ಗ್ರಾಮಕ್ಕೆ ಮೂಲ ಸೌಕರ್ಯ ನೀಡುವಂತೆ ಆಗ್ರಹಿಸಿ 3 ವರ್ಷದಿಂದ ಒಂದೇ ಕಾಲಿನಲ್ಲಿ ನಿಂತು ಪ್ರತಿಭಟನೆ ನಡೆಸುತ್ತಿರುವ ಸಂತ…!

ಸಂತರೊಬ್ಬರು ಮೂರು ವರ್ಷಗಳಿಂದ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ಗ್ರಾಮದಲ್ಲಿ ರಸ್ತೆ, ವಿದ್ಯುತ್‌ ಸೇರಿದಂತೆ ಮೂಲ ಸೌಕರ್ಯಕ್ಕಾಗಿ ಒತ್ತಾಯಿಸಿರುವ ಅವರು, ಗ್ರಾಮದ ಬೇಡಿಕೆಗಳ ಈಡೇರಿಕೆಗಾಗಿ ಒಂಟಿ ಕಾಲಲ್ಲಿ ನಿಂತು ಮೂರು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಬಚ್ಚಾ ಬಾಬಾ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಇವರು ಉತ್ತರಪ್ರದೇಶದ ಫಿರೋಜಾಬಾದಿನ ತುಂಡ್ಲಾದಿಂದ ಸುಮಾರು 20 ಕಿಮೀ ದೂರದಲ್ಲಿರುವ ಯಮುನಾ ತೀರದಲ್ಲಿರುವ ಗ್ವಾರೈ ಗ್ರಾಮದ ನಿವಾಸಿಯಾಗಿದ್ದಾರೆ. ಬಾಬಾ ಮಹೇಶಾನಂದ ಗಿರಿ ಅಲಿಯಾಸ್ ಬಚ್ಚಾ ಬಾಬಾ ತಮ್ಮ ಗ್ರಾಮ ಮತ್ತು ದೇವಸ್ಥಾನ ನಗರದಿಂದ ಬಹಳ ದೂರದಲ್ಲಿದೆ. ಜನಪ್ರತಿನಿಧಿಗಳು ಮತ ಕೇಳಲು ಬರುತ್ತಾರೆ. ಆದರೆ ಇಲ್ಲಿನ ದುಸ್ಥಿತಿ ನೋಡಲು ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿಯಾಗಲಿ, ಅಧಿಕಾರಿಯಾಗಲಿ ಬರುತ್ತಿಲ್ಲ ಎಂದು ಹೇಳುತ್ತಾರೆ.

“ಗ್ರಾಮದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ, ಗ್ರಾಮದೊಳಗೆ ಸರಿಯಾದ ರಸ್ತೆ ಇಲ್ಲ, ಬೀದಿ ದೀಪ ಇಲ್ಲ, ದೇವಸ್ಥಾನ ಮತ್ತು ಆಶ್ರಮದ ಜೀರ್ಣೋದ್ಧಾರವಿಲ್ಲ. ಅದಕ್ಕಾಗಿಯೇ ನಾನು ಕಳೆದ ಮೂರು ವರ್ಷಗಳಿಂದ ಹಠಯೋಗದಲ್ಲಿ ತೊಡಗಿಸಿಕೊಂಡಿದ್ದೇನೆ. ಒಂಟಿ ಕಾಲಲ್ಲಿ ನಿಂತು ಮೂರು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಗ್ರಾಮದೊಳಗೆ ಸರಿಯಾದ ಪಕ್ಕಾ ರಸ್ತೆ ಇಲ್ಲ, ಗ್ರಾಮೀಣ ಭಾಗದ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಆದರೆ ಯಾವುದೇ ಜನಪ್ರತಿನಿಧಿಗಳು ಈ ಸಮಸ್ಯೆಗಳ ಬಗ್ಗೆ ಗಮನ ಹರಿಸುವುದಿಲ್ಲ. ಹಾಗಾಗಿಯೇ ಈಗ ಮೂರು ವರ್ಷಗಳಿಂದ ತಮ್ಮ ಬೇಡಿಕೆ ಈಡೇರುವವರೆಗೂ ಒಂಟಿ ಕಾಲಿನಲ್ಲಿ ನಿಲ್ಲುವುದಾಗಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

ಈ ಪ್ರತಿಭಟನೆ ಕುರಿತು ಹೇಳುವ ಬಾಬಾ, ಜನರು ಅನುಭವಿಸುತ್ತಿರುವ ಬವಣೆ ಕಂಡು ನಾನು ಒಂಟಿ ಕಾಲಲ್ಲಿ ನಿಂತು ಪ್ರತಿಭಟನೆ ಮಾಡುವ ಪ್ರತಿಜ್ಞೆ ಮಾಡಿದ್ದೇನೆ. ಒಂದೇ ಕಾಲಿನಲ್ಲಿ ಸದಾ ನಿಲ್ಲುತ್ತೇನೆ. ಕಾಲು ನೋವಾದಾಗ ಕಾಲನ್ನು ಬದಲಾಯಿಸುತ್ತೇನೆ, ಆದರೆ ಒಟ್ಟಿಗೆ ಎರಡು ಕಾಲಿನ ಮೇಲೆ ನಿಂತಿಲ್ಲ. ಒಂದೇ ಕಾಲಿನಲ್ಲಿ ನಿಲ್ಲುತ್ತೇನೆ. ಒಂದೇ ಕಾಲಿನಲ್ಲಿ ನಡೆದು ಎಲ್ಲಾ ಕಾರ್ಯ ನಡೆಸುತ್ತೇನೆ. ನಮ್ಮ ಸಮೀಪದ ಇತರೆ ಗ್ರಾಮದಲ್ಲಿ ನಡೆಯುತ್ತಿರುವ ಅಭಿವೃದ್ಧಿಗಳು ನಮ್ಮ ಗ್ರಾಮದಲ್ಲಿ ಯಾಕೆ ಇಲ್ಲ ಎಂಬುದು ನಮ್ಮ ಪ್ರಶ್ನೆ ಎಂದು ಅವರು ಹೇಳಿದ್ದಾರೆ.
ಈ ಪ್ರದೇಶದಲ್ಲಿ ಅಭಿವೃದ್ಧಿಯಾಗದ ಕಾರಣ ಕೋಪಗೊಂಡ ಬಚ್ಚಾ ಬಾಬಾ ಅವರು ಹಠಯೋಗವನ್ನು ಅಳವಡಿಸಿಕೊಂಡರು. ಮೂರು ವರ್ಷಗಳಿಂದ ಒಂದೇ ಕಾಲಿನಲ್ಲಿ ನಿಂತಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement