ಸೇರಿದಂತೆ ಕೆಲವು ಸ್ಥಾನಗಳಲ್ಲಿ ಬಿಜೆಪಿ ಸೋಲನುಭವಿಸಿದ ನಂತರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.
“ಕಿರೋಡಿ ಮೀನಾ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು 10 ದಿನಗಳ ಹಿಂದೆ ಮುಖ್ಯಮಂತ್ರಿಗಳಿಗೆ ರಾಜೀನಾಮೆ ನೀಡಿದ್ದಾರೆ” ಎಂದು ಆಪ್ತ ಸಹಾಯಕ ಹೇಳಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಜಸ್ಥಾನದಲ್ಲಿ ರಚನೆಯಾದ ಬಿಜೆಪಿಯ ಭಜನಲಾಲ ಶರ್ಮಾ ಸರ್ಕಾರದಲ್ಲಿ ಅವರು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿ ನೇಮಕವಾಗಿದ್ದರು. ಅವರು ಪೂರ್ವ ರಾಜಸ್ಥಾನದಲ್ಲಿ ಮೀನಾ ಸಮುದಾಯದ ಪ್ರಮುಖ ನಾಯಕರಾಗಿ ಗುರುತಿಸಲ್ಪಟ್ಟಿದ್ದಾರೆ.

ಪ್ರಮುಖ ಸುದ್ದಿ :-   ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿ ಅದನ್ನೇ ನಿಗ್ರಹಿಸಿದ ಯುವಕ..! ದೃಶ್ಯ ವೀಡಿಯೊದಲ್ಲಿ ಸೆರೆ-ವೀಕ್ಷಿಸಿ

ಪ್ರಧಾನಿ ದೌಸಾಗೆ ಬರುವ ಮೊದಲು, ನಾನು (ದೌಸಾ) ಸ್ಥಾನವನ್ನು ಗೆಲ್ಲದಿದ್ದರೆ, ನಾನು ಸಚಿವ ಸ್ಥಾನವನ್ನು ತೊರೆಯುತ್ತೇನೆ ಎಂದು ಹೇಳಿದ್ದೆ, ಅದರಂತೆ ನಾನು ಸಚಿವ ಸ್ಥಾನವನ್ನು ತೊರೆದಿದ್ದೇನೆ ಎಂದು ಅವರು ಹೇಳಿದರು.
ಜೂನ್ 4 ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿತ್ತು. ಅವರು ಮೊದಲ ವಸುಂಧರಾ ರಾಜೇ ಸಿಂಧಿಯಾ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆಗಾಗಿ ರಾಜಸ್ಥಾನದ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಕಿರೋಡಿ ಲಾಲ ಮೀನಾ ಬಗ್ಗೆ?
ಕಿರೋಡಿ ಲಾಲ ಮೀನಾ, ಬಿಜೆಪಿಯ ಹಿರಿಯ ನಾಯಕರು, ರಾಜಸ್ಥಾನ ಸರ್ಕಾರದಲ್ಲಿ ಕೃಷಿ ಮತ್ತು ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ ಖಾತೆ ಸಚಿವರಾಗಿದ್ದಾರೆ. ಮೀನಾ ಅವರು 1989 ಮತ್ತು 2009 ರಲ್ಲಿ ಸವಾಯಿ ಮಾಧೋಪುರ ಮತ್ತು ದೌಸಾ ಕ್ಷೇತ್ರಗಳಿಂದ ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದರು.
ಮೀನಾ ರಾಜಸ್ಥಾನ ವಿಧಾನಸಭೆ ಚುನಾಔಣೆಯಲ್ಲಿ ಐದು ವಿಭಿನ್ನ ವಿಧಾನಸಭಾ ಕ್ಷೇತ್ರಗಳಾದ ಮಹುವ (1985), ಬಮನ್ವಾಸ್ (1998), ಸವಾಯಿ ಮಾಧೋಪುರ (2003), ತೋಡಭೀಮ್ (2008) ಮತ್ತು ಲಾಲ್ಸೋಟ್ (2013) ಕ್ಷೇತ್ರಗಳಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮೀನಾ ಅವರು 1980 ರ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹರಿ ಸಿಂಗ್ ವಿರುದ್ಧ ಕೇವಲ 16 ಮತಗಳಿಂದ ಮಹುವಾದಿಂದ ಸೋತಿದ್ದರು. ಆದಾಗ್ಯೂ, ಅವರು 1985 ರಲ್ಲಿ ಹರಿ ಸಿಂಗ್ ಅವರನ್ನು ಮಹುವಾದಿಂದ 1,632 ಮತಗಳಿಂದ ಸೋಲಿಸಿದರು.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement