ತೆಲಂಗಾಣದ ಸಿರ್ಸಿಲ್ಲಾದ ಯೂಟ್ಯೂಬರ್ ನನ್ನು ಭಾನುವಾರ ಬಂಧಿಸಲಾಗಿದ್ದು, ಭಾರತದ ರಾಷ್ಟ್ರೀಯ ಪಕ್ಷಿಯಾದ ‘ನವಿಲು ಕರಿ’ ತಯಾರಿಸಿ ಸೇವಿಸುತ್ತಿರುವ ವೀಡಿಯೊ ವೈರಲ್ ಆದ ನಂತರ ಆತನನ್ನು ಬಂಧಿಸಲಾಗಿದೆ.
ಕೋಡಂ ಪ್ರಣಯಕುಮಾರ ಪೋಸ್ಟ್ ಮಾಡಿದ ವೀಡಿಯೊ ವೈರಲ್ ಆದ ಬೆನ್ನಿಗೇ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಯಿತು. ಆತನನ್ನು ಬಂಧಿಸಲಾಗಿದೆ. ಆತ ಯೂಟ್ಯೂಬನಲ್ಲಿ ನವಿಲು ಕರಿಯ ಸಂಪ್ರದಾಯಿಕ ವಿಧಾನ ಎಂದು ಶೀರ್ಷಿಕೆ ನೀಡಿ ಯೂಟ್ಯೂಬ್ನಲ್ಲಿ ಅದನ್ನು ತಯಾರಿಸಿದ ವೀಡಿಯೋ ಪೋಸ್ಟ್ ಮಾಡಿದ್ದ.
ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲು ವನ್ಯಜೀವಿ ಸಂರಕ್ಷಣಾ ಕಾಯಿದೆ, 1972 ರ ಸೆಕ್ಷನ್ 51 (1-A) ಅಡಿಯಲ್ಲಿ ರಕ್ಷಿಸಲ್ಪಟ್ಟಿದೆ, ಇದು ಅದರ ಬೇಟೆಯಾಡುವುದು ಮತ್ತು ಕೊಲ್ಲುವುದನ್ನು ನಿಷೇಧಿಸುತ್ತದೆ.
‘ಸಾಂಪ್ರದಾಯಿಕ ನವಿಲು ಕರಿ ರೆಸಿಪಿ’ ಎಂಬ ಶೀರ್ಷಿಕೆಯ ಪ್ರಣಯಕುಮಾರ ವೀಡಿಯೊವನ್ನು ವಿವಾದದ ನಂತರ ಯೂಟ್ಯೂಬ್ ಚಾನೆಲ್ನಿಂದ ತಕ್ಷಣವೇ ತೆಗೆದುಹಾಕಲಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ವೀಡಿಯೊ ಚಿತ್ರೀಕರಣಗೊಂಡ ಸ್ಥಳದ ಪರಿಶೀಲನೆ ಸೇರಿದಂತೆ ತನಿಖೆ ನಡೆಸಿದರು. ಅದರಲ್ಲಿ ನವಿಲು ಮಾಂಸವಿದೆಯೇ ಎಂದು ದೃಢೀಕರಿಸಲು ಅವರು ಯೂ ಟೂಬರ್ನ ರಕ್ತದ ಮಾದರಿಗಳನ್ನು ನವಿಲು ಕರಿ ಜೊತೆ ಸಂಗ್ರಹಿಸಿದ್ದಾರೆ. ಫಲಿತಾಂಶಗಳ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಅಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಪ್ರಣಯಕುಮಾರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿರ್ಸಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅಖಿಲ್ ಮಹಾಜನ್ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ