ಮಹಾರಾಷ್ಟ್ರ ವಿಧಾನ ಪರಿಷತ್‌ ಚುನಾವಣೆಯಲ್ಲಿ 7 ಕಾಂಗ್ರೆಸ್ ಶಾಸಕರಿಂದ ಅಡ್ಡ ಮತದಾನ : ವರದಿ

ಮುಂಬೈ: ರಾಜ್ಯದ 48 ಲೋಕಸಭಾ ಸ್ಥಾನಗಳ ಪೈಕಿ 30 ಸ್ಥಾನಗಳನ್ನು ಗೆದ್ದು ಬೀಗುತ್ತಿದ್ದ ಮಹಾರಾಷ್ಟ್ರದಲ್ಲಿ ವಿಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿಗೆ ಆಘಾತ ಎದುರಾಗಿದೆ. ಆತಂಕಕಾರಿ ಸಂಕೇತವಾಗಿ, ಶುಕ್ರವಾರ ನಡೆದ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಕನಿಷ್ಠ ಏಳು ಕಾಂಗ್ರೆಸ್ ಶಾಸಕರು ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಅಡ್ಡ ಮತದಾನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 12 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ವಿಪಕ್ಷಗಳ ಮೈತ್ರಿಕೂಟವು ತನಗೆ ಚುನಾಯಿಸಬೇಕಾದ ಸಂಖ್ಯಾಬಲಕ್ಕಿಂತ ಹೆಚ್ಚಿನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರಿಂದ ಚುನಾವಣೆ ನಡೆಯುವಂತಾಯಿತು. ಪ್ರಾಯಶಃ ಆಡಳಿತಾರೂಢ ಸಮ್ಮಿಶ್ರದಿಂದ ಶಾಸಕರಿಂದ ಅಡ್ಡ ಮತದಾನದಿಂದ ಲಾಭ ಪಡೆಯುವ ನಿರೀಕ್ಷೆ ಇಟ್ಟುಕೊಂಡು ಅದು ಹೆಚ್ಚಿನ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಆದರೆ ಬದಲಿಗೆ ವಿಪಕ್ಷಗಳ ಮೈತ್ರಿಕೂಟವೇ ಅಡ್ಡಮತದಾನದಲ್ಲಿ ಮತಗಳನ್ನು ಕಳೆದುಕೊಳ್ಳುವಂತೆ ತೋರುತ್ತಿದೆ.
ಮಹಾರಾಷ್ಟ್ರ ವಿಧಾನಸಭೆಯು ಒಟ್ಟು 288 ಶಾಸಕರ ಬಲವನ್ನು ಹೊಂದಿದೆ. ಆದರೆ ಪ್ರಸ್ತುತ ವಿಧಾನಸಭೆ ಹಾಲಿ 274 ಶಾಸಕರನ್ನು ಹೊಂದಿದೆ. ಇದರರ್ಥ ಪ್ರತಿ ವಿಧಾನ ಪರಿಷತ್‌ (MLC) ಅಭ್ಯರ್ಥಿಗೆ ಗೆಲ್ಲಲು 23 ಮೊದಲ ಪ್ರಾಶಸ್ತ್ಯದ ಮತಗಳು ಬೇಕಾಗಿದ್ದವು.

ಪ್ರಮುಖ ಸುದ್ದಿ :-   ವೀಡಿಯೊಗಳು..| ಇರಾನಿನ 6 ವಾಯುನೆಲೆಗಳ ಮೇಲೆ ಇಸ್ರೇಲ್‌ ದಾಳಿ ; 15 ವಿಮಾನಗಳು ನಾಶ

ಎನ್‌ಡಿಎ ಮೈತ್ರಿಕೂಟದ ಭಾಗವಾದ ಆಡಳಿತಾರೂಢ ಮಹಾಯುತಿಯು ಬಿಜೆಪಿ, ಶಿವಸೇನೆಯ ಏಕನಾಥ ಶಿಂಧೆ ಬಣ ಮತ್ತು ಎನ್‌ಸಿಪಿಯ ಅಜಿತ್ ಪವಾರ್ ಬಣದ ಮೈತ್ರಿಕೂಟವಾಗಿದ್ದು, ಒಂಬತ್ತು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು ಮತ್ತು ಸ್ವತಂತ್ರರು ಮತ್ತು ಸಣ್ಣ ಪಕ್ಷಗಳು ಸೇರಿದಂತೆ 201 ಶಾಸಕರ ಬೆಂಬಲ ಹೊಂದಿದೆ.
ಇಂಡಿಯಾ ಮೈತ್ರಿಕೂಟದ ಅಡಿಯಲ್ಲಿ ಬರುವ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟವು ಕಾಂಗ್ರೆಸ್, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಮತ್ತು ಎನ್‌ಸಿಪಿ (ಶರದ್‌ ಪವಾರ್) ಪಕ್ಷಗಳನ್ನು ಒಳಗೊಂಡಿದೆ. ಇದು ಕೇವಲ 67 ಶಾಸಕರ ಬೆಂಬಲವನ್ನು ಹೊಂದಿದ್ದರೂ ಸಹ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ವಿಧಾನಸಭೆಯಲ್ಲಿ ಒಬ್ಬ ಸ್ವತಂತ್ರ ಸೇರಿದಂತೆ ಆರು ಶಾಸಕರು ಯಾವುದೇ ಬಣಕ್ಕೆ ಸೇರದೆ ತಟಸ್ಥವಾಗಿ ಉಳಿದಿದ್ದಾರೆ.
ಅಜಿತ್ ಪವಾರ್ ಎನ್‌ಸಿಪಿ ಗುಂಪಿನ ಕೆಲವು ನಾಯಕರು ಶರದ್ ಪವಾರ್ ಬಣದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಊಹಾಪೋಹದ ಮಧ್ಯೆ ಮಹಾ ವಿಕಾಸ್ ಅಘಾಡಿ (ಎಂವಿಎ)ಯು ಆಡಳಿತಾರೂಢ ಮಹಾಯುತಿ ಮೈತ್ರಿಕೂಟದಿಂದ ಅಡ್ಡಮತದಾನದ ಮೂಲಕ ಸ್ವಲ್ಪ ಮತಗಳನ್ನು ಪಡೆಯಬಹುದೆಂದು ಆಶಿಸಿತ್ತು.

ಶರದ್ ಪವಾರ್ ಬಣದ ಬೆಂಬಲಿತ ಅಭ್ಯರ್ಥಿ, ರೈತರು ಮತ್ತು ಕಾರ್ಮಿಕರ ಪಕ್ಷದ ಜಯಂತ ಪಾಟೀಲ್ ಅವರು ಸಾಕಷ್ಟು ಮತಗಳನ್ನು ಪಡೆಯದ ಕಾರಣ ಸೋತರು. ಮಹಾಯುತಿ ಮಥರಿಕೂಟದಲ್ಲಿ ಬಿಜೆಪಿಯಿಂದ ಐವರು ಮತ್ತು ಶಿಂಧೆ ಶಿವಸೇನೆ ಮತ್ತು ಅಜಿತ್ ಪವಾರ್ ಎನ್‌ಸಿಪಿಯಿಂದ ತಲಾ ಇಬ್ಬರು ಹಾಗೂ ಓರ್ವ ಕಾಂಗ್ರೆಸ್ ಅಭ್ಯರ್ಥಿ ಮತ್ತು ಶಿವಸೇನೆ (ಯುಬಿಟಿ) ಓರ್ವ ಅಭ್ಯರ್ಥಿ ಗೆಲುವು ಸಾಧಿಸಿದರು.
37 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ತನ್ನ ಅಭ್ಯರ್ಥಿ ಪ್ರದೀನ ಸಾತವಗೆ 30 ಪ್ರಥಮ ಪ್ರಾಶಸ್ತ್ಯದ ಕೋಟಾವನ್ನು ನಿಗದಿಪಡಿಸಿತ್ತು ಮತ್ತು ಉಳಿದ ಏಳು ಮತಗಳು ಶಿವಸೇನಾ ಯುಬಿಟಿಯ ಮಿಲಿಂದ್ ನಾರ್ವೇಕರ್‌ಗೆ ಹೋಗಬೇಕಿತ್ತು ಎಂದು ಮೂಲಗಳು ತಿಳಿಸಿವೆ. ಸಾತವ್ ಅವರು 25 ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದರು ಮತ್ತು ನಾರ್ವೇಕರ ಅವರು 22 ಪಡೆದರು. ಹೀಗಾಗಿ ಕನಿಷ್ಠ ಏಳು ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಿದರು ಎಂಬ ಲೆಕ್ಕಾಚಾರ ನಡೆಯುತ್ತಿದೆ.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement